AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK 9: ರೂಪೇಶ್ ಶೆಟ್ಟಿ-ರಾಕೇಶ್ ಅಡಿಗಗೆ ಒಟಿಟಿ ಸೀಸನ್ ಸಹಕಾರಿ ಆಗಿದ್ದು ಹೇಗೆ? ಇಲ್ಲಿದೆ ಲೆಕ್ಕಾಚಾರ

Bigg Boss Kannada Season 9: ರೂಪೇಶ್ ಹಾಗೂ ರಾಕೇಶ್​ ಒಟಿಟಿ ಸೀಸನ್​ನಲ್ಲಿ ಟಾಪರ್ ಆಗಿ ಟಿವಿ ಸೀಸನ್​ಗೆ ಬಂದವರು. ಇಬ್ಬರಿಗೂ ಒಟಿಟಿ ಸೀಸನ್ ತುಂಬಾನೇ ಸಹಕಾರಿ ಆಗಿದೆ ಎಂಬಬಗ್ಗೆ ಅನುಮಾನವೇ ಬೇಡ. ಆ ಬಗ್ಗೆ ಇಲ್ಲಿದೆ ವಿವರ.

BBK 9: ರೂಪೇಶ್ ಶೆಟ್ಟಿ-ರಾಕೇಶ್ ಅಡಿಗಗೆ ಒಟಿಟಿ ಸೀಸನ್ ಸಹಕಾರಿ ಆಗಿದ್ದು ಹೇಗೆ? ಇಲ್ಲಿದೆ ಲೆಕ್ಕಾಚಾರ
ರಾಕೇಶ್​-ರೂಪೇಶ್
TV9 Web
| Edited By: |

Updated on:Jan 02, 2023 | 2:27 PM

Share

ರೂಪೇಶ್ ಶೆಟ್ಟಿ (Roopesh Shetty) ‘ಬಿಗ್ ಬಾಸ್ ಕನ್ನಡಒಟಿಟಿ ಸೀಸನ್ 9ರ ವಿನ್ನರ್ ಆದರೆ, ರಾಕೇಶ್ ಅಡಿಗ (Rakesh Adiga) ರನ್ನರ್​​​ಅಪ್ ಆಗಿದ್ದಾರೆ. ಈ ಶೋನಿಂದ ಅವರ ಜನಪ್ರಿಯತೆ ದುಪ್ಪಟ್ಟಾಗಿದೆ. 145 ದಿನ ಬಿಗ್ ಬಾಸ್ ಮನೆಯಲ್ಲಿ ಕಳೆದ ಅವರು ಈಗ ದೊಡ್ಮನೆಯಿಂದ ಹೊರ ಬಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರೂಪೇಶ್ ಹಾಗೂ ರಾಕೇಶ್​ಗೆ ಅಭಿನಂದನೆಗಳು ಬರುತ್ತಿವೆ. ಇವರಿಬ್ಬರೂ ಒಟಿಟಿ ಸೀಸನ್​ನಲ್ಲಿ ಟಾಪರ್ ಆಗಿ ಟಿವಿ ಸೀಸನ್​ಗೆ ಬಂದವರು. ಇಬ್ಬರಿಗೂ ಒಟಿಟಿ ಸೀಸನ್ ತುಂಬಾನೇ ಸಹಕಾರಿ ಆಗಿದೆ ಎಂಬಬಗ್ಗೆ ಅನುಮಾನವೇ ಬೇಡ. ಆ ಬಗ್ಗೆ ಇಲ್ಲಿದೆ ವಿವರ.

