ಮಂಜುನ ಅಪ್ಪಿ ಮಗುವಿನಂತೆ ಅತ್ತ ಮೋಕ್ಷಿತಾ; ಮಳೆಯಂತೆ ಸುರಿಯಿತು ಕಣ್ಣೀರು

ಮೋಕ್ಷಿತಾ ಪೈ ಅವರು ನಿಧಾನಕ್ಕೆ ಬದಲಾಗಿದ್ದಾರೆ. ಸ್ವಾಭಿಮಾನದ ಕಾರಣದಿಂದ ಗೌತಮಿ ಜೊತೆ ಕೈ ಜೋಡಿಸುವುದಿಲ್ಲ ಎಂದು ಹಠ ಮಾಡಿದ್ದರು. ಅವರು ಈಗ ಮಂಜು ಹಾಗೂ ಗೌತಮಿ ಜೊತೆ ಮತ್ತೆ ಆಪ್ತವಾಗಿದ್ದಾರೆ. ಉಗ್ರಂ ಮಂಜು ಕಂಡರೆ ಉರಿದುಬೀಳುತ್ತಿದ್ದ ಅವರು ಈಗ ಮಂಜು ಜೊತೆಗೆ ಭಾವನಾತ್ಮಕ ಬಾಂಧವ್ಯ ಬೆಳೆಸಿಕೊಂಡಿದ್ದಾರೆ.

ಮಂಜುನ ಅಪ್ಪಿ ಮಗುವಿನಂತೆ ಅತ್ತ ಮೋಕ್ಷಿತಾ; ಮಳೆಯಂತೆ ಸುರಿಯಿತು ಕಣ್ಣೀರು
ಮಂಜು-ಮೋಕ್ಷಿತಾ

Updated on: Jan 15, 2025 | 7:00 AM

ಮಂಜು, ಮೋಕ್ಷಿತಾ ಹಾಗೂ ಗೌತಮಿ ಒಂದು ತಂಡವಾಗಿ ಆಟ ಆಡುತ್ತಿದ್ದರು. ಆದರೆ, ಈ ಆಟ ಹೆಚ್ಚು ದಿನ ಉಳಿಯಲೇ ಇಲ್ಲ. ಮೋಕ್ಷಿತಾ ಅವರು ತಮ್ಮದೇ ನಿರ್ಧಾರ ಮಾಡಿ ಇವರಿಂದ ದೂರ ಆದರು. ಮಂಜು ಸಮಯಸಾಧಕ ಎನ್ನುವ ಪಟ್ಟ ಕಟ್ಟಿದರು. ಆದರೆ, ಈಗ ಫಿನಾಲೆ ವಾರ ಬರುತ್ತಿದ್ದಂತೆ ಎಲ್ಲವೂ ಬದಲಾಗಿದೆ. ಇವರ ಮಧ್ಯೆ ಮತ್ತೆ ಎಲ್ಲವೂ ಸರಿಯಾದಂತೆ ಕಾಣಿಸಿದೆ. ಅವರು ಮಂಜು ಬಿಗಿದಪ್ಪಿ ಮಗುವಿನಂತೆ ಕಣ್ಣೀರು ಹಾಕಿದ್ದಾರೆ.

ಮೋಕ್ಷಿತಾ ಭಾವನಾತ್ಮಕ ಜೀವಿ. ಅವರು ಎಲ್ಲರ ಗೆಳೆತನಕ್ಕೆ ಬೆಲೆ ಕೊಡುತ್ತಾರೆ. ಜನವರಿ 14ರ ಟಾಸ್ಕ್​ನಲ್ಲಿ ಮೋಕ್ಷಿತಾ ಹಾಗೂ ಮಂಜು ಮಾತನಾಡುತ್ತಿದ್ದರು. ಮಂಜು ಅವರ ಮಾತನ್ನು ಕೇಳಿ ಮೋಕ್ಷಿತಾಗೆ ಅಳುವೇ ಬಂದಿದೆ. ಅವರು ಗಳಗಳನೆ ಅತ್ತಿದ್ದಾರೆ. ಮಳೆ ಹನಿಯಂತೆ ಕಣ್ಣೀರು ಬಂದಿದೆ. ಆಗ ಮಂಜು ಅವರು ಸಮಾಧಾನ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ.

