AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಜುಗೆ ಬಗ್ಗದ ಶೋಭಾ ಶೆಟ್ಟಿ ಹನುಮಂತನ ಒಂದೇ ಮಾತಿಗೆ ಸೈಲೆಂಟ್

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಹನುಮಂತ, ತಮ್ಮ ಪ್ರಭಾವಶಾಲಿ ಮಾತಿನ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಶೋಭಾ ಮತ್ತು ಮಂಜು ನಡುವೆ ಜಗಳ ಆಯಿತು. ಆದರೆ, ಹನುಮಂತ ಅವರು ಅಭಿಪ್ರಾಯ ತಿಳಿಸಿದಾಗ ಶೋಭಾ ಸುಮ್ಮನಾದರು.

ಮಂಜುಗೆ ಬಗ್ಗದ ಶೋಭಾ ಶೆಟ್ಟಿ ಹನುಮಂತನ ಒಂದೇ ಮಾತಿಗೆ ಸೈಲೆಂಟ್
ಶೋಭಾ ಶೆಟ್ಟಿ
Follow us
ರಾಜೇಶ್ ದುಗ್ಗುಮನೆ
|

Updated on: Nov 20, 2024 | 11:50 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹನುಮಂತನ ಆಟಕ್ಕೆ ಮರುಳಾಗದವರೇ ಇಲ್ಲ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಯಾರನ್ನಾದರೂ ಮಾತಿನಲ್ಲಿ ಸೋಲಿಸಬಲ್ಲ ಶಕ್ತಿ ಅವರಿಗೆ ಇದೆ. ಅವರು ಇಡುವ ಪಾಯಿಂಟ್ ಎಲ್ಲರಿಗೂ ಇಷ್ಟ ಆಗುತ್ತಿದೆ. ಮಂಜು ಜೊತೆ ಜೋರು ಜಗಳವಾಡಿದ ಶೋಭಾ, ಹನುಮಂತನ ಮಾತಿಗೆ ಸೈಲೆಂಟ್ ಆಗಿದ್ದಾರೆ. ಈ ವಿಚಾರವನ್ನು ಧನರಾಜ್ ಅವರು ಓಪನ್ ಆಗಿ ಮಾತನಾಡಿದ್ದಾರೆ.

ಇತ್ತೀಚೆಗೆ ರಜತ್ ಹಾಗೂ ಶೋಭಾ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದರು. ಸರಿಯಾಗಿ 50ನೇ ದಿನಕ್ಕೆ ಇವರನ್ನು ಕರೆದು ತರಲಾಗಿದೆ. ಶೋಭಾ ಶೆಟ್ಟಿ ಹಾಗೂ ರಜತ್ ಮಧ್ಯೆ ಯಾರು ನಾಯಕತ್ವದ ರೇಸ್​ನಲ್ಲಿ ಇರಬೇಕು ಎಂದು ಮನೆಯವರು ಆಯ್ಕೆ ಮಾಡಬೇಕಿತ್ತು. ಈ ಆಯ್ಕೆ ಮಾಡುವಾಗ ಮಂಜು ಅವರು ಶೋಭಾಗೆ ತಂಡದ ನಾಯಕತ್ವ ಪಡೆಯುವ ಅರ್ಹತೆ ಇಲ್ಲ ಎಂದರು. ಇದು ಶೋಭಾ ಅವರ ಸಿಟ್ಟಿಗೆ ಕಾರಣ ಆಯಿತು. ಅವರು ಮಂಜು ವಿರುದ್ಧ ತಿರುಗಿಬಿದ್ದರು.

ಮಂಜು ಹಾಗೂ ಶೋಭಾ ಮಧ್ಯೆ ದೊಡ್ಡ ಜಗಳವೇ ನಡೆದು ಹೋಗಿದೆ. ನಂತರ ಎಲ್ಲಾ ಸ್ಪರ್ಧಿಗಳು ಕಾರಣಗಳನ್ನು ನೀಡುತ್ತಾ ಹೋದರು. ಹನುಮಂತ ಕೂಡ ಶೋಭಾ ಅವರು ತಂಡದ ನಾಯಕತ್ವ ವಹಿಸಿಕೊಳ್ಳಲು ಅನರ್ಹರು ಎಂದರು. ‘ರಜತ್ ಅವರು ತಲೆ ಓಡಿಸುತ್ತಾರೆ. ಅವರು ಆಟದಲ್ಲಿ ಚೆನ್ನಾಗಿ ಇದ್ದಾರೆ. ನೀವು ಆಡ್ತೀರಾ ಎಂಬುದು ಗೊತ್ತಾಗಿಲ್ಲ’ ಎಂದರು ಹನುಮಂತ. ಇದಕ್ಕೆ ಶೋಭಾ ಯಾವುದೇ ತಕರಾರು ತೆಗೆದಿಲ್ಲ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಶೋಭಾ ಶೆಟ್ಟಿ ಬಾಯ್​ಫ್ರೆಂಡ್ ವಿಚಾರ ರಿವೀಲ್ ಮಾಡಿದ ಶಿಶಿರ್