ಒಟಿಟಿಯಲ್ಲಿ ರಿಹರ್ಸಲ್

ಯಾವುದೇ ಲೆಕ್ಕಾಚಾರ ಹಾಕಿಕೊಂಡು ಬಿಗ್ ಬಾಸ್ ಮನೆ ಒಳಗೆ ಹೋದರೂ ಅದು ವರ್ಕೌಟ್ ಆಗುವುದಿಲ್ಲ. ಇದು ಅನೇಕಬಾರಿ ಸಾಬೀತಾಗಿದೆ. ನಾವು ಅಂದುಕೊಳ್ಳುವುದು ಒಂದು ಅಲ್ಲಿ ಆಗುವುದೇ ಇನ್ನೊಂದು. ಈ ರೀತಿ ಲೆಕ್ಕಾಚಾರ ಹಾಕಿಕೊಂಡು ಮನೆ ಒಳಗೆ ಹೋಗಿ, ಕೆಲವೇ ವಾರಗಳಲ್ಲಿ ಎಲಿಮಿನೇಟ್ ಆಗಿ ಬಂದವರ ಸಂಖ್ಯೆ ದೊಡ್ಡದಿದೆ. ರಾಕೇಶ್ ಅಡಿಗ, ರೂಪೇಶ್ ಶೆಟ್ಟಿಗೆ ‘ಬಿಗ್ ಬಾಸ್​ ಒಟಿಟಿ’ ಆಟ ರಿಹರ್ಸಲ್ ರೀತಿ ಇತ್ತು. ಆಟದ ವೈಖರಿ ಹೇಗೆ, ಒಳಗೆ ಯಾವ ರೀತಿಯ ರಾಜಕೀಯ ಇರುತ್ತದೆ ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಒಟಿಟಿಯ 45 ದಿನ ಸಹಕಾರಿ ಆಗಿತ್ತು.

ಇದನ್ನೂ ಓದಿ
Image
Bigg Boss Kannada Finale: ಬಿಗ್ ಬಾಸ್ ವಿನ್ನರ್ ಹೆಸರು ಲೀಕ್ ಆಗದಿರಲು ಕಲರ್ಸ್ ಕನ್ನಡದಿಂದ ಹೊಸ ಪ್ಲ್ಯಾನ್
Image
Divya Uruduga: ‘ಉತ್ತಮ, ಕಿಚ್ಚನ ಚಪ್ಪಾಳೆ, ಕ್ಯಾಪ್ಟನ್​ ಪಟ್ಟ ದಿವ್ಯಾಗೆ ಸಿಕ್ಕಿಲ್ಲ; ಆದ್ರೂ ಫಿನಾಲೆಗೆ ಹೇಗೆ ಬಂದ್ರು?’: ಗುರೂಜಿ ಪ್ರಶ್ನೆ
Image
Divya Uruduga: ಬಿಗ್ ಬಾಸ್​ ಫಿನಾಲೆಯಿಂದ ಹೊರಬಿದ್ದ ದಿವ್ಯಾ ಉರುಡುಗಗೆ ಸಿಕ್ಕ ಹಣವೆಷ್ಟು?
Image
Divya Uruduga: ‘ಮನೆಯೊಳಗೆ ಇದ್ದಾಗ ನನ್ನ ಮಗಳು ಅಂತಾರೆ, ಆದರೆ ಹೊರಗೆ..’: ಗುರೂಜಿ ಮೇಲೆ ದಿವ್ಯಾ ಗರಂ

ಸಿಕ್ಕಿತು ಕಾನ್ಫಿಡೆನ್ಸ್

ಬಿಗ್ ಬಾಸ್ ಒಳಗೆ ಹೋದ ನಂತರ ಹೊರಗಿನ ಜಗತ್ತಿನ ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳುತ್ತದೆ. ಮನೆ ಒಳಗೆ ತಾವು ಮಾಡುತ್ತಿರುವ ಪ್ಲ್ಯಾನ್​​ಗಳು ಸರಿ ಇದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಸ್ಪರ್ಧಿಗಳಿಗೆ ಸಾಧ್ಯವಾಗುವುದಿಲ್ಲ. ರಾಕೇಶ್ ಹಾಗೂ ರೂಪೇಶ್​ಗೆ  ಒಟಿಟಿ ಸೀಸನ್ ಈ ನಿಟ್ಟಿನಲ್ಲಿ​ ಸಹಕಾರಿ ಆಗಿತ್ತು. ಟಾಪ್​ ನಾಲ್ಕರಲ್ಲಿ ಇವರಿಬ್ಬರು ಇದ್ದರು. ಇದರಿಂದ ತಾವು ಜನರಿಗೆ ಇಷ್ಟವಾಗುತ್ತಿದ್ದೇವೆ ಎಂಬುದು ರೂಪೇಶ್ ಹಾಗೂ ರಾಕೇಶ್​ಗೆ ಅರಿವಾಗಿತ್ತು. ಇದು ಇವರಿಬ್ಬರಿಗೆ ಹೊಸ ಕಾನ್ಫಿಡೆನ್ಸ್ ನೀಡಿತ್ತು.

