ಫಿನಾಲೆ ವಾರ ತಲುಪಿದ ವರ್ತೂರು ಸಂತೋಷ್​; ಟ್ರೋಫಿಗಾಗಿ ಸಂಗೀತಾ, ತುಕಾಲಿ ಜತೆ ಪೈಪೋಟಿ

ಅನೇಕ ಸವಾಲುಗಳನ್ನು ಎದುರಿಸಿ ವರ್ತೂರು ಸಂತೋಷ್​ ಅವರು ಫಿನಾಲೆ ವಾರಕ್ಕೆ ಬಂದಿದ್ದಾರೆ. ಈ ಶೋ ಆರಂಭ ಆದ ಕೆಲವೇ ದಿನಗಳಲ್ಲಿ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿತ್ತು. ಅದನ್ನು ನಿವಾರಿಸಿಕೊಂಡು ಅವರು ಆಟ ಮುಂದುವರಿಸಿದರು. ಸಂಗೀತಾ ಶೃಂಗೇರಿ ಮತ್ತು ತುಕಾಲಿ ಸಂತೋಷ್​ ಬಳಿಕ ಬಿಗ್​ ಬಾಸ್​ ಫಿನಾಲೆ ವಾರವನ್ನು ತಲುಪಿದ ಮೂರನೇ ಸ್ಪರ್ಧಿಯಾಗಿದ್ದಾರೆ ವರ್ತೂರು ಸಂತೋಷ್​.

ಫಿನಾಲೆ ವಾರ ತಲುಪಿದ ವರ್ತೂರು ಸಂತೋಷ್​; ಟ್ರೋಫಿಗಾಗಿ ಸಂಗೀತಾ, ತುಕಾಲಿ ಜತೆ ಪೈಪೋಟಿ
ತುಕಾಲಿ ಸಂತೋಷ್​, ಸಂಗೀತಾ ಶೃಂಗೇರಿ, ವರ್ತೂರು ಸಂತೋಷ್​

Updated on: Jan 21, 2024 | 11:18 AM

ಕಿಚ್ಚ ಸುದೀಪ್​ ಅವರು ಜನವರಿ 20ರ ಸಂಚಿಕೆಯಲ್ಲಿ ಕೊನೆಯ ಪಂಚಾಯ್ತಿ ನಡೆಸಿದ್ದಾರೆ. ಈ ಎಪಿಸೋಡ್​ನಲ್ಲಿ ವರ್ತೂರು ಸಂತೋಷ್​ (Varthur Santhosh) ಬಗ್ಗೆ ಭರ್ಜರಿ ನ್ಯೂಸ್​ ಹೊರಬಿದ್ದಿದೆ. ರೈತನಾಗಿ ಗುರುತಿಸಿಕೊಂಡಿರುವ ಅವರು ಈಗ ಬಿಗ್​ ಬಾಸ್​ ಫಿನಾಲೆ ವಾರ ತಲುಪಿದ್ದಾರೆ. ಆ ಮೂಲಕ ಅವರು ಸಂಗೀತಾ ಶೃಂಗೇರಿ (Sangeetha Sringeri) ಮತ್ತು ತುಕಾಲಿ ಸಂತೋಷ್​ ಜೊತೆ ಪೈಪೋಟಿ ನೀಡುತ್ತಿದ್ದಾರೆ. ವರ್ತೂರು ಸಂತೋಷ್​ ಅವರು ಫಿನಾಲೆ ವಾರಕ್ಕೆ ಎಂಟ್ರಿ ನೀಡಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಫಿನಾಲೆ ವಾರಕ್ಕೆ ಬರುವ ಇನ್ನಿಬ್ಬರು ಸ್ಪರ್ಧಿಗಳು ಯಾರು ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ. ಜನವರಿ 27 ಮತ್ತು 28ರಂದು ‘ಬಿಗ್ ಬಾಸ್​ ಕನ್ನಡ ಸೀಸನ್​ 10’ ಫಿನಾಲೆ (Bigg Boss Finale) ನಡೆಯಲಿದೆ.

