ಚಪ್ಪಲಿ ಎಸೆತ ಪ್ರಕರಣ: ‘ಕಾರ್ತಿಕ್ ತಪ್ಪಿಲ್ಲ’ ಎಂದ ಮೈಕಲ್; ವಿನಯ್ ಕೆಂಡಾಮಂಡಲ

ಕಾರ್ತಿಕ್ ಹಾಗೂ ವಿನಯ್ ಮಧ್ಯೆ ಕಿರಿಕ್ ಆಗಿದೆ. ಈ ವೇಳೆ ಕಾರ್ತಿಕ್ ಅವರು ಧರಿಸಿದ್ದ ಚಪ್ಪಲಿಯನ್ನು ನೆಲಕ್ಕೆ ಬೀಸೆ ಎಸೆದಿದ್ದಾರೆ. ದುರಾದೃಷ್ಟಕ್ಕೆ ಅದು ನಿಲಕ್ಕೆ ಬಡಿದು ವಿನಯ್​ಗೆ ತಾಗಿದೆ. ಇದರಿಂದ ವಿನಯ್ ಸಿಟ್ಟಾಗಿದ್ದಾರೆ.

ಚಪ್ಪಲಿ ಎಸೆತ ಪ್ರಕರಣ: ‘ಕಾರ್ತಿಕ್ ತಪ್ಪಿಲ್ಲ’ ಎಂದ ಮೈಕಲ್; ವಿನಯ್ ಕೆಂಡಾಮಂಡಲ
ಸ್ನೇಹಿತ್-ಮೈಕಲ್

Updated on: Dec 08, 2023 | 8:14 AM

ಬಿಗ್ ಬಾಸ್ ಮನೆಯಲ್ಲಿ ವಿನಯ್ (Vinay Gowda) ಅವರು ಕೆಂಡಾಮಂಡಲ ಆಗಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಚಪ್ಪಲಿ ಎಸೆತ ಪ್ರಕರಣ. ಕಾರ್ತಿಕ್ ಕೋಪದಲ್ಲಿ ಎಸೆದಿದ್ದ ಚಪ್ಪಲಿ ವಿನಯ್​ಗೆ ತಾಗಿದೆ. ‘ನನಗೆ ಚಪ್ಪಲಿಯಲ್ಲಿ ಹೊಡೆದೆಯಾ’ ಎಂದು ವಿನಯ್ ಕೂಗಾಡಿದ್ದಾರೆ. ಆದರೆ, ಇದರಲ್ಲಿ ಕಾರ್ತಿಕ್ ಅವರ ತಪ್ಪಿಲ್ಲ ಎಂದು ವಿನಯ್​ಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಮೈಕಲ್ ಮಾಡಿದ್ದಾರೆ. ಇದರಿಂದ ವಿನಯ್ ಮತ್ತಷ್ಟು ಸಿಟ್ಟಾಗಿದ್ದಾರೆ.

ವಿನಯ್ ಹಾಗೂ ಕಾರ್ತಿಕ್ ಈ ಬಾರಿ ಒಂದೇ ತಂಡದಲ್ಲಿ ಇದ್ದಾರೆ. ಆದರೆ, ಮೈಕಲ್ ಉಳಿದವರಂತೆ ಅಲ್ಲ. ವಿನಯ್ ಟೀಂನಲ್ಲಿ ಇದ್ದ ಮಾತ್ರಕ್ಕೆ ಅವರು ಹೇಳಿದ್ದೆಲ್ಲ ಸರಿ ಎಂದು ಕುಣಿಯುವುದಿಲ್ಲ. ತಪ್ಪಿದ್ದರೆ ಅದನ್ನು ತಪ್ಪು ಎಂದೇ ಹೇಳುತ್ತಾರೆ. ಕಾರ್ತಿಕ್ ಎಸೆದ ಚಪ್ಪಲ್ಲಿ ಆಕಸ್ಮಿಕವಾಗಿ ತಾಗಿದೆ ಎಂಬುದನ್ನು ಮೈಕಲ್ ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ. ಇದು ವಿನಯ್​ಗೆ ಖುಷಿ ನೀಡಿಲ್ಲ.

ಕಾರ್ತಿಕ್ ಹಾಗೂ ವಿನಯ್ ಮಧ್ಯೆ ಕಿರಿಕ್ ಆಗಿದೆ. ಈ ವೇಳೆ ಕಾರ್ತಿಕ್ ಅವರು ಧರಿಸಿದ್ದ ಚಪ್ಪಲಿಯನ್ನು ನೆಲಕ್ಕೆ ಬೀಸಿ ಎಸೆದಿದ್ದಾರೆ. ದುರಾದೃಷ್ಟಕ್ಕೆ ಅದು ನಿಲಕ್ಕೆ ಬಡಿದು ವಿನಯ್​ಗೆ ತಾಗಿದೆ. ಇದರಿಂದ ವಿನಯ್ ಸಿಟ್ಟಾಗಿದ್ದಾರೆ. ಕಾರ್ತಿಕ್​ಗೆ ಹೊಡೆಯಬೇಕು ಎಂಬಷ್ಟರಮಟ್ಟಿಗೆ ಅವರಿಗೆ ಕೋಪ ನೆತ್ತಿಗೆ ಏರಿತ್ತು. ಈ ಮಧ್ಯೆ ಮೈಕಲ್ ಆಡಿದ ಮಾತು ವಿನಯ್ ಅವರ ಕೋಪವನ್ನು ಹೆಚ್ಚಿಸಿದೆ.

ಇದನ್ನೂ ಓದಿ: ‘ಲೇ ತಗಡು ಎದೆಮೇಲೆ ಕಾಲಿಟ್ಟೇ ನಿನ್ನ ತುಳಿಯೋದು’; ಕಾರ್ತಿಕ್​ಗೆ ವಿನಯ್ ಎಚ್ಚರಿಕೆ

‘ಆ ಮೈಕಲ್ ಮಾತನಾಡೋದು ನೋಡು, ಕಾರ್ತಿಕ್ ಚಪ್ಪಲಿಯನ್ನು ನೆಲಕ್ಕೆ ಎಸೆದಿದ್ದು, ಅದು ರಿಬೌಂಡ್ ಆಗಿ ನಿಮಗೆ ಬಂದಿದ್ದು ಎನ್ನುತ್ತಾನೆ’ ಎಂದು ವಿನಯ್ ಕೂಗಾಡಿದ್ದಾರೆ. ವಿನಯ್ ಅವರು ವಿಕ್ಟಿಮ್ ಕಾರ್ಡ್ ಪ್ಲೇ ಮಾಡಲು ಮುಂದಾಗಿದ್ದರು. ಇದಕ್ಕೆ ಮೈಕಲ್ ಬ್ರೇಕ್ ಹಾಕಿದ್ದಾರೆ. ಮೈಕಲ್ ಅವರನ್ನು ಎಲ್ಲರೂ ಈ ಕಾರಣಕ್ಕೆ ಪ್ರಶಂಸಿಸುತ್ತಿದ್ದಾರೆ. ಸದ್ಯ ಬಿಗ್ ಬಾಸ್ ಮನೆ ರಣರಂಗ ಆಗಿದೆ. ಗೇಮ್​ವೇಳೆ ಮನೆಯ ಸದಸ್ಯರಿಗೆ ಸಾಕಷ್ಟು ತೊಂದರೆಗಳು ಆಗಿವೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us