Exclusive: ಈ ಬಾರಿ ಕನ್ನಡ ಬಿಗ್ ಬಾಸ್ ಒಟಿಟಿ ಸೀಸನ್ ಇರುತ್ತಾ, ಇರಲ್ವಾ? ಇಲ್ಲಿದೆ ಪಕ್ಕಾ ಮಾಹಿತಿ

ಕಳೆದ ವರ್ಷ ಬಿಗ್ ಬಾಸ್ ಒಟಿಟಿ ಆರಂಭ ಆಗಿತ್ತು. ಟಿವಿ ಸೀಸನ್ ಆರಂಭ ಆಗುವುದಕ್ಕೂ ಮೊದಲು ಈ ಸೀಸನ್ ಪ್ರದರ್ಶನ ಕಂಡಿತ್ತು. ಕೇವಲ ವೂಟ್ ಆ್ಯಪ್​ನಲ್ಲಿ ಮಾತ್ರ ಇದನ್ನು ನೋಡಲು ಅವಕಾಶ ಇತ್ತು. ಒಟಿಟಿ ಸೀಸನ್ ಪೂರ್ಣಗೊಂಡ ಒಂದು ವಾರ ಗ್ಯಾಪ್ ಬಳಿಕ ಟಿವಿ ಸೀಸನ್ ಆರಂಭಗೊಂಡಿತು.

Exclusive: ಈ ಬಾರಿ ಕನ್ನಡ ಬಿಗ್ ಬಾಸ್ ಒಟಿಟಿ ಸೀಸನ್ ಇರುತ್ತಾ, ಇರಲ್ವಾ? ಇಲ್ಲಿದೆ ಪಕ್ಕಾ ಮಾಹಿತಿ
ಸುದೀಪ್
Follow us
|

Updated on: Aug 23, 2023 | 10:45 AM

‘ಬಿಗ್​ ಬಾಸ್’ (Bigg Boss) ರಿಯಾಲಿಟಿ ಶೋಗೆ ದೊಡ್ಡ ವೀಕ್ಷಕರ ವರ್ಗ ಇದೆ. ಭಾರತದಲ್ಲಿ ವಿವಿಧ ಭಾಷೆಗಳಲ್ಲಿ ಈ ರಿಯಾಲಿಟಿ ಶೋ ನಡೆಸಲಾಗುತ್ತಿದೆ. ಕನ್ನಡದಲ್ಲಿ ಯಶಸ್ವಿಯಾಗಿ 9 ಸೀಸನ್ ಪೂರ್ಣಗೊಂಡಿದೆ. 10ನೇ ಸೀಸನ್​ಗೆ ಸಿದ್ಧತೆ ನಡೆದಿದೆ. ಕಳೆದ ವರ್ಷ ಒಟಿಟಿ ಸೀಸನ್ (Bigg Boss OTT Season) ಇತ್ತು. 45 ದಿನಗಳ ಕಾಲ ಈ ಸೀಸನ್ ಪ್ರಸಾರ ಕಂಡಿತ್ತು. ಈ ಬಾರಿ ಒಟಿಟಿ ಸೀಸನ್ ಇರುತ್ತದೆಯೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ಮೂಡಿತ್ತು. ಇದಕ್ಕೆ ಉತ್ತರ ಸಿಕ್ಕಿದೆ. ಆ ಬಗ್ಗೆ ಪಕ್ಕಾ ಮಾಹಿತಿ ಇಲ್ಲಿದೆ.

ಕಳೆದ ವರ್ಷ ಬಿಗ್ ಬಾಸ್ ಒಟಿಟಿ ಆರಂಭ ಆಗಿತ್ತು. ಟಿವಿ ಸೀಸನ್ ಆರಂಭ ಆಗುವುದಕ್ಕೂ ಮೊದಲು ಈ ಸೀಸನ್ ಪ್ರದರ್ಶನ ಕಂಡಿತ್ತು. ಕೇವಲ ವೂಟ್ ಆ್ಯಪ್​ನಲ್ಲಿ ಮಾತ್ರ ಇದನ್ನು ನೋಡಲು ಅವಕಾಶ ಇತ್ತು. ಒಟಿಟಿ ಸೀಸನ್ ಪೂರ್ಣಗೊಂಡ ಒಂದು ವಾರ ಗ್ಯಾಪ್ ಬಳಿಕ ಟಿವಿ ಸೀಸನ್ ಆರಂಭಗೊಂಡಿತು. ಆದರೆ, ಈ ಬಾರಿ ಒಟಿಟಿ ಸೀಸನ್ ಇರುವುದಿಲ್ಲ! ಈ ವಿಚಾರವನ್ನು ಮೂಲಗಳು ಖಚಿತಪಡಿಸಿವೆ.

10ನೇ ಸೀಸನ್ ಎಂದಾಗ ಒಂದು ವಿಶೇಷ ಭಾವನೆ ಇರುತ್ತದೆ. ಈ ಕಾರಣದಿಂದಲೇ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಸಖತ್ ವಿಶೇಷ ಎನಿಸಿಕೊಂಡಿದೆ. ಹೀಗಾಗಿ ಸಖತ್ ಅದ್ದೂರಿಯಾಗಿ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಬರಲಿದೆ. ಅಕ್ಟೋಬರ್ ತಿಂಗಳಲ್ಲಿ ಬಿಗ್ ಬಾಸ್ ಆರಂಭ  ಆಗಲಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ‘ಬಿಗ್ ಬಾಸ್’ ಹೊಸ ಸೀಸನ್​ನಲ್ಲಿ ಇರಲಿದೆ ಹಲವು ಸರ್​ಪ್ರೈಸ್; ಉಲ್ಟಾ-ಪಲ್ಟಾ ಆಗಿದೆ ಪ್ರೋಮೋ

ಬಿಗ್ ಬಾಸ್ ಎಂದಾಕ್ಷಣ ನೆನಪಾಗೋದು ಕಿಚ್ಚ ಸುದೀಪ್. ಅವರ ಉಡುಗೆ, ಅವರ ಸ್ಟೈಲ್, ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಳ್ಳೋ ರೀತಿ, ಅವರನ್ನು ನಗಿಸುವ ವಿಧಾನ, ಸ್ಪರ್ಧಿಗಳನ್ನು ಮನೆಯವರೆಂದು ಟ್ರೀಟ್ ಮಾಡುವ ರೀತಿ, ಅವರಿಗೋಸ್ಕರ ಅಡುಗೆ ಮಾಡಿ ಕೊಡೋದೂ.. ಹೀಗೆ ಎಲ್ಲವೂ ಇಷ್ಟವಾಗುತ್ತದೆ. ಕಳೆದ ಒಂಭತ್ತು ಸೀಸನ್​ಗಳನ್ನು ಅವರು ಮುನ್ನಡೆಸಿಕೊಟ್ಟಿದ್ದಾರೆ. 10ನೇ ಸೀಸನ್ ಕೂಡ ಅವರ ಸಾರಥ್ಯದಲ್ಲೇ ಸಾಗಲಿದೆ. ಸುದೀಪ್​ಗೋಸ್ಕರ ಈ ರಿಯಾಲಿಟಿ ಶೋ ವೀಕ್ಷಿಸುವ ಅನೇಕರಿದ್ದಾರೆ. ಈ ವಿಚಾರ ಕೇಳಿ ಕಿಚ್ಚನ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಶೀಘ್ರದಲ್ಲೇ ಇದರ ಪ್ರೋಮೋ ಶೂಟ್ ನಡೆಯೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