AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​​ನಲ್ಲಿ ಇವರ ಧ್ವನಿಯನ್ನು ಎಷ್ಟು ಜನ ಮಿಸ್ ಮಾಡಿಕೊಳ್ಳುತ್ತಿದ್ದೀರಿ?

ಪ್ರದೀಪ್ ಬಡೆಕ್ಕಿಲ ಅವರು ಬಿಗ್ ಬಾಸ್ ಕನ್ನಡಕ್ಕೆ ಈ ಮೊದಲು ಧ್ವನಿ ಕೊಟ್ಟವರು. ಅವರ ಧ್ವನಿ ಅನೇಕರಿಗೆ ಪ್ರಿಯವಾಗಿದೆ. ಅವರು ಕಲರ್ಸ್ ಕನ್ನಡ, ಜಾಹೀರಾತುಗಳು ಹಾಗೂ ಬೆಂಗಳೂರು ಮೆಟ್ರೋಗೆ ಬರುವ ಅನೌನ್ಸ್​​ಮೆಂಟ್​ಗೆ ಧ್ವನಿ ಆಗಿದ್ದಾರೆ. ವಾಯ್ಸ್ ಓವರ್ ಕ್ಷೇತ್ರದಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ.

ಬಿಗ್ ಬಾಸ್​​ನಲ್ಲಿ ಇವರ ಧ್ವನಿಯನ್ನು ಎಷ್ಟು ಜನ ಮಿಸ್ ಮಾಡಿಕೊಳ್ಳುತ್ತಿದ್ದೀರಿ?
Bbk (13)
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Jan 15, 2025 | 9:03 AM

ಬಿಗ್ ಬಾಸ್​ನಲ್ಲಿ ಹಲವರು ಧ್ವನಿ ಆಗಿದ್ದಾರೆ. ಪ್ರತಿ ಬಾರಿಯೂ ಬೇರೆ ಬೇರೆ ಕಲಾವಿದರು ಧ್ವನಿ ನೀಡುತ್ತಾರೆ. ಈ ಪೈಕಿ ಹೆಚ್ಚು ಗಮನ ಸೆಳೆದಿದ್ದು ಪ್ರದೀಪ್ ಬಡೆಕ್ಕಿಲ ಅವರ ಧ್ವನಿ. ಈ ವಾಯ್ಸ್​ನ ಅನೇಕರು ಕೇಳಿರುತ್ತೀರಿ. ಈಗಲೂ ಇವರ ಧ್ವನಿಯನ್ನು ಅನೇಕರು ಮಿಸ್ ಮಾಡಿಕೊಳ್ಳುತ್ತಾರೆ. ಈಗ ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಆ ಬಗ್ಗೆ ಇಲ್ಲಿದೆ ವಿವರ.

ಪ್ರದೀಪ್ ಬಡೆಕ್ಕಿಲ ಅವರು ಬಿಗ್ ಬಾಸ್​ಗೆ ಧ್ವನಿ ಆಗಿದ್ದರು. ಅವರ ಧ್ವನಿ ಎನೇಕರಿಗೆ ಇಷ್ಟ ಆಗಿದೆ. ಅವರ ಧ್ವನಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗ ಇದೆ. ಅದರಲ್ಲೂ ಬಿಗ್ ಬಾಸ್​ನಲ್ಲಿ ಇವರ ಧ್ವನಿ ಗಮನ ಸೆಳೆಯುತ್ತದೆ. ಕಲರ್ಸ್ ಜೊತೆ ಇವರು ಒಳ್ಳೆಯ ಒಡನಾಟ ಹೊಂದಿದ್ದು, ಧಾರಾವಾಹಿಗಳ ಸಮಯವನ್ನು ಹೇಳೋಕೆ ಹಾಕುವ ಜಾಹೀರಾತಿಗೆ ಇವರ ಧ್ವನಿ ಈಗಲೂ ಬಳಕೆಯಲ್ಲಿ ಇದೆ.

