Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಒಂದಾದ ಮಂಜು, ಮೋಕ್ಷಿತಾ, ಗೌತಮಿ; ಇದೇನು ಹೊಸ ಡ್ರಾಮಾ?

ಬಿಗ್ ಬಾಸ್ ಎಂದರೆ ಕೇವಲ ಟಾಸ್ಕ್​ಗಳ ಆಟ ಅಲ್ಲ. ಎಮೋಷನ್​ಗಳು ಕೂಡ ಇದರಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಯಾರು ಯಾರ ಜೊತೆಗೆ ಕ್ಲೋಸ್ ಆಗಿದ್ದಾರೆ ಎಂಬುದು ಕೂಡ ವೋಟಿಂಗ್ ಮೇಲೆ ಪರಿಣಾಮ ಬೀರಬಹುದು. ಇಷ್ಟು ದಿನ ಕಿತ್ತಾಡಿಕೊಂಡಿದ್ದ ಮೋಕ್ಷಿತಾ ಅವರು ಈಗ ಮತ್ತೆ ಮಂಜು ಮತ್ತು ಗೌತಮಿ ಜೊತೆ ಕೈ ಜೋಡಿಸಿದ್ದಾರೆ.

ಮತ್ತೆ ಒಂದಾದ ಮಂಜು, ಮೋಕ್ಷಿತಾ, ಗೌತಮಿ; ಇದೇನು ಹೊಸ ಡ್ರಾಮಾ?
Bigg Boss Kannada Season 11
Follow us
ಮದನ್​ ಕುಮಾರ್​
|

Updated on: Jan 14, 2025 | 10:31 PM

ಸಾಕಷ್ಟು ಟ್ವಿಸ್ಟ್​ಗಳನ್ನು ಕಂಡ ‘ಬಿಗ್ ಬಾಸ್​ ಕನ್ನಡ ಸೀಸನ್​ 11’ ರಿಯಾಲಿಟಿ ಶೋ ಈಗ ಫಿನಾಲೆಯ ಹಂತಕ್ಕೆ ತಲುಪುತ್ತಿದೆ. ಆರಂಭದಿಂದಲೂ ಗೌತಮಿ ಜಾದವ್, ಮೋಕ್ಷಿತಾ ಪೈ ಹಾಗೂ ಉಗ್ರಂ ಮಂಜು ಅವರು ಆಪ್ತವಾಗಿದ್ದರು. ಆದರೆ ಒಂದಷ್ಟು ದಿನಗಳು ಕಳೆದ ಬಳಿಕ ಮೋಕ್ಷಿತಾ ಅವರು ರೆಬೆಲ್ ಆದರು. ಉಗ್ರಂ ಮಂಜು ಮತ್ತು ಗೌತಮಿ ಜಾದವ್ ಜೊತೆ ಮನಸ್ತಾಪ ಮಾಡಿಕೊಂಡು ಆ ಗುಂಪಿನಿಂದ ಹೊರಗೆ ಬಂದಿದ್ದರು. ಎಷ್ಟೋ ಸಂದರ್ಭಗಳಲ್ಲಿ ಮೋಕ್ಷಿತಾ ಅವರು ಗೌತಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಈಗ ಗೇಮ್ ಬದಲಾಗಿದೆ.

ಮೋಕ್ಷಿತಾ ಪೈ ಅವರು ನಿಧಾನಕ್ಕೆ ಬದಲಾಗಿದ್ದಾರೆ. ಸ್ವಾಭಿಮಾನದ ಕಾರಣದಿಂದ ಗೌತಮಿ ಜೊತೆ ಕೈ ಜೋಡಿಸುವುದೇ ಇಲ್ಲ ಎಂದು ಹಠ ಮಾಡುತ್ತಿದ್ದ ಅವರು ಈಗ ಗೌತಮಿ ಜೊತೆ ಮತ್ತೆ ಆಪ್ತವಾಗಿದ್ದಾರೆ. ಉಗ್ರಂ ಮಂಜು ಕಂಡರೆ ಉರಿದುಬೀಳುತ್ತಿದ್ದ ಅವರು ಈಗ ಮಂಜು ಜೊತೆಗೆ ಎಮೋಷನಲ್ ಬಾಂಧವ್ಯ ಬೆಳೆಸಿಕೊಂಡಿದ್ದಾರೆ. ಹಾಗಾಗಿ ಮೊದಲಿನ ದಿನಗಳು ಮರುಕಳಿಸಿವೆ.

