AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧುಮೇಹದಿಂದ ಬಳಲ್ತಿದ್ದೀರಾ?-ನಿಮ್ಮ ನಿತ್ಯದ ಡಯಟ್​​ನಲ್ಲಿ ಈ ಐದು ಆಹಾರಗಳನ್ನು ಅಳವಡಿಸಿಕೊಳ್ಳಿ

ಸಾಮಾನ್ಯವಾಗಿ ನಿತ್ಯ ಬಳಸುವ ಮೊಸರಿನಲ್ಲಿ ಸಕ್ಕರೆ ಅಂಶವೂ ಜಾಸ್ತಿ, ಕೊಬ್ಬಿನ ಅಂಶವೂ ಹೆಚ್ಚು. ಹೀಗಾಗಿ ಸಕ್ಕರೆ ಕಾಯಿಲೆ ಇರುವವರು ಇದನ್ನು ಬಳಸಲು ಸಾಧ್ಯವಿಲ್ಲ.

ಮಧುಮೇಹದಿಂದ ಬಳಲ್ತಿದ್ದೀರಾ?-ನಿಮ್ಮ ನಿತ್ಯದ ಡಯಟ್​​ನಲ್ಲಿ ಈ ಐದು ಆಹಾರಗಳನ್ನು ಅಳವಡಿಸಿಕೊಳ್ಳಿ
ಪ್ರಾತಿನಿಧಿಕ ಚಿತ್ರ
TV9 Web
| Updated By: Lakshmi Hegde|

Updated on:Feb 13, 2022 | 7:52 AM

Share

ಮಧುಮೇಹ (Diabetes)ಎಂಬುದು ಇತ್ತೀಚೆಗೆ ಸರ್ವೇಸಾಮಾನ್ಯವಾದ ಕಾಯಿಲೆ. ಚಿಕ್ಕವರಿಂದ ಹಿಡಿದು, ಹಿರಿಯರವರೆಗೆ ಯಾರಿಗೆ ಬೇಕಾದರೂ ಬರುತ್ತದೆ. ಹೀಗೆ ಒಮ್ಮೆ ಡಯಾಬಿಟಿಸ್ಗೆ ಒಳಗಾದರೆ, ಮತ್ತೆ ಅದರಿಂದ ಹೊರಬರುವುದು ಅಷ್ಟು ಸುಲಭವಲ್ಲ. ನಿತ್ಯ ಮಾತ್ರೆ ತೆಗೆದುಕೊಳ್ಳಬೇಕಾಗುತ್ತದೆ. ಅದರೊಂದಿಗೆ ಆಹಾರ ಕ್ರಮದಲ್ಲಿ ಬದಲಾವಣೆ ಅನಿವಾರ್ಯ. ಕೆಲವು ಡಯಟ್​ಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ವ್ಯಾಯಾಮ, ವಾಕಿಂಗ್​​ಗಳೂ ಬದುಕಲ್ಲಿ ಪ್ರಮುಖ ಸ್ಥಾನ ಪಡೆದುಕೊಳ್ಳುತ್ತವೆ.

ಮಧುಮೇಹಿಗಳು ಮದ್ಯಸೇವನೆ ಕಡಿಮೆ ಮಾಡಬೇಕು. ಕೊಬ್ಬಿನ ಅಂಶ ಕಡಿಮೆ ಇರುವ ನೇರ ಮಾಂಸ ಸೇವನೆ ಮಾಡಿದರೆ ಒಳಿತು. ಸೀಫುಡ್​ಗಳು, ನಾರಿನ ಅಂಶ ಹೆಚ್ಚಿರುವ ಆಹಾರಗಳನ್ನು ಸೇವಿಸಬೇಕು. ಸಕ್ಕರೆ ಅಂಶ ಇರುವ ಯಾವುದೇ ಆಹಾರಗಳಿಂದ ದೂರವೇ ಇರಬೇಕು. ಇಷ್ಟೆಲ್ಲ ಆದರೂ ಸಕ್ಕರೆ ಕಾಯಿಲೆ ಇರುವವರು ಯಾವುದನ್ನು ತಿನ್ನಬೇಕು? ಏನನ್ನು ತಿನ್ನಬಾರದು? ಡಯಟ್​ ಹೇಗಿರಬೇಕು ಎಂಬಿತ್ಯಾದಿ ಪ್ರಶ್ನೆಗಳು ಸದಾ ಏಳುತ್ತಲೇ ಇರುತ್ತವೆ. ನಾವಿಲ್ಲಿ ಮಧುಮೇಹಿಗಳಿಗೆ ಅನುಕೂಲವಾಗುವ ಐದು ಆಹಾರದ ಬಗ್ಗೆ ತಿಳಿಸಿದ್ದೇವೆ ನೋಡಿ..ಇವು ಶರೀರದಲ್ಲಿ ಸಕ್ಕರೆ ಅಂಶ ನಿಯಂತ್ರಿಸುವ ಜತೆ, ತೂಕವನ್ನೂ ಕಡಿಮೆ ಮಾಡುತ್ತವೆ.

