AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧುಮೇಹವನ್ನು ನೈಸರ್ಗಿಕವಾಗಿ ನಿವಾರಿಕೊಳ್ಳುವುದು ಹೇಗೆ..! ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ

ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ನೀರು ಅತ್ಯುತ್ತಮ ಪರಿಹಾರಗಳಲ್ಲಿ ಒಂದಾಗಿದೆ. ಈ 4 ಅಗತ್ಯ ಪಾನೀಯಗಳು ಮಧುಮೇಹವನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. 

ಮಧುಮೇಹವನ್ನು ನೈಸರ್ಗಿಕವಾಗಿ ನಿವಾರಿಕೊಳ್ಳುವುದು ಹೇಗೆ..! ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Mar 02, 2022 | 12:23 PM

Share

ಡಯಾಬಿಟಿಸ್ (Diabetes) ಮೆಲ್ಲಿಟಸ್ (ಮಧುಮೇಹ) ಭಾರತದಲ್ಲಿ ಪ್ರಚಲಿತದಲ್ಲಿರುವ ಸಾಮಾನ್ಯ ರೋಗಗಳಲ್ಲಿ ಒಂದಾಗಿದೆ. ಮೇದೋಜ್ಜೀರಕ ಗ್ರಂಥಿಯು ಕಡಿಮೆ ಅಥವಾ ಇನ್ಸುಲಿನ್​ನ್ನು ಉತ್ಪಾದಿಸದಿದ್ದಾಗ ಈ ದೀರ್ಘಕಾಲದ ಕಾಯಿಲೆ ಸಂಭವಿಸುತ್ತದೆ. ಎರಡೂ ಸಂದರ್ಭಗಳಲ್ಲಿ, ರಕ್ತದಲ್ಲಿನ ಸಕ್ಕರೆಯು ಶೇಖರಣೆಗಾಗಿ ಜೀವಕೋಶಗಳಿಗೆ ಪ್ರವೇಶಿಸಲು ಸಾಧ್ಯವಿಲ್ಲ. ಇದು ಮತ್ತಷ್ಟು ತೊಡಕುಗಳಿಗೆ ಕಾರಣವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು (WHO) ಭಾರತದಲ್ಲಿ ಸುಮಾರು 31,705,000 ಮಧುಮೇಹಿಗಳು ಮತ್ತು 2030ರ ವೇಳೆಗೆ 100 ಪ್ರತಿಶತದಷ್ಟು 79,441,000ಕ್ಕೆ ಹೆಚ್ಚಾಗಬಹುದು ಎಂದು ಅಂದಾಜಿಸಿದೆ. ಬದಲಾಗುತ್ತಿರುವ ನಮ್ಮ ಜೀವನಶೈಲಿಯಿಂದ ನಾವು ಮಧುಮೇಹವೆನ್ನುವ ರೋಗಕ್ಕೆ ಬಲಿಯಾಗುತ್ತಿದ್ದೇವೆ. ಕಡಿಮೆ ದೈಹಿಕ ಚಟುವಟಿಕೆ, ಜಡ ಜೀವನಶೈಲಿ ಮತ್ತು ಹೆಚ್ಚಿನ ಕ್ಯಾಲೋರಿ ಆಹಾರ ಮಧುಮೇಹದ ಹೆಚ್ಚಿನ ಅಪಾಯವನ್ನುಂಟು ಮಾಡುತ್ತದೆ.

