Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್​ ಬಾಸ್ ಮನೆ ತಲುಪುವ ಮೊದಲು ಸ್ಪರ್ಧಿಗಳು ದಟ್ಟ ಅರಣ್ಯವನ್ನು ಹಾದು ಬರಬೇಕು’; ಕುತೂಹಲ ಹೆಚ್ಚಿಸಿದ ನೂತನ ಪ್ರೊಮೊ

ಬಿಗ್ ಬಾಸ್ 15ರ ನೂತನ ಪ್ರೊಮೊ ಬಿಡುಗಡೆಯಾಗಿದ್ದು, ‘ಸ್ಪರ್ಧಿಗಳು ದಟ್ಟ ಅರಣ್ಯವನ್ನು ದಾಟಿ ಮನೆಯೊಳಗೆ ಬರಬೇಕು’ ಎಂದು ಹೇಳಿರುವುದು ವೀಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.

‘ಬಿಗ್​ ಬಾಸ್ ಮನೆ ತಲುಪುವ ಮೊದಲು ಸ್ಪರ್ಧಿಗಳು ದಟ್ಟ ಅರಣ್ಯವನ್ನು ಹಾದು ಬರಬೇಕು’; ಕುತೂಹಲ ಹೆಚ್ಚಿಸಿದ ನೂತನ ಪ್ರೊಮೊ
ಸಲ್ಮಾನ್​ ಖಾನ್
Follow us
TV9 Web
| Updated By: shivaprasad.hs

Updated on: Aug 29, 2021 | 4:46 PM

ಬಿಗ್​ ಬಾಸ್​ ಒಟಿಟಿ ಯಲ್ಲಿ ಸ್ಪರ್ಧೆ ಕಾವೇರುತ್ತಿರುವಂತೆಯೇ, ಬಿಗ್​ ಬಾಸ್ 15ಕ್ಕೆ ತಯಾರಿ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಪ್ರೊಮೊವೊಂದನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಸಲ್ಮಾನ್ ಖಾನ್ ಹೇಳಿಕೆಗಳು ಎಲ್ಲರ ಗಮನ ಸೆಳೆದಿವೆ. ಇಂದು (ಭಾನುವಾರ) ಬಿಡುಗಡೆಯಾದ ಹೊಸ ಪ್ರೊಮೊದಲ್ಲಿ ‘ಬಿಗ್​ ಬಾಸ್ 15ರ ಮನೆಯೊಳಗೆ ಕಾಲಿಡಲು ಸ್ಪರ್ಧಿಗಳು ಮೊದಲು ದಟ್ಟ ಅರಣ್ಯವನ್ನು ದಾಟಬೇಕು’ ಎಂದು ಹೇಳಲಾಗಿದೆ. ಈ ಹೇಳಿಕೆ ಬಿಗ್​ ಬಾಸ್ ನೂತನ ಸೀಸನ್​ನ ಕುರಿತು ಮತ್ತಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿರುವ ಹೊಸ ಪ್ರೊಮೊಕ್ಕೆ, ‘ದಟ್ಟ ಅರಣ್ಯದಲ್ಲಿ ಅಪಾಯವಿದೆ. ಪ್ರತೀ ಹೆಜ್ಜೆಗೂ ಹೋರಡಬೇಕಿದದೆ’ ಎಂಬರ್ಥದಲ್ಲಿ ಕ್ಯಾಪ್ಶನ್ ನೀಡಿ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಪ್ರೊಮೊದಲ್ಲಿ ತೋರಿಸಿರುವಂತೆ, ಸಲ್ಮಾನ್ ಖಾನ್ ಮರದ ಬುಡವೊಂದರ ಬಳಿ ಕುಳಿತು, ಅದರೊಂದಿಗೆ ಮಾತನಾಡುತ್ತಿದ್ದಾರೆ. ಆ ಮರಕ್ಕೆ ‘ವಿಶ್ವಸುಂತ್ರಿ’(Vishwasuntree) ಎಂದು ಹೆಸರಿಡಲಾಗಿದ್ದು, ಖ್ಯಾತ ನಟಿ ರೇಖಾ ಧ್ವನಿ ನೀಡಿದ್ದಾರೆ. ಈ ಬಾರಿ ಹೊಸದಾಗಿ ಪರಿಚಯಿಸಲಾಗಿರುವ ಈ ಕಲ್ಪನೆ ಈಗಾಗಲೇ ಮೆಚ್ಚುಗೆ ಗಳಿಸಿದೆ.

