ಬಿಗ್​ಬಾಸ್ ಮುಂದೆ ಕಣ್ಣೀರು ಹಾಕಿದ ವಿನಯ್

Vinay Gowda: ಬಿಗ್​ಬಾಸ್ ಮನೆಯ ಅತ್ಯಂತ ಗಟ್ಟಿ ಸ್ಪರ್ಧಿ, ಆನೆ ಎಂದೆಲ್ಲ ಕರೆಸಿಕೊಂಡಿರುವ ವಿನಯ್ ಗೌಡ, ಬಿಗ್​ಬಾಸ್ ಮುಂದೆ ಕಣ್ಣೀರು ಹಾಕಿದ್ದಾರೆ.

ಬಿಗ್​ಬಾಸ್ ಮುಂದೆ ಕಣ್ಣೀರು ಹಾಕಿದ ವಿನಯ್
ವಿನಯ್ ಗೌಡ
Follow us
|

Updated on: Nov 28, 2023 | 11:32 PM

ಬಿಗ್​ಬಾಸ್ (Bigg Boss) ಮನೆಯಲ್ಲಿ ವಿನಯ್ ಅತ್ಯಂತ ಗಟ್ಟಿ ಸ್ಪರ್ಧಿ ಎಂದು ಆರಂಭದಿಂದಲೂ ನಿರೂಪಿಸಿಕೊಳ್ಳುತ್ತಲೇ ಬಂದಿದ್ದಾರೆ. ಬಹಳ ಅಗ್ರೆಸ್ಸಿವ್ ಆಗಿ ಆಟವಾಡುವುದಾಗಲಿ, ತಮ್ಮ ಅಭಿಪ್ರಾಯಗಳನ್ನು ಗಟ್ಟಿಯಾಗಿ ಹೇಳುವುದು, ಮನೆಯ ಇತರೆ ಸದಸ್ಯರ ಮೇಲೆ ಪ್ರಭಾವ ಬೀರುವುದಾಗಲಿ ಮಾಡುತ್ತಲೇ ಬಂದಿದ್ದಾರೆ. ಟಾಸ್ಕ್​ಗಳಲ್ಲಿ ಸಹ ಹಲವು ಬಾರಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಗಟ್ಟಿ ಮನೋಬಲವನ್ನು ಸಹ ಹೊಂದಿದ್ದಾರೆ. ಆದರೆ ಮಂಗಳವಾರ ಪ್ರಸಾರವಾದ ಎಪಿಸೋಡ್​ನಲ್ಲಿ ಮಾತ್ರ ವಿನಯ್ ಕಣ್ಣೀರು ಹಾಕಿದ್ದಾರೆ.

ಮನೆಗೆ ಇಬ್ಬರು ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದಿದ್ದಾರೆ. ಅವರಲ್ಲಿ ಒಬ್ಬರಾದ ಪವಿ ಪೂವಪ್ಪ ಅವರು ಸ್ನೇಹಿತ್, ವಿನಯ್ ಹಾಗೂ ಇತತರೊಟ್ಟಿಗೆ ಮಾತನಾಡುತ್ತಿದ್ದರು. ಈ ವೇಳೆ ಸ್ನೇಹಿತ್, ಬಿಗ್​ಬಾಸ್ ಮನೆಯ ಸ್ಪರ್ಧಿಗಳ ಬಗ್ಗೆ ಹೊರಗೆ ಯಾವ ರೀತಿಯ ಅಭಿಪ್ರಾಯವಿದೆ ಎಂದು ಪವಿ ಅವರನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು. ಭಾರಿ ಸದ್ದು ಮನೆಯ ಘಟನೆ ಯಾವುದು ಎಂದು ಸ್ನೇಹಿತ್ ಕೇಳಿದಾಗ, ಪವಿ, ಬಳೆಯ ಎಪಿಸೋಡ್ ಭಾರಿ ಸದ್ದು ಮಾಡಿತು ಎಂದರು. ಆ ವಿಷಯ ಸೋಷಿಯಲ್ ಮೀಡಿಯಾಗಳಲ್ಲಿ ಬಹಳ ಚರ್ಚೆಯಾಯಿತು ಎಂದು ಸಹ ಹೇಳಿದರು.

