AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

COVID-19: 10 ದಿನದ ಕ್ವಾರಂಟೈನ್​ ಬಳಿಕವೂ ಹತ್ತರಲ್ಲಿ ಒಬ್ಬರಿಗೆ ಕೊರೋನಾ ಸೋಂಕಿನ ವರದಿ ಪಾಸಿಟಿವ್​ ಬರಲಿದೆ: ಅಧ್ಯಯನ

ಪ್ರಮಾಣೀಕೃತ ಆರ್​ಟಿಪಿಸಿಆರ್​ ಟೆಸ್ಟ್​ನಲ್ಲಿ ಧನಾತ್ಮಕ ಪರೀಕ್ಷೆ ಮಾಡಿಸಿ 10 ದಿನಗಳ ಕ್ವಾರಂಟೈನ್​ ಅವಧಿ ಮುಗಿಸಿದ 172 ಮಂದಿ ಸೋಂಕಿತರನ್ನು ಇಟ್ಟುಕೊಂಡು ಈ ಅಧ್ಯಯನ ನಡೆಸಲಾಗಿದೆ. ಅದರಲ್ಲಿ 10 ದಿನಗಳ ಬಳಿಕ 13 ಪ್ರತಿಶತದಷ್ಟು ಜನರಲ್ಲಿ  ವೈರಸ್​ ಇರುವುದು ದೃಢಪಟ್ಟಿದೆ.

COVID-19: 10 ದಿನದ ಕ್ವಾರಂಟೈನ್​ ಬಳಿಕವೂ ಹತ್ತರಲ್ಲಿ ಒಬ್ಬರಿಗೆ ಕೊರೋನಾ ಸೋಂಕಿನ ವರದಿ ಪಾಸಿಟಿವ್​ ಬರಲಿದೆ: ಅಧ್ಯಯನ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Jan 16, 2022 | 11:47 AM

Share

ಕೊರೋನಾ (corona) ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೂರನೆ ಅಲೆ ಈಗಾಗಲೇ ಭಾರತದಲ್ಲಿ ಕಾಡಲು ಆರಂಭವಾಗಿದೆ. ಈ ನಡುವೆ ಯುಕೆ ಮೂಲದ  ಯುನಿವರ್ಸಿಟಿಯೊಂದು ನಡೆಸಿದ ಅಧ್ಯಯನದಲ್ಲಿ 10 ದಿನಗಳ ಕ್ವಾರಂಟೈನ್ (Quarantine)​ ಬಳಿಕವೂ  ಕೊರೋನಾ ಸೋಂಕು 10ರಲ್ಲಿ ಒಬ್ಬರಿಗೆ ಕಾಡುತ್ತದೆ ಎಂದು ಸಾಬೀತಾಗಿದೆ. 10 ದಿನಗಳ ಕ್ವಾರಂಟೈನ್​ ಬಳಿಕ 13 ಪ್ರತಿಶತದಷ್ಟು ಜನರು ಸೋಂಕಿನಿಂದ ಗುಣಮುಖರಾಗದೆ ಪಾಸಿಟಿವ್​ ಅಂಶಗಳನ್ನೇ ತೋರಿಸಿದ್ದಾರೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಅಧ್ಯಯನವನ್ನು ಇಂಟರ್​ನ್ಯಾಷನಲ್​​ ಜರ್ನಲ್​ ಆಫ್​ ಇನ್ಫೆಕ್ಷಿಯಸ್​ ಡಿಸೀಸ್​ (International Journal of Infectious Diseases)ನಲ್ಲಿ ಪ್ರಕಟಿಸಲಾಗಿದೆ. ಎಕ್ಸೆಟರ್​ ವಿಶ್ವವಿದ್ಯಾನಿಲಯ ಅಳವಡಿಸಿಕೊಂಡ ಹೊಸ ರೀತಿಯ ಅಧ್ಯಯನ ವಿಧಾನದಲ್ಲಿ ವೈರಸ್​ ಕ್ವಾರಂಟೈನ್​ ಬಳಿಕವೂ ಎಷ್ಟು ದಿನಗಳ ಕಾಲ  ಸಕ್ರಿಯವಾಗಿರುತ್ತದೆ ಎನ್ನುವುದನ್ನು ಪತ್ತೆ ಮಾಡಲಾಗಿದೆ. 

