AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asthma: ಚಳಿಗಾಲದಲ್ಲಿ ಉಲ್ಬಣಗೊಳ್ಳುವ ಅಸ್ತಮಾ ತಡೆಗಟ್ಟಲು ವೈದ್ಯರ ಸಲಹೆ ಇಲ್ಲಿದೆ

ಚಳಿಗಾಲವು ನಮ್ಮ ಉಸಿರಾಟದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ಮತ್ತು ನಮ್ಮಲ್ಲಿ ಹೆಚ್ಚಿನವರಿಗೆ ಇದು ಗಂಟಲು ನೋವು ಹಾಗೂ ಅಸ್ತಮಾದಿಂದ ಬಳಲುತ್ತಿರುವವರಿಗೆ ಮೂಗಲ್ಲಿ ಸ್ರವಿಸುವಿಕೆಗೂ ಕಾರಣವಾಗಬಹುದು.

Asthma: ಚಳಿಗಾಲದಲ್ಲಿ ಉಲ್ಬಣಗೊಳ್ಳುವ ಅಸ್ತಮಾ ತಡೆಗಟ್ಟಲು ವೈದ್ಯರ ಸಲಹೆ ಇಲ್ಲಿದೆ
ಸಾಂದರ್ಭಿಕ ಚಿತ್ರ Image Credit source: google image
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 09, 2023 | 6:50 PM

ಚಳಿಗಾಲವು ನಮ್ಮ ಉಸಿರಾಟದ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ಮತ್ತು ನಮ್ಮಲ್ಲಿ ಹೆಚ್ಚಿನವರಿಗೆ ಇದು ಗಂಟಲು ನೋವು ಹಾಗೂ ಅಸ್ತಮಾದಿಂದ ಬಳಲುತ್ತಿರುವವರಿಗೆ ಮೂಗಲ್ಲಿ ಸ್ರವಿಸುವಿಕೆಗೂ ಕಾರಣವಾಗಬಹುದು. ಈ ಅಸ್ತಮಾ ಪ್ರಚೋದಕವನ್ನು ತಡೆಗಟ್ಟುವ ಕ್ರಮಗಳು ಇಲ್ಲಿವೆ. ಚಳಿಗಾಲದಲ್ಲಿ ಉಂಟಾಗುವ ಶೀತ ಹವಮಾನದಿಂದಾಗಿ ಉಸಿರಾಟದ ಪರಿಸ್ಥಿತಿ ಹದಗೆಡುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಅಸ್ತಮಾವನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಪಲ್ಮನರಿ ಮೆಡಿಸಿನ್ ವಿಭಾಗದ ಹಿರಿಯ ಸಲಹೆಗಾರ ಹಾಗೂ ವಿಭಾದ ಮುಖ್ಯಸ್ಥರಾದ ಡಾ. ಅರ್ಜುನ್ ಖನ್ನಾ ಹೇಳುತ್ತಾರೆ, ಅಸ್ತಮಾವು ಶ್ವಾಸನಾಳಗಳಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ಅವುಗಳನ್ನು ಕಿರಿದಾಗಿಸುತ್ತದೆ. ಮತ್ತು ಉಸಿರಾಟದ ತೊಂದರೆ, ಉಬ್ಬಸ ಮತ್ತು ಕೆಮ್ಮುವಿಗೆ ಇದು ಕಾರಣವಾಗುತ್ತದೆ. ಕೆಲವು ಪ್ರಚೋದಕಗಳಿಗೆ ಪ್ರತಿಕ್ರಿಯೆಯಾಗಿ ಅಸ್ತಮಾ ರೋಗಿಗಳಿಗೆ ಶೀತ ಗಾಳಿಯು ಸಾಮಾನ್ಯ ಪ್ರಚೋದಕವಾಗಿದೆ.

