AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಇತಿಹಾಸದಲ್ಲೇ ಮೊದಲು, ಮನೆಯ ಕ್ಯಾಪ್ಟನ್ನೇ ಹೊರಗೆ

Bigg Boss: ಈ ಬಾರಿ ಬಿಗ್​ಬಾಸ್ ಮನೆಯಲ್ಲಿ ಹಲವು ವಿಶೇಷತೆಗಳು ನಡೆದಿವೆ. ವಿವಾದದಿಂದಲೂ, ಒಳ್ಳೆಯ ಮನೊರಂಜನೆ ಎರಡರಿಂದಲೂ ಬಿಗ್​ಬಾಸ್ ಗಮನ ಸೆಳೆದಿದೆ. ಏಳನೇ ವಾರದ ಎಲಿಮಿನೇಷನ್​ನಲ್ಲಿ ಬಿಗ್​ಬಾಸ್ ಇತಿಹಾಸದಲ್ಲಿ ನಡೆಯದಿದ್ದ ಘಟನೆಯೊಂದು ನಡೆದಿದೆ.

ಬಿಗ್​ಬಾಸ್ ಇತಿಹಾಸದಲ್ಲೇ ಮೊದಲು, ಮನೆಯ ಕ್ಯಾಪ್ಟನ್ನೇ ಹೊರಗೆ
Bigg Boss 10 Kannada
Follow us
ಮಂಜುನಾಥ ಸಿ.
|

Updated on: Nov 26, 2023 | 11:17 PM

ಬಿಗ್​ಬಾಸ್ (Bigg Boss) ಕನ್ನಡ ಸೀಸನ್ 10 ಹಲವು ಅಪರೂಪದ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಆರಂಭದಲ್ಲಿ ವರ್ತೂರು ಸಂತೋಷ್ ಪ್ರಕರಣದಿಂದ ಸುದ್ದಿಯಾಯ್ತು. ಬಳಿಕ ಬಿಗ್​ಬಾಸ್ ಮನೆಯಲ್ಲಿ ಮಹಿಳೆಯರಿಗೆ, ಮಹಿಳೆ ಧರಿಸುವ ಬಳೆಗೆ ಅಪಮಾನ ಮಾಡಲಾಯ್ತು ಅದೂ ಸಹ ಹೊರಗೆ ಚರ್ಚೆಗೆ ಕಾರಣವಾಯ್ತು. ಅದಾದ ಬಳಿಕ ತನಿಷಾರ ಮಾತೊಂದರ ವಿರುದ್ಧ ದೂರು ದಾಖಲಾಯ್ತು. ಇವೆಲ್ಲದರ ನಡುವೆ ಮನೆಯ ಒಳಗೂ ಕೆಲವು ಅಪರೂಪದ ಘಟನೆಗಳು ನಡೆದವು. ಬಿಗ್​ಬಾಸ್ ಇತಿಹಾಸದಲ್ಲಿ ಇದೇ ಮೊದಲನೇ ಬಾರಿಗೆ ಮನೆಯ ಕ್ಯಾಪ್ಟನ್ ಎಲಿಮಿನೇಟ್ ಆಗಿದ್ದಾರೆ.

ಈ ವಾರ ನೀತು ವನಜಾಕ್ಷಿ ಅವರು ಮನೆಯ ಕ್ಯಾಪ್ಟನ್ ಆಗಿದ್ದರು. ಆದರೆ ಈ ಬಾರಿ ಅವರೇ ಮನೆಯಿಂದ ಹೊರಗೆ ಹೋಗಿದ್ದಾರೆ. ಬಿಗ್​ಬಾಸ್ ನಿಯಮದ ಪ್ರಕಾರ, ಯಾರು ಕ್ಯಾಪ್ಟನ್ ಆಗಿರುತ್ತಾರೋ ಅವರು ಮುಂದಿನ ವಾರ ನಾಮಿನೇಷನ್​ನಿಂದ ಹೊರಗೆ ಇರುತ್ತಾರೆ. ಹಾಗಾಗಿ ನೀತು ಈ ಒಂದು ವಾರ ಉಳಿದುಕೊಂಡಿದ್ದರೆ ಇನ್ನೂ ಎರಡು ವಾರಗಳ ಕಾಲ ಮನೆಯಲ್ಲಿ ಕಳೆಯಬಹುದಿತ್ತು ಆದರೆ ಅವರ ಅದೃಷ್ಟ ಸರಿಯಿರಲಿಲ್ಲ. ಒಂದೇ ಸೀಸನ್​ನಲ್ಲಿ ಎರಡು ಬಾರಿ ಮನೆಯ ಕ್ಯಾಪ್ಟನ್ ಆದ ಮಹಿಳಾ ಸ್ಪರ್ಧಿಯಾಗಿರುವ ನೀತು ಕ್ಯಾಪ್ಟನ್ ಆಗಿದ್ದಾಗಲೇ ಮನೆಯಿಂದ ಹೊರ ಹೊಗಬೇಕಾಯ್ತು.

