AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಮೈಗ್ರೇನ್, ಕೋಪದ ಸಮಸ್ಯೆ ಇದ್ದರೆ ಪೌಷ್ಟಿಕತಜ್ಞೆ ಪೂಜಾ ಗಣೇಶ್ ಹೇಳಿರುವ ಈ ಸಲಹೆಯನ್ನು ಪಾಲಿಸಿ

ಒತ್ತಡದ ಜೀವನಶೈಲಿಯಿಂದಾಗಿ ನಮ್ಮ ಆರೋಗ್ಯ ಹಾಳಾಗುತ್ತಿದೆ. ಅಲ್ಲದೆ ಇದರಿಂದ ಮೈಗ್ರೇನ್ ನಂತಹ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ರೀತಿಯ ಒತ್ತಡದಲ್ಲಿ ನಮಗೆ ಕೋಪ ಬೇಗ ಬರುತ್ತದೆ. ಹಾಗಾಗಿ ಇದನ್ನು ತಡೆಯಲು ನಾವು ನಮ್ಮ ಆಹಾರ ಕ್ರಮಗಳ ಜೊತೆಗೆ ಜೀವನ ಕ್ರಮವನ್ನು ಸರಿದೂಗಿಸಿಕೊಳ್ಳಬೇಕಾಗುತ್ತದೆ. ನಿಮಗೂ ಪದೇ ಪದೇ ತಲೆನೋವು ಕಂಡು ಬರುತ್ತಿದ್ದು, ಕೋಪ ತಕ್ಷಣ ಬರುತ್ತಿದ್ದರೆ ಇದಕ್ಕೆ ಮಾತ್ರೆ ತಿನ್ನುವ ಬದಲು ಪೌಷ್ಟಿಕತಜ್ಞೆ ಪೂಜಾ ಗಣೇಶ್ ಅವರು ತಿಳಿಸಿರುವ ಈ ಸುಲಭ ಮತ್ತು ಸರಳ ಮಾಹಿತಿಗಳನ್ನು ಪಾಲನೆ ಮಾಡಬಹುದಾಗಿದೆ.

Health Tips: ಮೈಗ್ರೇನ್, ಕೋಪದ ಸಮಸ್ಯೆ ಇದ್ದರೆ ಪೌಷ್ಟಿಕತಜ್ಞೆ ಪೂಜಾ ಗಣೇಶ್ ಹೇಳಿರುವ ಈ ಸಲಹೆಯನ್ನು ಪಾಲಿಸಿ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Sep 05, 2024 | 12:33 PM

Share

ಇತ್ತೀಚಿನ ದಿನಗಳಲ್ಲಿ ನಮ್ಮ ಒತ್ತಡದ ಜೀವನಶೈಲಿಯಿಂದಾಗಿ ನಮ್ಮ ಆರೋಗ್ಯ ಹಾಳಾಗುತ್ತಿದೆ. ಅಲ್ಲದೆ ಇದರಿಂದ ಮೈಗ್ರೇನ್ ನಂತಹ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ರೀತಿಯ ಒತ್ತಡದಲ್ಲಿ ನಮಗೆ ಕೋಪ ಬೇಗ ಬರುತ್ತದೆ. ಹಾಗಾಗಿ ಇದನ್ನು ತಡೆಯಲು ನಾವು ನಮ್ಮ ಆಹಾರ ಕ್ರಮಗಳ ಜೊತೆಗೆ ಜೀವನ ಕ್ರಮವನ್ನು ಸರಿದೂಗಿಸಿಕೊಳ್ಳಬೇಕಾಗುತ್ತದೆ. ನಿಮಗೂ ಪದೇ ಪದೇ ತಲೆನೋವು ಕಂಡು ಬರುತ್ತಿದ್ದು, ಕೋಪ ತಕ್ಷಣ ಬರುತ್ತಿದ್ದರೆ ಇದಕ್ಕೆ ಮಾತ್ರೆ ತಿನ್ನುವ ಬದಲು ಪೌಷ್ಟಿಕತಜ್ಞೆ ಪೂಜಾ ಗಣೇಶ್ ಅವರು ತಿಳಿಸಿರುವ ಈ ಸುಲಭ ಮತ್ತು ಸರಳ ಮಾಹಿತಿಗಳನ್ನು ಪಾಲನೆ ಮಾಡಬಹುದಾಗಿದೆ.

ಪೂಜಾ ಗಣೇಶ್ ಅವರು ಮೈಗ್ರೇನ್, ತಲೆನೋವು, ಕೋಪದ ಸಮಸ್ಯೆಗಳಿಗೆ ನಿಜವಾದ ಕಾರಣಗಳು ಮತ್ತು ಅವುಗಳಿಗೆ ಯಾವ ರೀತಿಯ ಪರಿಹಾರಗಳಿವೆ ಎಂಬುದನ್ನು ತಿಳಿಸಿದ್ದು ಇದನ್ನು ನಿಮ್ಮ ದಿನನಿತ್ಯದ ಜೀವನಶೈಲಿಯಲ್ಲಿ ತಪ್ಪದೆ ಅಳವಡಿಸಿಕೊಳ್ಳಬೇಕಾಗಿದೆ. ಇದರಿಂದ ನಿಮಗೆ ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಮೈಗ್ರೇನ್ ಸಮಸ್ಯೆಗೆ ಕಾರಣಗಳೇನು?

