ಬಿಗ್​ಬಾಸ್: ಮತ್ತೆ ಪಾರ್ಟಿ ಬದಲಿಸಿದ ಸಂಗೀತಾ, ವಿನಯ್ ಜೊತೆ ಮತ್ತೆ ವೈರತ್ವ ಶುರು

Bigg Boss: ಕಳೆದೆರಡು ವಾರದಿಂದ ವಿನಯ್ ಸಂತ ಸೇರಿಕೊಂಡು ಗೆಳೆಯರಾಗಿದ್ದ ತನಿಷಾ-ಕಾರ್ತಿಕ್ ವಿರುದ್ಧ ಮಾತನಾಡಿದ್ದ ಸಂಗೀತಾ, ಈಗ ಮತ್ತೆ ಪಾರ್ಟಿ ಬದಲಾಯಿಸಿದ್ದಾರೆ.

ಬಿಗ್​ಬಾಸ್: ಮತ್ತೆ ಪಾರ್ಟಿ ಬದಲಿಸಿದ ಸಂಗೀತಾ, ವಿನಯ್ ಜೊತೆ ಮತ್ತೆ ವೈರತ್ವ ಶುರು
Follow us
|

Updated on: Dec 01, 2023 | 11:31 PM

ಬಿಗ್​ಬಾಸ್ (BiggBoss) ಮನೆಯಲ್ಲಿ ಆರಂಭದಲ್ಲಿ ಚೆನ್ನಾಗಿ ಆಡಿದ್ದ ಸಂಗೀತಾ ಶೃಂಗೇರಿ ಕರ್ನಾಟಕದ ಹೊಸ ಕ್ರಶ್ ಎಂದು ಕರೆಸಿಕೊಂಡಿದ್ದರು. ಆದರೆ ಬರ-ಬರುತ್ತಾ ಅವರು ತಮ್ಮ ನಿಜ ಬಣ್ಣ ತೋರಿಸಲಾರಂಭಿಸಿದರು. ಆರಂಭದಲ್ಲಿ ವಿನಯ್​ರ ಅಹಂಕಾರವನ್ನು, ದಾರ್ಷ್ಯವನ್ನು ದಿಟ್ಟವಾಗಿ ಎದುರಿಸಿದ ಸಂಗೀತಾ, ಎರಡು ವಾರದ ಹಿಂದೆ ವಿನಯ್ ತಂಡ ಸೇರಿಕೊಂಡು ಇಷ್ಟು ವಾರ ಸ್ನೇಹಿತರಾಗಿದ್ದ ತನಿಷಾ-ಕಾರ್ತಿಕ್ ಅವರನ್ನೇ ಗೇಲಿ ಮಾಡಲು, ಉರಿಸಲು ಆರಂಭಿಸಿದ್ದರು. ವಿನಯ್ ಅನ್ನು ಜಂಟಲ್​ಮ್ಯಾನ್ ಎಂದು ಸಹ ಹೊಗಳಿದ್ದರು. ಈಗ ಮತ್ತೆ ಪಾರ್ಟಿ ಬದಲಿಸಿದ್ದಾರೆ.

ಕಳೆದ ವಾರ ಸುದೀಪ್ ಅವರು ವಿನಯ್ ಹಾಗೂ ಕಾರ್ತಿಕ್ ನಡುವಲ್ಲಿ ವ್ಯತ್ಯಾಸ ಕೇಳಿದಾಗ, ಕಾರ್ತಿಕ್​ ಬಗ್ಗೆ ಋಣಾತ್ಮಕವಾಗಿ ಮಾತನಾಡಿದ್ದ ಸಂಗೀತಾ, ವಿನಯ್ ಬಹಳ ಸ್ವೀಟ್ ಜಂಟಲ್​ಮ್ಯಾನ್ ಎಂದು ಹೇಳಿದ್ದರು. ವಿನಯ್ ಅವರ ತಂಡದ ಜೊತೆಗೆ ಆಟವನ್ನು ಆಡಿ ಟಾಸ್ಕ್​ಗಳಲ್ಲಿ ಸಹ ಗೆದ್ದರು. ಅಂತಿಮವಾಗಿ ಕ್ಯಾಪ್ಟನ್ಸಿ ಟಾಸ್ಕ್​ ಬಂದಾಗ ವಿನಯ್, ಸಂಗಿತಾರನ್ನು ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹೊರಗಿಟ್ಟರು. ಇದು ಸಂಗೀತಾಗೆ ಸಹಿಸಿಕೊಳ್ಳಲಾಗಲಿಲ್ಲ.

