Diabetes Symptoms: ಮಕ್ಕಳಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ; ಭಾರತದಲ್ಲಿ ಎಳೆ ವಯಸ್ಸಿನಲ್ಲೇ ಹೆಚ್ಚುತ್ತಿದೆ ಮಧುಮೇಹ

Health Tips: ಮಹಿಳೆಯರು ಗರ್ಭಿಣಿಯಾಗುವ ಮೊದಲು ಮತ್ತು ಅವರ ಗರ್ಭಾವಸ್ಥೆಯಲ್ಲಿ ಮಹಿಳೆಯರನ್ನು ಮತ್ತು ಅವರ ಮಕ್ಕಳನ್ನು ಬಾಲ್ಯ, ಪ್ರೌಢಾವಸ್ಥೆ ಮತ್ತು ಈಗ ವಯಸ್ಕರಾದಂತೆ ಟ್ರ್ಯಾಕ್ ಮಾಡಿರುವ ಸಂಶೋಧಕರು 3 ತಲೆಮಾರಿನಿಂದ ವ್ಯಕ್ತಿಗಳ ಮಧುಮೇಹದ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ.

Diabetes Symptoms: ಮಕ್ಕಳಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ; ಭಾರತದಲ್ಲಿ ಎಳೆ ವಯಸ್ಸಿನಲ್ಲೇ ಹೆಚ್ಚುತ್ತಿದೆ ಮಧುಮೇಹ
ಸಾಂದರ್ಭಿಕ ಚಿತ್ರ
Follow us
| Updated By: ಸುಷ್ಮಾ ಚಕ್ರೆ

Updated on: Nov 13, 2021 | 4:49 PM

ಭಾರತದ ಯುವಪೀಳಿಗೆಯಲ್ಲಿ ಇತ್ತೀಚೆಗೆ ಡಯಾಬಿಟಿಸ್ (Diabetes) ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. 45ರಿಂದ 50 ವರ್ಷ ದಾಟಿದವರಲ್ಲಿ ಜಾಸ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದ ಸಕ್ಕರೆ ಕಾಯಿಲೆ ಈಗ ಮಕ್ಕಳಲ್ಲಿ ಕೂಡ ಕಾಣಿಸಿಕೊಳ್ಳತೊಡಗಿದೆ. ಎಳೆ ವಯಸ್ಸಿನಲ್ಲೇ ಮಕ್ಕಳಲ್ಲಿ ಡಯಾಬಿಟಿಸ್ ಅಥವಾ ಮಧುಮೇಹ ಕಾಣಿಸಿಕೊಳ್ಳಲು ಕಾರಣವೇನು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಪುಣೆಯ 700ಕ್ಕೂ ಹೆಚ್ಚು ಕುಟುಂಬಗಳನ್ನು ಅಧ್ಯಯನಕ್ಕೆ ಒಳಪಡಿಸಿದ ಸಂಶೋಧನಾ ತಂಡವೊಂದು ಆ ಕುಟುಂಬಗಳ ಅನೇಕ ವ್ಯಕ್ತಿಗಳಲ್ಲಿ ಬಾಲ್ಯದಲ್ಲಿಯೇ ಹೆಚ್ಚಿನ ಗ್ಲೂಕೋಸ್‌ನ ಮಟ್ಟವನ್ನು ಪತ್ತೆಹಚ್ಚಿದೆ.

ಪುಣೆಯ ಕೆಇಎಂ ಆಸ್ಪತ್ರೆಯ ಮಧುಮೇಹ ಘಟಕದಲ್ಲಿ ಸಂಶೋಧಕರು ಕಳೆದ 35 ವರ್ಷಗಳಿಂದ ಭಾರತೀಯರಲ್ಲಿ ಮಧುಮೇಹ ಏಕೆ ಸಾಮಾನ್ಯವಾಗಿದೆ ಎಂಬುದರ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. 1993ರಲ್ಲಿ ಅವರು ಪುಣೆ ಸಮೀಪದ ಆರು ಹಳ್ಳಿಗಳಲ್ಲಿ ಅಧ್ಯಯನವನ್ನು (PMNS) ಪ್ರಾರಂಭಿಸಿದರು. ನಂತರ 700ಕ್ಕೂ ಹೆಚ್ಚು ಕುಟುಂಬಗಳನ್ನು ಅಧ್ಯಯನಕ್ಕೆ ಒಳಪಡಿಸಿದರು. ಆ ಕುಟುಂಬದ ಮಹಿಳೆಯರು ಗರ್ಭಿಣಿಯಾಗುವ ಮೊದಲು ಮತ್ತು ಅವರ ಗರ್ಭಾವಸ್ಥೆಯಲ್ಲಿ ಮಹಿಳೆಯರನ್ನು ಮತ್ತು ಅವರ ಮಕ್ಕಳನ್ನು ಬಾಲ್ಯ, ಪ್ರೌಢಾವಸ್ಥೆ ಮತ್ತು ಈಗ ವಯಸ್ಕರಾದಂತೆ ಟ್ರ್ಯಾಕ್ ಮಾಡಿರುವ ಸಂಶೋಧಕರು 3 ತಲೆಮಾರಿನಿಂದ ವ್ಯಕ್ತಿಗಳ ಮಧುಮೇಹದ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ.

