AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ear Care: ಕಿವಿಯ ವಿಷಯದಲ್ಲಿ ಇದನ್ನು ಆಲಕ್ಷ್ಯ ಮಾಡಿದರೆ, ಕೇಳಿಸುವುದು ಶಾಶ್ವತವಾಗಿ ಬಂದ್​ ಆಗುತ್ತದೆ, ಕೇಳಿಸ್ತಾ!?

Hearing Tests: ಕಿವಿಯೊಳಗೆ ಮೇಣದ ಅಂಶ ಮೂಡುವುದು ನೈಸರ್ಗಿಕ ಪ್ರಕ್ರಿಯೆ. ಕಿವಿಯ ಆರೋಗ್ಯಕ್ಕೆ ಇದು ಬಹಳ ಮುಖ್ಯ

Ear Care: ಕಿವಿಯ ವಿಷಯದಲ್ಲಿ ಇದನ್ನು ಆಲಕ್ಷ್ಯ ಮಾಡಿದರೆ, ಕೇಳಿಸುವುದು ಶಾಶ್ವತವಾಗಿ ಬಂದ್​ ಆಗುತ್ತದೆ, ಕೇಳಿಸ್ತಾ!?
ಕಿವಿಯ ಆರೋಗ್ಯಕ್ಕೆ ಇದು ಬಹಳ ಮುಖ್ಯ
Follow us
ಸಾಧು ಶ್ರೀನಾಥ್​
|

Updated on: Jun 01, 2023 | 12:46 PM

ಅನೇಕ ಜನರು ಕಿವಿ ಸಮಸ್ಯೆಗಳನ್ನು ಲಘುವಾಗಿ ಪರಿಗಣಿಸುತ್ತಾರೆ. ಕೊನೆಗೆ, ಸಮಸ್ಯೆಯನ್ನು ನಿಭಾಯಿಸಲು ಸಾಧ್ಯವಾಗದ ಕಾರಣ ನಾವು ಅನೇಕ ಬಾರಿ ವೈದ್ಯರ (audiologist) ಬಳಿಗೆ ಓಡುತ್ತೇವೆ. ಕಿವಿಗೆ ಸಂಬಂಧಿಸಿದ ಯಾವುದೇ ಸಣ್ಣ ಮತ್ತು ದೊಡ್ಡ ಸಮಸ್ಯೆ ಇರಲೀ ತಜ್ಞರಿಂದ ಸಲಹೆ ಪಡೆಯಬೇಕು. ಕಿವಿಯ ಆರೋಗ್ಯಕ್ಕಾಗಿ ಈ 7 ವಿಷಯಗಳನ್ನು ಅನುಸರಿಸಬೇಕು (Diagnosing Hearing Loss).

-ಕಿವಿಯಲ್ಲಿ ನಿರಂತರ ತುರಿಕೆ, ಕಿವಿ ನೋವು ಇತ್ಯಾದಿ ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸುವುದು ಬಹಳ ಮುಖ್ಯ. ಅದಕ್ಕಾಗಿಯೇ ಪ್ರತಿಯೊಬ್ಬರೂ 6 ತಿಂಗಳು-ವರ್ಷಕ್ಕೊಮ್ಮೆ ಕಿವಿ ಪರೀಕ್ಷೆ ಮಾಡಿಸಿಕೊಳ್ಳಬೇಕು.

– ಕಿವಿ ಕಜ್ಜಿ ಇದ್ದರೆ, ಬೆರಳನ್ನು ತೂರುವುದು ಸೂಕ್ತವಲ್ಲ. ಹೀಗೆ ಮಾಡುವುದರಿಂದ ತುರಿಕೆ ಹೆಚ್ಚುತ್ತದೆ.

– ಕಿವಿಯೊಳಗೆ ಇಯರ್ ಬಡ್ಸ್ ಅಥವಾ ಹತ್ತಿಯನ್ನು ಹಾಕಬೇಡಿ. ಇದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ನೀವೇ ಕಿವಿಯನ್ನು ಸ್ವಚ್ಛಗೊಳಿಸಬೇಕಾದರೆ, ಗೋಚರಿಸುವ ಕಿವಿಯ ಹೊರ ಭಾಗವನ್ನು ಮಾತ್ರ ಸ್ವಚ್ಛಗೊಳಿಸಿ.

