AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cannabis: ಗಾಂಜಾದಲ್ಲಿನ ಸಂಯುಕ್ತಗಳು ಕೊರೋನಾ ಸೋಂಕು ಜೀವಕೋಶಗಳಿಗೆ ಹರಡುವುದನ್ನು ತಡೆಯುತ್ತದೆ: ಅಧ್ಯಯನ

ಕೋವಿಡ್​ 19 ಹರಡುವ ವೈರಸ್​ಗಳು ದೇಹದ ಜೀವಕೋಶಗಳಿಗೆ ಸೇರುವುದನ್ನು ಗಾಂಜಾ ಸಂಯುಕ್ತ (Cannabis) ಅಂಶಗಳು ತಡೆಯುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಯುಎಸ್​ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಇದು ಸಾಬೀತಾಗಿದೆ. 

Cannabis: ಗಾಂಜಾದಲ್ಲಿನ ಸಂಯುಕ್ತಗಳು ಕೊರೋನಾ ಸೋಂಕು ಜೀವಕೋಶಗಳಿಗೆ ಹರಡುವುದನ್ನು ತಡೆಯುತ್ತದೆ: ಅಧ್ಯಯನ
ಕ್ಯಾನಬೀಸ್ / ಗಾಂಜಾ
TV9 Web
| Edited By: |

Updated on: Jan 14, 2022 | 1:03 PM

Share

ಕೋವಿಡ್​ 19 ಹರಡುವ ವೈರಸ್​ಗಳು ದೇಹದ ಜೀವಕೋಶಗಳಿಗೆ ಸೇರುವುದನ್ನು ಗಾಂಜಾ ಸಂಯುಕ್ತ (Cannabis) ಅಂಶಗಳು ತಡೆಯುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಯುಎಸ್​ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಇದು ಸಾಬೀತಾಗಿದೆ.  ಒರೆಗಾನ್​ ಸ್ಟೇಟ್​ ಯುನಿವರ್ಸಿಟಿಯ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಗಾಂಜಾ ಕೊರೋನಾ ಹರಡುವುದನ್ನು ತಡೆಯುತ್ತದೆ ಎಂದು  ರಾಸಾಯನಿಕ ಸ್ಕ್ರೀನಿಂಗ್​ ತಂತ್ರಜ್ಞಾನದ ಮೂಲಕ ಕಂಡುಹಿಡಿಯಾಲಾಗಿದೆ. ಗಾಂಜಾವನ್ನು ಸೌಂದರ್ಯವರ್ಧಕಗಳ ತಯಾರಿಕೆ, ಪೋಷಣೆಯುಕ್ತ ಕೆಲವು ಆಹಾರಗಳ ತಯಾರಿಕೆ ಹಾಗೂ ಬಾಡಿ ಲೋಷನ್​ಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ ಎಂದು  ರಿಚರ್ಡ್​ ವಾನ್​ ಎನ್ನುವ ಸಂಶೊಧಕ ತಿಳಿಸಿದ್ದಾರೆ. 

ಜರ್ನಲ್​ ನ್ಯಾಚುರಲ್​ ಪ್ರೊಡಕ್ಟ್ಸ್​ನಲ್ಲಿ ಅಧ್ಯಯನದ ವರದಿಯು ಪ್ರಕಟವಾಗಿದ್ದು ಗಾಂಜಾದಲ್ಲಿನ ಕೆಲವು ಸಂಯುಕ್ತಗಳು ಮಾನವನ ಜೀವಕೋಶಗಳಿಗೆ ಕೋವಿಡ್​ 19 ವೈರಸ್​ ಸೇರುವುದನ್ನು ತಪ್ಪಿಸುತ್ತದೆ ಎಂದು ಹೇಳಲಾಗಿದೆ.  ಒಂದು ಜೋಡಿ ಕ್ಯಾನಬಿನ್​ಗಳು SARS-CoV-2  ಹರಡುವುದನ್ನು ತಡೆಯುತ್ತದೆ. ಕೊರೋನಾ ವ್ಯಾಕ್ಸಿನ್​ ತಾಯಾರಿಕೆಯ ವೇಳೆಯಲ್ಲಿಯೂ ಕಾನಬೀಸ್​ ಆಸಿಡ್​, ಸ್ಪೈಕ್​ ಪ್ರೋಟೀನ್​ಅನ್ನು ಬಳಸಲಾಗಿದೆ. ಇವುಗಳು ಸೋಂಕು ಹರಡುವುದನ್ನು ಹಾಗೂ ಮಾನವನ ದೇಹದಲ್ಲಿ ಸೋಂಕು ಪ್ರಗತಿ ಹೊಂದುವುದನ್ನು ತಡೆಯುತ್ತದೆ ಎಂದು ಸಾಬೀತಾಗಿದೆ. ಹೆಂಪ್ ಎಂದು ಕರೆಯಲ್ಪಡುವ ಕ್ಯಾನಬೀಸ್ ಅಥವಾ ಗಾಂಜಾಗಳು ಫೈಬರ್, ಆಹಾರ ಮತ್ತು ಪಶು ಆಹಾರದ ಮೂಲವಾಗಿದೆ.

