AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cannabis: ಗಾಂಜಾದಲ್ಲಿನ ಸಂಯುಕ್ತಗಳು ಕೊರೋನಾ ಸೋಂಕು ಜೀವಕೋಶಗಳಿಗೆ ಹರಡುವುದನ್ನು ತಡೆಯುತ್ತದೆ: ಅಧ್ಯಯನ

ಕೋವಿಡ್​ 19 ಹರಡುವ ವೈರಸ್​ಗಳು ದೇಹದ ಜೀವಕೋಶಗಳಿಗೆ ಸೇರುವುದನ್ನು ಗಾಂಜಾ ಸಂಯುಕ್ತ (Cannabis) ಅಂಶಗಳು ತಡೆಯುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಯುಎಸ್​ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಇದು ಸಾಬೀತಾಗಿದೆ. 

Cannabis: ಗಾಂಜಾದಲ್ಲಿನ ಸಂಯುಕ್ತಗಳು ಕೊರೋನಾ ಸೋಂಕು ಜೀವಕೋಶಗಳಿಗೆ ಹರಡುವುದನ್ನು ತಡೆಯುತ್ತದೆ: ಅಧ್ಯಯನ
ಕ್ಯಾನಬೀಸ್ / ಗಾಂಜಾ
TV9 Web
| Edited By: |

Updated on: Jan 14, 2022 | 1:03 PM

Share

ಕೋವಿಡ್​ 19 ಹರಡುವ ವೈರಸ್​ಗಳು ದೇಹದ ಜೀವಕೋಶಗಳಿಗೆ ಸೇರುವುದನ್ನು ಗಾಂಜಾ ಸಂಯುಕ್ತ (Cannabis) ಅಂಶಗಳು ತಡೆಯುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಯುಎಸ್​ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಇದು ಸಾಬೀತಾಗಿದೆ.  ಒರೆಗಾನ್​ ಸ್ಟೇಟ್​ ಯುನಿವರ್ಸಿಟಿಯ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಗಾಂಜಾ ಕೊರೋನಾ ಹರಡುವುದನ್ನು ತಡೆಯುತ್ತದೆ ಎಂದು  ರಾಸಾಯನಿಕ ಸ್ಕ್ರೀನಿಂಗ್​ ತಂತ್ರಜ್ಞಾನದ ಮೂಲಕ ಕಂಡುಹಿಡಿಯಾಲಾಗಿದೆ. ಗಾಂಜಾವನ್ನು ಸೌಂದರ್ಯವರ್ಧಕಗಳ ತಯಾರಿಕೆ, ಪೋಷಣೆಯುಕ್ತ ಕೆಲವು ಆಹಾರಗಳ ತಯಾರಿಕೆ ಹಾಗೂ ಬಾಡಿ ಲೋಷನ್​ಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ ಎಂದು  ರಿಚರ್ಡ್​ ವಾನ್​ ಎನ್ನುವ ಸಂಶೊಧಕ ತಿಳಿಸಿದ್ದಾರೆ. 

ಜರ್ನಲ್​ ನ್ಯಾಚುರಲ್​ ಪ್ರೊಡಕ್ಟ್ಸ್​ನಲ್ಲಿ ಅಧ್ಯಯನದ ವರದಿಯು ಪ್ರಕಟವಾಗಿದ್ದು ಗಾಂಜಾದಲ್ಲಿನ ಕೆಲವು ಸಂಯುಕ್ತಗಳು ಮಾನವನ ಜೀವಕೋಶಗಳಿಗೆ ಕೋವಿಡ್​ 19 ವೈರಸ್​ ಸೇರುವುದನ್ನು ತಪ್ಪಿಸುತ್ತದೆ ಎಂದು ಹೇಳಲಾಗಿದೆ.  ಒಂದು ಜೋಡಿ ಕ್ಯಾನಬಿನ್​ಗಳು SARS-CoV-2  ಹರಡುವುದನ್ನು ತಡೆಯುತ್ತದೆ. ಕೊರೋನಾ ವ್ಯಾಕ್ಸಿನ್​ ತಾಯಾರಿಕೆಯ ವೇಳೆಯಲ್ಲಿಯೂ ಕಾನಬೀಸ್​ ಆಸಿಡ್​, ಸ್ಪೈಕ್​ ಪ್ರೋಟೀನ್​ಅನ್ನು ಬಳಸಲಾಗಿದೆ. ಇವುಗಳು ಸೋಂಕು ಹರಡುವುದನ್ನು ಹಾಗೂ ಮಾನವನ ದೇಹದಲ್ಲಿ ಸೋಂಕು ಪ್ರಗತಿ ಹೊಂದುವುದನ್ನು ತಡೆಯುತ್ತದೆ ಎಂದು ಸಾಬೀತಾಗಿದೆ. ಹೆಂಪ್ ಎಂದು ಕರೆಯಲ್ಪಡುವ ಕ್ಯಾನಬೀಸ್ ಅಥವಾ ಗಾಂಜಾಗಳು ಫೈಬರ್, ಆಹಾರ ಮತ್ತು ಪಶು ಆಹಾರದ ಮೂಲವಾಗಿದೆ.

ಕ್ಯಾನಜಿರಿಯೋಲಿಕ್​ ಮತ್ತು ಕ್ಯಾನಬಿಡಿಯೋಲಿಕ್​ ಆಮ್ಲವು (cannabigerolic acid (CBGA) and cannabidiolic acid (CBDA) ) ಸ್ಪೈಕ್​ ಪ್ರೋಟೀನ್​ ಅಂಶದಿಂದ ಮಾನವನ ದೇಹಕ್ಕೆ ಎಫಿಥಿಲಿಯಲ್​ ಕೋಶಗಳ ಸೋಂಕು ಮತ್ತು ಜೀವಕೋಶಗಳಿಗೆ SARS-CoV-2 ಸೋಂಕು ಹರಡುವುದನ್ನು ತಡೆಯುತ್ತದೆ ಎಂದು ಲ್ಯಾಬ್​ ಟೆಸ್ಟ್​ನಲ್ಲಿ ಕಂಡುಹಿಡಿಯಲಾಗಿದೆ.  ಇವುಗಳು ಮಾನವನ ದೇಹಕ್ಕೆ ಸುರಕ್ಷಾ ಕವಚದಂತೆ ಕೆಲಸಮಾಡುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:

ಗಾಳಿಯಲ್ಲಿ 20 ನಿಮಿಷಗಳೊಳಗೆ ದುರ್ಬಲಗೊಳ್ಳುತ್ತದೆ ಕೊವಿಡ್ ವೈರಾಣು; ಮಾಸ್ಕ್ ಹಾಗೂ ಅಂತರ ಕಾಪಾಡುವುದರ ಪ್ರಾಮುಖ್ಯತೆ ವಿವರಿಸಿದ ಅಧ್ಯಯನ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