Kiran Raj: ಒಂದೊಳ್ಳೆಯ ಕೆಲಸ ಮಾಡಿ ಕ್ರಿಸ್​ಮಸ್​ ಆಚರಿಸಿದ ನಟ ಕಿರಣ್​ ರಾಜ್​

| Updated By: ರಾಜೇಶ್ ದುಗ್ಗುಮನೆ

Updated on: Dec 26, 2021 | 11:11 PM

ಕೆಲ ವರ್ಷಗಳ ಹಿಂದೆ ‘ಕಿರಣ್​ ರಾಜ್​ ಫೌಂಡೇಷನ್’ ಸ್ಥಾಪಿಸಿ ಸಾಕಷ್ಟು ಜನರ ನೋವಿಗೆ ಸ್ಪಂದಿಸಿದ್ದಾರೆ ಕಿರಣ್​ ರಾಜ್​. ಅನಾಥಾಶ್ರಮದ ಮಕ್ಕಳಿಗೆ ಊಟ, ಕಷ್ಟ ಎಂದು ಬಂದವರಿಗೆ ಸಹಾಯ ಮಾಡಿದ್ದಾರೆ.

Kiran Raj: ಒಂದೊಳ್ಳೆಯ ಕೆಲಸ ಮಾಡಿ ಕ್ರಿಸ್​ಮಸ್​ ಆಚರಿಸಿದ ನಟ ಕಿರಣ್​ ರಾಜ್​
ಕಿರಣ್​ ರಾಜ್
Follow us on

ಕಿರಣ್​ ರಾಜ್​​ (Kiran Raj) ಅವರು ಕೇವಲ ನಟನೆಯನ್ನು ಮಾತ್ರ ಮಾಡುತ್ತಿಲ್ಲ. ಇದರ ಜತೆಜತೆಗೆ ಸಾಮಾಜಿಕ ಕೆಲಸಗಳಲ್ಲೂ ಗುರುತಿಸಿಕೊಂಡಿದ್ದಾರೆ. ತಮ್ಮ ಆದಾಯದ ಒಂದಷ್ಟು ಭಾಗವನ್ನು ಅವರು ಕಷ್ಟದಲ್ಲಿರುವವರ ಸಹಾಯಕ್ಕೆ ತೆಗೆದಿಟ್ಟಿದ್ದಾರೆ. ಪ್ರತಿ ವಿಶೇಷ ಸಂದರ್ಭದಲ್ಲೂ ಅವರು ಸಾಮಾಜಿಕ ಕೆಲಸ ಮಾಡುತ್ತಾರೆ. ಈಗ ಕ್ರಿಸ್​ಮಸ್​ಅನ್ನು ಅವರು ಭಿನ್ನವಾಗಿ ಆಚರಿಸಿದ್ದಾರೆ. ಅವರ ಈ ಕೆಲಸಕ್ಕೆ ಎಲ್ಲ ಕಡೆಗಳಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕೆಲ ವರ್ಷಗಳ ಹಿಂದೆ ‘ಕಿರಣ್​ ರಾಜ್​ ಫೌಂಡೇಷನ್’ ಸ್ಥಾಪಿಸಿ ಸಾಕಷ್ಟು ಜನರ ನೋವಿಗೆ ಸ್ಪಂದಿಸಿದ್ದಾರೆ ಕಿರಣ್​ ರಾಜ್​. ಅನಾಥಾಶ್ರಮದ ಮಕ್ಕಳಿಗೆ ಊಟ, ಕಷ್ಟ ಎಂದು ಬಂದವರಿಗೆ ಸಹಾಯ ಮಾಡಿದ್ದಾರೆ. ಕಿರಣ್​ ರಾಜ್​ ತಮ್ಮ ಒಟ್ಟೂ ಆದಾಯದಲ್ಲಿ ಶೇ.40ರಷ್ಟು ಗಳಿಕೆಯನ್ನು ಕಷ್ಟದಲ್ಲಿರುವವರ ಸಹಾಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದಲ್ಲದೆ, ಕೊವಿಡ್​ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಈ ವರ್ಷದ ಅವರ ಕ್ರಿಸ್​ಮಸ್​ ಆಚರಣೆ ಭಿನ್ನವಾಗಿದೆ.

ಕಿರಣ್​ ರಾಜ್​ ಅವರು ಹಿಂದುಳಿದ ಮಕ್ಕಳಿಗೆ ಹಾಗೂ ಅಗತ್ಯವಿರುವ ಮಕ್ಕಳಿಗೆ ನೋಟ್​ಬುಕ್​ ವಿತರಣೆ ಮಾಡಿದ್ದಾರೆ. ಸುಮಾರು 250 ಮಕ್ಕಳಿಗೆ ಅವರು ನೋಟ್​ಬುಕ್​ ವಿತರಿಸಿದ್ದಾರೆ. ಈ ಮೂಲಕ ಸಾಕಷ್ಟು ಮಕ್ಕಳಿಗೆ ಸಹಾಯ ಮಾಡುವ ಕೆಲಸ ಮಾಡಿದ್ದಾರೆ. ಇದನ್ನು ಅವರ ಅಭಿಮಾನಿ ಬಳಗದವರು ಹಂಚಿಕೊಂಡು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಬೀದಿ ಬದಿಯಲ್ಲಿ ಮಲಗುವ ಅನೇಕರಿಗೆ ಇತ್ತೀಚೆಗೆ ಹೊದಿಕೆ ನೀಡುವ ಕೆಲಸವನ್ನು ಕಿರಣ್​ ರಾಜ್​ ಮಾಡಿದ್ದರು.

ಕಿರಣ್​ ರಾಜ್​ ನಟನೆಯ ‘ಕನ್ನಡತಿ’ ಧಾರಾವಾಹಿ ಮಹತ್ವದ ಘಟ್ಟ ತಲುಪಿದೆ. ಹಲವು ತಿರುವುಗಳನ್ನು ಪಡೆದುಕೊಂಡು ಈ ಧಾರಾವಾಹಿ ಸಾಗುತ್ತಿದೆ. ಈಗಾಗಲೇ ಹರ್ಷ (ಕಿರಣ್​ ರಾಜ್​) ಭುವಿಗೆ (ರಂಜನಿ ರಾಘವನ್​) ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಈ ಪ್ರೀತಿಯನ್ನು ಭುವಿ ಒಪ್ಪಿಕೊಳ್ಳುತ್ತಾರೋ ಅಥವಾ ಇಲ್ಲವೋ ಎನ್ನುವ ಕುತೂಹಲ ಮೂಡಿದೆ. ಇದರ ಜತೆಗೆ ಕಿರಣ್​ ರಾಜ್​ ಸಿನಿಮಾ ಕೆಲಸಗಳಲ್ಲೂ ಬ್ಯುಸಿ ಆಗಿದ್ದಾರೆ. ಕೆಲವು ಚಿತ್ರಗಳ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ: ‘ಕನ್ನಡತಿ’ ಸಾನಿಯಾ ಪಾತ್ರದಿಂದ ಹೊರ ಬಂದ ರಮೋಲಾ; ಇದಕ್ಕಿದೆ ಮಹತ್ವದ ಕಾರಣ

ಜನ ಮೆಚ್ಚಿಕೊಂಡ ‘ಕನ್ನಡತಿ’ ಜೋಡಿಗೆ ಸಿಕ್ತು ಅವಾರ್ಡ್​; ಸಂಭ್ರಮಿಸಿದ ಕಿರಣ್​ ರಾಜ್​, ರಂಜನಿ ರಾಘವನ್​

Published On - 9:11 pm, Sun, 26 December 21