ಕೊನೇ ಹಂತದಲ್ಲಿ ಒಂದಾಗಿಯೇ ಆಡೋಣ ಎಂದು ಉಗ್ರಂ ಮಂಜು ಅವರು ಗೌತಮಿ ಮತ್ತು ಮೋಕ್ಷಿತಾಗೆ ಹೇಳಿದ್ದಾರೆ. ಮಿಡ್​ ಮೀಕ್ ಎಲಿಮಿನೇಷನ್ ಇರುವುದರಿಂದ ಒಬ್ಬರು ಹೊರಗೆ ಹೋಗುವುದು ಖಚಿತ. ಅದನ್ನು ನೆನಪಿಸಿಕೊಂಡು ಮೋಕ್ಷಿತಾ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಗೌತಮಿ ಮತ್ತು ಉಗ್ರಂ ಮಂಜು ಎದುರು ಮೋಕ್ಷಿತಾ ಸಿಕ್ಕಾಪಟ್ಟೆ ಎಮೋಷನಲ್ ಆಗಿದ್ದಾರೆ. ಇದೇನಿದು ಹೊಸ ಡ್ರಾಮಾ ಎಂಬ ಅನುಮಾನ ಕೆಲವರಿಗೆ ಮೂಡಿದರೂ ಅಚ್ಚರಿ ಏನಿಲ್ಲ.

