AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Banana Recipes: ಬಾಳೆ ಹಣ್ಣಿನಿಂದ ಮಾಡಬಹುದು ವಿವಿಧ ರೆಸಿಪಿಗಳು

ಬಾಳೆಹಣ್ಣುಗಳು ಬಿ-ವಿಟಮಿನ್‌ಗಳು, ಮೆಗ್ನೀಸಿಯಮ್ ಮತ್ತು ರೋಗ ನಿರೋಧಕಗಳನ್ನು ಒಳಗೊಂಡಿದ್ದು ಜೊತೆಗೆ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಉತ್ತಮವಾಗಿದೆ.

Banana Recipes: ಬಾಳೆ ಹಣ್ಣಿನಿಂದ ಮಾಡಬಹುದು ವಿವಿಧ ರೆಸಿಪಿಗಳು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Oct 29, 2022 | 12:33 PM

Share

ಬಾಳೆಹಣ್ಣಿನಿಂದ ಆರೋಗ್ಯದ ಮೇಲೆ ಎಷ್ಟು ಪ್ರಯೋಜನಗಳಿವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಬಾಳೆಹಣ್ಣಿನಿಂದ ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಸಾಕಷ್ಟು ಬಗೆಯ ಅಡುಗೆಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ ಬನ್ನಿ. ಸಾಮಾನ್ಯವಾಗಿ ಬಾಳೆಹಣ್ಣುಗಳನ್ನು ಚಿಪ್ಸ್, ಸಲಾಡ್‌ಗಳಲ್ಲಿ ಬಳಸಲಾಗುತ್ತದೆ. ಜೊತೆಗೆ ಶೇಕ್ಸ್ ಮತ್ತು ಸ್ಮೂಥಿಗಳಲ್ಲಿ ಕೂಡ ಬಳಸಲಾಗುತ್ತದೆ. ಮನೆಗೆ ಯಾರಾದರೂ ಬಂಧುಗಳು, ಸ್ನೇಹಿತರು ಬಂದಾಗ ಬಾಳೆಹಣ್ಣುಗಳನ್ನು ಹೆಚ್ಚಿನ ತಿಂಡಿಗಳ ಜೊತೆ ಇಡಲಾಗುತ್ತದೆ.

ನಾರಿನಂಶ ಹೆಚ್ಚಿರುವ ಬಾಳೆಹಣ್ಣು ಜೀರ್ಣಕ್ರಿಯೆಗೆ ಉತ್ತಮವಾಗಿದ್ದು, ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಊಟದ ನಂತರ ಬಾಳೆ ಹಣ್ಣುಗಳನ್ನು ಸೇವಿಸುವುದು ಉತ್ತಮ. ಬಾಳೆಹಣ್ಣುಗಳು ವಿಟಮಿನ್‌-ಬಿಗಳು, ಮೆಗ್ನೀಸಿಯಮ್ ಮತ್ತು ರೋಗ ನಿರೋಧಕಗಳನ್ನು ಒಳಗೊಂಡಿದ್ದು ಜೊತೆಗೆ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಉತ್ತಮವಾಗಿದೆ.

ಕರಿದ ಬಾಳೆಹಣ್ಣು: ಪಾಯಂಪೋರಿ ಎಂದು ಕೇರಳದಲ್ಲಿ ಕರೆಯಲ್ಪಡುವ ಸಾಂಪ್ರದಾಯಿಕ ತಿಂಡಿಗಳಲ್ಲೊಂದು. ಬಾಳೆಹಣ್ಣನ್ನು ತುಂಡರಿಸಿ ಕಡಲೆ ಹಿಟ್ಟಿನಲ್ಲಿ ಲೇಪಿಸಲಾಗುತ್ತದೆ ಮತ್ತು ಗರಿಗರಿಯಾದ, ಗೋಲ್ಡನ್ ಬ್ರೌನ್ ವರೆಗೆ ಹುರಿಯಲಾಗುತ್ತದೆ.

ಬಾಳೆಹಣ್ಣು ಕೇಕ್: ಚೀಸ್, ವಾಲ್‌ನಟ್ಸ್ ಗಳನ್ನು ಬಳಸಿ ಬಾಳೆಹಣ್ಣುಗಳು ಕೇಕ್ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಇದು ಇತರ ಕೇಕುಗಳ ರೀತಿಯಲ್ಲೇ ಇದನ್ನು ಕೂಡ ತಯಾರಿಸಲಾಗುತ್ತದೆ. ಬಾಳೆಹಣ್ಣು ಸೇರಿಸುವುದು ವಿಶೇಷ.

