ಕಾರ್ತಿಕ್​ ಮೇಲೆ ಸಂಗೀತಾ, ನಮ್ರತಾ ಮಾತಿನ ದಾಳಿ; ಜೊತೆ ಇದ್ರೂ ಕಷ್ಟ, ಒಬ್ಬರೇ ಇದ್ರೂ ಕಷ್ಟ

ತಮ್ಮ ನಿಲುವು ಏನು ಎಂಬುದನ್ನು ಕಾರ್ತಿಕ್​ ಮಹೇಶ್​ ತಿಳಿಸಿದ್ದಾರೆ. ‘ನಾನು ಕುಗ್ಗಿದ್ದು ಹೌದು. ಆದರೆ ದೈಹಿಕವಾಗಿ ಅಲ್ಲ. ಮಾನಸಿಕವಾಗಿ ಲೋ ಆಗಿದ್ದೆ. ಆಟದಿಂದ ನಾನು ಡೈವರ್ಟ್​ ಆಗಿಲ್ಲ. ಸ್ನೇಹಿತರಾಗಿ ಇರುವುದು ಸಹಜ. ಆದರೆ ಅವರ ಆಟ ಕುಗ್ಗಿದಾಗ ನಾನು ನಾಮಿನೇಟ್​ ಮಾಡೋದು ಕೂಡ ಸಹಜ’ ಎಂದು ಕಾರ್ತಿಕ್​ ಮಹೇಶ್​ ಹೇಳಿದ್ದಾರೆ.

ಕಾರ್ತಿಕ್​ ಮೇಲೆ ಸಂಗೀತಾ, ನಮ್ರತಾ ಮಾತಿನ ದಾಳಿ; ಜೊತೆ ಇದ್ರೂ ಕಷ್ಟ, ಒಬ್ಬರೇ ಇದ್ರೂ ಕಷ್ಟ
ಸಂಗೀತಾ ಶೃಂಗೇರಿ, ನಮ್ರತಾ ಗೌಡ, ಕಾರ್ತಿಕ್​ ಮಹೇಶ್​

Updated on: Jan 21, 2024 | 8:36 AM

ನಟ ಕಾರ್ತಿಕ್​ ಮಹೇಶ್​ ಅವರು ಬಿಗ್​ ಬಾಸ್ (Bigg Boss Kannada) ಮನೆಯಲ್ಲಿ ಸ್ಟ್ರಾಂಗ್​ ಸ್ಪರ್ಧಿ ಆಗಿ ಗುರುತಿಸಿಕೊಂಡಿದ್ದಾರೆ. ಕೊನೆಯ ಹಂತದ ತನಕ ಅವರು ಸಾಗಿ ಬಂದಿದ್ದಾರೆ. ಫಿನಾಲೆ ಹತ್ತಿರ ಇರುವಾಗ ಅವರು ಕುಗ್ಗಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ವಾರದ ಪಂಚಾಯ್ತಿಯಲ್ಲಿ ಸುದೀಪ್​ ಅವರು ಈ ಪ್ರಶ್ನೆ ಕೇಳಿದ್ದಾರೆ. ಹೌದು ಎಂದು ಸಂಗೀತಾ ಶೃಂಗೇರಿ (Sangeetha Sringeri) ಮತ್ತು ನಮ್ರತಾ ಗೌಡ ಹೇಳಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ಆದರೆ ಅದನ್ನು ಕಾರ್ತಿಕ್​ ಮಹೇಶ್​ (Karthik Mahesh) ಅವರು ಒಪ್ಪಿಕೊಂಡಿಲ್ಲ. ಆರಂಭದಿಂದ ಈವರೆಗೆ ಕಾರ್ತಿಕ್​ ಅವರಲ್ಲಿ ಆದ ಬದಲಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ನಮ್ರತಾ ಮತ್ತು ಸಂಗೀತಾ ಅವರು ಮಾತಿನ ದಾಳಿ ಮಾಡಿದ್ದಾರೆ.

ಆರಂಭದಲ್ಲಿ ಸಂಗೀತಾ ಶೃಂಗೇರಿ ಜೊತೆ ಕಾರ್ತಿಕ್​ ಮಹೇಶ್​ ಅವರು ಆಪ್ತವಾಗಿದ್ದರು. ಅನೇಕ ಟಾಸ್ಕ್​ಗಳಲ್ಲಿ ಸಂಗೀತಾಗೆ ಅವರು ಸಪೋರ್ಟ್​ ಮಾಡಿದ್ದರು. ಅದೇ ರೀತಿ ಸಂಗೀತಾ ಕೂಡ ಕಾರ್ತಿಕ್​ಗೆ ಬೆಂಬಲ ನೀಡಿದ್ದರು. ಬಳಿಕ ಅವರ ನಡುವೆ ವೈಮನಸ್ಸು ಉಂಟಾಯಿತು. ಆಗ ಅವರು ನಮ್ರತಾ ಗೌಡ ಜೊತೆ ಸ್ನೇಹ ಬೆಳೆಸಿದರು. ಈಗ ಆ ಸ್ನೇಹ ಕೂಡ ಅಂತ್ಯವಾಗಿದೆ. ಈ ವಿಚಾರದಲ್ಲಿ ಕಾರ್ತಿಕ್​ ಅವರನ್ನು ಸಂಗೀತಾ ಮತ್ತು ನಮ್ರತಾ ಟೀಕಿಸಿದ್ದಾರೆ.