ತಮ್ಮನ್ನು ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹೊರಗಿಟ್ಟಿದ್ದಕ್ಕೆ ತೀವ್ರ ಬೇಸರ ಹೊರಹಾಕಿದ ಸಂಗೀತಾ, ಒಬ್ಬೊಬ್ಬರೇ ಕುಳಿತು ಮಾತನಾಡಿಕೊಳ್ಳುತ್ತಾ, ನನ್ನನ್ನು ತುಳಿದಿದ್ದಾರೆ, ನಾನು ಮತ್ತೆ ಎದ್ದು ನಿಲ್ಲುತ್ತೇನೆ, ನನ್ನನ್ನು ತುಳಿದವರು ತಲೆ ಎತ್ತಿ ನೋಡಬೇಕು ಹಾಗೆ ಆಗುತ್ತೇನೆ ಎಂದರು. ಮುಂದುವರೆದು ಆನೆ ಎನಿಸಿಕೊಂಡವರೇ ನನ್ನನ್ನು ಕಾಂಪಿಟಿಷನ್ ಅಂದುಕೊಂಡು ಹೊರಗೆ ಹಾಕಿದ್ದಾರೆಂದರೆ ಅದು ಸಾಮಾನ್ಯ ಸಾಧನೆಯಲ್ಲ ಎಂದು ತಮ್ಮ ಸಾಧನೆಯನ್ನು ತಾವೇ ಹೇಳಿ ಮೆಚ್ಚಿಕೊಂಡರು.

ಇದನ್ನೂ ಓದಿ:ಬಿಗ್​ಬಾಸ್ ಮುಂದೆ ಕಣ್ಣೀರು ಹಾಕಿದ ವಿನಯ್

ಗಾಯಗೊಂಡು ಹೊರಗೆ ಹೋಗಿದ್ದ ತನಿಷಾ ಮತ್ತೆ ಬಂದಾಗ ತನಿಷಾ ಹಾಗೂ ಕಾರ್ತಿಕ್ ಜೊತೆ ಮಾತನಾಡುತ್ತಾ, ವಿನಯ್ ವಿರುದ್ಧ ದೂರು ಹೇಳಲು ಪ್ರಾರಂಭಿಸಿದರು. ತನ್ನನ್ನು ಕ್ಯಾಪ್ಟನ್ಸಿ ಟಾಸ್ಕ್​ನಿಂದ ವಿನಯ್ ಹೊರಗಿಟ್ಟ ಬಗ್ಗೆ ಸಂಗೀತಾ, ವಿನಯ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಆಗ ತನಿಷಾ, ನೀನೇ ತಾನೆ ಅವನು ಸ್ವೀಟ್, ಜಂಟಲ್​ಮ್ಯಾನ್ ಎಂದೆಲ್ಲ ಹೇಳಿದ್ದು ಎಂದು ನಗುತ್ತಲೇ ಟಾಂಗ್ ಕೊಟ್ಟರು, ಕಾರ್ತಿಕ್ ಸಹ, ಸುದೀಪ್ ಅವರು ಕೇಳಿದಾಗ ಸಂಗೀತಾ ನೀಡಿದ್ದ ಉತ್ತರವನ್ನು ನೆನಪು ಮಾಡಿದರು.

ವಿನಯ್ ಸಹ ನಮ್ರತಾ, ಸ್ನೇಹಿತ್, ಮೈಖಲ್ ಮುಂದೆ ಸಂಗೀತಾರ ಬಗ್ಗೆ ದೂರಲು ಪ್ರಾರಂಭ ಮಾಡಿದರು. ಆಕೆ ಅವಳು ಈ ಮನೆಯಲ್ಲಿ ಯಾವ ಟಾಸ್ಕ್ ಸರಿಯಾಗಿ ಆಡಿದ್ದಾಳೆ. ಒಂದೂ ಟಾಸ್ಕ್​ ಅನ್ನು ಸರಿಯಾಗಿ ಆಡಿ ಆಕೆ ಗೆದ್ದಿಲ್ಲ. ಸುಮ್ಮನೆ ಕೆಲಸಕ್ಕೆ ಬಾರದ ರೊಮ್ಯಾನ್ಸ್ ಮಾಡಿಕೊಂಡು ಓಡಾಡುತ್ತಿದ್ದಾಳೆ. ಒಮ್ಮೆ ಕಾರ್ತಿಕ್, ಒಮ್ಮೆ ಮೈಖಲ್ ಎಂದು ಹೀಗಳಿದರು. ಆ ಬಳೆ ವಿಷಯದಲ್ಲಿ ಸಹ ಅವರೇ ನನಗೆ ಸಿಟ್ಟು ಬರುವಂತೆ ಮಾಡಿ, ನನ್ನ ಬಾಯಿಂದ ಮಾತು ಆಡಿಸಿ, ಅದನ್ನು ಬೇರೆ ರೀತಿ ಬಿಂಬಿಸಿ ಮೈಲೇಜ್ ತೆಗೆದುಕೊಂಡು, ನನ್ನನ್ನು ಕೆಟ್ಟವನನ್ನಾಗಿ ಮಾಡಿದರು. ಯಾರು ಏನೇ ಅಂದುಕೊಂಡರು ನಾನು ನನ್ನ ಅಗ್ರೆಸ್ಸಿವ್ ಆಟ ಬಿಡಲ್ಲ, ನಾನು ಆಡುವುದೇ ಹೀಗೆ ಎಂದರು ವಿನಯ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