AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಜು, ಗೌತಮಿ ಜೊತೆ ಜಗಳ ಮಾಡಿ ನಂತರ ರಾಜಿ ಮಾಡಿಕೊಂಡ ಶೋಭಾ ಶೆಟ್ಟಿ

ತಂಡದ ಕ್ಯಾಪ್ಟನ್ ಆಗೋಕೆ ಶೋಭಾ ಅವರು ಅನರ್ಹರು ಎಂದು ಗೌತಮಿ ಹಾಗೂ ಮಂಜು ಹೇಳಿದ್ದರು. ಆ ಬಳಿಕ ಶೋಭಾ ಹಾಗೂ ಮಂಜು ಮಧ್ಯೆ ಮಾತಿನ ಚಕಮಕಿ ನಡೆಯಿತು. ಆದರೆ, ಟಾಸ್ಕ್ ವಿಚಾರ ಬಂದಾಗ ಶೋಭಾ ಅವರು ಮಂಜು ಹಾಗೂ ಗೌತಮಿ ಬಳಿ ಬಂದು ರಾಜಿ ಮಾಡಿಕೊಂಡಿದ್ದಾರೆ ಮತ್ತು ತಮ್ಮದೇ ತಂಡಕ್ಕೆ ಸೇರಿಸಿಕೊಂಡಿದ್ದಾರೆ.

ಮಂಜು, ಗೌತಮಿ ಜೊತೆ ಜಗಳ ಮಾಡಿ ನಂತರ ರಾಜಿ ಮಾಡಿಕೊಂಡ ಶೋಭಾ ಶೆಟ್ಟಿ
ಮಂಜು-ಶೋಭಾ
ರಾಜೇಶ್ ದುಗ್ಗುಮನೆ
|

Updated on: Nov 21, 2024 | 6:58 AM

Share

ಬಿಗ್ ಬಾಸ್ ಮನೆಯಲ್ಲಿ ಯಾರು ಯಾರ ಜೊತೆ ಜಗಳ ಆಡುತ್ತಾರೆ, ಯಾವಾಗ ರಾಜಿ ಮಾಡಿಕೊಳ್ಳುತ್ತಾರೆ ಎಂದು ಊಹಿಸುವುದು ಕಷ್ಟ. ಮೊದಲು ಜಗಳ ಮಾಡಿಕೊಂಡವರು ನಂತರ ಒಂದಾದ ಉದಾಹರಣೆ ಇದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲೂ ಅದೇ ಆಗುತ್ತಿದೆ. ಶೋಭಾ ಶೆಟ್ಟಿ ಅವರು ಆರಂಭದಲ್ಲಿ ಮಂಜು ಹಾಗೂ ಗೌತಮಿ ಜೊತೆ ಜಗಳ ಮಾಡಿಕೊಂಡರು. ನಂತರ ಎಲ್ಲರೂ ಟಾಸ್ಕ್​ಗಾಗಿ ರಾಜಿ ಮಾಡಿಕೊಂಡರು.

ತಂಡದ ಕ್ಯಾಪ್ಟನ್ ಆಗೋಕೆ ಶೋಭಾ ಅವರು ಅನರ್ಹರು ಎಂದು ಗೌತಮಿ ಹಾಗೂ ಮಂಜು ಹೇಳಿದ್ದರು. ಆ ಬಳಿಕ ಶೋಭಾ ಹಾಗೂ ಮಂಜು ಮಧ್ಯೆ ಮಾತಿನ ಚಕಮಕಿ ನಡೆಯಿತು. ಆದರೆ, ಟಾಸ್ಕ್ ವಿಚಾರ ಬಂದಾಗ ಶೋಭಾ ಅವರು ಮಂಜು ಹಾಗೂ ಗೌತಮಿ ಬಳಿ ಬಂದು ರಾಜಿ ಮಾಡಿಕೊಂಡಿದ್ದಾರೆ ಮತ್ತು ತಮ್ಮದೇ ತಂಡಕ್ಕೆ ಸೇರಿಸಿಕೊಂಡಿದ್ದಾರೆ.

ಈ ವಾರ ಬಿಗ್ ಬಾಸ್ ಮನೆಯಲ್ಲಿ ಹಣ ಓಡಾಡಲಿದೆ. ತಂಡದ ನಾಯಕನಿಗೆ 11 ಸಾವಿರ ರೂಪಾಯಿನ ಬಿಗ್ ಬಾಸ್ ಕಡೆಯಿಂದ ಕೊಡಲಾಗುತ್ತದೆ. ಅವರು ಇದರಲ್ಲಿ ಆರು ಆಟಗಾರರನ್ನು ಖರೀದಿ ಮಾಡಬೇಕು. ಯಾರಿಗೆ ಎಷ್ಟು ಹಣ ಎಂಬುದನ್ನು ನಾಯಕನೇ ನಿರ್ಧರಿಸಬೇಕು. ಅಷ್ಟಕ್ಕೆ ಮಾರಾಟ ಆಗಲು ಸ್ಪರ್ಧಿಗಳು ಒಪ್ಪಿದರೆ ಡೀಲ್ ಕುದುರಿದಂತೆ.

ಮಂಜು ಅವರು ಬಿಗ್ ಬಾಸ್ ಮನೆಯಲ್ಲಿ ಉತ್ತಮವಾಗಿ ಆಟ ಆಡುತ್ತಾರೆ. ಸಂಚು ರೂಪಿಸಲು ಅವರು ದಿ ಬೆಸ್ಟ್. ಈ ಕಾರಣದಿಂದಲೇ ಶೋಭಾ ಅವರು ಮಂಜು ಹಿಂದೆ ಬಿದ್ದಿದ್ದಾರೆ. ‘ಮಂಜು ಅವರೇ ಟಾಸ್ಕ್ ವಿಚಾರ ಬೇರೆಯದೇ ಲೆಕ್ಕ. ಉಳಿದ ವಿಚಾರಗಳನ್ನು ಪಕ್ಕಕ್ಕೆ ಇಡಲೇಬೇಕು. ಹೀಗಾಗಿ, ನೀವು ನನ್ನ ತಂಡಕ್ಕೆ ಬನ್ನಿ’ ಎಂದು ಕೋರಿದರು ಶೋಭಾ.

ಇದನ್ನೂ ಓದಿ: ಮೊದಲ ಆಟದಲ್ಲೇ ಭವ್ಯಾ ಎದುರು ಸೋತು ಅಳುತ್ತಾ ಕುಳಿತ ಶೋಭಾ ಶೆಟ್ಟಿ

ಕೊನೆಗೂ ಮಂಜು ಹಾಗೂ ಗೌತಮಿ ಅವರು ಶೋಭಾ ತಂಡಕ್ಕೆ ಸೇರಿದರು. ಈ ಮೂಲಕ ಹಳೆಯದನ್ನು ಮರೆತು ಇವರು ಒಂದಾಗಿದ್ದಾರೆ. ಮೊದಲ ಆಟದಲ್ಲಿ ಶೋಭಾ ಶೆಟ್ಟಿ ತಂಡ ಭವ್ಯಾ ಗೌಡ ಟೀಂ ಎದುರು ಸೋತು ಹೋಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್