ಆ ಬಳಿಕ ಮಾತನಾಡಿದ ಧನರಾಜ್ ಅವರು, ‘ಶೋಭಾ ಅವರ ಬಾಯಿಯನ್ನೇ ಮುಚ್ಚಿಸಿದರಲ್ಲ. ಮಂಜು ಬಂದಾಗ ಬಾಯಿ ಮುಚ್ಚಿಲ್ಲ, ಗೌತಮಿ ಬಂದಾಗ ಸುಮ್ಮನೆ ಇರಲಿಲ್ಲ. ಆದರೆ, ನೀವು ಬಂದಾಗ ಮಾತ್ರ ಸೈಲೆಂಟ್ ಆದ್ರಲ್ಲ’ ಎಂದರು. ‘ಅವರ ಮಾತಿಗೆ ಇಡೀ ಮನೆ ಸೈಲೆಂಟ್ ಆಗಿದೆ’ ಎಂದು ಹನುಮಂತ ಅಭಿಪ್ರಾಯಪಟ್ಟರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕರಾವಳಿ ಪ್ರಾಂತ್ಯದ ಅಲ್ಪಸಂಖ್ಯಾತರು ಆತಂಕದಲ್ಲಿದ್ದಾರೆ: ಡಿಕೆ ಶಿವಕುಮಾರ್
ಕರಾವಳಿ ಪ್ರಾಂತ್ಯದ ಅಲ್ಪಸಂಖ್ಯಾತರು ಆತಂಕದಲ್ಲಿದ್ದಾರೆ: ಡಿಕೆ ಶಿವಕುಮಾರ್
ಮಂಗಳೂರು: ಭಾರಿ ಮಳೆಗೆ ದ್ವೀಪದಂತಾದ ಜಪ್ಪಿನಮೊಗರು
ಮಂಗಳೂರು: ಭಾರಿ ಮಳೆಗೆ ದ್ವೀಪದಂತಾದ ಜಪ್ಪಿನಮೊಗರು
ಕೋಮು ಗಲಭೆಗಳ ವಿಷಯದಲ್ಲಿ ಜಾಗರೂಕರಾಗಿರಲು ಅಧಿಕಾರಿಗಳಿಗೆ ಸಿಎಂ ಸೂಚನೆ
ಕೋಮು ಗಲಭೆಗಳ ವಿಷಯದಲ್ಲಿ ಜಾಗರೂಕರಾಗಿರಲು ಅಧಿಕಾರಿಗಳಿಗೆ ಸಿಎಂ ಸೂಚನೆ
Video: ಪ್ರಾಣ ಹೋದರೂ ಕೊಟ್ಟ ಮಾತು ತಪ್ಪೆನು: ಮೋದಿ
Video: ಪ್ರಾಣ ಹೋದರೂ ಕೊಟ್ಟ ಮಾತು ತಪ್ಪೆನು: ಮೋದಿ
ಶಾಂತಿ ಕದಡುವ ಯಾವುದೇ ಪ್ರಯತ್ನವನ್ನು ಸರ್ಕಾರ ಇನ್ನು ಸಹಿಸಲ್ಲ: ಪರಮೇಶ್ವರ್
ಶಾಂತಿ ಕದಡುವ ಯಾವುದೇ ಪ್ರಯತ್ನವನ್ನು ಸರ್ಕಾರ ಇನ್ನು ಸಹಿಸಲ್ಲ: ಪರಮೇಶ್ವರ್
ಸಲೂನ್​ಗೆ ನುಗ್ಗಿ ದಾಂದಲೆ: ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಿಷ್ಟು
ಸಲೂನ್​ಗೆ ನುಗ್ಗಿ ದಾಂದಲೆ: ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಿಷ್ಟು
‘ನೀವು ಅರ್ಜುನ್ ಜನ್ಯ ಡ್ರೀಮ್ ಲೇಡಿ’; ಅನುಶ್ರೀ ಬಗ್ಗೆ ವಿಜಯ್ ಪ್ರಕಾಶ್ ಮಾತು
‘ನೀವು ಅರ್ಜುನ್ ಜನ್ಯ ಡ್ರೀಮ್ ಲೇಡಿ’; ಅನುಶ್ರೀ ಬಗ್ಗೆ ವಿಜಯ್ ಪ್ರಕಾಶ್ ಮಾತು
ಸಿಕ್ಕಿಂ: ತೀಸ್ತಾ ನದಿಗೆ ಉರುಳಿದ ಬಸ್, ಇಬ್ಬರ ರಕ್ಷಣೆ, 9 ಮಂದಿ ನಾಪತ್ತೆ
ಸಿಕ್ಕಿಂ: ತೀಸ್ತಾ ನದಿಗೆ ಉರುಳಿದ ಬಸ್, ಇಬ್ಬರ ರಕ್ಷಣೆ, 9 ಮಂದಿ ನಾಪತ್ತೆ
ಅಹ್ಮದಾಬಾದ್​​ನಲ್ಲಿ ಕನಡಿಗರ ಬಹುದಿನಗಳ ಆಸೆ ಈಡೇರಿಸುತ್ತಾ ಆರ್​ಸಿಬಿ? 
ಅಹ್ಮದಾಬಾದ್​​ನಲ್ಲಿ ಕನಡಿಗರ ಬಹುದಿನಗಳ ಆಸೆ ಈಡೇರಿಸುತ್ತಾ ಆರ್​ಸಿಬಿ? 
ಅನಾರೋಗ್ಯದಲ್ಲಿ ಕೈ ಹಿಡಿದ RCBಗೆ ಕಪ್ ಗೆಲ್ಲಿಸಿ ಕೊಡುವುದೇ ಗುರಿ..!
ಅನಾರೋಗ್ಯದಲ್ಲಿ ಕೈ ಹಿಡಿದ RCBಗೆ ಕಪ್ ಗೆಲ್ಲಿಸಿ ಕೊಡುವುದೇ ಗುರಿ..!