AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Child Health: ಮಕ್ಕಳಲ್ಲಿ ಆಗಾಗ್ಗೆ ಕಾಡುವ ಬಿಕ್ಕಳಿಸುವಿಕೆಗೆ ಕಾರಣ ಮತ್ತು ತಕ್ಷಣದ ಪರಿಹಾರ

ಜನನದ ನಂತರದ ಮೊದಲ ಕೆಲವು ತಿಂಗಳು ಮಕ್ಕಳು ಬಹಳಷ್ಟು ಬಿಕ್ಕಳಿಸುವಿಕೆಯನ್ನು ಅನುಭವಿಸುತ್ತಾರೆ, ಆದರೆ ಮಗು ಬೆಳೆದಂತೆ, ಬಿಕ್ಕಳಿಸುವಿಕೆಯು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಸದ್ಯಕ್ಕೆ ಮಕ್ಕಳಲ್ಲಿ ಕಾಡುವ ಬಿಕ್ಕಳಿಕೆಯ ಹಿಂದಿನ ಕಾರಣ ಮತ್ತು ಕೆಲವು ಮನೆಮದ್ದುಗಳನ್ನು ಇಲ್ಲಿ ತಿಳಿದುಕೊಳ್ಳಿ.

Child Health: ಮಕ್ಕಳಲ್ಲಿ ಆಗಾಗ್ಗೆ ಕಾಡುವ ಬಿಕ್ಕಳಿಸುವಿಕೆಗೆ ಕಾರಣ ಮತ್ತು ತಕ್ಷಣದ ಪರಿಹಾರ
Hiccups Image Credit source: Pinterest
ಅಕ್ಷತಾ ವರ್ಕಾಡಿ
|

Updated on: Dec 25, 2023 | 2:05 PM

Share

ಬಿಕ್ಕಳಿಕೆ ಸಂಭವಿಸಿದಾಗ, ಯಾರಾದರೂ ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಹಿರಿಯರು ಹೇಳುವುದುಂಟು. ಆದರೆ ಈ ಸಮಸ್ಯೆ ಮುಂದುವರಿದರೆ ಅದು ತೊಂದರೆಗೆ ಕಾರಣವಾಗಬಹುದು. ಅನೇಕ ಬಾರಿ, ಬಿಕ್ಕಳಿಸುವಿಕೆಯು ಮಕ್ಕಳನ್ನು ಬಹಳಷ್ಟು ತೊಂದರೆಗೊಳಿಸುತ್ತದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ಪೋಷಕರಿಗೆ ಅರ್ಥವಾಗುವುದಿಲ್ಲ. ಸ್ವಲ್ಪ ಸಮಯದ ನಂತರ ಬಿಕ್ಕಳಿಕೆಗಳು ತಾನಾಗಿಯೇ ನಿಲ್ಲುತ್ತವೆ. ಜನನದ ನಂತರದ ಮೊದಲ ಕೆಲವು ದಿನಗಳಲ್ಲಿ ಮಕ್ಕಳು ಬಹಳಷ್ಟು ಬಿಕ್ಕಳಿಸುವಿಕೆಯನ್ನು ಅನುಭವಿಸುತ್ತಾರೆ, ಆದರೆ ಮಗು ಬೆಳೆದಂತೆ, ಬಿಕ್ಕಳಿಸುವಿಕೆಯು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಸದ್ಯಕ್ಕೆ ಮಕ್ಕಳಲ್ಲಿ ಕಾಡುವ ಬಿಕ್ಕಳಿಕೆಯ ಹಿಂದಿನ ಕಾರಣ ಮತ್ತು ಕೆಲವು ಮನೆಮದ್ದುಗಳನ್ನು ಇಲ್ಲಿ ತಿಳಿದುಕೊಳ್ಳಿ.

ಚಿಕ್ಕ ಮಕ್ಕಳಲ್ಲಿ ಬಿಕ್ಕಳಿಸುವಿಕೆಗೆ ಕಾರಣವೇನು?

ಹಸುಗೂಸು ಎದೆಹಾಲು ಕುಡಿದು ಹೊಟ್ಟೆ ತುಂಬಿಸಿಕೊಳ್ಳುವುದರಿಂದ ಆಗಾಗ್ಗೆ ಬಿಕ್ಕಳಿಕೆ ಕಾಡುತ್ತದೆ. ಆದ್ದರಿಂದ ಹಾಲು ಕುಡಿಸಿದ ನಂತರ ಮಗುವನ್ನು ಭುಜದ ಮೇಲೆ ಮಲಗಿಸಿ ಬೆನ್ನಿನ ನಿಧಾನವಾಗಿ ತಟ್ಟಿ ಅಥವಾ ಮಸಾಜ್ ಮಾಡಿ. ಅನೇಕ ಬಾರಿ, ಮಗು ಹೆಚ್ಚಾಗಿ ಹಾಲು ಕುಡಿದರೂ ಸಹ, ಬಿಕ್ಕಳಿಕೆ ಉಂಟಾಗುತ್ತದೆ.

ಇದನ್ನೂ ಓದಿ: ಇಲಿ ಕಚ್ಚಿ 40 ದಿನದ ಹಸುಗೂಸು ಸಾವು

ಬಿಕ್ಕಳಿಸುವಿಕೆಗೆ ಕೆಲ ಮನೆಮದ್ದುಗಳು:

ಜೇನುತುಪ್ಪ:

ಮಗುವಿಗೆ ನಿರಂತರ ಬಿಕ್ಕಳಿಕೆ ಇದ್ದರೆ, ಚಮಚದ ಸಹಾಯದಿಂದ ನಾಲಿಗೆಗೆ ಸ್ವಲ್ಪ ಜೇನುತುಪ್ಪ ಸವರಿ.ಇದು ಮಗುವಿಗೆ ಸ್ವಲ್ಪ ಸಮಯದಲ್ಲಿ ಬಿಕ್ಕಳಿಕೆಯಿಂದ ಪರಿಹಾರ ನೀಡುತ್ತದೆ.

ಕಲ್ಲು ಸಕ್ಕರೆ:

ಮಗುವು 6 ತಿಂಗಳಿಗಿಂತ ದೊಡ್ಡದಾಗಿದ್ದರೆ ಚಿಕ್ಕ ತುಂಡು ಕಲ್ಲು ಸಕ್ಕರೆಯನ್ನು ಮಗುವಿನ ಬಾಯಲ್ಲಿ ಇಡಿ. ಕಲ್ಲು ಸಕ್ಕರೆ ನಿಧಾನವಾಗಿ ಕರಗುವುದರಿಂದ ಬಿಕ್ಕಳಿಸುವಿಕೆ ನಿಧಾನವಾಗಿ ಕಡಿಮೆಯಾಗುತ್ತದೆ.

ಹಾಲುಣಿಸುವುದರಿಂದ ಚಿಕ್ಕ ಮಕ್ಕಳಲ್ಲಿ ಬಿಕ್ಕಳಿಕೆ ಸಾಮಾನ್ಯವಾಗಿರುತ್ತದೆ. ಆದರೆ ಪದೇ ಪದೇ ಕಾಡುತ್ತಿದ್ದು ನಿಮ್ಮ ಮಗುವಿನ ನಿದ್ದೆಗೆ ಅಡ್ಡಿಯುಂಟಾಗುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