AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಿನಯ್ ಗುಂಪಲ್ಲಿ ಜಾಸ್ತಿ ಖುಷಿ ಸಿಕ್ತಿದೆ’; ಅಭಿಮಾನಿಗಳ ಮನಸ್ಸು ಮುರಿದ ಸಂಗೀತಾ ಶೃಂಗೇರಿ

ಇಷ್ಟು ದಿನ ಕಾರ್ತಿಕ್ ಗ್ಯಾಂಗ್​ನಲ್ಲಿ ಸಂಗೀತಾ ಕಾಣಿಸಿಕೊಂಡಿದ್ದರು. ಕಾರ್ತಿಕ್ ಅವರಿಂದ ಸಂಗೀತಾಗೆ ಪ್ರೀತಿ ಸಿಕ್ಕಿದೆ. ಅವರ ಕೇರಿಂಗ್​ನ ಸಂಗೀತಾ ಕೂಡ ಸ್ವೀಕರಿಸಿದ್ದಾರೆ. ಆದರೆ, ಒಂದೇ ವಾರದಲ್ಲಿ ಎಲ್ಲವೂ ಬದಲಾಗಿದೆ.

‘ವಿನಯ್ ಗುಂಪಲ್ಲಿ ಜಾಸ್ತಿ ಖುಷಿ ಸಿಕ್ತಿದೆ’; ಅಭಿಮಾನಿಗಳ ಮನಸ್ಸು ಮುರಿದ ಸಂಗೀತಾ ಶೃಂಗೇರಿ
ವಿನಯ್​ ಗೌಡ ಸಂಗೀತಾ ಶೃಂಗೇರಿ
ಮದನ್​ ಕುಮಾರ್​
|

Updated on: Nov 26, 2023 | 12:55 PM

Share

ವಿನಯ್ ಗೌಡ ಹಾಗೂ ಸಂಗೀತಾ ಶೃಂಗೇರಿ (Sangeetha Sringeri) ಅವರು ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಬದ್ಧ ವೈರಿಗಳಂತೆ ನಡೆದುಕೊಂಡಿದ್ದರು. ‘ನನಗೆ ನಿಮ್ಮಿಂದ ಥ್ರೆಟ್ ಆಗುತ್ತಿದೆ’ ಎಂದು ಸಂಗೀತಾ ಆರೋಪಿಸಿದ್ದರು. ಈ ವಿಚಾರದಲ್ಲಿ ವಿನಯ್ ಹಾಗೂ ಸಂಗೀತಾ ಮಧ್ಯೆ ದೊಡ್ಡ ಜಗಳವೇ ಏರ್ಪಟ್ಟಿತ್ತು. ಇನ್ನು, ಬಳೆಯ ವಿಚಾರಕ್ಕೆ ವಿನಯ್ (Vinay Gowda) ಹಾಗೂ ಸಂಗೀತಾ ಮಧ್ಯೆ ನಡೆದ ವಾರ್ ಅಂತಿಂಥದ್ದಲ್ಲ. ಅಚ್ಚರಿಯ ಬೆಳವಣಿಗೆಯಲ್ಲಿ ಸಂಗೀತಾ ಅವರು ವಿನಯ್ ಗ್ಯಾಂಗ್ ಸೇರಿಕೊಂಡಿದ್ದಾರೆ. ‘ಕಾರ್ತಿಕ್​ಗಿಂತ ವಿನಯ್ ಬೆಸ್ಟ್’ ಎಂದಿದ್ದಾರೆ. ಇದು ಸಂಗೀತಾ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅವರ ಇನ್​ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ದಿನ ಕಳೆದಂತೆ ತಗ್ಗುತ್ತಿರುವುದೇ ಇದಕ್ಕೆ ಉತ್ತಮ ಸಾಕ್ಷಿ.

