AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aloe Vera Juice: ವಸಡು ಸವೆತ, ಹಲ್ಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಲೋಳೇಸರ ಜ್ಯೂಸ್​ ಉತ್ತಮ ಪರಿಹಾರ

ಅಲೋವೆರಾ ಪ್ರಯೋಜನಗಳು: ದೇಹದ ಕೀಲುಗಳು ಬಲಿಷ್ಠಗೊಳ್ಳುತ್ತವೆ. ಕೀಲು ನೋವಿನಿಂದ ಮುಕ್ತಿ ಹೊಂದಬಹುದು. ಜತೆಗೆ ದೇಹವು ಅಗತ್ಯವಾದ ಜೀವಸತ್ವಗಳನ್ನು ಪಡೆಯುತ್ತದೆ. ಅತಿಸಾರ ಸಮಸ್ಯೆಯಿಂದ ಬಳಲುತ್ತಿರುವವರು ಅಲೋವೆರಾ ಜೆಲ್ ಸೇವಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

Aloe Vera Juice: ವಸಡು ಸವೆತ, ಹಲ್ಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಲೋಳೇಸರ ಜ್ಯೂಸ್​ ಉತ್ತಮ ಪರಿಹಾರ
ಅಲೋವೆರಾ ಜ್ಯೂಸ್
TV9 Web
| Updated By: Skanda|

Updated on: Jun 30, 2021 | 7:05 AM

Share

ನೈಸರ್ಗಿಕವಾಗಿ ಸಿಗುವ ಲೋಳೇಸರ ಅಥವಾ ಅಲೋವೆರಾ ಜೆಲ್​ಅನ್ನು ಸಾಮಾನ್ಯವಾಗಿ ಔಷಧಿಗಳಲ್ಲಿ ಬಳಸುತ್ತಾರೆ. ಅಲೋವೆರಾ ತಿರುಳು ಅನೇಕ ಆರೋಗ್ಯ ಖಾಯಿಲೆಗೆ ರಾಮಬಾಣವಾಗಿದೆ. ಆದರೆ, ಲೋಳೇಸರದ ಒಳಗಿನ ತಿರುಳಿನಿಂದ ಜ್ಯೂಸ್​ ಮಾಡಿ ಸವಿದರೆ ಆರೋಗ್ಯಕ್ಕೆ ಪ್ರಯೋಜನ ಹೆಚ್ಚು ಎಂಬುದು ನಿಮಗೆ ತಿಳಿದಿದೆಯೇ? ಆಹಾರದಲ್ಲಿನ ಶಕ್ತಿಯುತ ಅಮೈನೋ ಆಮ್ಲಗಳು ಜೀರ್ಣಕ್ರಿಯೆಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ದೇಹದಲ್ಲಿನ ಕೆಟ್ಟ ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ಇದು ಸಹಾಯಕವಾಗಿದೆ. ಲೋಳೇಸರ ಜ್ಯೂಸ್​ನಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.

ನೀವು ದಿನಕ್ಕೆ ಎರಡರಿಂದ ಮೂರು ಚಮಚ ನೈಸರ್ಗಿಕವಾಗಿ ಸಿಗುವ ಲೋಳೇಸರ ಜೆಲ್ ​ಅನ್ನು ಸೇವಿಸಿದರೆ ದೇಹದಲ್ಲಿ ಪೆಪ್ಸಿನ್​ ಎಂಬ ಕಿಣ್ವ ಉತ್ಪತ್ತಿಯಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯವಾಗಿದೆ. ಲೋಳೇಸರ ತಿರುಳು ಮಧುಮೇಹದಿಂದ ಬಳಲುತ್ತಿರುವವರಿಗೆ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಾಯವಾಗಿದೆ. ಹಲ್ಲು ಮತ್ತು ವಸಡು ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಪ್ರಯೋಜನಕಾರಿ ಔಷಧ. ಜತೆಗೆ ವಸಡು ಸವೆತ, ಹಲ್ಲು ನೋವಿನ ಸಮಸ್ಯೆಗೆ ಲೋಳೇಸರ ಜ್ಯೂಸ್​ ಉತ್ತಮ ಪರಿಹಾರವಾಗಿ ಕೆಲಸ ಮಾಡುತ್ತದೆ.

