
‘ಕರ್ಣ’ ಧಾರಾವಾಹಿ (Karna Serial) ಹೊಸ ಹೊಸ ತಿರುವು ಪಡೆದುಕೊಂಡು ಸಾಗುತ್ತಿದೆ. ಇಷ್ಟು ದಿನ ಕರ್ಣ ಧಾರಾವಾಹಿಯಲ್ಲಿ ಎಲ್ಲ ಗೆಲುವು ವಿಲನ್ದೇ ಆಗುತ್ತಿತ್ತು. ಆದರೆ, ಈಗ ಕರ್ಣನ ಗೆಲುವಿನ ಸಮಯ. ಧಾರಾವಾಹಿಯಲ್ಲಿ ಕರ್ಣನಿಗೆ ರಿವೇಂಜ್ ತೆಗೆದುಕೊಳ್ಳುವ ಸಮಯ ಬಂದಿದೆ. ಇದರ ಜೊತೆಗೆ ಹೊಸ ಪಾತ್ರಧಾರಿಯ ಎಂಟ್ರಿ ಕೂಡ ಆಗಿದೆ. ಇದು ಸಾಕಷ್ಟು ಗಮನ ಸೆಳೆಯುವ ಸೂಚನೆ ಸಿಕ್ಕಿದೆ. ಆ ಬಗ್ಗೆ ಇಲ್ಲಿದೆ ವಿವರ.
ಕರ್ಣನ ಸಹೋದರ ಸಂಜಯ್ ತುಂಬಾನೇ ಮೆರೆಯುತ್ತಿದ್ದ. ತಂದೆ ಜೊತೆ ಸೇರಿ ಸಾಕಷ್ಟು ಕೆಟ್ಟ ಕೆಲಸಗಳಲ್ಲಿ ಭಾಗಿ ಆಗುತ್ತಿದ್ದ. ಆತ ಕೊಬ್ಬಿನಿಂದ ಮೆರೆಯುತ್ತಿದ್ದ. ಈತನಿಗೆ ಈಗ ಪಾಠ ಕಲಿಸೋ ಸಮಯ ಬಂದೇ ಬಿಟ್ಟಿದೆ. ಹೌದು, ಸಂಜಯ್ಗೆ ಪಾಠ ಕಲಿಸಲು ರಿಯಾ ಬಂದಿದ್ದಾಳೆ. ಇಬ್ಬರೂ ಒಂದೇ ಆಟೋ ಏರುವ ಪರಿಸ್ಥಿತಿ ಬಂದಿದೆ. ಅಲ್ಲಿಂದ ಇವರ ಪ್ರೇಮ ಪ್ರಸಂಗ ಆರಂಭ ಆಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಸಂಜಯ್ ತುಂಬಾನೇ ಕೆಟ್ಟವನು. ಆತನ ಬಳಿ ಪ್ರೀತಿಗೆ ಜಾಗವೇ ಇಲ್ಲ. ಆತನ ಮನಸ್ಸಲ್ಲಿ ಇರೋದು ಕೇವಲ ದ್ವೇಷ ಮಾತ್ರ. ಈ ದ್ವೇಷವನ್ನು ತೆಗೆದು ಹಾಕಲು ಕರ್ಣ ಸಾಕಷ್ಟು ಪ್ರಯತ್ನಿಸಿದ. ಆದರೆ, ಅದು ಯಶಸ್ವಿ ಆಗಲೇ ಇಲ್ಲ. ಈ ಕಾರಣದಿಂದಲೇ ಕರ್ಣ ಈ ಮಾರ್ಗ ಉಪಯೋಗಿಸಿರಬಹುದು ಎಂದು ಅನೇಕರು ಊಹಿಸುತ್ತಾ ಇದ್ದಾರೆ.
ಇದನ್ನೂ ಓದಿ: ಕರ್ಣನ ಟಾರ್ಚರ್ಗೆ ಬೇಸತ್ತ ತಂದೆ ರಮೇಶ್; ಮುಂದಿದೆ ಮಾರಿ ಹಬ್ಬ
ಸಂಜಯ್ ಹಾಗೂ ರಿಯಾ ಲವ್ಸ್ಟೋರಿ ನೋಡಲು ವೀಕ್ಷಕರು ಕಾದಿದ್ದಾರೆ. ಈಗಾಗಲೇ ಕರ್ಣನ ರಮೇಶ್ಗೆ ಪಾಠ ಕಲಿಸೋ ಕೆಲಸ ಆಗುತ್ತಿದೆ. ರಮೇಶ್ ಕೆಟ್ಟ ಕೆಲಸಗಳು ಬಯಲಿಗೆ ಬಂದಿವೆ. ಈಗ ಕರ್ಣನ ರಿವೇಂಜ್ ಎಪಿಸೋಡ್ ಸಾಕಷ್ಟು ಗಮನ ಸೆಳೆಯುತ್ತಿದೆ. ಮುಂದೆ ಏನಾಗುತ್ತದೆ ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ಸಂಜಯ್ ಬೈಕ್ ಹಾಳಾಗಿತ್ತು. ಆತ ಅದನ್ನು ಸರಿಮಾಡಿಸಿಕೊಂಡು ಕಚೇರಿಗೆ ತೆರಳಿದ್ದಾನೆ. ಈ ವೇಳೆ ಬೈಕ್ ಮತ್ತೆ ಕೈ ಕೊಟ್ಟಿದೆ. ಆಗ ಆಟೋ ಹಿಡಿಯಲು ಹೋದಾಗ ರಿಯಾಳ ಭೇಟಿ ಆಗಿದೆ.
ಕರ್ಣ ಧಾರಾವಾಹಿಯಲ್ಲಿ ಕರ್ಣನು ನಿತ್ಯಾಳನ್ನು ಮದುವೆ ಆಗಿದ್ದಾನೆ. ಆತನಿಗೆ ನಿಧಿ ಮೇಲೆ ಪ್ರೀತಿ ಇದೆ. ಇದು ಇನ್ನೂ ರಿವೀಲ್ ಆಗಿಲ್ಲ. ಇದು ರಿವೀಲ್ ಆದ ಬಳಿಕ ಕಥೆಯಲ್ಲಿ ಮತ್ತಷ್ಟು ಟ್ವಿಸ್ಟ್ಗಳನ್ನು ಪ್ರೇಕ್ಷಕ ನಿರೀಕ್ಷಿಸಬಹುದಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.