ಇಷ್ಟು ದಿನ ಕಾರ್ತಿಕ್ ಗ್ಯಾಂಗ್​ನಲ್ಲಿ ಸಂಗೀತಾ ಕಾಣಿಸಿಕೊಂಡಿದ್ದರು. ಕಾರ್ತಿಕ್ ಅವರಿಂದ ಸಂಗೀತಾಗೆ ಪ್ರೀತಿ ಸಿಕ್ಕಿದೆ. ಅವರ ಕೇರಿಂಗ್​ನ ಸಂಗೀತಾ ಕೂಡ ಸ್ವೀಕರಿಸಿದ್ದಾರೆ. ಆದರೆ, ಒಂದೇ ವಾರದಲ್ಲಿ ಎಲ್ಲವೂ ಬದಲಾಗಿದೆ. ಗೇಮ್ ಒಂದರಲ್ಲಿ ಕಾರ್ತಿಕ್ ಹಾಗೂ ತನಿಷಾ ತಮ್ಮನ್ನು ಸೇವ್ ಮಾಡಿಲ್ಲ ಎಂದು ಸಂಗೀತಾ ಅವರು ಸಿಟ್ಟಾದರು. ಅದು ಯಾವ ಹಂತಕ್ಕೆ ಹೋಯಿತು ಎಂದರೆ ಸಂಗೀತಾ ಗ್ರೂಪ್​ನೆ ಬದಲಾಯಿಸಿಬಿಟ್ಟರು. ಗೇಮ್ ಒಂದರಲ್ಲಿ ಕಾರ್ತಿಕ್ ಅವರ ತಲೆ ಬೋಳಿಸುವಂತೆ ಸಂಗೀತಾ ಗುಂಪಿನಿಂದಲೇ ಚಾಲೆಂಜ್ ಬಂತು. ಈಗ ಸಂಗೀತಾ ಅವರು ವಿನಯ್​ ಈಸ್ ಬೆಸ್ಟ್ ಎಂದಿದ್ದಾರೆ.

ಇದನ್ನೂ ಓದಿ: ‘ನಾನು ಇಲ್ಲಿರೋಕೆ ಅರ್ಹನಲ್ಲ’; ಬಿಗ್ ಬಾಸ್ ಬಿಟ್ಟು ಹೋಗುವ ಆಲೋಚನೆ ಮಾಡಿದ ವಿನಯ್

ವೀಕೆಂಡ್​ನಲ್ಲಿ ಸುದೀಪ್ ಅವರು ವಿನಯ್ ಗ್ರೂಪ್​ನ ಬಗ್ಗೆ ಪ್ರಶ್ನೆ ಕೇಳಿದರು. ಆ ತಂಡ ಹೇಗೆ ಅನ್ನಿಸಿತು ಎಂದು ಕೇಳಿದರು. ಇದಕ್ಕೆ ಮೊದಲು ಪ್ರತಾಪ್ ಉತ್ತರಿಸಿದರು. ‘ಹಲವು ವಿಚಾರ ಈ ಟೀಂ ಸೇರಿದ ಮೇಲೆ ನನಗೆ ಗೊತ್ತಾಯಿತು. ಜೋರಾಗಿ ಮಾತನಾಡಿದರೆ ಎದುರಾಳಿ ತಂಡದವರು ಪ್ಯಾನಿಕ್ ಆಗ್ತಾರೆ ಅನ್ನೋ ಸ್ಟ್ರೆಟೆಜಿ ಈ ತಂಡ ಹೊಂದಿದೆ’ ಎಂದಿದ್ದಾರೆ ಪ್ರತಾಪ್. ಆದರೆ, ಸಂಗೀತಾ ಉತ್ತರ ಬೇರೆಯದೇ ಆಗಿತ್ತು.

‘ಅವರ ತಂಡದಲ್ಲಿ ವಿನಯ್ ಯಾವಾಗಲೂ ಕಾಲ್ ತೆಗೆದುಕೊಳ್ತಾರೆ ಎಂದುಕೊಂಡಿದ್ದೆ. ಅವರ ಟೀಂಗೆ ಹೋಗಿ ನಾನು ತಂಡದ ನಾಯಕಿಯಾದೆ. ವಿನಯ್ ಅವರು ಬಂದು ಎಲ್ಲಾದರೂ ಒತ್ತಡ ಹೇರಲು ಪ್ರಯತ್ನಿಸುತ್ತಾರಾ ಎಂಬುದನ್ನು ಗಮನಿಸಿದೆ. ಆದರೆ ಹಾಗೆ ಅನಿಸಲಿಲ್ಲ. ಅವರು ಬೇಕಂತಲೇ ಪ್ರವೋಕ್ ಮಾಡ್ತಾರಾ ಅನ್ನೋದನ್ನು ಕೂಡ ನೋಡಿದೆ. ಅವರು ಹಾಗೆ ಮಾಡಿದ್ದು ಕಾಣಲಿಲ್ಲ. ಕೇರಿಂಗ್ ಹಾಗೂ ಶಾಂತವಾಗಿರುವ ವಿನಯ್ ಕಾಣಿಸಿದರು. ವಿನಯ್ ಗುಂಪಲ್ಲಿ ಒಗ್ಗಟ್ಟಿದೆ, ಕಾರ್ತಿಕ್ ತಂಡದಲ್ಲಿ ಯುನಿಟಿ ಇರಲಿಲ್ಲ’ ಎಂದರು ಸಂಗೀತಾ.

