AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

KBC 13: ಮೊಘಲ್ ಸಾಮ್ರಾಜ್ಯದ ಕುರಿತ ₹ 7 ಕೋಟಿ ಮೊತ್ತದ ಪ್ರಶ್ನೆಗೆ ಉತ್ತರ ತಿಳಿಯದೇ ಕ್ವಿಟ್ ಮಾಡಿದ ಸ್ಪರ್ಧಿ; ನೀವು ಉತ್ತರಿಸಬಲ್ಲಿರಾ?

Amitabh Bachchan: ಕೆಬಿಸಿ 13ರಲ್ಲಿ ಹೊಸ ಕೋಟ್ಯಧಿಪತಿ ಹೊರಹೊಮ್ಮಿದ್ದಾರೆ. ಆದರೆ ಅವರಿಗೆ ₹ 7 ಕೋಟಿ ಮೊತ್ತದ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ಆ ಪ್ರಶ್ನೆ ಇಲ್ಲಿದೆ.

KBC 13: ಮೊಘಲ್ ಸಾಮ್ರಾಜ್ಯದ ಕುರಿತ ₹ 7 ಕೋಟಿ ಮೊತ್ತದ ಪ್ರಶ್ನೆಗೆ ಉತ್ತರ ತಿಳಿಯದೇ ಕ್ವಿಟ್ ಮಾಡಿದ ಸ್ಪರ್ಧಿ; ನೀವು ಉತ್ತರಿಸಬಲ್ಲಿರಾ?
ಗೀತಾ ಸಿಂಗ್ ಗೌರ್, ಅಮಿತಾಭ್ ಬಚ್ಚನ್
TV9 Web
| Edited By: |

Updated on: Nov 10, 2021 | 10:39 AM

Share

ಅಮಿತಾಭ್ ಬಚ್ಚನ್ (Amitabh Bachchan) ನಡೆಸಿಕೊಡುವ ಕೌನ್ ಬನೇಗಾ ಕರೋಡ್​ಪತಿ (KBC 13) ಕಾರ್ಯಕ್ರಮ ಅದ್ಭುತವಾಗಿ ಮೂಡಿಬರುತ್ತಿದ್ದು, ಇತ್ತೀಚೆಗಷ್ಟೇ ಈ ಸೀಸನ್​ನ ಮೂರನೇ ಕೋಟ್ಯಧಿಪತಿ ಹೊರಹೊಮ್ಮಿದ್ದಾರೆ. ಮಧ್ಯಪ್ರದೇಶ ಮೂಲದ ಗೀತಾ ಸಿಂಗ್ ಗೌರ್ (Geetha Singh Gour), ಸರಿಯುತ್ತರಗಳನ್ನು‌ ನೀಡಿ 1 ಕೋಟಿ ಮೊತ್ತವನ್ನು ಗೆದ್ದರು. ಆದರೆ, 7 ಕೋಟಿ ರೂ ಮೊತ್ತದ ಪ್ರಶ್ನೆಗೆ ಅವರಿಗೆ ಸರಿಯಾದ ಉತ್ತರ ತಿಳಿದಿರಲಿಲ್ಲ. ಜೊತೆಗೆ, ಅವರಲ್ಲಿ ಯಾವ ಲೈಫ್ ಲೈನ್ ಸಹ ಉಳಿದಿರಲಿಲ್ಲ. ಆದ್ದರಿಂದ ಅವರು ಕ್ವಿಟ್ ಮಾಡುವ ನಿರ್ಧಾರ ತಳೆದರು. ಈ ಮೂಲಕ ಅವರು 1 ಕೋಟಿ‌ ಮೊತ್ತದೊಂದಿಗೆ ಸ್ಪರ್ಧೆಯನ್ನು ಮುಗಿಸಿದರು.‌ ಮೊಘಲ್‌ ಸಾಮ್ರಾಜ್ಯದ ಕುರಿತು ಅವರಿಗೆ ಕೊನೆಯ ಪ್ರಶ್ನೆಯನ್ನು ಕೇಳಲಾಗಿತ್ತು.‌ ಆದರೆ ಅದಕ್ಕೆ ಖಚಿತವಾದ ಉತ್ತರ ಗೀತಾರಿಗೆ ತಿಳಿದಿರಲಿಲ್ಲ. ಆ ಪ್ರಶ್ನೆ ಇಲ್ಲಿದೆ.

