ಬೇವಿನ ತೊಗಟೆಯು ಕೊರೊನಾ ಹರಡುವಿಕೆ ನಿಯಂತ್ರಣಕ್ಕೆ ಸಹಕಾರಿ-ಅಧ್ಯಯನ

ಕಳೆದ 2 ವರ್ಷಗಳಿಂದ ಜನ ಜೀವನವನ್ನು ತಲ್ಲಣಗೊಳಿಸಿದ ಮಾರಕ ರೋಗ ಕೊರೊನಾ ಹರಡುವುದನ್ನು ತಡೆಯಲು ಕೂಡ ಬೇವು ಸಹಕಾರಿ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. 

ಬೇವಿನ ತೊಗಟೆಯು ಕೊರೊನಾ ಹರಡುವಿಕೆ ನಿಯಂತ್ರಣಕ್ಕೆ ಸಹಕಾರಿ-ಅಧ್ಯಯನ
ಬೇವಿನ ತೊಗಟೆ (ಪ್ರಾತಿನಿಧಿಕ ಚಿತ್ರ)
Follow us
| Updated By: Pavitra Bhat Jigalemane

Updated on: Mar 03, 2022 | 3:27 PM

ಅನಾದಿ ಕಾಲದಿಂದಲೂ ಬೇವು (Neem) ಆರೋಗ್ಯಕ್ಕೆ ಒಳಿತು ಎಂದು ಹೇಳಲಾಗಿದೆ. ಸೋಂಕುಗಳನ್ನು ತಡೆಯಲು, ದೇಹದಲ್ಲಿ ರೋಗ ನಿರೋಧಕ (Immunity Power) ಶಕ್ತಿಯನ್ನು ಹೆಚ್ಚಿಸಲು ಬೇವು ಹಾಗೂ ಬೇವಿನ ವಿವಿಧ ಭಾಗಗಳು ಸಹಾಯಕ ಎಂದು ಪುರಾತನ ಕಾಲದಿಂದಲು ನಂಬಲಾಗಿದೆ. ಇದೀಗ ಕಳೆದ 2 ವರ್ಷಗಳಿಂದ ಜನ ಜೀವನವನ್ನು ತಲ್ಲಣಗೊಳಿಸಿದ ಮಾರಕ ರೋಗ ಕೊರೊನಾ ಹರಡುವುದನ್ನು ತಡೆಯಲು ಕೂಡ ಬೇವು ಸಹಕಾರಿ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.  ಕೊಲೊರಾಡೋ ವಿಶ್ವವಿದ್ಯಾನಿಲಯ ಅನ್‌ಶುಟ್ಜ್ ವೈದ್ಯಕೀಯ ಕ್ಯಾಂಪಸ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್​ನ  ಕೋಲ್ಕತ್ತಾದ ವಿಜ್ಞಾನಿಗಳ ನೇತೃತ್ವದ ತಂಡ ಹೊಸ ಅಧ್ಯಯನ ನಡೆಸಿದೆ. ಅಧ್ಯಯನದಲ್ಲಿ ಬೇವಿನ ತೊಗಟೆ (Bark of Neem tree)ಯು ಕೊರೊನಾ ಹರಡುವುದನ್ನು ತಡೆಯಲು ಸಹಕಾರಿ ಎಂದು ಪತ್ತೆ ಮಾಡಲಾಗಿದೆ.

ಅಧ್ಯಯನ ವರದಿಯನ್ನು ವೈರಾಲಜಿ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ. ಬೇವಿನ ತೊಗಟೆಯ ಘಟಕಗಳು ಸಮೃದ್ಧವಾದ ವೈರಲ್ ಪ್ರೋಟೀನ್‌ಗಳನ್ನು ಹೊಂದಿದೆ, ಇದು ಕೊರೋನ ವೈರಸ್‌ಗಳ  ರೂಪಾಂತರಗಳ ವಿರುದ್ಧ ಆಂಟಿವೈರಲ್ ಏಜೆಂಟ್ ರೀತಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿದೆ. ಭಾರತದಲ್ಲಿ ಅನಾದಿ ಕಾಲದಿಂದಲೂ ಸೋಂಕುಗಳ ವಿರೋಧಿಯಾಗಿ ಬೇವಿನ ಎಲೆಗಳು ಮತ್ತು ತೊಗಟೆಗಳನ್ನು ಬಳಸಲಾಗುತ್ತಿದೆ. ಆ್ಯಂಟಿ ಬ್ಯಾಕ್ಟೀರಿಯಲ್​ ಮತ್ತು ಆ್ಯಂಟಿ ವೈರಲ್​ ಆಗಿ ಬೇವಿನ ತೊಗಟೆಗಳನ್ನು ಬಳಸಲಾಗುತ್ತದೆ. ಅದರಲ್ಲೂ ಮುಖ್ಯವಾಗಿ, ಚರ್ಮಕ್ಕೆ ಸಂಬಂಧಿಸಿದ ಕಾಯಿಲೆ, ಅಲ್ಸರ್​, ಮಲೇರಿಯಾ ಸೇರಿದಂತೆ ಹಲವು ರೋಗಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.

ಅಧ್ಯಯನದ ಉದ್ದೇಶವೆಂದರೆ, ಬೇವಿನ ತೊಗಟೆಯಿಂದ ತಯಾರಿಸಿದ ಔಷಧವು ಯಾವ ಮಟ್ಟದಲ್ಲಿ ಸಾಂಕ್ರಾಮಿಕ ರೋಗ ಕೊರೊನಾದಿಂದ ಜನರನ್ನು ಕಾಪಾಡುವಂತೆ ಮಾಡುತ್ತದೆ ಎಂದು ಕಂಡುಹಿಡಿಯುವುದಾಗಿದೆ ಎಂದು ತಜ್ಞರು ಹೇಳಿದ್ದಾರೆ. ಮೊದಲು ಬೇವಿನ ತೊಗಟೆಯಲ್ಲಿರುವ ಆ್ಯಂಟಿ ವೈರಲ್​ ಗುಣಗಳನ್ನು ಕಂಡುಕೊಂಡು ಕೊರೊನಾ ಹರಡದಂತೆ ತಡೆಯಲು ಔಷಧವನ್ನು ಯಾವ ಡೊಸೇಜ್​ನಲ್ಲಿ ಕೊಡಬೇಕು ಎಂದು ಹೇಳುತ್ತೇವೆ ಎಂದಿದ್ದಾರೆ. ಅಧ್ಯಯನದಲ್ಲಿ ನಾವು ಸೋಂಕಿಗೆ ಒಳಗಾದ ಗಂಟಲನ್ನು ಸರಿಪಡಿಸಲು ಬೇಕಾದ ಡೋಸೇಜ್​ಅನ್ನು ಕೂಡ  ಶೀಘ್ರದಲ್ಲಿ ಹೇಳುತ್ತೇವೆ ಎಂದು ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ:

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸುವುದರಿಂದಾಗುವ ಲಾಭಗಳೇನು? ತಿಳಿದುಕೊಳ್ಳಿ

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು