Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರು ತಿಂಗಳಲ್ಲಿ ಎಂ.ಡಿ. ಪಟ್ಟದಿಂದ ಕೆಳಗಿಳಿಯಲಿದ್ದಾಳೆ ಸಾನಿಯಾ; ಭುವಿ ಮುಂದಿನ ವ್ಯವಸ್ಥಾಪಕ ನಿರ್ದೇಶಕಿ

ಸಾನಿಯಾ ಮಾವ ಮನೆ ಬಿಟ್ಟು ಹೋಗಿ ತುಂಬಾ ಸಮಯವಾಗಿದೆ. ಈಗ ರತ್ನಮಾಲಾ ಕೋರಿಕೆ ಹಿನ್ನೆಲೆಯಲ್ಲಿ ಆತ ಮರಳಿ ಬಂದಿದ್ದಾನೆ. ರತ್ನಮಾಲಾ ಆತನ ಬಳಿ ಮಾತುಕತೆ ನಡೆಸಿದ್ದಾಳೆ. ಇದಾದ ಬೆನ್ನಲ್ಲೇ ಸಾನಿಯಾಳನ್ನು ಭೇಟಿ ಮಾಡಿದ ಆತ, ಮೂರು ತಿಂಗಳಲ್ಲಿ ನಿನ್ನ ಎಂ.ಡಿ. ಪಟ್ಟ ಹೋಗಲಿದೆ ಎಂದು ಎಚ್ಚರಿಕೆ ನೀಡಿದ್ದಾನೆ.

ಮೂರು ತಿಂಗಳಲ್ಲಿ ಎಂ.ಡಿ. ಪಟ್ಟದಿಂದ ಕೆಳಗಿಳಿಯಲಿದ್ದಾಳೆ ಸಾನಿಯಾ; ಭುವಿ ಮುಂದಿನ ವ್ಯವಸ್ಥಾಪಕ ನಿರ್ದೇಶಕಿ
ಸಾನಿಯಾ-ರಂಜನಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 18, 2021 | 4:08 PM

‘ಕನ್ನಡತಿ’ ಧಾರಾವಾಹಿ (Kannadathi Serial) ನಿತ್ಯ ಒಂದೊಂದು ತಿರುವು ಪಡೆದುಕೊಂಡು ಸಾಗುತ್ತಿದೆ. ಎಲ್ಲರೂ ಅವರವರದೇ ಚಿಂತೆಯಲ್ಲಿ ಮುಳುಗಿದ್ದಾರೆ. ಭುವಿ ಯಾವಾಗ ತನ್ನ ಪ್ರಪೋಸ್​ ಒಪ್ಪಿಕೊಳ್ಳುತ್ತಾಳೆ ಎನ್ನುವ ಕುತೂಹಲ ಹರ್ಷನಿಗೆ ಇದೆ. ಹರ್ಷನ ಪ್ರಪೋಸ್​ ಒಪ್ಪಿಕೊಂಡರೆ ವರುಧಿನಿ ಬೇಸರ ಮಾಡಿಕೊಳ್ಳಬಹುದು ಎಂಬ ಆಲೋಚನೆ ಭುವಿಯದ್ದು. ಇವಿಷ್ಟು ಒಂದು ಕಡೆಯಾದರೆ, ಮಗ ಹರ್ಷನ ಮದುವೆ ತಯಾರಿಯಲ್ಲಿ ರತ್ನಮಾಲಾ ಬ್ಯುಸಿ ಆಗಿದ್ದಾಳೆ. ಆದರೆ, ಸಾನಿಯಾ ಚಿಂತೆಯೇ ಬೇರೆ. ಮಾಲಾ ಶಿಕ್ಷಣ ಸಂಸ್ಥೆಯ ಎಂ.ಡಿ. ಪಟ್ಟ ಕೊಟ್ಟರೂ ಸಾನಿಯಾ ಖುಷಿಯಾಗಿಲ್ಲ. ಹರ್ಷನ ಲವರ್​ ಯಾರು ಎಂಬುದನ್ನು ಕಂಡು ಹಿಡಿಯುವ ಪ್ರಯತ್ನದಲ್ಲಿದ್ದಾಳೆ. ಈ ಮಧ್ಯೆ ಅವಳ ಎಂ.ಡಿ. ಪಟ್ಟ ಹೋಗುವ ಕಾಲ ಸಮೀಪವಾಗಿದೆ. ಈ ವಿಚಾರವನ್ನು ಅವಳ ಮಾವನೇ ಹೇಳಿದ್ದಾನೆ. ಈ ವಿಚಾರ ಕೇಳಿ ಸಾನಿಯಾಗೆ ಚಿಂತೆ ಹೆಚ್ಚಾಗಿದೆ.