-ಕಿವಿಯೊಳಗೆ ಮೇಣದ ಅಂಶ ಮೂಡುವುದು ನೈಸರ್ಗಿಕ ಪ್ರಕ್ರಿಯೆ. ಕಿವಿಯ ಆರೋಗ್ಯಕ್ಕೆ ಇದು ಬಹಳ ಮುಖ್ಯ. ಜೇನುಮೇಣವು ಅಲರ್ಜಿ ನಿವಾರಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸಣ್ಣ ಕೀಟಗಳು ಸಹ ಕಿವಿಗೆ ಪ್ರವೇಶಿಸದಂತೆ ತಡೆಯುತ್ತದೆ.

– ಕಿವಿಯಿಂದ ಮೇಣ ಹೊರಬರುವ ಪ್ರಕ್ರಿಯೆಯೂ ಸಹಜ. ಕೆಲವರಲ್ಲಿ ಮೇಣವು ಕಿವಿಯೊಳಗೆ ಗಟ್ಟಿಯಾಗುತ್ತದೆ. ಅದು ತಾನಾಗಿಯೇ ಹೊರಬರುವುದಿಲ್ಲ. ಈ ಸಂದರ್ಭದಲ್ಲಿ ವೈದ್ಯರ ಸಹಾಯವನ್ನು ತೆಗೆದುಕೊಳ್ಳಬೇಕು.

-ಹಾಗಂತ, ಕೊಬ್ಬರಿ ಎಣ್ಣೆಯನ್ನು ಕಿವಿಗೆ ಹಾಕಬೇಡಿ.

– ಪ್ರತಿದಿನ 1 ಗಂಟೆಗೂ ಹೆಚ್ಚು ಕಾಲ ಕಿವಿಯ ಹತ್ತಿರ ಇಟ್ಕೊಂಡು ಮೊಬೈಲ್ ಫೋನ್ ನಲ್ಲಿ ಮಾತನಾಡುವುದು, ಶೇ. 60ಕ್ಕಿಂತ ಹೆಚ್ಚು ವಾಲ್ಯೂಮ್ ನಲ್ಲಿ ಸಂಗೀತ ಕೇಳುವುದು ಕೂಡ ಶ್ರವಣ ದೋಷಕ್ಕೆ ಕಾರಣವಾಗಬಹುದು. ನೀವು ಸ್ಪೀಕರ್ ಮೋಡ್‌ನಲ್ಲಿ ಮೊಬೈಲ್ ಮಾತನಾಡುವುದು ಉತ್ತಮ.

ಕಿವಿಯಲ್ಲಿ ಈ ವಸ್ತುಗಳನ್ನು ಹಾಕಬೇಡಿ:

ಕೆಲವರು ತಮ್ಮ ಬೆರಳು, ಬೆಂಕಿಕಡ್ಡಿ, ಇಯರ್ ವ್ಯಾಕ್ಸ್ ತೆಗೆಯಲು ಬೈಕ್ ಕೀ ಕೂಡ ಬಳಸುತ್ತಾರೆ! ಹೀಗೆ ಮಾಡುವುದರಿಂದ ಆ ಕ್ಷಣಕ್ಕೆ ಸ್ವಲ್ಪ ಸಮಾಧಾನ ಸಿಗುತ್ತದೆ. ಆದರೆ ಕಿವಿಯಲ್ಲಿ ಬೆಂಕಿಕಡ್ಡಿಗಳು, ಪಿನ್​ ಅಥವಾ ಕೀ ಚೈನ್​​ ಹಾಕುವುದರಿಂದ ಸೋಂಕು ಉಂಟಾಗುತ್ತದೆ. ಕಿವಿ ನೋವು, ಅಥವಾ ಕೀವು ಸ್ರವಿಸುವಿಕೆ ಪ್ರಾರಂಭವಾದಾಗ ಇ.ಎನ್.​​ಟಿ. ತಜ್ಞರನ್ನು ಭೇಟಿ ಮಾಡುವುದು ಉತ್ತಮ.

