AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಕೋಣೆಯಲ್ಲಿ ಮೇಣದಬತ್ತಿ ಬಳಸುವಾಗ ಎಚ್ಚರ; ಕ್ಯಾಂಡಲ್ ಪ್ರಿಯರಿಗೆ ಎಚ್ಚರಿಕೆಯ ಸುದ್ದಿ ಇಲ್ಲಿದೆ

ಕ್ಯಾಂಡಲ್ ಲೈಟ್ ಡಿನ್ನರ್ ಮಾಡುವುದು ಬಹುತೇಕರಿಗೆ ಬಹಳ ಇಷ್ಟದ ಸಂಗತಿ. ಜೊತೆಯಲ್ಲಿ ಸಣ್ಣದಾಗಿ ಮ್ಯೂಸಿಕ್ ಕೇಳಿಬರುತ್ತಿದ್ದರೆ ಆ ಜಾಗ ರೊಮ್ಯಾಂಟಿಕ್ ಆಗಿ ಪರಿವರ್ತನೆಯಾಗಿಬಿಡುತ್ತದೆ. ಆದರೆ, ಇದರಿಂದ ಆರೋಗ್ಯದ ಮೇಲೆ ಏನೆಲ್ಲ ಕೆಟ್ಟ ಪರಿಣಾಮಗಳಾಗುತ್ತವೆ ಗೊತ್ತಾ?

ನಿಮ್ಮ ಕೋಣೆಯಲ್ಲಿ ಮೇಣದಬತ್ತಿ ಬಳಸುವಾಗ ಎಚ್ಚರ; ಕ್ಯಾಂಡಲ್ ಪ್ರಿಯರಿಗೆ ಎಚ್ಚರಿಕೆಯ ಸುದ್ದಿ ಇಲ್ಲಿದೆ
ಕ್ಯಾಂಡಲ್
ಸುಷ್ಮಾ ಚಕ್ರೆ
| Edited By: |

Updated on: Sep 01, 2023 | 2:42 PM

Share

ಕ್ಯಾಂಡಲ್ ಇಷ್ಟಪಡದ ಜನರೇ ಕಡಿಮೆ. ಕೇವಲ ಬೆಳಕಿನ ಉದ್ದೇಶದಿಂದ ಮಾತ್ರವಲ್ಲದೆ ಪರಿಮಳ, ರೂಮಿನಲ್ಲಿ ಆಹ್ಲಾದತೆಯನ್ನು ಹೆಚ್ಚಿಸಲು, ಅಲಂಕಾರದಲ್ಲಿ ಕೂಡ ಕ್ಯಾಂಡಲ್ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಪರಿಮಳಭರಿತವಾದ ಕ್ಯಾಂಡಲ್ ಅನ್ನು ನಿಮ್ಮ ಹಾಲ್​ನಲ್ಲೋ, ಬೆಡ್​ ರೂಂನಲ್ಲೋ ಹಚ್ಚಿಟ್ಟರೆ ಅದು ನಿಮ್ಮ ಮೂಡ್ ಅನ್ನೇ ಬದಲಿಸಬಲ್ಲದು. ಆದರೆ, ಈ ಕ್ಯಾಂಡಲ್​​ನಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವೂ ಉಂಟಾಗುತ್ತದೆ ಎಂಬುದು ನಿಮಗೆ ಗೊತ್ತಾ?

ಟೇಬಲ್​ ಮೇಲೊಂದು ದೊಡ್ಡದಾದ ಕ್ಯಾಂಡಲ್ ಇಟ್ಟು, ಕ್ಯಾಂಡಲ್ ಲೈಟ್ ಡಿನ್ನರ್ ಮಾಡುವುದು ಬಹುತೇಕರಿಗೆ ಬಹಳ ಇಷ್ಟದ ಸಂಗತಿ. ಜೊತೆಯಲ್ಲಿ ಸಣ್ಣದಾಗಿ ಮ್ಯೂಸಿಕ್ ಕೇಳಿಬರುತ್ತಿದ್ದರೆ ಆ ಜಾಗ ರೊಮ್ಯಾಂಟಿಕ್ ಆಗಿ ಪರಿವರ್ತನೆಯಾಗಿಬಿಡುತ್ತದೆ. ಆದರೆ, ಆರ್ಹಸ್ ವಿಶ್ವವಿದ್ಯಾನಿಲಯದ ಸಾರ್ವಜನಿಕ ಆರೋಗ್ಯ ಇಲಾಖೆಯ ಹೊಸ ಅಧ್ಯಯನವು ಕ್ಯಾಂಡಲ್ ಪ್ರಿಯರಿಗೆ ಎಚ್ಚರಿಕೆಯೊಂದನ್ನು ನೀಡಿದೆ. ಪರಿಮಳಭರಿತವಾದ ಕ್ಯಾಂಡಲ್​​ ಬಳಸುವವರು ಆ ಗಾಳಿಯನ್ನು ಉಸಿರಾಡುವಾಗ ಎಚ್ಚರದಿಂದಿರಬೇಕು. ಏಕೆಂದರೆ, ರೂಮಿನಲ್ಲಿ ಕ್ಯಾಂಡಲ್​ ಹೊತ್ತಿಸಿಟ್ಟರೆ ಆ ಹೊಗೆಯನ್ನು ಉಸಿರಾಡುವವರ ಆರೋಗ್ಯ ಮತ್ತು ಮೂಡ್ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದು ಅಧ್ಯಯನ ಹೇಳಿದೆ.