ಬಾಳೆಹಣ್ಣಿನ ಪ್ಯಾನ್ ಕೇಕ್: ಇದು ಮೈದಾ, ಅಡುಗೆ ಸೋಡಾ, ಹಾಲು ಮತ್ತು ಬಾಳೆಹಣ್ಣು ಸೇರಿಸಿ ತಯಾರಿಸಲಾಗುತ್ತದೆ. ಇದರ ಜೊತೆಗೆ ಓಡ್ಸ್ , ರಾಗಿ ಸೇರಿಸಬಹುದು. ಇದು ನಿಮಗೆ ರುಚಿಯ ಜೊತೆಗೆ ಉತ್ತಮ ಆರೋಗ್ಯವನ್ನು ನೀಡಲು ಕೂಡ ಸಹಕಾರಿಯಾಗಿದೆ.

ಬಾಳೆ ಹಣ್ಣಿನ ಕಬಾಬ್: ಮೈದಾ, ಅಡುಗೆ ಸೋಡಾ, ಅರಶಿನ, ಏಲಕ್ಕಿ, ಜೀರಿಗೆ, ರುಚ್ಚಿಗೆ ತಕಷ್ಟು ಉಪ್ಪು ಸೇರಿಸಿ, ಅದಕ್ಕೆ ತುಂಡಾರಿಸಿದ ನೇಂದ್ರ ಬಾಳೆ ಹಣ್ಣಿನ್ನು ಹಾಕಿ ಸಲ್ಪ ಹೊತ್ತು ಮುಚ್ಚಿಡಿ. ನಂತರ ಎಣ್ಣೆಯಲ್ಲಿ ಕರಿಯಿರಿ.

ತೆಂಗಿನಕಾಯಿ ಮತ್ತು ಬಾಳೆಕಾಯಿ ಕಚೋರಿ: ದೊಡ್ಡ ಪಾತ್ರೆಗೆ ಮೈದಾ ಹಾಕಿ ಅದ್ಕಕೆ ತುಪ್ಪ, ಸಕ್ಕರೆ, ರುಚಿಗೆ ತಕ್ಕ ಉಪ್ಪು ಮತ್ತು ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಹಿಟ್ಟು ಮೃದುವಾಗುವವರೆಗೆ ಕಲೆಸಿ ಬದಿಯಲ್ಲಿ ಇಡಬೇಕು. ನಂತರ ಚಕ್ಕೆ ಮತ್ತು ಏಲಕ್ಕಿ ಪುಡಿಯನ್ನು ಹಿಟ್ಟಿಗೆ ಹಾಕಿ ಮಿಶ್ರ ಮಾಡಬೇಕು. ನಂತರ ಹಿಟ್ಟಿನಿಂದ ಚಿಕ್ಕ ಉಂಡೆಗಳನ್ನು ಮಾಡಿ ಬೆರಳಿನಿಂದ ಮಧ್ಯದಲ್ಲಿ ಗುಂಡಿ ಮಾಡಿ ಅದರಲ್ಲಿ ತುರಿದ ತೆಂಗಿನ ಕಾಯಿ ಹಾಗು ಬಾಳೆಹಣ್ಣು ತುಂಬಬೇಕು. ನಂತರ ಬಾಣಲೆಗೆ ಎಣ್ಣೆ ಹಾಕಿ ಕಾಯಿಸಬೇಕು. ಎಣ್ಣೆ ಕುದಿಯುವಾಗ ಈ ಉಂಡೆಗಳನ್ನು ಸ್ವಲ್ಪ ತಟ್ಟಿ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವಾಗ ತೆಗೆದರೆ ತೆಂಗಿನಕಾಯಿ ಮತ್ತು ಬಾಳೆಕಾಯಿ ಕಚೋರಿ ರೆಡಿ.

ಬಾಳೆ ಹಣ್ಣಿನ ಸಮೋಸ: ನೀವು ಸಾಮಾನ್ಯವಾಗಿ ಮಾಡುವ ಸಮೋಸದ ಅದೇ ವಿಧಾನದಲ್ಲಿ ಬಾಳೆ ಕಾಯಿಯನ್ನು ಸೇರಿಸಿ. ಇದು ನಿಮ್ಮ ಸಂಜೆಯ ಚಹಾಕ್ಕೆ ಉತ್ತಮ ಮತ್ತು ಆರೋಗ್ಯ ತಿಂಡಿಯಾಗಿದೆ.

ಬಾಳೆ ಹಣ್ಣಿನ ಚಿಪ್ಸ್: ಸಾಮಾನ್ಯವಾಗಿ ಇದು ಎಲ್ಲರ ಮನೆಯಲ್ಲಿ ಮಾಡುವಂತಹ ತಿಂಡಿಯಾಗಿದ್ದು, ಮಕ್ಕಳಿಗೆ ತಿನ್ನಲು ಕೊಡಿ. ಬಾಳೆಹಣ್ಣುಗಳು ಬಿವಿಟಮಿನ್‌ಗಳು, ಮೆಗ್ನೀಸಿಯಮ್ ಮತ್ತು ರೋಗ ನಿರೋಧಕಗಳನ್ನು ಒಳಗೊಂಡಿದ್ದು ಜೊತೆಗೆ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಉತ್ತಮವಾಗಿದೆ.

(ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.)

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 7:04 pm, Fri, 28 October 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