ಸಾಮಾನ್ಯವಾಗಿ ನಡೆಸಲಾಗುವ ಕಿವಿ ಪರೀಕ್ಷೆಗಳು:

ವಾಯು-ವಾಹಕ ಪರೀಕ್ಷೆ: ಈ ಪರೀಕ್ಷೆಯನ್ನು ಶುದ್ಧ ಟೋನ್ ಆಡಿಯೊಮೆಟ್ರಿ ಎಂದೂ ಕರೆಯಲಾಗುತ್ತದೆ. ಇದರಲ್ಲಿ ರೋಗಿಗೆ ಹೆಡ್‌ಫೋನ್‌ಗಳನ್ನು ಅಳವಡಿಸಲಾಗಿದೆ. ಟೋನ್ ಅನ್ನು ಹೆಡ್‌ಫೋನ್‌ಗಳಿಗೆ ಕಳುಹಿಸಲಾಗುತ್ತದೆ. ರೋಗಿಯು ಧ್ವನಿಯನ್ನು ಕೇಳಿದಾಗ, ಅವನು ತನ್ನ ಕೈಯನ್ನು ಮೇಲಕ್ಕೆತ್ತಬೇಕು ಅಥವಾ ತಜ್ಞರು ಹೇಳುವ ಗುಂಡಿಯನ್ನು ಒತ್ತಬೇಕು. ರೋಗಿಯ ಶ್ರವಣಶಕ್ತಿ ಎಷ್ಟು ಚೆನ್ನಾಗಿದೆ ಎಂಬುದನ್ನು ಇದು ತೋರಿಸುತ್ತದೆ.

ಬೋನ್ ಕಂಡಕ್ಷನ್ ಟೆಸ್ಟಿಂಗ್: ಇದರ ಮೂಲಕ ರೋಗಿಯ ಒಳಕಿವಿಯನ್ನು ಪರೀಕ್ಷಿಸಲಾಗುತ್ತದೆ. ಇದರಲ್ಲಿ ಸಣ್ಣ ಶಬ್ದಗಳನ್ನು ಕಿವಿಗೆ ಕಳುಹಿಸುವ ಮೂಲಕ ಶ್ರವಣ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ.

ವಾಕ್ ಪರೀಕ್ಷೆ: ಇದರಲ್ಲಿ ರೋಗಿಯು ಇತರರು ಏನು ಹೇಳುತ್ತಿದ್ದಾರೆಂಬುದನ್ನು ಅವರು ಎಷ್ಟು ಮಟ್ಟಿಗೆ ಅರ್ಥಮಾಡಿಕೊಳ್ಳಬಹುದು ಎಂಬುದನ್ನು ಪರಿಶೀಲಿಸಲಾಗುತ್ತದೆ.

ಟೈಂಪನೋಮೆಟ್ರಿ ಪರೀಕ್ಷೆ: ಈ ಪರೀಕ್ಷೆಯು ಕಿವಿಯೋಲೆಯ ಮೇಲಿನ ಗಾಳಿಯ ಒತ್ತಡವನ್ನು ಅಳೆಯುತ್ತದೆ. ಕಿವಿಯಲ್ಲಿ ಯಾವುದೇ ದ್ರವ ಅಥವಾ ಮೇಣದ ಸಂಗ್ರಹವಿಲ್ಲ ಎಂದು ಇದು ತೋರಿಸುತ್ತದೆ.

ಅಕೌಸ್ಟಿಕ್ ರಿಫ್ಲೆಕ್ಸ್ ಪರೀಕ್ಷೆ: ಇದು ಮಧ್ಯಮ ಕಿವಿಯ ಸ್ನಾಯುಗಳ ಚಲನೆಯನ್ನು ಪರೀಕ್ಷಿಸುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!