AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್: ಮತ್ತೆ ಪಾರ್ಟಿ ಬದಲಿಸಿದ ಸಂಗೀತಾ, ವಿನಯ್ ಜೊತೆ ಮತ್ತೆ ವೈರತ್ವ ಶುರು

Bigg Boss: ಕಳೆದೆರಡು ವಾರದಿಂದ ವಿನಯ್ ಸಂತ ಸೇರಿಕೊಂಡು ಗೆಳೆಯರಾಗಿದ್ದ ತನಿಷಾ-ಕಾರ್ತಿಕ್ ವಿರುದ್ಧ ಮಾತನಾಡಿದ್ದ ಸಂಗೀತಾ, ಈಗ ಮತ್ತೆ ಪಾರ್ಟಿ ಬದಲಾಯಿಸಿದ್ದಾರೆ.

ಬಿಗ್​ಬಾಸ್: ಮತ್ತೆ ಪಾರ್ಟಿ ಬದಲಿಸಿದ ಸಂಗೀತಾ, ವಿನಯ್ ಜೊತೆ ಮತ್ತೆ ವೈರತ್ವ ಶುರು
ಮಂಜುನಾಥ ಸಿ.
|

Updated on: Dec 01, 2023 | 11:31 PM

Share

ಬಿಗ್​ಬಾಸ್ (BiggBoss) ಮನೆಯಲ್ಲಿ ಆರಂಭದಲ್ಲಿ ಚೆನ್ನಾಗಿ ಆಡಿದ್ದ ಸಂಗೀತಾ ಶೃಂಗೇರಿ ಕರ್ನಾಟಕದ ಹೊಸ ಕ್ರಶ್ ಎಂದು ಕರೆಸಿಕೊಂಡಿದ್ದರು. ಆದರೆ ಬರ-ಬರುತ್ತಾ ಅವರು ತಮ್ಮ ನಿಜ ಬಣ್ಣ ತೋರಿಸಲಾರಂಭಿಸಿದರು. ಆರಂಭದಲ್ಲಿ ವಿನಯ್​ರ ಅಹಂಕಾರವನ್ನು, ದಾರ್ಷ್ಯವನ್ನು ದಿಟ್ಟವಾಗಿ ಎದುರಿಸಿದ ಸಂಗೀತಾ, ಎರಡು ವಾರದ ಹಿಂದೆ ವಿನಯ್ ತಂಡ ಸೇರಿಕೊಂಡು ಇಷ್ಟು ವಾರ ಸ್ನೇಹಿತರಾಗಿದ್ದ ತನಿಷಾ-ಕಾರ್ತಿಕ್ ಅವರನ್ನೇ ಗೇಲಿ ಮಾಡಲು, ಉರಿಸಲು ಆರಂಭಿಸಿದ್ದರು. ವಿನಯ್ ಅನ್ನು ಜಂಟಲ್​ಮ್ಯಾನ್ ಎಂದು ಸಹ ಹೊಗಳಿದ್ದರು. ಈಗ ಮತ್ತೆ ಪಾರ್ಟಿ ಬದಲಿಸಿದ್ದಾರೆ.

ಕಳೆದ ವಾರ ಸುದೀಪ್ ಅವರು ವಿನಯ್ ಹಾಗೂ ಕಾರ್ತಿಕ್ ನಡುವಲ್ಲಿ ವ್ಯತ್ಯಾಸ ಕೇಳಿದಾಗ, ಕಾರ್ತಿಕ್​ ಬಗ್ಗೆ ಋಣಾತ್ಮಕವಾಗಿ ಮಾತನಾಡಿದ್ದ ಸಂಗೀತಾ, ವಿನಯ್ ಬಹಳ ಸ್ವೀಟ್ ಜಂಟಲ್​ಮ್ಯಾನ್ ಎಂದು ಹೇಳಿದ್ದರು. ವಿನಯ್ ಅವರ ತಂಡದ ಜೊತೆಗೆ ಆಟವನ್ನು ಆಡಿ ಟಾಸ್ಕ್​ಗಳಲ್ಲಿ ಸಹ ಗೆದ್ದರು. ಅಂತಿಮವಾಗಿ ಕ್ಯಾಪ್ಟನ್ಸಿ ಟಾಸ್ಕ್​ ಬಂದಾಗ ವಿನಯ್, ಸಂಗಿತಾರನ್ನು ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹೊರಗಿಟ್ಟರು. ಇದು ಸಂಗೀತಾಗೆ ಸಹಿಸಿಕೊಳ್ಳಲಾಗಲಿಲ್ಲ.