ಇದನ್ನೂ ಓದಿ:ಬಿಗ್​ಬಾಸ್ ಏಳನೇ ವಾರದಲ್ಲಿ ಯಾರಿಗೆ ಹೆಚ್ಚು ಮತ? ಸಂಗೀತಾಗೆ ಎಷ್ಟನೇ ಸ್ಥಾನ?

ಈ ವಾರ ನಾಮಿನೇಟ್ ಆದವರಿಗೆ ಜನರು ಹಾಕಿರುವ ಮತಗಳ ಆಧಾರದಲ್ಲಿ ನಾಮಿನೇಷನ್​ನಿಂದ ಸೇಫ್ ಮಾಡಲಾಯ್ತು. ಅತಿ ಹೆಚ್ಚು ಮತ ಗಳಿಸಿದ್ದ ಡ್ರೋನ್ ಪ್ರತಾಪ್, ತನಿಷಾ, ಸಂಗೀತಾ, ವಿನಯ್ ಅವರುಗಳು ಶನಿವಾರದ ಎಪಿಸೋಡ್​ನಲ್ಲಿಯೇ ಸೇಫ್ ಆದರು. ಭಾನುವಾರದ ಎಪಿಸೋಡ್​ನಲ್ಲಿ ಸ್ನೇಹಿತ್, ನಮ್ರತಾ, ತುಕಾಲಿ, ಸಿರಿ, ನೀತು ಅವರುಗಳು ಉಳಿದುಕೊಂಡಿದ್ದರು.

ಮತಗಳ ಆಧಾರದಲ್ಲಿ ಮೊದಲು ನಮ್ರತಾ ಸೇಫ್ ಆದರು, ಬಳಿಕ ತುಕಾಲಿ ಸೇಫ್ ಆದರು. ಆ ಬಳಿಕ ಸ್ನೇಹಿತ್ ಸೇಫ್ ಅಂತಿಮವಾಗಿ ಸಿರಿ ಹಾಗೂ ನೀತು ಬಾಕಿ ಉಳಿದರು. ಕೊನೆಗೆ ಕಡಿಮೆ ಮತ ಗಳಿಸಿದ್ದ ನೀತು ಮನೆಯಿಂದ ಹೊರಗೆ ಹೋಗಲೇ ಬೇಕಾಯ್ತು. ನೀತು ಹೊರಗೆ ಹೋಗುವ ಸಮಯದಲ್ಲಿ ಡ್ರೋನ್ ಪ್ರತಾಪ್ ಬಹಳ ಅತ್ತರು. ಹೋಗಬೇಡಿ ಎಂದು ಗೋಗರೆದರು. ನೀತು ಸಹ ಬಹಳ ಭಾವುಕರಾದರು. ನೀತು ಈ ವಾರ ಕ್ಯಾಪ್ಟನ್ ಸಹ ಆಗಿದ್ದರಿಂದ, ತಮ್ಮ ಕ್ಯಾಪ್ಟೆನ್ಸಿಯನ್ನು ಮೈಖಲ್​ಗೆ ವರ್ಗಾವಣೆ ಮಾಡಿ ಮನೆಯಿಂದ ಹೊರಗೆ ನಡೆದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