ಕೀಲು ನೋವಿಗೆ ಉತ್ತಮ ಔಷಧ ದೇಹದ ಕೀಲುಗಳು ಬಲಿಷ್ಠಗೊಳ್ಳುತ್ತವೆ. ಕೀಲು ನೋವಿನಿಂದ ಮುಕ್ತಿ ಹೊಂದಬಹುದು. ಜತೆಗೆ ದೇಹವು ಅಗತ್ಯವಾದ ಜೀವಸತ್ವಗಳನ್ನು ಪಡೆಯುತ್ತದೆ. ಅತಿಸಾರ ಸಮಸ್ಯೆಯಿಂದ ಬಳಲುತ್ತಿರುವವರು ಅಲೋವೆರಾ ಜೆಲ್ ಸೇವಿಸುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಚರ್ಮದ ಅಲರ್ಜಿ, ಹುಣ್ಣು, ಗುಳ್ಳೆಗಳಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಅಲೋವೆರಾ ಜೆಲ್ ಸಹಾಯ ಮಾಡುತ್ತದೆ. ನೈಸರ್ಗಿಕವಾಗಿ ಸಿಗುವ ಅಲೋವೆರಾದಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ ಎಂದಾದ ಮೇಲೆ ಮನೆಯಲ್ಲಿ ಒಂದು ಗಿಡವನ್ನಾದರೂ ನೆಡಲೇಬೇಕು.

ಮುಖದಲ್ಲಿನ ಮೊಡವೆಗೆ ಪರಿಹಾರ ಒಂದು ಗ್ಲಾಸ್​ ನೀರಿಗೆ ನೈಸರ್ಗಿಕವಾಗಿ ಸಿಗುವ ಅಲೋವೆರಾ ಜೆಲ್​ ವಿಶ್ರಣ ಮಾಡಿ. ಆ ನೀರನ್ನು ಕುದಿಸಿ, ಅದಕ್ಕೆ ಒಂದು ಚಮಚ ನಿಂಬೆ ರಸ ಬೆರೆಸಿ ಸೇವಿಸಿದರೆ ದೇಹದಲ್ಲಿನ ವಿಷಕಾರಿ ಅಂಶವನ್ನು ಹೋಗಲಾಡಿಸಲು ಸಹಾಯಕವಾಗುತ್ತದೆ. ಲೋಳೇಸರ ಜತೆಗೆ ಕಾಲು ಚಮಚ ಜೇನುತುಪ್ಪ ಸೇರಿಸಿ ಮೊಡವೆಯಾದ ಜಾಗಕ್ಕೆ ಹಚ್ಚಿಕೊಳ್ಳುವುದರ ಮೂಲಕ ಮೊಡವೆಯನ್ನು ವಾಸಿ ಮಾಡಬಹುದು. ಜೊತೆಗೆ ಮೊಡವೆಗಳಿಂದ ಮುಖದಲ್ಲಿ ಎದ್ದು ಕಾಣಿಸುತ್ತಿರುವ ಕಲೆಗಳನ್ನು ಹೋಗಲಾಡಿಸಲು ನೆರವಾಗುತ್ತದೆ.

ಇದನ್ನೂ ಓದಿ:

Beauty Tips: ಬಿಸಿಲ ಬೇಗೆಯಿಂದ ತಣಿಯಲು ಬಳಸಿ ಮನೆಮದ್ದು; ಮುಖದ ಕಾಂತಿ ಹೆಚ್ಚಿಸಲು ಇಲ್ಲಿದೆ ಸಲಹೆ

Aloe Vera Benefits: ಕೂದಲು ಮತ್ತು ಚರ್ಮದ ಆರೈಕೆಗೆ ಅಲೋವೆರಾ; ಬಳಸುವ ಕ್ರಮ ಹೇಗೆ ಗೊತ್ತಾ?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