ತಮ್ಮನ್ನು ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹೊರಗಿಟ್ಟಿದ್ದಕ್ಕೆ ತೀವ್ರ ಬೇಸರ ಹೊರಹಾಕಿದ ಸಂಗೀತಾ, ಒಬ್ಬೊಬ್ಬರೇ ಕುಳಿತು ಮಾತನಾಡಿಕೊಳ್ಳುತ್ತಾ, ನನ್ನನ್ನು ತುಳಿದಿದ್ದಾರೆ, ನಾನು ಮತ್ತೆ ಎದ್ದು ನಿಲ್ಲುತ್ತೇನೆ, ನನ್ನನ್ನು ತುಳಿದವರು ತಲೆ ಎತ್ತಿ ನೋಡಬೇಕು ಹಾಗೆ ಆಗುತ್ತೇನೆ ಎಂದರು. ಮುಂದುವರೆದು ಆನೆ ಎನಿಸಿಕೊಂಡವರೇ ನನ್ನನ್ನು ಕಾಂಪಿಟಿಷನ್ ಅಂದುಕೊಂಡು ಹೊರಗೆ ಹಾಕಿದ್ದಾರೆಂದರೆ ಅದು ಸಾಮಾನ್ಯ ಸಾಧನೆಯಲ್ಲ ಎಂದು ತಮ್ಮ ಸಾಧನೆಯನ್ನು ತಾವೇ ಹೇಳಿ ಮೆಚ್ಚಿಕೊಂಡರು.

ಇದನ್ನೂ ಓದಿ:ಬಿಗ್​ಬಾಸ್ ಮುಂದೆ ಕಣ್ಣೀರು ಹಾಕಿದ ವಿನಯ್

ಗಾಯಗೊಂಡು ಹೊರಗೆ ಹೋಗಿದ್ದ ತನಿಷಾ ಮತ್ತೆ ಬಂದಾಗ ತನಿಷಾ ಹಾಗೂ ಕಾರ್ತಿಕ್ ಜೊತೆ ಮಾತನಾಡುತ್ತಾ, ವಿನಯ್ ವಿರುದ್ಧ ದೂರು ಹೇಳಲು ಪ್ರಾರಂಭಿಸಿದರು. ತನ್ನನ್ನು ಕ್ಯಾಪ್ಟನ್ಸಿ ಟಾಸ್ಕ್​ನಿಂದ ವಿನಯ್ ಹೊರಗಿಟ್ಟ ಬಗ್ಗೆ ಸಂಗೀತಾ, ವಿನಯ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಆಗ ತನಿಷಾ, ನೀನೇ ತಾನೆ ಅವನು ಸ್ವೀಟ್, ಜಂಟಲ್​ಮ್ಯಾನ್ ಎಂದೆಲ್ಲ ಹೇಳಿದ್ದು ಎಂದು ನಗುತ್ತಲೇ ಟಾಂಗ್ ಕೊಟ್ಟರು, ಕಾರ್ತಿಕ್ ಸಹ, ಸುದೀಪ್ ಅವರು ಕೇಳಿದಾಗ ಸಂಗೀತಾ ನೀಡಿದ್ದ ಉತ್ತರವನ್ನು ನೆನಪು ಮಾಡಿದರು.

ವಿನಯ್ ಸಹ ನಮ್ರತಾ, ಸ್ನೇಹಿತ್, ಮೈಖಲ್ ಮುಂದೆ ಸಂಗೀತಾರ ಬಗ್ಗೆ ದೂರಲು ಪ್ರಾರಂಭ ಮಾಡಿದರು. ಆಕೆ ಅವಳು ಈ ಮನೆಯಲ್ಲಿ ಯಾವ ಟಾಸ್ಕ್ ಸರಿಯಾಗಿ ಆಡಿದ್ದಾಳೆ. ಒಂದೂ ಟಾಸ್ಕ್​ ಅನ್ನು ಸರಿಯಾಗಿ ಆಡಿ ಆಕೆ ಗೆದ್ದಿಲ್ಲ. ಸುಮ್ಮನೆ ಕೆಲಸಕ್ಕೆ ಬಾರದ ರೊಮ್ಯಾನ್ಸ್ ಮಾಡಿಕೊಂಡು ಓಡಾಡುತ್ತಿದ್ದಾಳೆ. ಒಮ್ಮೆ ಕಾರ್ತಿಕ್, ಒಮ್ಮೆ ಮೈಖಲ್ ಎಂದು ಹೀಗಳಿದರು. ಆ ಬಳೆ ವಿಷಯದಲ್ಲಿ ಸಹ ಅವರೇ ನನಗೆ ಸಿಟ್ಟು ಬರುವಂತೆ ಮಾಡಿ, ನನ್ನ ಬಾಯಿಂದ ಮಾತು ಆಡಿಸಿ, ಅದನ್ನು ಬೇರೆ ರೀತಿ ಬಿಂಬಿಸಿ ಮೈಲೇಜ್ ತೆಗೆದುಕೊಂಡು, ನನ್ನನ್ನು ಕೆಟ್ಟವನನ್ನಾಗಿ ಮಾಡಿದರು. ಯಾರು ಏನೇ ಅಂದುಕೊಂಡರು ನಾನು ನನ್ನ ಅಗ್ರೆಸ್ಸಿವ್ ಆಟ ಬಿಡಲ್ಲ, ನಾನು ಆಡುವುದೇ ಹೀಗೆ ಎಂದರು ವಿನಯ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