ಸಾನಿಯಾ ಮಾವ ಮನೆ ಬಿಟ್ಟು ಹೋಗಿ ತುಂಬಾ ಸಮಯವಾಗಿದೆ. ಈಗ ರತ್ನಮಾಲಾ ಕೋರಿಕೆ ಹಿನ್ನೆಲೆಯಲ್ಲಿ ಆತ ಮರಳಿ ಬಂದಿದ್ದಾನೆ. ರತ್ನಮಾಲಾ ಆತನ ಬಳಿ ಮಾತುಕತೆ ನಡೆಸಿದ್ದಾಳೆ. ಇದಾದ ಬೆನ್ನಲ್ಲೇ ಸಾನಿಯಾಳನ್ನು ಭೇಟಿ ಮಾಡಿದ ಆತ, ಮೂರು ತಿಂಗಳಲ್ಲಿ ನಿನ್ನ ಎಂ.ಡಿ. ಪಟ್ಟ ಹೋಗಲಿದೆ ಎಂದು ಎಚ್ಚರಿಕೆ ನೀಡಿದ್ದಾನೆ. ಈ ವಿಚಾರ ಕೇಳಿ ಸಾನಿಯಾ ತುಂಬಾನೇ ಚಿಂತೆಗೆ ಒಳಗಾಗಿದ್ದಾಳೆ. ಮುಂದಿನ ಮೂರು ತಿಂಗಳಲ್ಲಿ ಹರ್ಷನ ಮದುವೆ ಆಗಲಿದೆ. ಹರ್ಷನ ಹೆಂಡತಿ ಮಾಲಾ ಶಿಕ್ಷಣ ಸಂಸ್ಥೆಯ ಎಂ.ಡಿ. ಆಗಲಿದ್ದಾಳೆ.

ಭುವಿಯನ್ನು ಹರ್ಷನಿಗೆ ಕೊಟ್ಟು ಮದುವೆ ಮಾಡಬೇಕು ಎನ್ನುವ ಆಲೋಚನೆ ರತ್ನಮಾಲಾ ಅವಳದ್ದು. ಹರ್ಷನಿಗೂ ಭುವಿ ಮೇಲೆ ಪ್ರೀತಿ ಮೂಡಿದೆ. ಈ ಕಾರಣಕ್ಕೆ ಆಕೆಗೆ ಹರ್ಷ ಪ್ರಪೋಸ್​ ಮಾಡಿದ್ದಾನೆ. ಅವಳು ಇದನ್ನು ಒಪ್ಪಿಕೊಂಡಿಲ್ಲ. ಮುಂದಿನ ಕೆಲವೇ ದಿನಗಳಲ್ಲಿ ಹರ್ಷನ ಎಂಗೇಜ್​ಮೆಂಟ್​ ನಡೆಯಲಿದೆ. ಅದು ಭುವಿ ಜತೆಗೆ ಮಾಡಬೇಕು ಎನ್ನುವ ನಿರ್ಧಾರ ರತ್ನಮಾಲಾ ಅವಳದ್ದು.

ಈ ಎಲ್ಲಾ ಬೆಳವಣಿಗೆ ಮಧ್ಯೆ ಸಾನಿಯಾ ಎಂ.ಡಿ. ಪಟ್ಟ ಹೋಗುವ ಕಾಲ ಸಮೀಪಿಸಿದೆ. ಈ ಮೂಲಕ ಅವಳ ತಲೆಗೆ ಎಲ್ಲಾ ಜವಾಬ್ದಾರಿ ಬರಲಿದೆ. ಇದರಿಂದ ಸಾನಿಯಾ ಮೂಲೆಗುಂಪು ಆಗುವ ಅನುಮಾನ ಪಕ್ಕಾ ಎನ್ನುತ್ತಿದ್ದಾರೆ ವೀಕ್ಷಕರು.

ಇದನ್ನೂ ಓದಿ: ಹರ್ಷನ ಪ್ರಪೋಸ್​ಗೆ ಭುವಿ ಕಡೆಯಿಂದ ಬಂತು ಉತ್ತರ; ಬೇಸರಗೊಂಡ ‘ಕನ್ನಡತಿ’ ಹೀರೋ

Published On - 3:45 pm, Thu, 18 November 21

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು