ಶಿವರಾಜ್ಕುಮಾರ್ ಹಾಗೂ ಸುಧಾರಾಣಿ ಕನ್ನಡ ಚಿತ್ರರಂಗದ ಸೂಪರ್ ಹಿಟ್ ಜೋಡಿಗಳಲ್ಲಿ ಒಂದು. ಮತ್ತೊಂದು ವಿಶೇಷ ಎಂದರೆ ಸುಧಾರಾಣಿ ಅವರು ರಾಜ್ಕುಮಾರ್ ಕುಟುಂಬದ ಜೊತೆ ವಿಶೇಷ ಬಾಂಧವ್ಯ ಹೊಂದಿದ್ದಾರೆ. ರಾಜ್ಕುಮಾರ್ ಅವರಿಂದ ಹಿಡಿದು, ಯುವ ಅವರ ಜೊತೆ ಸುಧಾರಾಣಿ ತೆರೆ ಹಂಚಿಕೊಂಡು ಗಮನ ಸೆಳೆದಿದ್ದಾರೆ. ಈ ಮೂಲಕ ಅಪರೂಪದ ಸಾಧನೆ ಮಾಡಿದ್ದರು. ಶಿವರಾಜ್ಕುಮಾರ್ ಅವರು ಸಾವು ಗೆದ್ದು ಬಂದಿದ್ದು ಅವರಿಗೆ ಸುಧಾರಾಣೀ ಭವ್ಯ ಸ್ವಾಗತ ಕೋರಿದ್ದಾರೆ.
ಜೀ ಕನ್ನಡದಲ್ಲಿ ಹೊಸ ಪ್ರೋಮೋ ಒಂದನ್ನು ಹಂಚಿಕೊಳ್ಳಲಾಗಿದೆ. ಈ ಪ್ರೋಮೋದಲ್ಲಿ ಶಿವರಾಜ್ಕುಮಾರ್ ಅವರು ‘ಸರಿಗಮಪ’ ವೇದಿಕೆ ಮೇಲೆ ಬಂದಿರೋದು ಇದೆ. ಈ ಪ್ರೋಮೋಗೆ ‘ಅದೇ ಸ್ಪೂರ್ತಿ, ಅದೇ ಹುರುಪು, ಚೈತನ್ಯದ ಚಿಲುಮೆಯಾಗಿ ಬಂದ ಎನರ್ಜಿ ಮಾಸ್ಟರ್ ಶಿವಣ್ಣ ಅವರಿಗೆ ಅಭಿಮಾನದ ಸ್ವಾಗತ’ ಎಂದು ಕ್ಯಾಪ್ಶನ್ ಕೊಡಲಾಗಿದೆ. ಈ ಪ್ರೋಮೋ ಗಮನ ಸೆಳೆದಿದೆ.
ಶಿವರಾಜ್ಕುಮಾರ್ ಅವರಿಗೆ ಇತ್ತೀಚೆಗೆ ಮೂತ್ರಕೋಶದ ಕ್ಯಾನ್ಸರ್ ಉಂಟಾಗಿತ್ತು. ಈ ಕ್ಯಾನ್ಸರ್ನ ಗೆದ್ದು ಅವರು ಬಂದಿದ್ದಾರೆ. ಇದಕ್ಕಾಗಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ. ಅವರು ಅಮೆರಿಕಕ್ಕೆ ತೆರಳಿ ಆಪರೇಷನ್ ಮಾಡಿಸಿಕೊಂಡಿದ್ದು, ಈಗ ಕ್ಯಾನ್ಸರ್ ಮುಕ್ತರಾಗಿದ್ದಾರೆ. ಅವರು ಭಾರತಕ್ಕೆ ಬರುತ್ತಿದ್ದಂತೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅವರು ಜೀ ಕನ್ನಡದ ಸರಿಗಮಪ ವೇದಿಕೆ ಬಂದಿದ್ದಾರೆ.
ಸರಿಗಮಪ ವೇದಿಕೆಗೆ ಶಿವಣ್ಣ ಬರುತ್ತಿದ್ದಂತೆ ತಾರಾ, ಶ್ರುತಿ, ಅರ್ಜುನ್ ಜನ್ಯ ಖುಷಿಪಟ್ಟರು. ಎಲ್ಲರೂ ಬಂದು ಶಿವರಾಜ್ಕುಮಾರ್ ಅವರಿಗೆ ಹಗ್ ಕೊಟ್ಟರು. ಅದರಲ್ಲೂ ಸುಧಾರಾಣಿ ಅವರಿಗೆ ಭರ್ಜರಿ ಖುಷಿ ಆಯಿತು. ಅವರು ಬಂದು ಪ್ರೀತಿಯಿಂದ ಹಗ್ ಕೊಟ್ಟರು. ಶಿವರಾಜ್ಕುಮಾರ್ಗೆ ಪ್ರೀತಿಯಿಂದ ಮುತ್ತನ್ನು ಕೂಡ ಕೊಟ್ಟರು.
ಇದನ್ನೂ ಓದಿ: 29 ವರ್ಷಗಳ ಬಳಿಕ ಯಾಣಗೆ ಭೇಟಿ ನೀಡಿದ ಶಿವರಾಜ್ಕುಮಾರ್; ಇಲ್ಲಿವೆ ಫೋಟೋಸ್
ಶಿವರಾಜ್ಕುಮಾರ್ ಅವರ ಎನರ್ಜಿಗೆ ಅವರೇ ಸಾಟಿ. ಅವರು ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸಿದ್ದಾರೆ. ಈಗ ಕ್ಯಾನ್ಸರ್ ಬಂದ ಕಾರಣ ಅವರು ಬ್ರೇಕ್ ಪಡೆಯಬೇಕಾಯಿತು. ಈಗ ಅವರು ಕೆಲ ತಿಂಗಳು ಮನೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ. ಆ ಬಳಿಕ ಸಿನಿಮಾ ಕೆಲಸಗಳನ್ನು ಒಪ್ಪಿಕೊಂಡು ನಟಿಸಲಿದ್ದಾರೆ. ಶಿವರಾಜ್ಕುಮಾರ್ ಅವರಿಗೆ ಜೀ ಕನ್ನಡದ ಜೊತೆ ಒಳ್ಳೆಯ ಒಡನಾಟ ಇದೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋಗೆ ಅವರೇ ಜಡ್ಜ್ ಆಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:12 am, Mon, 3 February 25