ಸರಿಯಾದ ಆಹಾರವನ್ನು ಸೇವಿಸುವುದರ ಜೊತೆಗೆ, ಮಧುಮೇಹ ಕಡಿಮೆ ಮಾಡಲು ಸಹಾಯ ಮಾಡುವ ಪಾನೀಯಗಳನ್ನು ಸಹ ಕುಡಿಯಬೇಕು. ರಕ್ತದ ಸಕ್ಕರೆಯ ಮಟ್ಟ ಕಡಿಮೆ ಮಾಡಲು ಪಾನೀಯಗಳ ಮೂಲಕ ನಾವು ಆರೋಗ್ಯಕರ ರಸಗಳು ಮತ್ತು ಚಹಾಗಳನ್ನು ಅರ್ಥೈಸುತ್ತೇವೆಯೇ ಹೊರತು ಫಿಜ್ಜಿ ಪಾನೀಯಗಳು ಅಥವಾ ಹಣ್ಣಿನ ರಸಗಳಲ್ಲ. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ನೀರು ಅತ್ಯುತ್ತಮ ಪರಿಹಾರಗಳಲ್ಲಿ ಒಂದಾಗಿದೆ. ಈ 4 ಅಗತ್ಯ ಪಾನೀಯಗಳು ಮಧುಮೇಹವನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ

  1. ಹಾಗಲಕಾಯಿ ಜ್ಯೂಸ್: ಹಾಗಲಕಾಯಿ ಜ್ಯೂಸ್ ಮಧುಮೇಹಿಗಳಿಗೆ ಉತ್ತಮವಾಗಿದೆ ಎಂದು ಹೇಳಲಾಗುತ್ತದೆ . ಇದು ನಿಮ್ಮ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪೌಷ್ಟಿಕ ತಜ್ಞ ಡಾ. ಅಂಜು ಸೂದ್ ಪ್ರಕಾರ, ಹಾಗಲಕಾಯಿ ಜ್ಯೂಸ್ ನಮ್ಮ ಇನ್ಸುಲಿನ್​ನ್ನು ಸಕ್ರಿಯಗೊಳಿಸುತ್ತದೆ. ಸಕ್ಕರೆಯನ್ನು ಸಮರ್ಪಕವಾಗಿ ಬಳಸಲಾಗುವುದು ಮತ್ತು ಕೊಬ್ಬಾಗಿ ಪರಿವರ್ತನೆಯಾಗುವುದಿಲ್ಲ. ಇದು ತೂಕವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಇದಲ್ಲದೆ, ಹಾಗಲಕಾಯಿ ಜ್ಯೂಸ್ ರಕ್ತದಲ್ಲಿನ ಗ್ಲೂಕೋಸ್​ನ್ನು ಕಡಿಮೆ ಮಾಡುವ ಏಜೆಂಟ್ ಎಂದು ಕರೆಯಲ್ಪಡುವ ಚರಂಟಿನ್ ಎಂಬ ಸಕ್ರಿಯ ವಸ್ತುವನ್ನು ಹೊಂದಿರುತ್ತದೆ. ಬೆಳಿಗ್ಗೆ ಒಂದು ಲೋಟ ಹಾಗಲಕಾಯಿ ಜ್ಯೂಸ್ ಕುಡಿಯುವುದರಿಂದ  ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ.
  2. ಮೆಂತ್ಯ ಕಾಳಿನ ನೀರು:ಮೆಂತ್ಯ ಕಾಳಿನ ನೀರು ಮಧುಮೇಹಕ್ಕೆ ಅತ್ಯಂತ ಪರಿಣಾಮಕಾರಿ ನೈಸರ್ಗಿಕ ಪರಿಹಾರವಾಗಿದೆ. ಬಿಸಿ ನೀರಿನಲ್ಲಿ ನೆನೆಸಿದ 10 ಗ್ರಾಂ ಮೆಂತ್ಯ ಬೀಜಗಳನ್ನು ಪ್ರತಿದಿನ ಸೇವಿಸುವುದರಿಂದ ಟೈಪ್ -2 ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯದಿಂದ ತಿಳಿದುಬಂದಿದೆ. ಮೆಂತ್ಯ ಕಾಳ ನೀರು ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಫೈಬರ್​ನ್ನು ಹೊಂದಿರುತ್ತದೆ ಮತ್ತು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಕಾರ್ಬೋಹೈಡ್ರೇಟ್ಗಳು ಮತ್ತು ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ಮತ್ತಷ್ಟು ನಿಯಂತ್ರಿಸುತ್ತದೆ. ಮೆಂತ್ಯ ನೀರು ನಿಮ್ಮ ದೇಹವು ಸಕ್ಕರೆಯನ್ನು ಬಳಸುವ ವಿಧಾನವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
  3. ಬಾರ್ಲಿ (ಗೋಧಿ) ನೀರು:ಬಾರ್ಲಿ ಅಥವಾ ಜಾವು ನೀರಿನಲ್ಲಿ ಕರಗದ ನಾರಿನಂಶ ಅಧಿಕವಾಗಿದೆ. ಇದು ಮಧುಮೇಹಿಗಳಿಗೆ ಒಳ್ಳೆಯದು. ಮಧುಮೇಹಿಗಳಿಗೆ ಇದನ್ನು ಶಿಫಾರಸು ಮಾಡಲಾಗಿದೆ ಏಕೆಂದರೆ ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಪರಿಣಾಮಕಾರಿ ಫಲಿತಾಂಶಗಳನ್ನು ಪಡೆಯಲು ನೀವು ಸಿಹಿಗೊಳಿಸದ ಬಾರ್ಲಿ ನೀರನ್ನು ಕುಡಿಯುವುದನ್ನು ಖಚಿತಪಡಿಸಿಕೊಳ್ಳಿ. ಬಾರ್ಲಿ ನೀರಿನ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಅನೇಕ ರೋಗಗಳಿಂದ ದೂರವಿರಲು ಸಹಾಯ ಮಾಡುತ್ತದೆ.
  4. ಗ್ರೀನ್ ಟೀ:BMC ಫಾರ್ಮಾಕಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಗ್ರೀನ್ ಟೀ ಕುಡಿಯುವುದು ಆರೋಗ್ಯಕರ ಸಂಗತಿಯಾಗಿದೆ. ಪಾನೀಯವು ಮಧುಮೇಹ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಮಧುಮೇಹವನ್ನು ನಿರ್ವಹಿಸುವಲ್ಲಿ ಗ್ರೀನ್ ಟೀ ಪರಿಣಾಮಕಾರಿ ಎಂದು ಸಂಶೋಧಕರು ಹೇಳಿದ್ದಾರೆ. ಈ ಪಾನೀಯಗಳನ್ನು ಸೇರಿಸುವುದರೊಂದಿಗೆ ಆರೋಗ್ಯಕರ ಆಹಾರವನ್ನು ತಿನ್ನಲು ಮತ್ತು ದೈಹಿಕವಾಗಿ ಸಕ್ರಿಯ ಜೀವನವನ್ನು ನಡೆಸಲು ಮರೆಯಬೇಡಿ. ಅವುಗಳನ್ನು ಬಳಕೆಗೆ ತರುವ ಮೊದಲು ನಿಮ್ಮ ಮಧುಮೇಹ ತಜ್ಞರನ್ನು ಸಂಪರ್ಕಿಸಿ.

ಈ ಮೇಲೆ ನೀಡಲಾಗಿರುವ ಮಾಹಿತಿ ಟಿವಿ9 ಡಿಜಿಟಲ್ ಆಧರಿಸಿರುವುದಿಲ್ಲ. ಎನ್​​ಡಿ ಟಿವಿ ವರದಿ ಆಧರಿಸಿ ಮಾಹಿತಿಯನ್ನ ನೀಡಲಾಗಿರುತ್ತದೆ.

ಇದನ್ನೂ ಓದಿ:

ಶಿವರಾತ್ರಿ ಪಾದಯಾತ್ರೆ ತಂದ ಆಪತ್ತು! ಚಿಕ್ಕಮಗಳೂರಿನಲ್ಲಿ ಪ್ಲಾಸ್ಟಿಕ್ ತಿಂದು 30ಕ್ಕೂ ಹೆಚ್ಚು ಜಾನುವಾರುಗಳು ಬಲಿ

Published On - 12:21 pm, Wed, 2 March 22