AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಜುಗೆ ಬಗ್ಗದ ಶೋಭಾ ಶೆಟ್ಟಿ ಹನುಮಂತನ ಒಂದೇ ಮಾತಿಗೆ ಸೈಲೆಂಟ್

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಹನುಮಂತ, ತಮ್ಮ ಪ್ರಭಾವಶಾಲಿ ಮಾತಿನ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಶೋಭಾ ಮತ್ತು ಮಂಜು ನಡುವೆ ಜಗಳ ಆಯಿತು. ಆದರೆ, ಹನುಮಂತ ಅವರು ಅಭಿಪ್ರಾಯ ತಿಳಿಸಿದಾಗ ಶೋಭಾ ಸುಮ್ಮನಾದರು.

ಮಂಜುಗೆ ಬಗ್ಗದ ಶೋಭಾ ಶೆಟ್ಟಿ ಹನುಮಂತನ ಒಂದೇ ಮಾತಿಗೆ ಸೈಲೆಂಟ್
ಶೋಭಾ ಶೆಟ್ಟಿ
ರಾಜೇಶ್ ದುಗ್ಗುಮನೆ
|

Updated on: Nov 20, 2024 | 11:50 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹನುಮಂತನ ಆಟಕ್ಕೆ ಮರುಳಾಗದವರೇ ಇಲ್ಲ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಯಾರನ್ನಾದರೂ ಮಾತಿನಲ್ಲಿ ಸೋಲಿಸಬಲ್ಲ ಶಕ್ತಿ ಅವರಿಗೆ ಇದೆ. ಅವರು ಇಡುವ ಪಾಯಿಂಟ್ ಎಲ್ಲರಿಗೂ ಇಷ್ಟ ಆಗುತ್ತಿದೆ. ಮಂಜು ಜೊತೆ ಜೋರು ಜಗಳವಾಡಿದ ಶೋಭಾ, ಹನುಮಂತನ ಮಾತಿಗೆ ಸೈಲೆಂಟ್ ಆಗಿದ್ದಾರೆ. ಈ ವಿಚಾರವನ್ನು ಧನರಾಜ್ ಅವರು ಓಪನ್ ಆಗಿ ಮಾತನಾಡಿದ್ದಾರೆ.

ಇತ್ತೀಚೆಗೆ ರಜತ್ ಹಾಗೂ ಶೋಭಾ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದರು. ಸರಿಯಾಗಿ 50ನೇ ದಿನಕ್ಕೆ ಇವರನ್ನು ಕರೆದು ತರಲಾಗಿದೆ. ಶೋಭಾ ಶೆಟ್ಟಿ ಹಾಗೂ ರಜತ್ ಮಧ್ಯೆ ಯಾರು ನಾಯಕತ್ವದ ರೇಸ್​ನಲ್ಲಿ ಇರಬೇಕು ಎಂದು ಮನೆಯವರು ಆಯ್ಕೆ ಮಾಡಬೇಕಿತ್ತು. ಈ ಆಯ್ಕೆ ಮಾಡುವಾಗ ಮಂಜು ಅವರು ಶೋಭಾಗೆ ತಂಡದ ನಾಯಕತ್ವ ಪಡೆಯುವ ಅರ್ಹತೆ ಇಲ್ಲ ಎಂದರು. ಇದು ಶೋಭಾ ಅವರ ಸಿಟ್ಟಿಗೆ ಕಾರಣ ಆಯಿತು. ಅವರು ಮಂಜು ವಿರುದ್ಧ ತಿರುಗಿಬಿದ್ದರು.

ಮಂಜು ಹಾಗೂ ಶೋಭಾ ಮಧ್ಯೆ ದೊಡ್ಡ ಜಗಳವೇ ನಡೆದು ಹೋಗಿದೆ. ನಂತರ ಎಲ್ಲಾ ಸ್ಪರ್ಧಿಗಳು ಕಾರಣಗಳನ್ನು ನೀಡುತ್ತಾ ಹೋದರು. ಹನುಮಂತ ಕೂಡ ಶೋಭಾ ಅವರು ತಂಡದ ನಾಯಕತ್ವ ವಹಿಸಿಕೊಳ್ಳಲು ಅನರ್ಹರು ಎಂದರು. ‘ರಜತ್ ಅವರು ತಲೆ ಓಡಿಸುತ್ತಾರೆ. ಅವರು ಆಟದಲ್ಲಿ ಚೆನ್ನಾಗಿ ಇದ್ದಾರೆ. ನೀವು ಆಡ್ತೀರಾ ಎಂಬುದು ಗೊತ್ತಾಗಿಲ್ಲ’ ಎಂದರು ಹನುಮಂತ. ಇದಕ್ಕೆ ಶೋಭಾ ಯಾವುದೇ ತಕರಾರು ತೆಗೆದಿಲ್ಲ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಶೋಭಾ ಶೆಟ್ಟಿ ಬಾಯ್​ಫ್ರೆಂಡ್ ವಿಚಾರ ರಿವೀಲ್ ಮಾಡಿದ ಶಿಶಿರ್

ಆ ಬಳಿಕ ಮಾತನಾಡಿದ ಧನರಾಜ್ ಅವರು, ‘ಶೋಭಾ ಅವರ ಬಾಯಿಯನ್ನೇ ಮುಚ್ಚಿಸಿದರಲ್ಲ. ಮಂಜು ಬಂದಾಗ ಬಾಯಿ ಮುಚ್ಚಿಲ್ಲ, ಗೌತಮಿ ಬಂದಾಗ ಸುಮ್ಮನೆ ಇರಲಿಲ್ಲ. ಆದರೆ, ನೀವು ಬಂದಾಗ ಮಾತ್ರ ಸೈಲೆಂಟ್ ಆದ್ರಲ್ಲ’ ಎಂದರು. ‘ಅವರ ಮಾತಿಗೆ ಇಡೀ ಮನೆ ಸೈಲೆಂಟ್ ಆಗಿದೆ’ ಎಂದು ಹನುಮಂತ ಅಭಿಪ್ರಾಯಪಟ್ಟರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