AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ಗೆ ಕಾಲಿಟ್ಟ ಒರಿ; ಸುಮ್ಮನೆ ಸುತ್ತಾಡುವ ಈ ವ್ಯಕ್ತಿಗಿದ್ದಾರೆ ಐದು ಮ್ಯಾನೇಜರ್

‘ಪಾರ್ಟಿ ಅಟೆಂಡ್ ಮಾಡಿದರೆ ನಿಮಗೆ ಹಣ ಸಿಗುತ್ತದೆಯೇ’ ಎಂದು ಕೇಳಿದ್ದಾರೆ ಸಲ್ಲು. ಇದಕ್ಕೆ ಒರಿ ಕೊಟ್ಟ ಉತ್ತರ ಕೇಳಿ ಸಲ್ಮಾನ್ ಖಾನ್ ಶಾಕ್ ಆಗಿದ್ದಾರೆ.

ಬಿಗ್ ಬಾಸ್​ಗೆ ಕಾಲಿಟ್ಟ ಒರಿ; ಸುಮ್ಮನೆ ಸುತ್ತಾಡುವ ಈ ವ್ಯಕ್ತಿಗಿದ್ದಾರೆ ಐದು ಮ್ಯಾನೇಜರ್
ಒರಿ-ಸಲ್ಮಾನ್
TV9 Web
| Edited By: |

Updated on:Nov 25, 2023 | 10:40 AM

Share

ಬಿಗ್ ಬಾಸ್​ನ ಎಲ್ಲಾ ಸೆಲೆಬ್ರಿಟಿಗಳ ಜೊತೆ ಪೋಸ್ ಕೊಡೋದು ಒರ್ಹನ್ ಅವತ್ರಮಣಿ (Orhan Awatramani) ಅಲಿಯಾಸ್ ಒರಿಯ ಕೆಲಸ. ಅವರು ಚಿತ್ರರಂಗ ಹಿನ್ನೆಲೆ ಹೊಂದಿರುವ ವ್ಯಕ್ತಿ ಅಲ್ಲ. ಆದಾಗ್ಯೂ ಅವರು ಎಲ್ಲಾ ಸೆಲೆಬ್ರಿಟಿಗಳ ಜೊತೆ ಕಾಣಿಸಿಕೊಳ್ಳುತ್ತಾರೆ. ಅವರು ಯಾರು, ಏನು ಕೆಲಸ ಮಾಡುತ್ತಾರೆ ಎಂಬ ಅನೇಕ ಪ್ರಶ್ನೆಗಳಿವೆ. ಹೀಗಿರುವಾಗಲೇ ಅವರು ‘ಹಿಂದಿ ಬಿಗ್ ಬಾಸ್ ಸೀಸನ್ 17’ ಶೋಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ. ವೇದಿಕೆ ಮೇಲೆ ಸಲ್ಮಾನ್ ಖಾನ್ ಜೊತೆ ಮಾತನಾಡಿದ್ದಾರೆ. ಈ ವೇಳೆ ಹಲವು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.

ಸಲ್ಮಾನ್ ಖಾನ್ ಒರಿಯನ್ನು ಸ್ವಾಗತಿಸಿದ್ದಾರೆ. ‘ಮಿಸ್ಟೀರಿಯಸ್ ವ್ಯಕ್ತಿ, ಸೆಲೆಬ್ರಿಟಿಗಳ ಆಪ್ತ’ ಎಂದು ಒರಿಯನ್ನು ಕರೆದಿದ್ದಾರೆ. ‘ಒರಿ ಏನು ಕೆಲಸ ಮಾಡುತ್ತಾರೆ’ ಎಂದು ಸಲ್ಮಾನ್ ಖಾನ್ ಕೇಳಿದ್ದಾರೆ. ‘ನಾನು ಎಲ್ಲರಂತೆ ಸೂರ್ಯ ಉದಯಿಸುವಾಗ ಏಳುತ್ತೇನೆ. ಚಂದ್ರ ಹುಟ್ಟುವಾಗ ಮಲಗುತ್ತೇನೆ’ ಎಂದಿದ್ದಾರೆ. ‘ಪಾರ್ಟಿ ಅಟೆಂಡ್ ಮಾಡಿದರೆ ನಿಮಗೆ ಹಣ ಸಿಗುತ್ತದೆಯೇ’ ಎಂದು ಕೇಳಿದ್ದಾರೆ ಸಲ್ಲು. ಇದಕ್ಕೆ ಒರಿ ಕೊಟ್ಟ ಉತ್ತರ ಕೇಳಿ ಸಲ್ಮಾನ್ ಖಾನ್ ಶಾಕ್ ಆಗಿದ್ದಾರೆ.