ಇದನ್ನೂ ಓದಿ: ಬಿಗ್ ಬಾಸ್​ಗೆ ಕಾಲಿಟ್ಟ ಒರಿ; ಸುಮ್ಮನೆ ಸುತ್ತಾಡುವ ಈ ವ್ಯಕ್ತಿಗಿದ್ದಾರೆ ಐದು ಮ್ಯಾನೇಜರ್

‘ಆರು ವಾರಗಳಲ್ಲಿ ಇದ್ದ ಅಭಿಪ್ರಾಯ ಒಂದೇ ರಾತ್ರಿಯಲ್ಲಿ ಬದಲಾಗಿ ಹೋಯ್ತಾ’ ಎಂದು ಸುದೀಪ್ ಮರು ಪ್ರಶ್ನೆ ಹಾಕಿದರು. ‘ಮೊದಲು ಹೌದು ಎಂದ ಸಂಗೀತಾ ನಂತರ ಉತ್ತರ ಬದಲಿಸಿದರು. ‘ಇಲ್ಲ ನಿಧಾನವಾಗಿ ಬದಲಾಗಿದೆ. ಎಲ್ಲವನ್ನೂ ನೋಡಿ ಈ ನಿರ್ಧಾರ ತೆಗೆದುಕೊಂಡೆ. ವಿನಯ್ ಗುಂಪಲ್ಲಿ ಜಾಸ್ತಿ ಖುಷಿ ಸಿಕ್ತಿದೆ. ಇಲ್ಲಿ ಹೆಚ್ಚು ಹಿತ ಎನಿಸುತ್ತಿದೆ’ ಎಂದಿದ್ದಾರೆ ಸಂಗೀತಾ. ಇದು ಸಂಗೀತಾ ಅಭಿಮಾನಿಗಳಿಗೇ ಬೇಸರ ಮೂಡಿಸಿದೆ. ಸಂಗೀತಾ ಅವರಿಗೆ ಈ ಮೊದಲು ಇನ್​ಸ್ಟಾಗ್ರಾಮ್​ನಲ್ಲಿ 449 ಸಾವಿರ ಹಿಂಬಾಲಕರು ಇದ್ದರು. ಅಂದರೆ, 4.49 ಲಕ್ಷ. ಈಗ ಅದು 433 ಸಾವಿರಕ್ಕೆ (4.33 ಲಕ್ಷ) ಇಳಿಕೆ ಆಗಿದೆ. ಕೆಲವೇ ದಿನಗಳಲ್ಲಿ ಅವರು 16 ಸಾವಿರ ಜನ ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ. ಬಿಗ್ ಬಾಸ್ ಜರ್ನಿ ಮೇಲೆ ಇದು ನೇರ ಪ್ರಭಾವ ಬೀರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಸಂಗೀತಾ ಅವರು ಕಾರ್ತಿಕ್ ಗ್ಯಾಂಗ್​ನ ಬಿಟ್ಟು ಹೋಗಿದ್ದು, ಈಗ ಆಡುತ್ತಿರುವ ರೀತಿ ಅನೇಕರಿಗೆ ಇಷ್ಟ ಆಗುತ್ತಿಲ್ಲ. ದಿನ ಕಳೆದಂತೆ ವಿನಯ್ ಅವರ ಚಮಚ ಆಗಿ ಸಂಗೀತಾ ಬದಲಾಗುತ್ತಿದ್ದಾರೆ ಎನ್ನುವ ಅಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸಿದ್ದಾರೆ. ಹೊರ ಜಗತ್ತಿಗೆ ಈ ವಿಚಾರ ಸ್ಪಷ್ಟವಾಗಿ ಕಾಣುತ್ತಿದೆ. ಈ ವಿಚಾರಕ್ಕೆ ನಮ್ರತಾ ಅವರಿಗೆ ಈ ಮೊದಲು ಕ್ಲಾಸ್ ತೆಗೆದುಕೊಂಡಿದ್ದರು. ಈಗ ಆ ಸ್ಥಾನವನ್ನು ಸಂಗೀತಾ ತುಂಬುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್