  • ಜೆನಿಟಿಕ್
  • ಹಾರ್ಮೋನ್ ಏರಿಳಿತ
  • ಅತಿಯಾದ ಒತ್ತಡ ಅಥವಾ ಚಿಂತೆ
  • ನಿದ್ದೆ ಸರಿಯಾಗಿ ಮಾಡದೆ ಇರುವುದು
  • ವಾತಾವರಣದಲ್ಲಿ ಬದಲಾವಣೆ
  • ಹೊರಗಿನ ತಂಪು ಪಾನೀಯ ಸೇವನೆ ಮಾಡುವುದು
  • ಬಲ್ಪ್, ಲೈಟ್ ಗಳಿಂದ ಟ್ರಿಗರ್ ಆಗುವುದು
  • ಕೂಗಾಟ ಅಥವಾ ಕಿರುಚಾಟ

ಮೈಗ್ರೇನ್  ಸಮಸ್ಯೆಗೆ ಪರಿಹಾರವೇನು?

  • ಆದಷ್ಟು ನಿದ್ದೆಯನ್ನು ಸರಿಯಾಗಿ ಮಾಡಿ
  • 30 ನಿಮಿಷ ವ್ಯಾಯಾಮ ಮಾಡಿ
  • ಪ್ರತಿ ದಿನ ಒಂದು ಚಮಚ ಅಗಸೆ ಬೀಜ ಸೇವಿಸಿ
  • ಸೌತೆಕಾಯಿ, ಹಸಿರು ಸೊಪ್ಪನ್ನು ಪ್ರತಿನಿತ್ಯ ಒಂದು ಕಪ್ ನಷ್ಟು ಸೇವಿಸಿ
  • ವಾರದಲ್ಲಿ ಮೂರು ಬಾರಿ ಬಾಳೆಹಣ್ಣು ಸೇವಿಸಿ (ಮಧುಮೇಹಿಗಳು ಇದನ್ನು ತ್ಯಜಿಸಿ)
  • ಅತಿಯಾದ ಕಾಫಿ, ಟೀ, ಹೊರ ಪ್ಯಾಕೆಟ್ ಆಹಾರವನ್ನು ತ್ಯಜಿಸಿ
  • ಚೀಸ್ ಸೇವಿಸಬೇಡಿ
  • ಬೆಳಗ್ಗಿನ ಹತ್ತು ನಿಮಿಷ ಸೂರ್ಯನ ಬಿಸಿಲನ್ನು ಪಡೆಯಿರಿ
  • ಸಂಜೆ ಶುಂಠಿ ನೀರನ್ನು ಸೇವಿಸಿ
  • ಹತ್ತು ನಿಮಿಷ ಧ್ಯಾನ ಮಾಡಿ
  • ಆಹಾರದಲ್ಲಿ ಅತಿಯಾದ ಮಸಾಲೆ ಪದಾರ್ಥಗಳನ್ನು ಸ್ವಲ್ಪ ದಿನಗಳ ಮಟ್ಟಿಗೆ ಕಡಿಮೆ ಮಾಡಿ

ಇದನ್ನೂ ಓದಿ: ಮೆದುಳಿನ ಕ್ಯಾನ್ಸರ್ ಗೆ ಚಿಕಿತ್ಸೆ ಈಗ ಸುಲಭ; ರಕ್ತ ಪರೀಕ್ಷೆ ಮೂಲಕ ಗಂಟೆಯೊಳಗೆ ಪತ್ತೆ

ಮೈಗ್ರೇನ್  ಸಮಸ್ಯೆಗೆ ಸರಳ ಮನೆಮದ್ದುಗಳು;

  • ಕೋಲ್ಡ್ ಕಂಪ್ರೆಸ್: ಕೋಲ್ಡ್ ಪ್ಯಾಕ್ ಅಥವಾ ಐಸ್ ತುಂಬಿದ ಬಟ್ಟೆಯನ್ನು ಹಣೆ ಮೇಲೆ ಇಡುವುದರಿಂದ ನೋವು ಕಡಿಮೆಯಾಗುತ್ತದೆ.
  • ಪುದೀನಾ ಎಣ್ಣೆ:ಪುದೀನಾ ಎಣ್ಣೆಯನ್ನು ಹಚ್ಚುವುದರಿಂದ ಇದರಲ್ಲಿರುವ ಒಳ್ಳೆಯ ಗುಣಗಳು ದೇಹ ತಂಪಾಗಿಸಿ ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತದೆ.
  • ಶುಂಠಿ ಚಹಾ: ಮೈಗ್ರೇನ್ ಸಮಯದಲ್ಲಿ ವಾಕರಿಕೆ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಶುಂಠಿ ಸಹಾಯ ಮಾಡುತ್ತದೆ.
  • ಲ್ಯಾವೆಂಡರ್ ಎಸೆನ್ಷಿಯಲ್ ಆಯಿಲ್: ಲ್ಯಾವೆಂಡರ್ ಎಣ್ಣೆಯ ಸುವಾಸನೆಯನ್ನು ತೆಗೆದುಕೊಳ್ಳುವುದರಿಂದ ಇದು ಮೈಗ್ರೇನ್ ದಾಳಿಯ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಸಾಕಷ್ಟು ನೀರು ಕುಡಿಯಿರಿ: ನಿರ್ಜಲೀಕರಣವು ಸಾಮಾನ್ಯ ಪ್ರಚೋದಕವಾಗಿದೆ, ಆದ್ದರಿಂದ ದಿನವಿಡೀ ಸಾಕಷ್ಟು ನೀರು ಕುಡಿಯಿರಿ.

ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