Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಮಕ್ಕಳಿಗೆ ಬಾಲ್ಯದಲ್ಲೇ ಮೊಟ್ಟೆ ತಿನ್ನಿಸುವುದರಿಂದ ಮೊಟ್ಟೆಯ ಅಲರ್ಜಿ ಕಡಿಮೆಯಾಗುತ್ತದೆ; ಅಧ್ಯಯನದಲ್ಲಿ ಬಯಲು

Egg Benefits: ಅಮೆರಿಕನ್ ಕಾಲೇಜ್ ಆಫ್ ಅಲರ್ಜಿ, ಆಸ್ತಮಾ ಮತ್ತು ಇಮ್ಯುನಾಲಜಿಯ ಇತ್ತೀಚಿನ ಅಧ್ಯಯನ ಮಕ್ಕಳಲ್ಲಿ ಮೊಟ್ಟೆಯ ಅಲರ್ಜಿಯನ್ನು ಕಡಿಮೆ ಮಾಡಲು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಮೊಟ್ಟೆಗಳನ್ನು ಪರಿಚಯಿಸಬೇಕು ಎಂದು ಶಿಫಾರಸು ಮಾಡಿದೆ.

Health Tips: ಮಕ್ಕಳಿಗೆ ಬಾಲ್ಯದಲ್ಲೇ ಮೊಟ್ಟೆ ತಿನ್ನಿಸುವುದರಿಂದ ಮೊಟ್ಟೆಯ ಅಲರ್ಜಿ ಕಡಿಮೆಯಾಗುತ್ತದೆ; ಅಧ್ಯಯನದಲ್ಲಿ ಬಯಲು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Nov 30, 2021 | 2:13 PM

ಮಕ್ಕಳು ಗಟ್ಟಿ ಪದಾರ್ಥಗಳನ್ನು ತಿನ್ನಲು ಶುರು ಮಾಡಿದ ಕೂಡಲೆ ಮಕ್ಕಳಿಗೆ ಶೇಂಗಾ ಉತ್ಪನ್ನಗಳನ್ನು ತಿನ್ನಿಸತೊಡಗಿದರೆ ಅವರಿಗೆ ಕಡಲೆಕಾಯಿ ಅಲರ್ಜಿ ಉಂಟಾಗುವುದನ್ನು ತಡೆಯಬಹುದು ಎಂದು ಪಿಡಿಯಾಟ್ರಿಷಿಯನ್‌ಗಳು 2017ರಿಂದ ಪೋಷಕರಿಗೆ ಶಿಫಾರಸು ಮಾಡಿದ್ದಾರೆ. ಹಾಗೇ, ಅಮೆರಿಕನ್ ಕಾಲೇಜ್ ಆಫ್ ಅಲರ್ಜಿ, ಆಸ್ತಮಾ ಮತ್ತು ಇಮ್ಯುನಾಲಜಿಯ ಇತ್ತೀಚಿನ ಅಧ್ಯಯನ ಮಕ್ಕಳಲ್ಲಿ ಮೊಟ್ಟೆಯ ಅಲರ್ಜಿಯನ್ನು ಕಡಿಮೆ ಮಾಡಲು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಮೊಟ್ಟೆಗಳನ್ನು ಪರಿಚಯಿಸಬೇಕು ಎಂದು ಶಿಫಾರಸು ಮಾಡಿದೆ.