1.ಕ್ಯಾರೆಟ್​: ಕ್ಯಾರೆಟ್​ ಚಳಿಗಾಲದಲ್ಲಿ ಯಥೇಚ್ಛವಾಗಿ ಸಿಗುವ ತರಕಾರಿ. ನಿಮ್ಮ ಡಯಟ್​​ನಲ್ಲಿ ನೀವಿದನ್ನು ಅಳವಡಿಸಿಕೊಳ್ಳಬಹುದು. ಯುಎಸ್​ ಕೃಷಿ ಡಿಪಾರ್ಟ್​ಮೆಂಟ್​ ಪ್ರಕಾರ, 100 ಗ್ರಾಂ ಕ್ಯಾರೆಟ್ ಸುಮಾರು 4.7 ಗ್ರಾಂಗಳಷ್ಟು ಸಕ್ಕರೆ ಅಂಶ ಹೊಂದಿರುತ್ತದೆ. ಹೀಗಾಗಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಯಾವುದೇ ಭಯವಿಲ್ಲದೆ ಕ್ಯಾರೆಟ್​ನ್ನು ಡಯಟ್​ನಲ್ಲಿ ಅಳವಡಿಸಿಕೊಳ್ಳಬಹುದು. ಕ್ಯಾರೆಟ್​ನ್ನು ಕತ್ತರಿಸಿ ಹಾಗೇ ತಿನ್ನಬಹುದು. ಇದನ್ನು ಜ್ಯೂಸ್ ಮಾಡಿಕೊಂಡು, ಸಕ್ಕರೆ ಹಾಕದೆ ಸೇವಿಸಬಹುದು.

2. ಸೌತೆಕಾಯಿ: ಸೌತೆಕಾಯಿ ದೇಹಕ್ಕೆ ತಾಜಾತನ ನೀಡುವ ತರಕಾರಿ. ಇದು ಆರೋಗ್ಯಕರವೂ ಹೌದು, ರುಚಿಕರವೂ ಹೌದು. ಸೌತೆಕಾಯಿಯಲ್ಲಿ ತುಂಬ ಕಡಿಮೆ ಪ್ರಮಾಣದ ಸಕ್ಕರೆ ಅಂಶ ಇರುತ್ತದೆ. ಅಷ್ಟೇ ಅಲ್ಲ, ಕಾರ್ಬೋಹೈಡ್ರೇಟ್​, ಗ್ಲಿಸೆಮಿಕ್​ ಇಂಡೆಕ್ಸ್​ಗಳೂ ಕಡಿಮೆಯಿದ್ದು, ನಾರು ಮತ್ತು ನೀರಿನ ಅಂಶ ತುಂಬ ಜಾಸ್ತಿ ಇರುತ್ತದೆ. ಹೀಗಾಗಿ ಮಧುಮೇಹ ಇರುವವರು ತಮ್ಮ ನಿತ್ಯದ ಆಹಾರದಲ್ಲಿ ಇದನ್ನು ಬಳಸಬಹುದು. ಸೌತೆಕಾಯಿಯಲ್ಲಿಕಡಿಮೆ ಕೊಬ್ಬಿನ ಅಂಶ ಮತ್ತು ಕ್ಯಾಲೋರಿ ಇರುವುದರಿಂದ ತೂಕ ಇಳಿಕೆಯಲ್ಲೂ ಸಹಕಾರಿ.

3. ಬ್ರೌನ್​ ರೈಸ್​ (ಕಂದು ಅನ್ನ) ಶುಗರ್​ ಬಂದ ತಕ್ಷಣ ನೀವು ನಿತ್ಯ ಊಟ ಮಾಡುವ ಬಿಳಿ ಅನ್ನವನ್ನು ಸಾಧ್ಯವಾದಷ್ಟೂ ಕಡಿಮೆ ಮಾಡುವಂತೆ ವೈದ್ಯರು ಸಲಹೆ ನೀಡುತ್ತಾರೆ. ಅದರ ಬದಲಿಗೆ ಬ್ರೌನ್​ ರೈಸ್​ ತಿನ್ನಬಹುದು ಎಂದೂ ಹೇಳುತ್ತಾರೆ. ಈ ಬ್ರೌನ್​ ರೈಸ್​ನಲ್ಲಿ ಅಂದಾಜು 0.9ರಷ್ಟು ಸಕ್ಕರೆ ಅಂಶ ಇರುತ್ತದೆ ಎಂದು ಯುಎಸ್ ಕೃಷಿ ಡಿಪಾರ್ಟ್​ಮೆಂಟ್​ (USDA)ಹೇಳಿದೆ. ವೈಟ್​ ರೈಸ್​ಗೆ ಹೋಲಿಸಿದರೆ ಇದರಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಕ್ಯಾಲೋರಿ ಇರುತ್ತದೆ. ಹಾಗಾಗಿ ಇದು ಮಧುಮೇಹಿಗಳಿಗೆ ಮತ್ತು ತೂಕ ಇಳಿಸಿಕೊಳ್ಳುವವರಿಗೆ ತುಂಬ ಅನುಕೂಲಕರ ಆಹಾರ.