‘ನಾನು ಜೀರೋ ಆಗಿಬಿಟ್ಟಿದ್ದೇನೆ. ಮೆಮೋರಿಸ್ ಹಾಕ್ಕೋತ್ತೀನಿ. ರಿಸಲ್ಟ್ ಬಗ್ಗೆ ಏನೂ ತಲೆಕೆಡಿಸಿಕೊಳ್ಳೋಕೆ ಆಗಲ್ಲ’ ಎನ್ನುತ್ತಿದ್ದಂತೆ ಮೋಕ್ಷಿತಾಗೆ ಭಯ ಆರಂಭ ಆಯಿತು. ಮಂಜು ಎಲಿಮಿನೇಟ್ ಆಗಿಬಿಟ್ಟರೆ ಅನಿಸಿತು. ಅತ್ತ ನಾಮಿನೇಟ್ ಆಗಿರುವ ಗೌತಮಿ ಅವರು ಬ್ಯಾಗ್ ತುಂಬುತ್ತಾ ಇರುವುದನ್ನು ನೋಡಿ ಮೋಕ್ಷಿತಾ ಕರುಳು ಚುರುಕ್ ಎಂದಿತು. ಇವರು ಎಲಿಮಿನೇಟ್ ಆದರೆ ಅಥವಾ ತಾವೇ ಎಲಿಮಿನೇಟ್ ಆದರೆ ಎನ್ನುವ ಭಯ ಅವರನ್ನು ಕಾಡಲು ಆರಂಭಿಸಿತು. ಹೀಗಾಗಿ, ಅವರು ಕಣ್ಣೀರು ಹಾಕೋಕೆ ಆರಂಭಿಸಿದರು. ಆಗ ಮಂಜು ಸಮಾಧಾನ ಮಾಡಿದರು. ಆ ಬಳಿಕ ಮೋಕ್ಷಿತಾ ಅವರು ಗೌತಮಿ ಬಳಿ ಬಂದು ತಮ್ಮ ದುಃಖ ತೋಡಿಕೊಂಡರು. ಗೌತಮಿ ಕೂಡ ಸಮಾಧಾನ ಮಾಡುವ ಪ್ರಯತ್ನ ಮಾಡಿದರು.

ಇದನ್ನೂ ಓದಿ: ಮತ್ತೆ ಒಂದಾದ ಮಂಜು, ಮೋಕ್ಷಿತಾ, ಗೌತಮಿ; ಇದೇನು ಹೊಸ ಡ್ರಾಮಾ?

ಈ ವಾರದ ನಾಮಿನೇಷನ್​ ಲಿಸ್ಟ್​ನಲ್ಲಿ ಮೋಕ್ಷಿತಾ, ರಜತ್, ತ್ರಿವಿಕ್ರಂ, ಭವ್ಯಾ, ಗೌತಮಿ ಹಾಗೂ ಮಂಜು ಇದ್ದಾರೆ. ಇವರ ಪೈಕಿ ಒಬ್ಬರು ವಾರದ ಮಧ್ಯದಲ್ಲಿ ಹೊರ ಹೋಗಲಿದ್ದಾರೆ. ಕ್ಯಾಪ್ಟನ್ ಹನುಮಂತ ಅವರನ್ನು ಹೊರತುಪಡಿಸಿ ಒಬ್ಬರು ವೀಕೆಂಡ್​ನಲ್ಲಿ ಎಲಿಮಿನೇಟ್ ಆಗಲಿದ್ದಾರೆ. ಆ ಬಳಿಕ ಫಿನಾಲೆ ವಾರ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us