Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramya: ಮುನಿಸುಗಳಿಗೆ ಗುಡ್ ಬೈ, ಯಾವ ನಟರ ಬಗ್ಗೆ ಏನಂದರು ರಮ್ಯಾ?

ಜಂಭದ ಕೋಳಿ, ಕಿರಿಕ್ ನಟಿ ಎಂದೆಲ್ಲ ಒಂದು ಸಮಯದಲ್ಲಿ ಕರೆಸಿಕೊಂಡಿದ್ದ ರಮ್ಯಾ, ಹಲವರೊಟ್ಟಿಗೆ ಮನಸ್ತಾಪ ಹೊಂದಿದ್ದರು. ಆಗ ಮನಸ್ತಾಪ ಹೊಂದಿದ್ದ ನಟ-ನಟಿಯರ ಬಗ್ಗೆ ಈಗ ಏನಂದರು ರಮ್ಯಾ?

Ramya: ಮುನಿಸುಗಳಿಗೆ ಗುಡ್ ಬೈ, ಯಾವ ನಟರ ಬಗ್ಗೆ ಏನಂದರು ರಮ್ಯಾ?
ರಮ್ಯಾ
Follow us
ಮಂಜುನಾಥ ಸಿ.
|

Updated on: Mar 27, 2023 | 7:30 AM

ರಮ್ಯಾ (Ramya) ಚಿತ್ರರಂಗಕ್ಕೆ (Sandalwood) ಕಾಲಿಟ್ಟು 20 ವರ್ಷಗಳಾಗಿವೆ. ಆರಂಭದ ವರ್ಷಗಳಿಗೆ ಹೋಲಿಸಿದರೆ ಈಗ ಸಾಕಷ್ಟು ಮಾಗಿದ್ದಾರೆ ರಮ್ಯಾ. ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ರಮ್ಯಾರನ್ನು ಜಂಭದ ಕೋಳಿಯೆಂದು, ಕಿರಿಕ್ ನಟಿಯೆಂದು ಚಿತ್ರರಂಗದವರೇ ಮೂದಲಿಸುತ್ತಿದ್ದರು. ಅವರೊಟ್ಟಿಗೆ ಕೆಲಸ ಮಾಡಿದವರು ರಮ್ಯಾಗೆ ಸಿಟ್ಟು ಹೆಚ್ಚು ಎಂದು ಹೇಳಿಕೊಂಡಿದ್ದರು. ಅದಕ್ಕೆ ಸಾಕ್ಷಿ ಎಂಬಂತೆ ರಮ್ಯಾ ಸಹ ಚಿತ್ರರಂಗದಲ್ಲಿ ಹಲವರೊಟ್ಟಿಗೆ ಜಗಳವಾಡಿ ಮನಸ್ತಾಪ ಮಾಡಿಕೊಟ್ಟುಕೊಂಡಿದ್ದರು. ಆದರೆ ಈಗ ವಯಸ್ಸಿನಲ್ಲಿ ಅನುಭವದಲ್ಲಿ ಮಾಗಿರುವ ರಮ್ಯಾ ಹಳೆಯ ಮುನಿಸುಗಳನ್ನು ಮರೆತಿದ್ದಾರೆ. ವೀಕೆಂಡ್ ವಿತ್ ರಮೇಶ್​ಗೆ ಬಂದಿದ್ದ ಅವರು ಎಲ್ಲರ ಬಗ್ಗೆ ಸವಿಯಾದ ಮಾತುಗಳನ್ನಾಡಿದ್ದಾರೆ.

ಜಸ್ಟ್ ಮಾತ್ ಮಾತಲ್ಲಿ, ಮುಸ್ಸಂಜೆ ಮಾತು, ರಂಗ ಎಸ್​ಎಸ್​ಎಲ್​ಸಿ ಸಿನಿಮಾಗಳಲ್ಲಿ ಸುದೀಪ್ (Sudeep) ಜೊತೆ ನಟಿಸಿದ್ದ ರಮ್ಯಾ ಅವರೊಟ್ಟಿಗೆ ಆ ಸಮಯದಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರು. ಆದರೆ ವೀಕೆಂಡ್ ವಿತ್ ರಮೇಶ್​ನಲ್ಲಿ ಸುದೀಪ್​ ಬಗ್ಗೆ ಮಾತನಾಡಿದ ನಟಿ, ನಾವಿಬ್ಬರೂ ಕೆಲಸ ಮಾಡುವ ಸಮಯದಲ್ಲಿ ಕೆಲವು ಏರು ಪೇರುಗಳಾಗಿದ್ದವು. ಆದರೆ ಸುದೀಪ್ ನನ್ನ ಆತ್ಮೀಯ ಗೆಳೆಯ. ಬಹಳ ಕೇರಿಂಗ್ ಪರ್ಸನ್, ಅಪ್ಪು ಹಾಗೂ ಸುದೀಪ್ ಇಬ್ಬರೂ ನನ್ನ ಆತ್ಮೀಯ ಗೆಳೆಯರು ಸುದೀಪ್​ಗೆ ಸದಾ ಒಳ್ಳೆಯದೇ ಆಗಬೇಕು ಎಂದರು.

ಇನ್ನು ಲಕ್ಕಿ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ನಟ ಯಶ್ ಜೊತೆಗೂ ರಮ್ಯಾ ಅವರಿಗೆ ಮನಸ್ತಾಪವಾಗಿತ್ತು. ಆದರೆ ಶೋನಲ್ಲಿ ನಿರೂಪಕ ರಮೇಶ್ ಅರವಿಂದ್ ಯಶ್ ಬಗ್ಗೆ ಕೇಳಿದಾಗ. ನಾವಿಬ್ಬರೂ ಕೆಲಸ ಮಾಡುವಾಗ ಅವರು ಬಹಳ ಸ್ವೀಟ್ ವ್ಯಕ್ತಿಯಾಗಿದ್ದರು. ಬಹಳ ಡೆಡಿಕೇಟೆಡ್ ಹಾಗೂ ಬಹಳ ಶಿಸ್ತಿನ ವ್ಯಕ್ತಿ ಆಗಿದ್ದರು ಎಂದರು.

ರಮ್ಯಾರ ಬದ್ಧ ಪ್ರತಿಸ್ಪರ್ಧಿ ಆಗಿದ್ದ ರಕ್ಷಿತಾ ಬಗ್ಗೆ ಮಾತನಾಡಿ, ನಾನು, ರಕ್ಷಿತಾ ಒಟ್ಟಿಗೆ ಚಿತ್ರರಂಗಕ್ಕೆ ಬಂದೆವು. ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಆದರೆ ನಿರ್ದೇಶಕ ಮಹೇಶ್ ಬಾಬು ಇನ್ನಿತರೆ ಕೆಲವರು ನಮ್ಮಿಬ್ಬರ ನಡುವೆ ತಂದಿಡುವ ಕೆಲಸ ಮಾಡಿದರು ಎಂದು ತಮಾಷೆಯಾಗಿ ಹೇಳಿದರಲ್ಲದೆ, ನಾವಿಬ್ಬರೂ ಈಗ ಆತ್ಮೀಯ ಗೆಳತಿಯರು ಎಂದರು ರಮ್ಯಾ.

ಸಿದ್ಲಿಂಗು ಸಿನಿಮಾದ ಬಳಿಕ ಸಿನಿಮಾದ ನಿರ್ದೇಶಕ ವಿಜಯ್ ಪ್ರಸಾದ್ ಜೊತೆಗೂ ರಮ್ಯಾರಿಗೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಆದರೆ ವಿಜಯ್ ಪ್ರಸಾದ್, ವಿಡಿಯೋದಲ್ಲಿ ರಮ್ಯಾ ಬಗ್ಗೆ ಮಾತನಾಡಿ ಬಹಳ ಅವರ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು. ರಮ್ಯಾ ಸಹ, ಬೇರೆ ಯಾವುದೇ ನಿರ್ದೇಶಕ ಆಗಿದ್ದಿದ್ದರೂ ನಾನು ಆ ರೀತಿಯ ಡಬಲ್ ಮೀನಿಂಗ್ ಡೈಲಾಗ್​ಗಳನ್ನು ಹೇಳಲು ಒಪ್ಪುತ್ತಿರಲಿಲ್ಲ ಆದರೆ ವಿಜಯ್ ಪ್ರಸಾದ್​ ಗಾಗಿ ಸಿದ್ಲಿಂಗು ಸಿನಿಮಾದಲ್ಲಿ ಆ ರೀತಿಯ ಡೈಲಾಗ್​ಗಳನ್ನು ಹೇಳಿದೆ ಎಂದರು. ಅಂಬರೀಶ್ ಅವರೊಟ್ಟಿಗೂ ರಮ್ಯಾಗೆ ಮುನಿಸಿತ್ತು. ಆದರೆ ಅಂಬರೀಶ್ ಅವರು ತಮಗೆ ನೀಡಿದ್ದ ಉಡುಗೊರೆಯ ಬಗ್ಗೆ ಪ್ರೀತಿಯಿಂದ ರಮ್ಯಾ ಶೋನಲ್ಲಿ ಹೇಳಿಕೊಂಡರು. ಅಂಬರೀಶ್ ಅವರು ನಾಯಿಯೊಂದನ್ನು ರಮ್ಯಾಗೆ ಆಗ ನೀಡಿದ್ದರಂತೆ. ಆದರೆ ಆ ನಾಯಿ ಕಳೆದ ವರ್ಷವಷ್ಟೆ ತೀರಿಕೊಂಡಿತಂತೆ.