ಏನಿದು ಸಂಶೋಧನೆ?: ಸಂಶೋಧಕರು 6, 12 ಮತ್ತು 18ನೇ ವಯಸ್ಸಿನಲ್ಲಿ ಗ್ಲೂಕೋಸ್ ಮತ್ತು ಇನ್ಸುಲಿನ್ ಸಾಂದ್ರತೆಗಳು ಮತ್ತು ಇತರ ಪ್ರಮುಖ ಡೇಟಾವನ್ನು ಅಳೆಯುತ್ತಾರೆ. 18 ವರ್ಷಗಳಲ್ಲಿ, 37 ಪ್ರತಿಶತ ಪುರುಷರು ಮತ್ತು 18 ಪ್ರತಿಶತ ಮಹಿಳೆಯರಲ್ಲಿ ಗ್ಲೂಕೋಸ್ ಮಟ್ಟ (ಪ್ರಿಡಿಯಾಬಿಟಿಸ್) ಹೆಚ್ಚಾಗಿದೆ. ಗರ್ಭಾಶಯದಲ್ಲಿ ಉತ್ತಮ ಬೆಳವಣಿಗೆಯನ್ನು ಹೊಂದಿರುವ ಮಕ್ಕಳು ಕೂಡ ಬಾಲ್ಯದಿಂದಲೂ ಮಧುಮೇಹದ ಅಪಾಯಕಾರಿ ಅಂಶಗಳನ್ನು ಹೊಂದಿರುತ್ತಾರೆ ಎಂದು ಸಂಶೋಧನೆ ತಿಳಿಸಿದೆ. 6 ಮತ್ತು 12 ನೇ ವಯಸ್ಸಿನಲ್ಲಿ ಅಳೆಯುವಾಗಲೂ ಹೆಚ್ಚಿನ ಗ್ಲೂಕೋಸ್‌ನ ಪ್ರವೃತ್ತಿಯು ಗೋಚರಿಸಿದೆ. ಇದು ಕಳಪೆಯಾಗಿ ಕಾರ್ಯ ನಿರ್ವಹಿಸುವ ಮೇದೋಜೀರಕ ಗ್ರಂಥಿಯ ಪರಿಣಾಮವಾಗಿದೆ ಎಂದು ಸಂಶೋಧಕರು ತೀರ್ಮಾನಿಸಿದ್ದಾರೆ.

ಇಂದಿನ ಕಾಲದ ಮಕ್ಕಳು ಕೂಡ ಫಾಸ್ಟ್ ಫುಡ್‪ಗೆ ಮೊರೆ ಹೋಗಿ ದೈಹಿಕ ಚಟುವಟಿಕೆಗಳು ಇಲ್ಲದೆ ಇರುವ ಕಾರಣದಿಂದ ಮಕ್ಕಳಲ್ಲಿ ಬೊಜ್ಜು ಹೆಚ್ಚಾಗುತ್ತಿದೆ. ಇದು ಮಧುಮೇಹಕ್ಕೆ ಪ್ರಮುಖ ಕಾರಣವೆನ್ನಬಹುದು. ನಿಶ್ಯಕ್ತಿ, ತೂಕ ಇಳಿಯುವುದು, ದಾಹ ಹೆಚ್ಚಾಗುವುದು, ಪದೇ ಪದೇ ಮೂತ್ರ ವಿಸರ್ಜನೆ, ಹೊಟ್ಟೆ ನೋವು, ದೃಷ್ಟಿ ಮಂದವಾಗುವುದು, ಗಾಯಗಳು ನಿಧಾನವಾಗಿ ಒಣಗುವುದು, ಅಸಾಮಾನ್ಯ ತೂಕ ಹೆಚ್ಚಳ, ಸಿಡುಕುತನ, ನಡವಳಿಕೆಗಳಲ್ಲಿ ಬದಲಾವಣೆಯಾಗುವುದು ಮಕ್ಕಳಲ್ಲಿ ಡಯಾಬಿಟಿಸ್ ಇದೆ ಎಂಬುದರ ಸೂಚನೆ. ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರ ಬಳಿ ಕರೆದುಕೊಂಡು ಹೋಗಿ.