ಇದನ್ನೂ ಓದಿ: ಕ್ಯಾನ್ಸರ್ ಚಿಕಿತ್ಸೆ ಇನ್ನಷ್ಟು ಸರಳ; 7 ನಿಮಿಷಗಳಲ್ಲಿ ನೀಡಬಹುದಾದ ವಿಶ್ವದ ಮೊದಲ ಇಂಜೆಕ್ಷನ್ ಅಭಿವೃದ್ಧಿಪಡಿಸಿದ ಬ್ರಿಟನ್ 

ಈ ಅಧ್ಯಯನದ ಸಹ ಲೇಖಕ ಕರಿನ್ ರೋಸೆನ್‌ಕಿಲ್ಡೆ ಲಾರ್ಸೆನ್ ಈ ಬಗ್ಗೆ ಹೇಳಿಕೆ ನೀಡಿದ್ದು, ನಮ್ಮ ಅಧ್ಯಯನವು ಮೇಣದಬತ್ತಿಗಳನ್ನು ಸುಡುವ ಹೊಗೆಯಿಂದ ಉಂಟಾಗುವ ಒಳಾಂಗಣ ವಾಯು ಮಾಲಿನ್ಯವು ಯುವಕ-ಯುವತಿಯರಲ್ಲಿ ಕಿರಿಕಿರಿ ಮತ್ತು ಉರಿಯೂತದಂತಹ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ತಿಳಿಸಿದೆ. ಅಲ್ಲದೆ, ಇದರಿಂದ ಅಸ್ತಮಾ ಮತ್ತು ಉಸಿರಾಟದ ತೊಂದರೆ ಎದುರಿಸುತ್ತಿರುವವರ ಆರೋಗ್ಯ ಸಮಸ್ಯೆ ಇನ್ನಷ್ಟು ಬಿಗಡಾಯಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ನಾವು ಅಡುಗೆ ಮಾಡುವಾಗ ಸ್ಟವ್​​ನಿಂದ ಹೊರಹೋಗುವ ಹೊಗೆಯಿಂದ ಅಲ್ಟ್ರಾಫೈನ್ ಕಣಗಳು ಉತ್ಪತ್ತಿಯಾಗುತ್ತವೆ. ಕ್ಯಾಂಡಲ್​ನಿಂದಲೂ ಈ ಕಣಗಳು ಉತ್ಪತ್ತಿಯಾಗುತ್ತವೆ. ಅದನ್ನೇ ನಾವು ಉಸಿರಾಡುತ್ತೇವೆ. ಈ ಕಣಗಳು ಆರೋಗ್ಯಕ್ಕೆ ಹಾನಿಕಾರಕವೆಂದು ಹಿಂದಿನ ಅಧ್ಯಯನಗಳು ತೋರಿಸಿಕೊಟ್ಟಿವೆ. 18 ಮತ್ತು 25ರ ನಡುವಿನ ವಯೋಮಾನದವರು ಕೊಂಚ ಮಟ್ಟಿಗಾದರೂ ಅಸ್ತಮಾದ ಗುಣಲಕ್ಷಣಗಳನ್ನು ಹೊಂದಿದ್ದರೆ ಅವರ ಮೇಲೆ ಇದರಿಂದ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂದು ಕರಿನ್ ರೋಸೆನ್‌ಕಿಲ್ಡೆ ಲಾರ್ಸೆನ್ ಹೇಳಿದ್ದಾರೆ.

ಇದನ್ನೂ ಓದಿ: Smelly Armpits: ನಿಮ್ಮ ಈ ಆಹಾರಕ್ರಮಗಳು ಕೂಡ ಕಂಕುಳಲ್ಲಿನ ಕೆಟ್ಟ ವಾಸನೆಗೆ ಕಾರಣವಾಗಬಹುದು! 

ಹೀಗಾಗಿ, ಉಸಿರಾಟದ ತೊಂದರೆ ಅಥವಾ ಅಸ್ತಮಾದ ಲಕ್ಷಣಗಳಿರುವ ಯುವಜನರು ಕ್ಯಾಂಡಲ್ ಬಳಸುವಾಗ ಮತ್ತು ಹೆಚ್ಚು ಸಮಯವನ್ನು ಅಡುಗೆ ಮನೆಯಲ್ಲಿ ಕಳೆಯುವಾಗ ಎಚ್ಚರ ವಹಿಸುವುದು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​