ತಮಿಳಿನ ನಟ ಸಿಂಭು ಜೊತೆಗೂ ರಮ್ಯಾ ಜಗಳ ಮಾಡಿಕೊಂಡಿದ್ದರು. ಆ ಬಗ್ಗೆ ಅವರೇ ಸ್ವತಃ ಮಾತನಾಡಿ, ಸಿಂಭು ಜೊತೆ ನಟಿಸಿದ ಮೊದಲ ಸಿನಿಮಾದ ಮೊದಲ ದಿನದಂದೇ ಅವರೊಟ್ಟಿಗೆ ದೊಡ್ಡ ಜಗಳ ಮಾಡಿದ್ದೆ. ಒಂದು ಡ್ಯಾನ್ಸ್ ಸ್ಟೆಪ್ ಅವರಿಗೆ ಹಾಕಲು ಬರಲಿಲ್ಲ ಅದರಿಂದ ಚೆನ್ನಾಗಿ ಬೈದಿದ್ದೆ. ಆ ನಂತರ ಅವರ ತಾಯಿ ಬಂದು ಸಿಂಭುಗೆ ಬುದ್ಧಿ ಹೇಳಿದರು ಎಂದು ನೆನಪಿಸಿಕೊಂಡು ನಕ್ಕರು ರಮ್ಯಾ.

ರಮ್ಯಾರ ಮೀರಾ ಮಾಧವ ರಾಘವ ಸಿನಿಮಾ ನಿರ್ದೇಶನ ಮಾಡಿದ್ದ ಟಿ.ಎನ್.ಸೀತಾರಾಮ್ ಮಾತನಾಡಿ, ರಮ್ಯಾ ನಮ್ಮ ಸಿನಿಮಾದಲ್ಲಿ ನಟಿಸಲ್ಲ ಎಂದುಕೊಂಡಿದ್ದೆ ಆದರೆ ಕತೆ ಕೇಳಿದ ಕೂಡಲೇ ಒಪ್ಪಿದರು. ಆ ಬಳಿಕ ನನಗೆ ಭಯವಿತ್ತು ರಮ್ಯಾಗೆ ಬಹಳ ಜಂಭ ಎಂದುಕೊಂಡಿದ್ದೆ. ಆದರೆ ಒಂದು ದಿನವೂ ನನಗೆ ಹಾಗೆ ಅನ್ನಿಸಲೇ ಇಲ್ಲ ಎಂದರು. ಇನ್ನು ಎಕ್ಸ್​ಮ್ಯೂಸ್​ ಮೀ ಸಿನಿಮಾದ ನಿರ್ಮಾಪಕ ಮಾತನಾಡಿ, ರಮ್ಯಾ ಅವರಿಗೆ ಸ್ವಲ್ಪ ಕೋಪ ಅಷ್ಟೆ ಆದರೆ ಅವರೊಬ್ಬ ಸ್ನೇಹಜೀವಿ, ಪರಿಶ್ರಮಿ, ಅವರಂಥಹಾ ನಟಿ ಇನ್ಯಾರೂ ಇಲ್ಲ ಎಂದರು. ಇನ್ನೂ ಒಂದಿಬ್ಬರು ರಮ್ಯಾಗೆ ತುಸು ಕೋಪ ಇತ್ತು ಎಂದು ಹೇಳಿದರು. ಆದರೆ ರಮ್ಯಾ ಈಗ ಸಾಕಷ್ಟು ಬದಲಾಗಿದ್ದಾರೆ ಅದು ಮೊದಲಿಗಿಂತಲೂ ಹೆಚ್ಚು ಪ್ರಬುದ್ಧರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