ಪ್ರಮಾಣೀಕೃತ ಆರ್​ಟಿಪಿಸಿಆರ್​ ಟೆಸ್ಟ್​ನಲ್ಲಿ ಧನಾತ್ಮಕ ಪರೀಕ್ಷೆ ಮಾಡಿಸಿ 10 ದಿನಗಳ ಕ್ವಾರಂಟೈನ್​ ಅವಧಿ ಮುಗಿಸಿದ 172 ಮಂದಿ ಸೋಂಕಿತರನ್ನು ಇಟ್ಟುಕೊಂಡು ಈ ಅಧ್ಯಯನ ನಡೆಸಲಾಗಿದೆ. ಅದರಲ್ಲಿ 10 ದಿನಗಳ ಬಳಿಕ 13 ಪ್ರತಿಶತದಷ್ಟು ಜನರಲ್ಲಿ  ವೈರಸ್​ ಇರುವುದು ದೃಢಪಟ್ಟಿದೆ. ಹೀಗಾಗಿ ಸಾಂಕ್ರಾಮಿಕವಾಗಿ ಹರಡುವ ಆತಂಕ ಹೆಚ್ಚಾಗಿಯೇ ಇದೆ. ಗುಣಮುಖರಾದೆವೆಂದು ಇತರ ಜನರನ್ನು ಸಂಪರ್ಕಿಸುವ ಮೊದಲು ಎಚ್ಚರವಹಿಸಬೇಕು. ಇಲ್ಲವಾದರೆ ಅಂತಹ ವ್ಯಕ್ತಿಗಳು ರೋಗವನ್ನು ಹರಡಬಹುದು ಎಂದು ಎಂದು ವರದಿಯಲ್ಲಿ ಪ್ರಕಟಿಸಲಾಗಿದೆ.

ಈ ಕುರಿತು  ಮೆಡಿಕಲ್​ ವಿಶ್ವವಿದ್ಯಾಲಯದ ಪ್ರಪೆಸರ್​ ಲೋರ್ನಾ ಹ್ಯಾರಿಸ್​ ಮಾಹಿತಿ ನೀಡಿದ್ದು, ನಾವು ನಡೆಸಿರುವುದು ಸಣ್ಣ ಅಧ್ಯಯನವೇ ಇರಬಹುದು ಆದರೆ ಇದರ ಫಲಿತಾಂಶ ಮಾತ್ರ ನಿಖರವಾಗಿದೆ. 10 ದಿನಗಳ ಬಳಿಕವೂ ವೈರಸ್​ ಸಕ್ರಿಯವಾಗಿದ್ದು, ಸೋಂಕನ್ನು ಹರಡುವ ಅಪಾಯವಿದೆ. ಈವರೆಗೆ ಸೋಂಕಿತ ವ್ಯಕ್ತಿಯಲ್ಲಿ ವೈರಸ್​ ಇತರರಿಗೆ ಹರಡುವ ಸಾಮರ್ಥ್ಯವನ್ನು ಹೊಂದಿದೆಯೇ ಅಥವಾ ಇಲ್ಲವೊ ಎನ್ನುವುದನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಅಧ್ಯಯನದಲ್ಲಿ ಬಳಸಲಾದ ಪರೀಕ್ಷೆಯು ವೈರಸ್​ ಸಕ್ರಿಯವಾಗಿದ್ದಾಗ ಮತ್ತು ಮುಂದೆ ಹರಡುವ ಸಾಮರ್ಥ್ಯವಿದ್ದಾಗ ಮಾತ್ರ ಧನಾತ್ಮಕತೆಯನ್ನು ತೋರಿಸುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇನ್ನು ಮುಂದುವರೆದು ಮಾತನಾಡಿದ ಇನ್ನೋರ್ವ ಪ್ರೊಪೇಸರ್​ ಜನರು 10 ದಿನಗಳ ಬಳಿಕ ಆರೋಗ್ಯ ಸರಿಹೋಗಿದೆ ಎಂದು ಗುಣಮುಖರಾದ ಲಕ್ಷಣಗಳನ್ನು ಗಮನಿಸಿ ಹೊರಹೋಗುತ್ತಾರೆ. ಇದರಿಂದ ಸೋಂಕು ಹರಡುವ ಅಪಾಯ ಹೆಚ್ಚು. ಹೀಗಾಗಿ 10 ದಿನಗಳ ಬಳಿಕವೂ ಸರಿಯಾಗ ಪರೀಕ್ಷೆ ನಡೆಸಿ ನೆಗೆಟಿವ್​ ವರದಿ ಬಂದರೆ ಮಾತ್ರ ಕ್ವಾರಂಟೈನ್​ನಿಂದ ಹೊರಬನ್ನಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:

ಓಮಿಕ್ರಾನ್​ ಆತಂಕ: ಬಟ್ಟೆಯ ಮಾಸ್ಕ್​ಗಳ ಬಳಕೆ ಬೇಡ ಎಂದ ತಜ್ಞರು

Published On - 11:46 am, Sun, 16 January 22

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