ಇದನ್ನೂ ಓದಿ: ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋ

ಬಿಗ್ ಬಾಸ್ ಆಟದಲ್ಲಿ ಇನ್ನು ಉಳಿದಿರುವುದು ಕೆಲವೇ ದಿನಗಳು ಮಾತ್ರ. ಒಟ್ಟು 8 ಜನರ ನಡುವೆ ಪೈಪೋಟಿ ನಡೆಯುತ್ತಿದೆ. ಎಲ್ಲ ಸ್ಪರ್ಧಿಗಳಿಗೂ ಅವರದ್ದೇ ಆದಂತಹ ಅಭಿಮಾನಿಗಳ ಬಳಗ ಇದೆ. ವೀಕ್ಷಕರಿಂದ ವೋಟ್​ ಬ​ರಬೇಕು ಎಂದರೆ ಹಲವಾರು ಬಗೆಯ ಸರ್ಕಸ್ ಮಾಡಬೇಕಾಗುತ್ತದೆ. ಯಾರ ಜೊತೆಗೆ ಯಾರು ಆಪ್ತವಾಗಿದ್ದಾರೆ ಎಂಬುದು ಕೂಡ ವೀಕ್ಷಕರ ಮೇಲೆ ಪ್ರಭಾವ ಬೀರಬಹುದು. ಮೋಕ್ಷಿತಾ, ಗೌತಮಿ, ಮಂಜು ಒಂದಾಗಬೇಕು ಎಂದು ಬಹುತೇಕ ವೀಕ್ಷಕರು ಬಯಸಿದ್ದರು. ಅಂಥ ವೀಕ್ಷಕರನ್ನು ಸೆಳೆಯಬೇಕು ಎಂಬ ಕಾರಣದಿಂದಲೇ ಮೋಕ್ಷಿತಾ ಅವರು ಗೌತಮಿ ಮತ್ತು ಉಗ್ರಂ ಮಂಜು ಜೊತೆ ಕೈ ಜೋಡಿಸಿದ್ದರೂ ಅಚ್ಚರಿ ಏನಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪವಿತ್ರಾ ಬದುಕಿನ ಏಳು-ಬೀಳಿನ ಬಗ್ಗೆ ಬಿಗ್​ಬಾಸ್ ನೀತು ಮಾತು
ಪವಿತ್ರಾ ಬದುಕಿನ ಏಳು-ಬೀಳಿನ ಬಗ್ಗೆ ಬಿಗ್​ಬಾಸ್ ನೀತು ಮಾತು
ಟ್ರಂಪ್ ಜೊತೆಗಿನ ಮೋದಿ ಮಾತುಕತೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಮೆಚ್ಚುಗೆ
ಟ್ರಂಪ್ ಜೊತೆಗಿನ ಮೋದಿ ಮಾತುಕತೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಮೆಚ್ಚುಗೆ
ಅಮೆರಿಕ ಪ್ರವಾಸ ಮುಗಿಸಿ ಭಾರತಕ್ಕೆ ಹೊರಟ ಪ್ರಧಾನಿ ಮೋದಿ; ಇಲ್ಲಿವೆ ಹೈಲೈಟ್ಸ್
ಅಮೆರಿಕ ಪ್ರವಾಸ ಮುಗಿಸಿ ಭಾರತಕ್ಕೆ ಹೊರಟ ಪ್ರಧಾನಿ ಮೋದಿ; ಇಲ್ಲಿವೆ ಹೈಲೈಟ್ಸ್
ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಪಿಲ್ಲರ್ ಕುಸಿತ: ತಪ್ಪಿದ ಅನಾಹುತ
ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಪಿಲ್ಲರ್ ಕುಸಿತ: ತಪ್ಪಿದ ಅನಾಹುತ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೊಲೀಸರ ಅತ್ಮಸ್ಥೈರ್ಯ ಕುಂದಿದೆ: ಅಶೋಕ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೊಲೀಸರ ಅತ್ಮಸ್ಥೈರ್ಯ ಕುಂದಿದೆ: ಅಶೋಕ
ಇನ್ನೂ ಕಾರ್ಯಪ್ರವೃತ್ತರಾಗದ ಅರಣ್ಯ ಇಲಾಖೆ ಅಧಿಕಾರಿಗಳು
ಇನ್ನೂ ಕಾರ್ಯಪ್ರವೃತ್ತರಾಗದ ಅರಣ್ಯ ಇಲಾಖೆ ಅಧಿಕಾರಿಗಳು
Video: ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ನೀಡಿದ ಡೊನಾಲ್ಡ್​ ಟ್ರಂಪ್
Video: ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ನೀಡಿದ ಡೊನಾಲ್ಡ್​ ಟ್ರಂಪ್
ನಾನು ರೆಸ್ಟ್​ನಲ್ಲಿದ್ದೇನೆ, ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ನಾನು ರೆಸ್ಟ್​ನಲ್ಲಿದ್ದೇನೆ, ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ವೈಷಮ್ಯ, ಹೆಣ್ಣು ಮತ್ತು ಮಣ್ಣು-ಬಾಗಪ್ಪ ಕೊಲೆ ಹಿಂದಿನ ಕಾರಣಗಳು: ಎಸ್​ಪಿ
ವೈಷಮ್ಯ, ಹೆಣ್ಣು ಮತ್ತು ಮಣ್ಣು-ಬಾಗಪ್ಪ ಕೊಲೆ ಹಿಂದಿನ ಕಾರಣಗಳು: ಎಸ್​ಪಿ
ಕಳ್ಳರ ಹಾವಳಿ‌ ತಡೆಯಲು ಮಹಿಳೆಯರ ರಾತ್ರಿ ಗಸ್ತು
ಕಳ್ಳರ ಹಾವಳಿ‌ ತಡೆಯಲು ಮಹಿಳೆಯರ ರಾತ್ರಿ ಗಸ್ತು