ಭಾರತದಲ್ಲಿ ಕೂಡ ಟೈಪ್ 2 ಮಧುಮೇಹಕ್ಕೆ ತುತ್ತಾಗುತ್ತಿರುವ ಮಕ್ಕಳ ಸಂಖ್ಯೆಯು ಹೆಚ್ಚಾಗುತ್ತಿದೆ. ಇದರಿಂದಲೇ ಭಾರತವನ್ನು ವಿಶ್ವದಲ್ಲಿ ಮಧುಮೇಹದ ರಾಜಧಾನಿ ಎಂದು ಕರೆಯಲಾಗುತ್ತಿದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮಧುಮೇಹದಿಂದಾಗಿ ದೊಡ್ಡ ಮತ್ತು ಸಣ್ಣ ರಕ್ತನಾಳ, ಮೆದುಳು, ಹೃದಯ, ಕಿಡ್ನಿ, ಕಣ್ಣು, ಪಾದ ಮತ್ತು ನರಗಳಿಗೆ ಹಾನಿ ಆಗುತ್ತದೆ. ಭಾರತದಲ್ಲಿ ಸುಮಾರು 1.4 4 ಕೋಟಿ ಮಕ್ಕಳಲ್ಲಿ ಬೊಜ್ಜು ತುಂಬಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಭಾರತವು ಬೊಜ್ಜು ಹೊಂದಿರುವ ಮಕ್ಕಳಲ್ಲಿ ಎರಡನೇ ಸ್ಥಾನದಲ್ಲಿದೆ. ಬೊಜ್ಜು ಇನ್ಸುಲಿನ್ ಪ್ರತಿರೋಧತೆಯನ್ನು ಉಂಟುಮಾಡುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಭಾರತದಲ್ಲಿ 20ರಿಂದ 70 ವಯೋಮಾನದವರಲ್ಲಿ ಅಂದಾಜು ಶೇ. 8.7ರಷ್ಟು ಜನರಿಗೆ ಮಧುಮೇಹ ಕಂಡುಬಂದಿದೆ. ಅಂದಾಜಿನ ಪ್ರಕಾರ, ಸುಮಾರು 77 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಯುನಿಸೆಫ್ ಮತ್ತು ಜನಸಂಖ್ಯಾ ಮಂಡಳಿಯ ಮೊದಲ ರಾಷ್ಟ್ರೀಯ ಪೌಷ್ಟಿಕಾಂಶ ಸಮೀಕ್ಷೆ (2016-18) ಪ್ರಕಾರ, ಮಕ್ಕಳು ಮತ್ತು ಹದಿಹರೆಯದವರಲ್ಲಿ ಮಧುಮೇಹವು ಮಕ್ಕಳ ಮೇಲೆ ದೊಡ್ಡ ರೀತಿಯಲ್ಲಿ ಪರಿಣಾಮ ಬೀರುತ್ತಿದೆ. 2019ರಲ್ಲಿ ಬಿಡುಗಡೆಯಾದ ಸಮೀಕ್ಷೆಯು ಸುಮಾರು 10 ಮಕ್ಕಳಲ್ಲಿ 1 ಮಗು (5ರಿಂದ 9 ವರ್ಷದೊಳಗಿನ) ಮಧುಮೇಹದಿಂದ ಬಳಲುತ್ತಿದೆ ಎಂದು ತಿಳಿಸಿದೆ. ತಂದೆ-ತಾಯಿಯರ ಜಡ ಜೀವನಶೈಲಿ, ಅನಾರೋಗ್ಯಕರ ಆಹಾರ, ತಂಬಾಕು ಬಳಕೆ ಮತ್ತು ಹೆಚ್ಚುತ್ತಿರುವ ಜೀವಿತಾವಧಿ ಈ ಮಧುಮೇಹಕ್ಕೆ ಕಾರಣ ಎನ್ನಲಾಗಿದೆ.

ಇದನ್ನೂ ಓದಿ: Diabetes: ಟೈಪ್ 2 ಮಧುಮೇಹದ ಈ ಮುಖ್ಯ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

Weight Loss: ನಿದ್ರೆ ಮಾಡುವಾಗ ತೂಕ ಜಾಸ್ತಿ ಆಗುತ್ತಾ? ಕಡಿಮೆಯಾಗುತ್ತಾ?; ಅಚ್ಚರಿಯ ಸಂಗತಿ ಇಲ್ಲಿದೆ

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್