ಕ್ಯಾನಜಿರಿಯೋಲಿಕ್​ ಮತ್ತು ಕ್ಯಾನಬಿಡಿಯೋಲಿಕ್​ ಆಮ್ಲವು (cannabigerolic acid (CBGA) and cannabidiolic acid (CBDA) ) ಸ್ಪೈಕ್​ ಪ್ರೋಟೀನ್​ ಅಂಶದಿಂದ ಮಾನವನ ದೇಹಕ್ಕೆ ಎಫಿಥಿಲಿಯಲ್​ ಕೋಶಗಳ ಸೋಂಕು ಮತ್ತು ಜೀವಕೋಶಗಳಿಗೆ SARS-CoV-2 ಸೋಂಕು ಹರಡುವುದನ್ನು ತಡೆಯುತ್ತದೆ ಎಂದು ಲ್ಯಾಬ್​ ಟೆಸ್ಟ್​ನಲ್ಲಿ ಕಂಡುಹಿಡಿಯಲಾಗಿದೆ.  ಇವುಗಳು ಮಾನವನ ದೇಹಕ್ಕೆ ಸುರಕ್ಷಾ ಕವಚದಂತೆ ಕೆಲಸಮಾಡುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:

ಗಾಳಿಯಲ್ಲಿ 20 ನಿಮಿಷಗಳೊಳಗೆ ದುರ್ಬಲಗೊಳ್ಳುತ್ತದೆ ಕೊವಿಡ್ ವೈರಾಣು; ಮಾಸ್ಕ್ ಹಾಗೂ ಅಂತರ ಕಾಪಾಡುವುದರ ಪ್ರಾಮುಖ್ಯತೆ ವಿವರಿಸಿದ ಅಧ್ಯಯನ

Follow Us
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ
ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ
ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?
ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?
ಎಲ್​ಪಿಜಿ ಗ್ಯಾಸ್ ಹಾಹಾಕಾರ;ವೀಕೆಂಡ್​ನಲ್ಲಿಯೂ ಬಂದ್ ಆದ ಹೋಟೆಲ್ಸ್ !
ಎಲ್​ಪಿಜಿ ಗ್ಯಾಸ್ ಹಾಹಾಕಾರ;ವೀಕೆಂಡ್​ನಲ್ಲಿಯೂ ಬಂದ್ ಆದ ಹೋಟೆಲ್ಸ್ !
ಗಂಡು ಮಕ್ಕಳಿಲ್ಲದಿದ್ದರೇನು? ಅಂತ್ಯಕ್ರಿಯೆ ನಡೆಸಿದ ಇಬ್ಬರು ಹೆಣ್ಣು ಮಕ್ಕಳು!
ಗಂಡು ಮಕ್ಕಳಿಲ್ಲದಿದ್ದರೇನು? ಅಂತ್ಯಕ್ರಿಯೆ ನಡೆಸಿದ ಇಬ್ಬರು ಹೆಣ್ಣು ಮಕ್ಕಳು!
1700 ರೂ. ಬೆಲೆಯ ಸಿಲಿಂಡರ್ 5000 ರೂ. ಗೆ ಮಾರಾಟ!
1700 ರೂ. ಬೆಲೆಯ ಸಿಲಿಂಡರ್ 5000 ರೂ. ಗೆ ಮಾರಾಟ!