ಸಲ್ಮಾನ್ ಅವರನ್ನು ಸ್ವಾಗತಿಸುವ ‘ವಿಶ್ವಸುಂತ್ರಿ’(Vishwasuntree), ನಿಮಗಾಗಿ 15 ವರ್ಷಗಳಿಂದ ನಾನು ಕಾಯುತ್ತಿದ್ದೆ ಎಂದು ಹೇಳುತ್ತದೆ. ಆಗ ಸಲ್ಮಾನ್, ‘‘ನಿಮಗೆ ನಾನು ಋಣಿ. ಬಿಗ್​ಬಾಸ್ ಮನೆ ಇಲ್ಲೇ ಎಲ್ಲೋ ಇದೆ ಎಂದು ಹೇಳಿದ್ದರು. ಆದರೆ ಇಲ್ಲೆಲ್ಲೂ ಕಾಣಿಸುತ್ತಿಲ್ಲವಲ್ಲ’’ ಎಂದು ಪ್ರಶ್ನಿಸುತ್ತಾರೆ. ಆಗ ಮರವು, ‘‘ಸ್ಪರ್ಧಿಗಳು ಇಲ್ಲಿ ಬರಬೇಕಾದರೆ ದಟ್ಟ ಕಾನನವನ್ನು ಹಾದು ಬರಬೇಕು’’ ಎನ್ನುತ್ತದೆ. ನಂತರ ಮಾತನಾಡುವ ಸಲ್ಮಾನ್, ‘‘ಸ್ಪರ್ಧಿಗಳಿಗೆ ಈ ಬಾರಿ ಬಹಳ ಕಷ್ಟಕರವಾಗಿದ್ದರೂ, ನಿಮಗೆ ಮನರಂಜನೆ ಮೊದಲಿಗಿಂತ ಹೆಚ್ಚೇ ಸಿಗುತ್ತದೆ’’  ಎಂದಿದ್ಧಾರೆ. ಸಲ್ಮಾನ್ ಹಾಗೂ ವಿಶ್ವಸುಂತ್ರಿ ಮಾತಿನ ಮೂಲಕ ವೀಕ್ಷಕರ ಕುತೂಹಲ ಮತ್ತಷ್ಟು ಹೆಚ್ಚಾಗಿದ್ದು, ಈಗಾಗಲೇ ಹಲವು ಹೊಸತನಗಳನ್ನು ಹೊಂದಿರುವ ಬಿಗ್​ ಬಾಸ್ 15 ಮತ್ತಷ್ಟು ವಿನೂತನವಾಗಿ ಮೂಡಿಬರಲಿದೆಯೇ ಎಂಬ ಕುತೂಹಲ ಮೂಡಿಸಿದೆ.

View this post on Instagram

A post shared by ColorsTV (@colorstv)

ಕಳೆದ ವಾರ, ರೇಖಾ ಅವರ ಧ್ವನಿ ಬಿಗ್ ಬಾಸ್​ನಲ್ಲಿರಲಿದೆ ಎಂಬುದನ್ನು ಪ್ರೊಮೊ ಮೂಲಕ ಪರಿಚಯಿಸಿದ್ದ ಚಾನೆಲ್, ಈ ಬಾರಿ ವಿನೂತನ ಕಲ್ಪನೆಯ ಪ್ರೊಮೊ ಬಿಡುಗಡೆ ಮಾಡಿದೆ. ರೇಖಾ ಮೊದಲ ಬಾರಿಗೆ ಬಿಗ್ ಬಾಸ್ ಸ್ಪರ್ಧೆಯ ಭಾಗವಾಗಿದ್ದಾರೆ. ಪ್ರಸ್ತುತ ಬಿಗ್ ಬಾಸ್ ಮುಖ್ಯ ಸ್ಪರ್ಧೆಗೂ ಮುನ್ನ ಬಿಗ್ ಬಾಸ್ ಒಟಿಟಿ ಕಾರ್ಯಕ್ರಮ ನಡೆಯುತ್ತಿದ್ದು, ಕರಣ್ ಜೋಹರ್ ನಡೆಸಿಕೊಡುತ್ತಿದ್ದಾರೆ. ಶಮಿತಾ ಶೆಟ್ಟಿ, ರಾಕೇಶ್ ಬಾಪಟ್, ಮಿಲಿಂದ್ ಗಾಬಾ, ನೇಹಾ ಭಾಸಿನ್, ದಿವ್ಯಾ ಅಗರವಾಲ್ ಮೊದಲಾದವರು ಭಾಗವಾಗಿರುವ ಈ ಸ್ಪರ್ಧೆಯು ಮೊದಲಿಗಿಂತ ಭಿನ್ನವಾಗಿ ನಡೆದುಬರುತ್ತಿದೆ.

ಇದನ್ನೂ ಓದಿ:

ರಾಜ್​ಕುಮಾರ್​ ಸಿನಿಮಾ ಟೈಟಲ್​ ಮರುಬಳಕೆಗೆ ಶೀಘ್ರವೇ ಬೀಳಲಿದೆ ಬ್ರೇಕ್​?

‘ಲೇಡಿ ಗ್ಯಾಂಗ್’ನೊಂದಿಗೆ ಕರೀನಾ ಕಪೂರ್; ಮಲೈಕಾ ಅರೋರಾ, ಕರಿಷ್ಮಾ ಮೊದಲಾದವರ ಜೊತೆ ಫೊಟೊಗೆ ಭರ್ಜರಿ ಪೋಸ್

(Salman Khan reveals in a promo that contestants have to cross jungle before entering Big Boss house)

ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್