‘ಬಿಗ್​ ಬಾಸ್​ ಫಿನಾಲೆ ವಾರಕ್ಕೆ ತಲುಪುವ ಮೂರನೇ ಸ್ಪರ್ಧಿ ವರ್ತೂರು ಸಂತೋಷ್​’ ಎಂದು ಕಿಚ್ಚ ಸುದೀಪ್ ಅವರು ಘೋಷಿಸಿದಾಗ ಎಲ್ಲರಿಗೂ ಅಚ್ಚರಿ ಆಯಿತು. ಈ ವೇಳೆ ತುಕಾಲಿ ಸಂತೋಷ್​ ಅವರು ಹೆಚ್ಚು ಖುಷಿಪಟ್ಟರು. ಬಿಗ್​ ಬಾಸ್​ ಮನೆಯಲ್ಲಿ ತುಕಾಲಿ ಸಂತೋಷ್​ ಮತ್ತು ವರ್ತೂರು ಸಂತೋಷ್​ ನಡುವೆ ಉತ್ತಮ ಸ್ನೇಹ ಇದೆ. ಫಿನಾಲೆ ವೇದಿಕೆಯಲ್ಲಿ ಸುದೀಪ್​ ಹಿಡಿಯುವ ಆ ಎರಡು ಕೈಗಳು ತಮ್ಮಿಬ್ಬರದ್ದೇ ಆಗಿರಬೇಕು ಎಂದು ತುಕಾಲಿ ಆಸೆಪಟ್ಟಿದ್ದಾರೆ.

ಕಳೆದ ವಾರ ತುಕಾಲಿ ಸಂತೋಷ್​ ಅಥವಾ ವರ್ತೂರು ಸಂತೋಷ್​ ಅವರಲ್ಲಿ ಒಬ್ಬರು ಬಿಗ್​ ಬಾಸ್ ಮನೆಯಿಂದ ಔಟ್​ ಆಗಲಿದ್ದಾರೆ ಎಂದು ಸುದೀಪ್​ ತಿಳಿಸಿದ್ದರು. ಆಗ ಅವರಿಬ್ಬರು ಬಿಕ್ಕಿ ಬಿಕ್ಕಿ ಅತ್ತಿದ್ದರು. ಆದರೆ ಆ ವಾರ ಯಾರೂ ಎಲಿಮಿನೇಟ್​ ಆಗಲ್ಲ ಎಂದು ನಂತರ ತಿಳಿಸಲಾಯಿತು. ಬಳಿಕ ಅವರಿಬ್ಬರು ನಿಟ್ಟುಸಿರು ಬಿಟ್ಟಿದ್ದರು. ಈಗ ಫಿನಾಲೆ ವಾರವನ್ನು ತಲುಪುವ ಅವಕಾಶ ಅವರಿಗೆ ಸಿಕ್ಕಿದೆ.

ಇದನ್ನೂ ಓದಿ: ‘ನನ್ನಿಂದ ತನಿಷಾನ ದೂರ ಮಾಡಿದ ಪಾಪಿ ಇವನು’: ಕಾರ್ತಿಕ್​ ಕಡೆ ಕೈ ತೋರಿಸಿದ ವರ್ತೂರು

ಅನೇಕ ಸವಾಲುಗಳನ್ನು ಎದುರಿಸಿ ವರ್ತೂರು ಸಂತೋಷ್​ ಅವರು ಫಿನಾಲೆ ವಾರಕ್ಕೆ ಬಂದಿದ್ದಾರೆ. ಬಿಗ್ ಬಾಸ್​ ಶೋ ಆರಂಭ ಆದ ಕೆಲವೇ ದಿನಗಳಲ್ಲಿ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿತ್ತು. ಹುಲಿ ಉಗುರು ಧರಿಸಿದ್ದ ಆರೋಪದಲ್ಲಿ ಅವರನ್ನು ಅರೆಸ್ಟ್​ ಮಾಡಿ, ಪರಪ್ಪನ ಅಗ್ರಹಾರಕ್ಕೆ ಕಳಿಸಲಾಗಿತ್ತು. ನಂತರ ಜಾಮೀನು ಪಡೆದು ಅವರು ವಾಪಸ್​ ಬಂದರು. ಮರಳಿ ಬಿಗ್​ ಬಾಸ್​ ಮನೆಗೆ ಬಂದರೂ ಕೂಡ ಅವರಿಗೆ ಅದೇ ಚಿಂತೆ ಕಾಡುತ್ತಿತ್ತು. ತಾವಾಗಿಯೇ ಆಟವನ್ನು ಅಂತ್ಯ ಮಾಡುವುದಾಗಿ ಅವರು ಕಣ್ಣೀರು ಹಾಕಿದ್ದರು. ಆದರೆ ಅದಕ್ಕೆ ಸುದೀಪ್​ ಅವರ ಅವಕಾಶ ನೀಡಿರಲಿಲ್ಲ. ತಾಯಿ ಬಂದು ಸಮಾಧಾನ ಮಾಡಿದ ಬಳಿಕ ವರ್ತೂರು ಸಂತೋಷ್​ ಅವರು ಬಿಗ್​ ಬಾಸ್​ ಮನೆಯಲ್ಲಿ ಮುಂದುವರಿಯಲು ನಿರ್ಧರಿಸಿದರು. ಈಗ ಫಿನಾಲೆ ವಾರಕ್ಕೆ ಎಂಟ್ರಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:52 am, Sun, 21 January 24

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us