ತಣ್ಣನೆಯ ಗಾಳಿಗೆ ನೇರ ಮತ್ತು ನಿರಂತರವಾದ ಒಡ್ಡುವಿಕೆಯು ಅಸ್ತಮಾ ರೋಗಿಗಳ ಈಗಾಗಲೇ ದುರ್ಬಲವಾದ ಶ್ವಾಸನಾಳದ ಹಾದಿಯನ್ನು ಮುಚ್ಚಲು ಕಾರಣವಾಗುತ್ತದೆ. ಈ ಕಾರಣದಿಂದಾಗಿ ಅವರು ಉಲ್ಬಣಗೊಂಡ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ. ಮತ್ತು ಅಸ್ತಮಾ ದಾಳಿಗೆ ಹೆಚ್ಚಾಗಿ ಗುರಿಯಾಗುತ್ತಾರೆ. ವಾಸ್ತವವಾಗಿ ಶೀತ ಗಾಳಿಗೆ ಒಡ್ಡಿಕೊಳ್ಳುವುದರಿಂದ ವಾಯುಮಾರ್ಗಗಳಲ್ಲಿ ಹಿಸ್ಟಮೈನ್‍ಗಳ ಉತ್ಪಾದನೆಯ ಕಾರಣದಿಂದಾಗಿ ಅಲರ್ಜಿಗೆ ಸಂಬಂಧಿಸಿದ ಅಸ್ತಮಾ ಕೂಡಾ ಉಂಟಾಗಬಹುದು. ಆದ್ದರಿಂದ ಮೊದಲ ಹಂತವಾಗಿ ತಡೆಗಟ್ಟುವ ಕ್ರಮಗಳನ್ನು ಅನುಸರಿಸಬೇಕು. ಅವುಗಳೆಂದರೆ ಫ್ಲೂ ಲಸಿಕೆಯನ್ನು ಮಡೆಯುವುದು, ಮುಖಕ್ಕೆ ಮಾಸ್ಕ್ ಧರಿಸುವುದು, ವೈದ್ಯರ ಶಿಫಾರಸಿನ ಮೇರೆಗೆ ಇನ್ಹೆಲರ್ ಮತ್ತು ವೈದ್ಯರು ಸೂಚಿಸಿದಂತೆ ನಿಯಮಿತ ಇನ್ಹಲೇಷನ್ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು.

ಇದನ್ನು ಓದಿ;Asthma: ಅಸ್ತಮಾ ರೋಗಿಗಳು ಮಳೆಗಾಲದಲ್ಲಿ ಮರೆತೂ ಕೂಡ ಇವುಗಳನ್ನು ತಿನ್ನಬೇಡಿ

ಗುರುಗ್ರಾಮ್‍ನ ಮಣಿಪಾಲ್ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರದ ಸಲಹೆಗಾರ ಡಾ. ಪಿಯೂಷ್ ಗೋಯೆಲ್ ಪ್ರಕಾರ, ಅಸ್ತಮಾ ಹೊಂದಿರುವ ರೋಗಿಗಳ ಕಾಯಿಲೆ ಅನೇಕ ಕಾರಣಗಳಿಂದ ಉಲ್ಬಣಗೊಳ್ಳಬಹುದು. ಕಾಲೋಚಿತವಾಗಿ ವೈರಲ್ ಸೋಂಕು ಹಾಗೂ ಜ್ವರ ಅಸ್ತಮಾವನ್ನು ಹದಗೆಡಿಸುತ್ತದೆ. ಎರಡನೆಯದಾಗಿ ಹೆಚ್ಚಿನ ಮಾಲಿನ್ಯ ಮಟ್ಟಗಳ ಕಾರಣದಿಂದಾಗಿ ಅಸ್ತಮಾ ಉಲ್ಬಣಗೊಳ್ಳಬಹುದು. ಇದರ ತಡೆಗಟ್ಟುವಿಕೆಗಾಗಿ ಚಳಿಗಾಲದ ಆರಂಭದ ಮೊದಲು ವಾರ್ಷಿಕ ಇನ್ಫ್ಲುಯೆನ್ಝ ವಾಕ್ಸಿನೇಷನ್ ನೀಡುವುದು ಅಗತ್ಯವಾಗಿದೆ. ಶ್ವಾಸಕೋಶದ ಕಾಯಿಲೆ ಹಾಗೂ ಇತರ ಕೊಮೊರ್ಬಿಡಿಟಿಗಳ ರೋಗ ಲಕ್ಷಣ ಹೊಂದಿರುವ ಮಕ್ಕಳು ಹಾಗೂ ವಯಸ್ಕರರು ಮುಖಕ್ಕೆ ಮಾಸ್ಕ್ ಧರಿಸುವುದು ಹಾಗೂ ಕೈಗಳ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:50 pm, Mon, 9 January 23

ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