ಉದಾಹರಣೆಗೆ, ‘ಲಕ್ಷ್ಮೀ ಬಾರಮ್ಮ’ ಸೋಮವಾರದಿಂದ ಶನಿವಾರದವರೆಗೆ ಸಂಜೆ 7.30ಕ್ಕೆ ನಿಮ್ಮ ಕಲರ್ಸ್ ಕನ್ನಡ ವಾಹಿನಿಯಲ್ಲಿ’. ಈ ರೀತಿಯ ಧ್ವನಿಯನ್ನು ಪ್ರದೀಪ್ ಅವರು ಈಗಲೂ ನೀಡುತ್ತಾರೆ. ಇದಲ್ಲದೆ, ಹಲವು ಜಾಹೀರಾತುಗಳಿಗೆ, ಎಲ್ಲಕ್ಕಿಂತ ಮುಖ್ಯವಾಗಿ ಮೆಟ್ರೋದಲ್ಲಿ ಅವರ ಧ್ವನಿ ಯಾವಾಗಲೂ ಕೇಳುತ್ತದೆ. ‘ಮುಂದಿನ ನಿಲ್ದಾಣ ಜಯನಗರ’ ಎಂದು ಹೇಳುವಾಗ ಕೇಳಿ ಬರುವುದು ಅವರದ್ದೇ ಧ್ವನಿ. ಅವರು ಬಂಟ್ವಾಳ ತಾಲೂಕಿನವರು. ಸಣ್ಣ ಹಳ್ಳಿಯಿಂದ ಬಂದ ಅವರು ಕನ್ನಡ, ಹಿಂದಿ ಸೇರಿ ಹಲವು ಭಾಷೆಗಳಲ್ಲಿ ಅವರು ಧ್ವನಿ ಆಗುತ್ತಾರೆ.

v

ಪ್ರದೀಪ್ ಬಡೆಕ್ಕಿಲ ಅವರು ಟಿವಿ9 ಕನ್ನಡದಲ್ಲೂ ಕೆಲಸ ಮಾಡಿದ್ದಾರೆ. ವಾಯ್ಸ್​​ ಓವರ್​ಗಳನ್ನು ನೀಡಿ ಅವರು ಗಮನ ಸೆಳೆದರು. ಆರ್​​ಜೆ ಆಗಿಯೂ ಕೆಲಸ ಮಾಡಿದ್ದಾರೆ. ನಂತರ ಹಲವು ರಿಯಾಲಿಟಿ ಶೋಗಳಿಗೆ ಅವರು ನರೇಟರ್ ಆದರು. ಅವರು ಕೆಲವು ಧಾರಾವಾಹಿಗಳಲ್ಲಿ ಹೀರೋ ಆಗಿಯೂ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ, ತಮಿಳಿನಲ್ಲೂ ಬಣ್ಣ ಹಚ್ಚಿದ್ದಾರೆ. ಅವರು ಈಗ ವಾಯ್ಸ್​ ಓವರ್​ಗಳನ್ನು ನೀಡುತ್ತಾರೆ. ಇದರಲ್ಲಿಯೆ ಅವರು ಬದುಕು ಕಟ್ಟಿಕೊಂಡಿದ್ದಾರೆ. ಹೊಸ ಹೊಸ ಕ್ಷೇತ್ರಗಳ ಅನ್ವೇಷಣೆಯನ್ನು ಮಾಡುತ್ತಾ ಸಾಗುತ್ತಾರೆ.

ಇದನ್ನೂ ಓದಿ: ಬಿಗ್ ಬಾಸ್ ಫಾರ್ಮ್ಯಾಟ್ ಬಗ್ಗೆ ಭವ್ಯಾಗೆ ಅಸಮಾಧಾನ; ಕಿಚ್ಚನ ಕ್ಲಾಸ್ ಫಿಕ್ಸ್?

ಬಿಗ್ ಬಾಸ್​ನಲ್ಲಿ ನರೇಟರ್​ ಆಗಿದ್ದ ಪ್ರದೀಪ್ ಅವರು, ಕೊನೆಯಲ್ಲಿ ಬರುವ ಕೆಲವು ಚೆಂದದ ಸಾಲುಗಳನ್ನು ಅವರು ಹೇಳುತ್ತಿದ್ದರು. ಅವರ ಧ್ವನಿಗೆ ದೊಡ್ಡ ಅಭಿಮಾನಿ ಬಳಗ ಈಗಲೂ ಇದೆ. ಈಗ ಅವರ ಧ್ವನಿಯನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:13 am, Wed, 15 January 25