‘ಅಕ್ಬರ್ ಮೊಮ್ಮಕ್ಕಳನ್ನು ಕ್ರೈಸ್ತ ಪಾದ್ರಿಯರಿಗೆ ಹಸ್ತಾಂತರಿಸಿದ ನಂತರ, ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಿಸಿ, ಹೆಸರು ಬದಲಿಸಲಾಯಿತು. ಈ‌ ಕೆಳಗಿನ ಹೆಸರುಗಳಲ್ಲಿ ಯಾವುದು ಅಕ್ಬರ್ ನ ಮೂರು ಮಕ್ಕಳ‌ ಹೆಸರಲ್ಲ?’

ಇದಕ್ಕೆ ಆಯ್ಕೆಯ ರೂಪದಲ್ಲಿ, ಡಾನ್‌ ಫೆಲಿಪೆ, ಡಾನ್ ಹೆನ್ರಿಕ್, ಡಾನ್‌ ಕಾರ್ಲೋಸ್ ಮತ್ತು ಡಾನ್ ಫ್ರಾನ್ಸಿಸ್ಕೊ ಎಂಬ ಹೆಸರುಗಳನ್ನು‌ ನೀಡಲಾಗಿತ್ತು. ಇದಕ್ಕೆ‌ ಸರಿಯಾದ ಉತ್ತರ ತಿಳಿಯದ ಕಾರಣ ಗೀತಾ ಕ್ವಿಟ್ ಮಾಡಿದರು. ವಾಸ್ತವವಾಗಿ, ಮೇಲಿನ ನಾಲ್ಕು ಹೆಸರುಗಳಲ್ಲಿ ಡಾನ್ ಫ್ರಾನ್ಸಿಸ್ಕೋ ಎಂಬ ಹೆಸರು, ಅಕ್ಬರ್ ಮೊಮ್ಮಕ್ಕಳಿಗೆ ಸಂಬಂಧಿಸಿದ ಹೆಸರಾಗಿರಲಿಲ್ಲ. ಆದ್ದರಿಂದ‌‌ ಸರಿಯಾದ ಉತ್ತರ ಡಾನ್‌ ಫ್ರಾನ್ಸಿಸ್ಕೋ ಆಗಿತ್ತು.

ಅಕ್ಬರ್ ಪುತ್ರ ಜಹಾಂಗೀರ್, ತಮ್ಮ‌‌ ಸೋದರನ ಮೂವರು ಪುತ್ರರನ್ನು ಕ್ರಿಶ್ಚಿಯನ್ ಪಾದ್ರಿಗಳಿಗೆ ಹಸ್ತಾಂತರಿಸಿದ್ದರು. ಪರಿಣಾಮವಾಗಿ ಅವರ ಹೆಸರುಗಳೂ ಬದಲಾದವು. ಕೆಲ ತಿಂಗಳುಗಳ ನಂತರ ಮೂವರೂ ಮತ್ತೆ‌ ಇಸ್ಲಾಂ ಧರ್ಮಕ್ಕೆ ಮರಳಿದರು‌ ಎಂದು ಅಮಿತಾಭ್ ಗೀತಾ ಅವರಿಗೆ ಪ್ರಶ್ನೆಯ ಹಿಂದಿರುವ ಇತಿಹಾಸವನ್ನು ನಂತರ ವಿವರಿಸಿದರು.

ಇದನ್ನೂ ಓದಿ:

‘ಅಪ್ಪು ಸರ್​ ವಿಚಾರದಲ್ಲಿ ಮರಣ ಎಂಬ ಪದ ಬಳಸೋಕೆ ನಾನು ಇಷ್ಟಪಡಲ್ಲ’: ರಚಿತಾ ರಾಮ್​​

Priyanka Chopra: ಬರೋಬ್ಬರಿ ₹ 2.1 ಕೋಟಿ ಮೊತ್ತದ ಎಂಗೇಜ್​ಮೆಂಟ್ ರಿಂಗ್ ಕುರಿತು ಕುತೂಹಲಕರ ವಿಚಾರ ಹಂಚಿಕೊಂಡ ಪ್ರಿಯಾಂಕಾ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?