ಈ ಅಧ್ಯಯನವನ್ನು ಅಮೇರಿಕನ್ ಕಾಲೇಜ್ ಆಫ್ ಅಲರ್ಜಿ, ಆಸ್ತಮಾ ಮತ್ತು ಇಮ್ಯುನಾಲಜಿ ವಾರ್ಷಿಕ ವೈಜ್ಞಾನಿಕ ಸಭೆಯಲ್ಲಿ ಪ್ರಸ್ತುತಪಡಿಸಲಾಯಿತು. 12 ತಿಂಗಳವರೆಗೆ ಮೊಟ್ಟೆಯನ್ನು ತಿನ್ನದ ಮಕ್ಕಳಿಗೆ 6 ವರ್ಷಗಳಲ್ಲಿ ಮೊಟ್ಟೆಯ ಅಲರ್ಜಿ ಉಂಟಾಗುವ ಸಾಧ್ಯತೆಯಿದೆ. 2237 ಸಮೀಕ್ಷೆಗಳಲ್ಲಿ 14 (ಶೇ. 0.6) ಒಂದು ವರ್ಷದಲ್ಲಿ ಮೊಟ್ಟೆಯ ಅಲರ್ಜಿಯನ್ನು ವರದಿ ಮಾಡಿದೆ ಮತ್ತು 1379 ಸಮೀಕ್ಷೆಗಳಲ್ಲಿ 11 (ಶೇ. 0.8) 6 ವರ್ಷಗಳಲ್ಲಿ ಮೊಟ್ಟೆಯ ಅಲರ್ಜಿಯನ್ನು ವರದಿ ಮಾಡಿದೆ. 1 ವರ್ಷ ಮತ್ತು 6 ವರ್ಷ ವಯಸ್ಸಿನ ಮೊಟ್ಟೆಯ ಅಲರ್ಜಿ ಹೊಂದಿರುವ ಮಕ್ಕಳು 5, 6, 7 ಮತ್ತು 10 ತಿಂಗಳ ವಯಸ್ಸಿನಲ್ಲಿ ಕಡಿಮೆ ಬಾರಿ ಮೊಟ್ಟೆಯ ಸೇವನೆಯನ್ನು ಹೊಂದಿರುತ್ತಾರೆ.

ಮೊಟ್ಟೆಯ ಅಲರ್ಜಿಯು ಪ್ರಪಂಚದಾದ್ಯಂತ ಎರಡನೇ ಅತ್ಯಂತ ಸಾಮಾನ್ಯವಾದ ಆಹಾರದ ಅಲರ್ಜಿಯಾಗಿದೆ ಎಂದು ಎಂಡಿ, ಪಿಹೆಚ್‌ಡಿ, ಹಿರಿಯ ಲೇಖಕ ಮತ್ತು ಅಧ್ಯಯನದ ಪ್ರಮುಖ ತನಿಖಾಧಿಕಾರಿ ಕ್ಸಿಯಾವೊಂಗ್ ವೆನ್ ಹೇಳಿದ್ದಾರೆ. ಪಿಡಿಯಾಟ್ರಿಶಿಯನ್‌ಗಳು ಮತ್ತು ಅಲರ್ಜಿಸ್ಟ್‌ಗಳು 2017ರಿಂದ ಪೋಷಕರಿಗೆ ತಮ್ಮ ಮಕ್ಕಳು ಕಡಲೆಕಾಯಿ ಅಲರ್ಜಿಯನ್ನು ತಡೆಗಟ್ಟುವ ಸಲುವಾಗಿ ಘನ ಆಹಾರವನ್ನು ತಿನ್ನಲು ಪ್ರಾರಂಭಿಸಿದಾಗ ಕಡಲೆಕಾಯಿ ಉತ್ಪನ್ನಗಳನ್ನು ಪರಿಚಯಿಸಬೇಕು ಎಂದು ಶಿಫಾರಸು ಮಾಡಿದ್ದಾರೆ.

ಇದನ್ನೂ ಓದಿ: Health Tips: ನಿದ್ರೆಯಿಂದ ಖಿನ್ನತೆ ಹೆಚ್ಚಾಗುತ್ತಾ?; ನಿದ್ರೆಗೂ ಮಾನಸಿಕ ಆರೋಗ್ಯಕ್ಕೂ ಇರುವ ನಂಟೇನು?

Health Tips: ಸಿಗರೇಟ್ ಸೇದುವವರೇ ಗಮನಿಸಿ; ಹೃದಯನಾಳದ ಸಮಸ್ಯೆಗೆ ಸ್ಟ್ರೋಕ್ ಮೊದಲ ಲಕ್ಷಣವಾಗಿರಬಹುದು!

Published On - 1:53 pm, Tue, 30 November 21

VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್