AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡತಿಯಲ್ಲಿ ಹರ್ಷನ ಪ್ರಪೋಸ್​ ಭುವಿ ಒಪ್ಪಿಕೊಳ್ಳೋದು ಡೌಟು? ಇಲ್ಲಿದೆ ಕಾರಣ

ಭುವಿ ಜನ್ಮದಿನ ಬಂದಿದೆ. ಈ ವಿಶೇಷ ದಿನದಂದು ಹರ್ಷ ಪ್ರಪೋಸ್​ ಮಾಡಬೇಕು ಎಂದು ನಿರ್ಧರಿಸಿದ್ದರು. ಅಂತೆಯೇ, ಭುವಿ ತಂಗಿ ಬಿಂದು ಜತೆ ಸೇರಿ ಮನೆಯನ್ನೆಲ್ಲ ಅಲಂಕರಿಸಿದ್ದಾರೆ.

ಕನ್ನಡತಿಯಲ್ಲಿ ಹರ್ಷನ ಪ್ರಪೋಸ್​ ಭುವಿ ಒಪ್ಪಿಕೊಳ್ಳೋದು ಡೌಟು? ಇಲ್ಲಿದೆ ಕಾರಣ
ಭುವಿ-ಹರ್ಷ
TV9 Web
| Edited By: |

Updated on:Oct 06, 2021 | 7:12 PM

Share

ಕನ್ನಡತಿ ಧಾರಾವಾಹಿ ಪ್ರಮುಖ ಘಟ್ಟ ತಲುಪಿದೆ. ಪ್ರೀತಿಯನ್ನು ವ್ಯಕ್ತಪಡಿಸದೇ ಸುಮ್ಮನೆ ಇದ್ದ ಹರ್ಷ​, ಭುವಿ ಜನ್ಮದಿನಕ್ಕಾಗಿ ಕಾದಿದ್ದ. ಆ ದಿನ ಈಗ ಬಂದೇ ಬಿಟ್ಟಿದೆ. ಭುವಿಗೆ ಪ್ರಪೋಸ್​ ಮಾಡೋಕೆ ಹರ್ಷ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾನೆ. ಈ ವಿಶೇಷ ಕ್ಷಣಕ್ಕೆ ಯಾವುದಾದರೂ ವಿಘ್ನ ಎದುರಾಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಭುವಿ ಜನ್ಮದಿನ ಬಂದಿದೆ. ಈ ವಿಶೇಷ ದಿನದಂದು ಹರ್ಷ ಪ್ರಪೋಸ್​ ಮಾಡಬೇಕು ಎಂದು ನಿರ್ಧರಿಸಿದ್ದ. ಅಂತೆಯೇ, ಭುವಿ ತಂಗಿ ಬಿಂದು ಜತೆ ಸೇರಿ ಮನೆಯನ್ನೆಲ್ಲ ಅಲಂಕರಿಸಿದ್ದಾನೆ. ಭುವಿ ಮನೆ ಒಳಗೆ ಬರುತ್ತಿದ್ದಂತೆ ಅವಳಿಗೆ ದೊಡ್ಡ ಸರ್​ಪ್ರೈಸ್​ ಕಾದಿತ್ತು.  ಭುವಿ ಕಣ್ಮುಚ್ಚಿ ಬಿಂದು ಮನೆ ಒಳಗೆ ಕರೆತಂದಳು. ಒಳಗೆ ಮಾಡಲಾಗಿದ್ದ ಅಲಂಕಾರ ನೋಡಿ ಭುವನೇಶ್ವರಿಗೆ ನಿಜಕ್ಕೂ ಅಚ್ಚರಿ ಹಾಗೂ ಶಾಕ್​ ಎರಡೂ ಆಗಿತ್ತು.

ಬರ್ತ್​ಡೇ ಸೆಲಬ್ರೇಷನ್​ ನಂತರದಲ್ಲಿ ಹರ್ಷ ಪ್ರಪೋಸ್​ ಮಾಡೋಕೆ ವಿಶೇಷ ಅರೇಂಜ್​ಮೆಂಟ್​ಗಳನ್ನು ಮಾಡಿದ್ದಾನೆ. ಕಾಂಟ್ರ್ಯಾಕ್ಟ್​ ನೀಡಿ ಪ್ರಪೋಸ್​ ಮಾಡೋಕೆ ವ್ಯವಸ್ಥೆ ಮಾಡಿಸಿದ್ದಾನೆ. ಚಿನ್ನದ ಉಂಗುರ ಕೂಡ ಮಾಡಿಸಿದ್ದಾನೆ. ಇದು ಭುವಿಗೆ ಇನ್ನೂ ತಿಳಿದಿಲ್ಲ.

ಭುವಿ ಪ್ರಪೋಸ್​ ಒಪ್ಪಿಕೊಳ್ಳುತ್ತಾರಾ?

ಹರ್ಷ ಮಾಡಿದ ಪ್ರಪೋಸ್​ ಭುವಿ ಒಪ್ಪಿಕೊಳ್ಳುತ್ತಾಳಾ ಅನ್ನೋದು ಸದ್ಯದ ಕುತೂಹಲ. ಅವಳ ಕ್ಲೋಸ್​ ಫ್ರೆಂಡ್ ವರುಧಿನಿಗೆ ಹರ್ಷ ಮೇಲೆ ಪ್ರೀತಿ ಇದೆ. ಆ ಪ್ರೀತಿಯನ್ನು ಪಡೆಯಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾಳೆ ವರುಧಿನಿ. ಇದು ಭುವಿಗೂ ಗೊತ್ತಾಗಿದೆ. ಒಂದೊಮ್ಮೆ ಹರ್ಷ ಪ್ರೀತಿ ಒಪ್ಪಿಕೊಂಡರೆ ವರುಧಿನಿಗೆ ಬೇಸರ ಆಗುತ್ತದೆ ಎಂದು ಭುವಿಗೆ ಅನಿಸಬಹುದು. ಹೀಗಾಗಿ, ಅವಳು ಹರ್ಷನ ಪ್ರೀತಿಯನ್ನು ತಿರಸ್ಕರಿಸಬಹುದು. ಹರ್ಷನನ್ನು ಕಂಡರೆ ಭುವಿಗೆ ಎಲ್ಲಿಲ್ಲದ ಪ್ರೀತಿ. ಈ ಕಾರಣಕ್ಕೆ ಈ ಪ್ರೀತಿಯನ್ನು ಒಪ್ಪಿಕೊಳ್ಳಬೇಕೋ ಅಥವಾ ಬೇಡವೋ ಎನ್ನುವ ಗೊಂದಲಕ್ಕೆ ಅವಳು ಬೀಳಬಹುದು.

ಇದನ್ನೂ ಓದಿ: ಅದ್ದೂರಿಯಾಗಿ ಭುವಿಗೆ ಪ್ರಪೋಸ್​ ಮಾಡಲು ‘ಕನ್ನಡತಿ’ ಹರ್ಷ ರೆಡಿ; ವಿಲನ್​ ಯಾರು?

Published On - 7:02 pm, Wed, 6 October 21

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!