ಹೋಗಿತ್ತು ಭಯ

ರೂಪೇಶ್ ಹಾಗೂ ರಾಕೇಶ್ ಅಡಿಗ ಫಿನಾಲೆ ಭಯವನ್ನು ಒಟಿಟಿ ಸೀಸನ್​ನಲ್ಲೇ ಕಳೆದುಕೊಂಡಿದ್ದರು. ಟಿವಿ ಸೀಸನ್ ಫಿನಾಲೆಯಲ್ಲಿದ್ದಾಗ ಅವರಲ್ಲಿ ಅಷ್ಟಾಗಿ ಭಯ ಕಾಣಲಿಲ್ಲ. ಇದನ್ನು ಸಾಮಾನ್ಯ ಎಂಬಂತೆ ಅವರು ಸ್ವೀಕರಿಸಿದ್ದರು.

ಹೆಚ್ಚಿತು ಫೇಮ್

ಒಟಿಟಿ ಸೀಸನ್ ಟಿವಿಯಲ್ಲಿ ಪ್ರಸಾರ ಕಂಡಿರಲಿಲ್ಲ. ಆದರೆ, ಒಟಿಟಿ ವ್ಯಾಪ್ತಿ ಹೆಚ್ಚಿದ್ದರಿಂದ ‘ಬಿಗ್ ಬಾಸ್ ಕನ್ನಡ ಒಟಿಟಿ’ ಸೀಸನ್​ನ ಅನೇಕರು ವೀಕ್ಷಣೆ ಮಾಡಿದ್ದರು. ಇದರಿಂದ ರಾಕೇಶ್ ಹಾಗೂ ರೂಪೇಶ್​ಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಇವರ ಹೆಸರಲ್ಲಿ ಅನೇಕ ಫ್ಯಾನ್​ಪೇಜ್​ಗಳು ಹುಟ್ಟಿಕೊಂಡವು. ಇದರಿಂದ ಇವರಿಬ್ಬರಿಗೆ ಹೆಚ್ಚಿನ ಪ್ರಮೋಷನ್ ಸಿಕ್ಕಿತು.

ತಿಳಿಯಿತು ವೀಕೆಂಡ್ ಎಪಿಸೋಡ್ ರೂಪುರೇಷೆ

ವೀಕೆಂಡ್ ಎಪಿಸೋಡ್​​ಗಳೆಂದರೆ ಎಲ್ಲರಿಗೂ ಒಂದು ಭಯ ಇರುತ್ತದೆ. ವಾರದ ದಿನಗಳಲ್ಲಿ ಮಾಡಿದ ತಪ್ಪನ್ನು ಎತ್ತಿ ಸುದೀಪ್ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಹೀಗಾಗಿ, ವೀಕೆಂಡ್ ಎಪಿಸೋಡ್​ನಲ್ಲಿ ಸುದೀಪ್ ಎದುರು ಮಾತನಾಡಲು ಸಾಕಷ್ಟು ಚಾಕಚಕ್ಯತೆ ಬೇಕು. ಈ ನಿಟ್ಟಿನಲ್ಲಿ ರೂಪೇಶ್ ಹಾಗೂ ರಾಕೇಶ್​ಗೆ ಒಟಿಟಿ ಸೀಸನ್​ ತುಂಬಾನೇ ಸಹಕಾರಿ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:54 pm, Mon, 2 January 23