ಇದನ್ನೂ ಓದಿ: ‘ನನ್ನ ಗೆಳೆತನವನ್ನು ಬಳಸಿಕೊಂಡ್ರಿ’; ಕಾರ್ತಿಕ್ ಹಾಗೂ ನಮ್ರತಾ ಮಧ್ಯೆ ಮೂಡಿತು ಮತ್ತಷ್ಟು ಅಂತರ

ಬಿಗ್​ ಬಾಸ್​ ಮನೆಯಲ್ಲಿ ಒಬ್ಬರ ಜೊತೆ ಸ್ನೇಹ ಮೂಡುವುದು, ಬಳಿಕ ಆ ಸ್ನೇಹ ಅಂತ್ಯವಾಗುವುದು ಸಹಜ. ಒಬ್ಬರ ಜೊತೆ ಫ್ರೆಂಡ್​ಶಿಪ್​ ಮುಗಿದ ಬಳಿಕ ಇನ್ನೊಬ್ಬರ ಜೊತೆ ಆಪ್ತತೆ ಹೆಚ್ಚುವುದು ಕೂಡ ಅಷ್ಟೇ ಸಹಜ. ಕಾರ್ತಿಕ್ ಮಹೇಶ್​ ಕೂಡ ಅದನ್ನೇ ಮಾಡಿದ್ದಾರೆ. ಹಾಗಿದ್ದರೂ ಕೂಡ ಅವರ ವರ್ತನೆಯನ್ನು ಸಂಗೀತಾ, ನಮ್ರತಾ ಟೀಕಿಸಿದ್ದಾರೆ. ‘ಕಾರ್ತಿಕ್​ಗೆ ಒಂಟಿಯಾಗಿ ಇರಲು ಸಾಧ್ಯವಿಲ್ಲ’ ಎಂದು ಅವರಿಬ್ಬರು ಹೇಳಿದ್ದಾರೆ. ಒಂದು ವೇಳೆ ಒಂಟಿಯಾಗಿದ್ದರೆ ‘ಯಾರ ಜೊತೆಯೂ ಸೇರುವುದಿಲ್ಲ’ ಎಂಬ ಕಾರಣ ನೀಡಿ ನಾಮಿನೇಟ್​ ಮಾಡುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ‘ಜೊತೆಗೆ ಇದ್ದರೂ ಕಷ್ಟ, ಒಬ್ಬರೇ ಇದ್ದರೂ ಕಷ್ಟ’ ಎಂಬ ಪರಿಸ್ಥಿತಿ ಕಾರ್ತಿಕ್​ ಮಹೇಶ್​ ಅವರದ್ದಾಗಿದೆ.

ತಮ್ಮ ನಿಲುವು ಏನು ಎಂಬುದನ್ನು ಕಾರ್ತಿಕ್​ ಮಹೇಶ್​ ತಿಳಿಸಿದ್ದಾರೆ. ‘ನಾನು ಕುಗ್ಗಿದ್ದು ನಿಜ. ಆದರೆ ದೈಹಿಕವಾಗಿ ಅಲ್ಲ. ಮಾನಸಿಕವಾಗಿ ಲೋ ಆಗಿದ್ದೆ. ಆಟದಿಂದ ನಾನು ಡೈವರ್ಟ್​ ಆಗಿಲ್ಲ. ಸ್ನೇಹಿತರಾಗಿರುವುದು ಸಹಜ. ಆದರೆ ಅವರ ಆಟ ಕುಗ್ಗಿದಾಗ ನಾನು ನಾಮಿನೇಟ್​ ಮಾಡೋದು ಸಹಜ’ ಎಂದು ಕಾರ್ತಿಕ್​ ಮಹೇಶ್​ ಹೇಳಿದ್ದಾರೆ. ಸಂಗೀತಾ, ನಮ್ರತಾ, ತನಿಷಾ ಜೊತೆಗಿನ ಸ್ನೇಹ ಅಂತ್ಯವಾದ ಬಳಿಕ ಕಾರ್ತಿಕ್​ ಮಹೇಶ್​ ಅವರು ತುಕಾಲಿ ಸಂತೋಷ್​ ಹಾಗೂ ವರ್ತೂರು ಸಂತೋಷ್​ ಜೊತೆ ಹೆಚ್ಚು ಕಾಲ ಕಳೆಯಲು ಆರಂಭಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:58 am, Sun, 21 January 24

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us