4. ಗ್ರೀಕ್​ ಯೋಗರ್ಟ್​ (ಗ್ರೀಕ್​ ಮೊಸರು): ಸಾಮಾನ್ಯವಾಗಿ ನಿತ್ಯ ಬಳಸುವ ಮೊಸರಿನಲ್ಲಿ ಸಕ್ಕರೆ ಅಂಶವೂ ಜಾಸ್ತಿ, ಕೊಬ್ಬಿನ ಅಂಶವೂ ಹೆಚ್ಚು. ಹೀಗಾಗಿ ಸಕ್ಕರೆ ಕಾಯಿಲೆ ಇರುವವರು ಇದನ್ನು ಬಳಸಲು ಸಾಧ್ಯವಿಲ್ಲ. ಆದರೆ ಕೊಬ್ಬಿನ ಅಂಶವನ್ನು ತೆಗೆಯಲಾದ ಗ್ರೀಕ್​ ಯೋಗರ್ಟ್​ ತಿನ್ನಲು ರುಚಿಯಾಗಿರುತ್ತದೆ. ಹಾಗೇ, ಮಧುಮೇಹಿಗಳಿಗೆ ಅನುಕೂಲ. ಸುಮಾರು 100 ಗ್ರಾಂ ಗ್ರೀಕ್​ ಯೋಗರ್ಟ್​​ನಲ್ಲಿ ಕೇವಲ 3.2 ಗ್ರಾಂಗಳಷ್ಟು ಸಕ್ಕರೆ ಅಂಶ ಇರುತ್ತದೆ. ಇದನ್ನು ಡಯಾಬಿಟಿಸ್ ಇರುವವರು ಮತ್ತು ತೂಕ ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದವರು ಡಯಟ್​ನಲ್ಲಿ ಬಳಸಬಹುದು.

5. ಅಣಬೆಗಳು:  ಮಶ್ರೂಮ್​ಗಳು ಅಥವಾ ಅಣಬೆಗಳಿಗೆ ಅಪಾರ ರುಚಿಯಿದೆ. ಹಾಗೇ ಅತ್ಯಂತ ಆರೋಗ್ಯಕರ ಆಹಾರ. ಅತ್ಯಂತ ಕಡಿಮೆ ಪ್ರಮಾಣದ ಸಕ್ಕರೆ ಅಂಶ ಹೊಂದಿರುವ ಜತೆಗೆ, ಅಧಿಕ ನಾರಿನ ಅಂಶ ಹೊಂದಿರುತ್ತವೆ. 100 ಗ್ರಾಂಗಳಷ್ಟು ಬಿಳಿ ಅಣಬೆಯಲ್ಲಿ 2 ಗ್ರಾಂಗಳಷ್ಟು ಸಕ್ಕರೆ ಅಂಶವಿರುತ್ತದೆ ಎಂದು ಯುಎಸ್​ಡಿಎ ತಿಳಿಸಿದೆ. ತಿನ್ನಬಹುದಾದ ಯಾವುದೇ ಅಣಬೆಯನ್ನೂ ಕೂಡ ಮಧುಮೇಹಿಗಳು ತಮ್ಮ ಡಯಟ್​ನಲ್ಲಿ ಬಳಕೆ ಮಾಡಿಕೊಳ್ಳಬಹುದು.

(ಮಧುಮೇಹ ಎಂಬುದು ನೋಡಲು ಸಾಮಾನ್ಯ ಕಾಯಿಲೆ ಅನ್ನಿಸಿದರೂ, ಅದು ಜೀವಕ್ಕೇ ಅಪಾಯ ತರಬಲ್ಲದು. ಹೀಗಾಗಿ ಪ್ರತಿಯೊಬ್ಬ ಡಯಾಬಿಟಿಕ್​ ರೋಗಿಯೂ ವೈದ್ಯರನ್ನು ಕಂಡು, ಸೂಕ್ತ ಔಷಧ ಪಡೆಯಬೇಕು. ಅದರ ಹೊರತಾಗಿ ಡಯಟ್​ ಮಾಡಬೇಕು)

ಇದನ್ನೂ ಓದಿ: ‘ಗೆಹರಾಯಿಯಾ’ ನೋಡಿ ದೀಪಿಕಾ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ ನಟ; ಅಭಿಮಾನಿಗಳಿಂದ ತರಾಟೆ

Published On - 7:50 am, Sun, 13 February 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?