ಕಾನೂನು ಪ್ರಕ್ರಿಯೆ ಮೂಲಕ ಜನಾರ್ಧನ ರೆಡ್ಡಿಗೆ ರಿಲೀಫ್: ಶ್ರೀರಾಮುಲು
ಕಾನೂನು ಪ್ರಕ್ರಿಯೆ ಮೂಲಕ ಜನಾರ್ಧನ ರೆಡ್ಡಿಗೆ ರಿಲೀಫ್: ಶ್ರೀರಾಮುಲು
ಮಂತ್ರಿ ಸ್ಥಾನ ಒಲ್ಲೆಯೆನ್ನಲು ನಾನೇನು ಸನ್ಯಾಸಿಯೇ? ಬಸವರಾಜು, ಶಾಸಕ
ಮಂತ್ರಿ ಸ್ಥಾನ ಒಲ್ಲೆಯೆನ್ನಲು ನಾನೇನು ಸನ್ಯಾಸಿಯೇ? ಬಸವರಾಜು, ಶಾಸಕ
ಇಬ್ಬರು ಬೇರೆ ಬೇರೆ ಜಾತಿಯವರು; ಯುವತಿ ಎಸ್​ಸಿಯಾದರೆ ಯುವಕ ಗೌಡಾಸ್!
ಇಬ್ಬರು ಬೇರೆ ಬೇರೆ ಜಾತಿಯವರು; ಯುವತಿ ಎಸ್​ಸಿಯಾದರೆ ಯುವಕ ಗೌಡಾಸ್!
ಸಂಸದ ಇ ತುಕಾರಾಂ ಮತ್ತು ಶಾಸಕ ಭರತ್ ರೆಡ್ಡಿ ಮನಗಳ ಮೇಲೂ ಈಡಿ ದಾಳಿ
ಸಂಸದ ಇ ತುಕಾರಾಂ ಮತ್ತು ಶಾಸಕ ಭರತ್ ರೆಡ್ಡಿ ಮನಗಳ ಮೇಲೂ ಈಡಿ ದಾಳಿ
ಹನುಮಾನ್ ಭಕ್ತರೊಬ್ಬರ ಅಂತ್ಯಕ್ರಿಯೆಗೆ ಬಂದ ಕೋತಿ
ಹನುಮಾನ್ ಭಕ್ತರೊಬ್ಬರ ಅಂತ್ಯಕ್ರಿಯೆಗೆ ಬಂದ ಕೋತಿ
ಶ್ರೀಕಾಂತ್ ಮತ್ತವನ ತಂಡದಿಂದ ಮಚ್ಚಿನಿಂದ ಹಲ್ಲೆ, ಹಂತಕರು ಪರಾರಿ
ಶ್ರೀಕಾಂತ್ ಮತ್ತವನ ತಂಡದಿಂದ ಮಚ್ಚಿನಿಂದ ಹಲ್ಲೆ, ಹಂತಕರು ಪರಾರಿ
ಕೃಷ್ಣ ನಟನೆಯ ‘ಬ್ರ್ಯಾಟ್’ ಚಿತ್ರದ ಟೀಸರ್ ನೋಡಿದ ಮಗಳು ಪರಿ ರಿಯಾಕ್ಷನ್ ನೋಡಿ
ಕೃಷ್ಣ ನಟನೆಯ ‘ಬ್ರ್ಯಾಟ್’ ಚಿತ್ರದ ಟೀಸರ್ ನೋಡಿದ ಮಗಳು ಪರಿ ರಿಯಾಕ್ಷನ್ ನೋಡಿ
ಶ್ರೀನಿವಾಸಪುರದಿಂದ ಬೇರೆ ಊರುಗಳಿಗೆ ಹೋಗುವ ರಸ್ತೆಗಳು ಬಂದ್
ಶ್ರೀನಿವಾಸಪುರದಿಂದ ಬೇರೆ ಊರುಗಳಿಗೆ ಹೋಗುವ ರಸ್ತೆಗಳು ಬಂದ್
ರಾಜಾ ರಘುವಂಶಿ ಕೊಲೆ ಆರೋಪಿಗೆ ಏರ್​ಪೋರ್ಟ್​ನಲ್ಲಿ ಪ್ರಯಾಣಿಕರಿಂದ ಕಪಾಳಮೋಕ್ಷ
ರಾಜಾ ರಘುವಂಶಿ ಕೊಲೆ ಆರೋಪಿಗೆ ಏರ್​ಪೋರ್ಟ್​ನಲ್ಲಿ ಪ್ರಯಾಣಿಕರಿಂದ ಕಪಾಳಮೋಕ್ಷ
Daily Devotional: ನಿತ್ಯ ಪೂಜೆಯಲ್ಲಿ ಗಣಪತಿ ಸ್ಮರಣೆಯ ಮಹತ್ವ ತಿಳಿಯಿರಿ
Daily Devotional: ನಿತ್ಯ ಪೂಜೆಯಲ್ಲಿ ಗಣಪತಿ ಸ್ಮರಣೆಯ ಮಹತ್ವ ತಿಳಿಯಿರಿ