‘ಎಲ್ಲಾ ಸೆಲೆಬ್ರಿಟಿಗಳು ನನ್ನ ಮ್ಯಾನೆಜರ್​ಗೆ ಕರೆ ಮಾಡಿ ಪಾರ್ಟಿಗೆ ಬರುವಂತೆ ಕೇಳುತ್ತಾರೆ’ ಎಂದಿದ್ದಾರೆ ಒರಿ. ‘ನಿಮಗೂ ಮ್ಯಾನೇಜರ್ ಇದ್ದಾರಾ’ ಎಂಬರ್ಥದಲ್ಲಿ ಸಲ್ಲು ಪ್ರಶ್ನೆ ಮಾಡಿದರು. ಇದಕ್ಕೆ ಒರಿ ಉತ್ತರಿಸಿದ್ದಾರೆ. ಅವರ ಬಳಿ ಒಂದಲ್ಲ, ಎರಡಲ್ಲ ಐದು ಮ್ಯಾನೇಜರ್ ಇದ್ದಾರಂತೆ! ಈ ಮಾತನ್ನು ಕೇಳಿ ಸಲ್ಲು ಶಾಕ್ ಆಗಿದ್ದಾರೆ. ‘ಸಲ್ಮಾನ್ ನೀನು ಜೀವನದಲ್ಲಿ ಏನಾದರೂ ಮಾಡಬೇಕು’ ಎಂದು ಸಲ್ಲು ಸಣ್ಣದಾಗಿ ಹೇಳಿಕೊಂಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: Salman Khan: ಸಲ್ಮಾನ್ ಖಾನ್ ಜೊತೆ ಹೊಸ ಸಿನಿಮಾ ಮಾಡ್ತಾರೆ ಸನ್ನಿ ಡಿಯೋಲ್?

ಬಾಲಿವುಡ್ ಪಾರ್ಟಿಗಳಲ್ಲಿ ಒರಿ ಕಾಣಿಸುತ್ತಾರೆ. ಜಾನ್ವಿ ಕಪೂರ್, ಖುಷಿ ಕಪೂರ್, ಆಲಿಯಾ ಭಟ್, ದೀಪಿಕಾ ಪಡುಕೋಣೆ, ಕರೀನಾ ಕಪೂರ್, ಸಾರಾ ತೆಂಡೂಲ್ಕರ್, ನಿಸಾ ದೇವಗನ್, ಅನನ್ಯಾ ಪಾಂಡೆ, ಸಾರಾ ಅಲಿ ಖಾನ್ ಸೇರಿ ಎಲ್ಲರ ಜೊತೆ ಒರಿ ಕಾಣಿಸಿಕೊಂಡಿದ್ದಾರೆ. ಅವರ ಐಡೆಂಟಿಟಿ ಬಗ್ಗೆ ಯಾರಿಗೂ ಗೊತ್ತಿಲ್ಲ. ಬಿಗ್ ಬಾಸ್​ನಲ್ಲಿ ಹೆಚ್ಚಿನ ವಿಚಾರ ರಿವೀಲ್ ಆಗೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:44 am, Sat, 25 November 23

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