ಪವಿ ಅದನ್ನು ವಿವರವಾಗಿ, ವಿನಯ್​ರ ಪತ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ ವಿಷಯವನ್ನು ಸಹ ವಿನಯ್ ಬಳಿ ಹೇಳಿದರು ಆದರೆ ಅದನ್ನು ಇಂದಿನ ಎಪಿಸೋಡ್​ನಲ್ಲಿ ತೋರಿಸಲಿಲ್ಲ. ಆದರೆ ಈ ವಿಷಯ ಕೇಳಿ ವಿನಯ್ ಬಹಳ ಬೇಸರಗೊಂಡರು. ಚೇಂಜಿಂಗ್​ ರೂಂಗೆ ಹೋಗಿ ಕಣ್ಣೀರು ಹಾಕಿದರು. ಅದಾದ ಬಳಿಕ ಸೀಕ್ರೆಟ್ ರೂಂಗೆ ಬಂದು ಬಿಗ್​ಬಾಸ್ ಬಳಿ ತಮ್ಮ ಕುಟುಂಬದ ಯೋಗಕ್ಷೇಮ ವಿಚಾರಿಸಿ ಕಣ್ಣೀರು ಹಾಕಿದರು. ನನ್ನನ್ನು ಕೆಟ್ಟವನು ಅಂದುಕೊಳ್ಳಲಿ ಪರವಾಗಿಲ್ಲ ಆದರೆ ನನ್ನಿಂದ ನನ್ನ ಕುಟುಂಬಕ್ಕೆ ಏನೂ ಆಗಬಾರದು, ನಾನು ಬಾಯಿತಪ್ಪಿ ಆಡಿದ ಮಾತು ಅದಾಗಿತ್ತು ಎಂದು ಕೇಳಿಕೊಂಡರು.

ಇದನ್ನೂ ಓದಿ:ಬಿಗ್​ಬಾಸ್ ಏಳನೇ ವಾರದಲ್ಲಿ ಯಾರಿಗೆ ಹೆಚ್ಚು ಮತ? ಸಂಗೀತಾಗೆ ಎಷ್ಟನೇ ಸ್ಥಾನ?

ವಿನಯ್ ಅವರನ್ನು ಸಮಾಧಾನದಿಂದ ಇರುವಂತೆ ಹೇಳಿದ ಬಿಗ್​ಬಾಸ್, ನೀವು ನಿಮ್ಮ ಕುಟುಂಬವನ್ನು ಎಷ್ಟು ಪ್ರೀತಿಸುತ್ತೀರಿ ಎಂಬುದು ನಮಗೆ ಅರಿವಿದೆ. ಅವರು ಕ್ಷೇಮದಿಂದಲೇ ಇದ್ದಾರೆ. ಅರ್ಥವಿಲ್ಲದ ಮಾತುಗಳಿಗೆ ನೀವು ಕಿವಿಗೊಡಬೇಡಿ, ಅದನ್ನು ನಿಜವೆಂದು ಸಹ ನಂಬಬೇಡಿ ಎಂದು ಬಿಗ್​ಬಾಸ್ ಬುದ್ಧಿ ಹೇಳಿದರು. ಬಿಗ್​ಬಾಸ್ ಮಾತಿನಿಂದ ಧೈರ್ಯ ತಂದುಕೊಂಡ ವಿನಯ್, ನಾನು 100% ಪರಿಶ್ರಮ ಹಾಕಿ ಆಟ ಆಡುತ್ತೀನಿ ಬಿಗ್​ಬಾಸ್ ಎಂದು ಹೇಳಿ ಸೀಕ್ರೆಟ್ ರೂಂನಿಂದ ಹೊರಗೆ ಹೋದರು.

ಸಂಗೀತಾ-ಕಾರ್ತಿಕ್ ಹಾಗೂ ವಿನಯ್ ನಡುವೆ ಟಾಸ್ಕ್ ವಿಷಯಕ್ಕೆ ಜಗಳ ಬಂದಾಗ ವಿನಯ್ ಅತಿರೇಕದ ವರ್ತನೆ ತೋರಿದ್ದರು. ಬಳೆಗಳ ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿದ್ದರು. ವಿನಯ್​ರ ಅತಿರೇಕದ ವರ್ತನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಜನ ಹೀಗಳೆದಿದ್ದರು. ಆ ವೇಳೆ ವಿನಯ್​ರ ಪತ್ನಿಗೂ ಸಾಮಾಜಿಕ ಜಾಲತಾಣದಲ್ಲಿ ಎಂಥಹಾ ಕೆಟ್ಟ ಪತಿಯೊಟ್ಟಿಗೆ ಇದ್ದೀರ ಇತ್ಯಾದಿ ನಿಂದನೆಗಳನ್ನು, ಬೆದರಿಕೆಗಳನ್ನು ಹಾಕಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