ಸಚಿವರ ನೇತೃತ್ವದ ಕೆಡಿಪಿ ಸಭೆಯಲ್ಲಿ ನಿದ್ರೆಗೆ ಜಾರಿದ ಅಧಿಕಾರಿಗಳು
ಸಚಿವರ ನೇತೃತ್ವದ ಕೆಡಿಪಿ ಸಭೆಯಲ್ಲಿ ನಿದ್ರೆಗೆ ಜಾರಿದ ಅಧಿಕಾರಿಗಳು
ಹಂಪಿ ಉತ್ಸವದಲ್ಲಿ ನಟಿ ರಚಿತಾ ರಾಮ್ ಕಾರು ಚಾಲಕನಿಂದ ಅಧಿಕಾರಿ ಮೇಲೆ ಹಲ್ಲೆ
ಹಂಪಿ ಉತ್ಸವದಲ್ಲಿ ನಟಿ ರಚಿತಾ ರಾಮ್ ಕಾರು ಚಾಲಕನಿಂದ ಅಧಿಕಾರಿ ಮೇಲೆ ಹಲ್ಲೆ
ರಣಜಿ ಟ್ರೋಫಿ ಸೆಮಿಫೈನಲ್‌; ಸ್ಮರಣೀಯ ಶತಕ ಸಿಡಿಸಿದ ಸ್ಮರಣ್
ರಣಜಿ ಟ್ರೋಫಿ ಸೆಮಿಫೈನಲ್‌; ಸ್ಮರಣೀಯ ಶತಕ ಸಿಡಿಸಿದ ಸ್ಮರಣ್
ಭಾರತದ ವಿರುದ್ಧ ಸೋಲು; ಪಾಕಿಸ್ತಾನದಲ್ಲಿ ಟಿವಿಗಳು ಪುಡಿಪುಡಿ
ಭಾರತದ ವಿರುದ್ಧ ಸೋಲು; ಪಾಕಿಸ್ತಾನದಲ್ಲಿ ಟಿವಿಗಳು ಪುಡಿಪುಡಿ
ಅಪಘಾತಕ್ಕೆ 2 ವರ್ಷದ ಮಗು ಬಲಿ: ರಸ್ತೆ ದುಃಸ್ಥಿತಿ ಖಂಡಿಸಿ ಪ್ರತಿಭಟನೆ
ಅಪಘಾತಕ್ಕೆ 2 ವರ್ಷದ ಮಗು ಬಲಿ: ರಸ್ತೆ ದುಃಸ್ಥಿತಿ ಖಂಡಿಸಿ ಪ್ರತಿಭಟನೆ
ಪಿಣರಾಯಿ ವಿಜಯನ್ ಅವರೇ ಮತ್ತೆ ಕೇರಳದ ಸಿಎಂ ಆಗಲಿದ್ದಾರೆ: ಮಣಿಶಂಕರ್ ಅಯ್ಯರ್
ಪಿಣರಾಯಿ ವಿಜಯನ್ ಅವರೇ ಮತ್ತೆ ಕೇರಳದ ಸಿಎಂ ಆಗಲಿದ್ದಾರೆ: ಮಣಿಶಂಕರ್ ಅಯ್ಯರ್
ನಾಪತ್ತೆಯಾದ ಮಹಿಳೆ ಪರಪುರುಷನ ಮನೆಯಲ್ಲಿ ಪತ್ತೆ: ಇಲ್ಲಿದೆ Exclusive ದೃಶ್ಯ
ನಾಪತ್ತೆಯಾದ ಮಹಿಳೆ ಪರಪುರುಷನ ಮನೆಯಲ್ಲಿ ಪತ್ತೆ: ಇಲ್ಲಿದೆ Exclusive ದೃಶ್ಯ
ರಿಂಕು ಸಿಂಗ್ ಕೈಯಲ್ಲಿ ಬೌಲಿಂಗ್ ಮಾಡಿಸಿ ನಮ್ಮ ಮರ್ಯಾದೆಯನ್ನೇ ತೆಗೆದುಬಿಟ್ರು
ರಿಂಕು ಸಿಂಗ್ ಕೈಯಲ್ಲಿ ಬೌಲಿಂಗ್ ಮಾಡಿಸಿ ನಮ್ಮ ಮರ್ಯಾದೆಯನ್ನೇ ತೆಗೆದುಬಿಟ್ರು
ಬಾಲವೇ ನಾಯಿಯನ್ನು ಅಲ್ಲಾಡಿಸಿದ್ರೆ ಹೇಗೆ? ಹೀಗ್ಯಾಕಂದ್ರು ಸಚಿವ ಮಹದೇವಪ್ಪ!
ಬಾಲವೇ ನಾಯಿಯನ್ನು ಅಲ್ಲಾಡಿಸಿದ್ರೆ ಹೇಗೆ? ಹೀಗ್ಯಾಕಂದ್ರು ಸಚಿವ ಮಹದೇವಪ್ಪ!
ರಾಜಸ್ಥಾನದ ರಾಸಾಯನಿಕ ಕಾರ್ಖಾನೆಯಲ್ಲಿ ಅಗ್ನಿ ಅವಘಡ
ರಾಜಸ್ಥಾನದ ರಾಸಾಯನಿಕ ಕಾರ್ಖಾನೆಯಲ್ಲಿ ಅಗ್ನಿ ಅವಘಡ