AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆ ಬಂದಿದೆ, ತಾಮ್ರದ ನೀರಿನ ಬಾಟಲಿಗಳನ್ನು ಫ್ರಿಡ್ಜ್ ನಲ್ಲಿ ಇಡುವುದು ಒಳ್ಳೆಯದಾ? ತಜ್ಞರು ಏನು ಹೇಳ್ತಾರೆ?

Copper Water Bottles: ತಾಮ್ರದ ಬಾಟಲಿಗಳಲ್ಲಿ ನೀರನ್ನು ಫ್ರಿಡ್ಜ್‌ನಲ್ಲಿ ಎಂದಿಗೂ ಸಂಗ್ರಹಿಸಬೇಡಿ. ಏಕೆಂದರೆ ತಾಮ್ರದ ಬಾಟಲಿಗಳು ಸಾಮಾನ್ಯ ಕೋಣೆಯ ಉಷ್ಣಾಂಶದಲ್ಲಿ ನೀರನ್ನು ಸಂಗ್ರಹಿಸಲು ಉತ್ತಮವಾಗಿದೆ.

ಬೇಸಿಗೆ ಬಂದಿದೆ, ತಾಮ್ರದ ನೀರಿನ ಬಾಟಲಿಗಳನ್ನು ಫ್ರಿಡ್ಜ್ ನಲ್ಲಿ ಇಡುವುದು ಒಳ್ಳೆಯದಾ? ತಜ್ಞರು ಏನು ಹೇಳ್ತಾರೆ?
ತಾಮ್ರದ ಬಾಟಲಿಗಳನ್ನು ಫ್ರಿಡ್ಜ್ ನಲ್ಲಿ ಇಡುವುದು ಒಳ್ಳೆಯದಾ?
Follow us
ಸಾಧು ಶ್ರೀನಾಥ್​
|

Updated on:Apr 30, 2023 | 1:49 AM

ಬದಲಾದ ಕಾಲಕ್ಕೆ ತಕ್ಕಂತೆ ಪ್ಲಾಸ್ಟಿಕ್ ದೈನಂದಿನ ಜೀವನದಲ್ಲಿ ಬಂದು ಸೇರಿದೆ. ಇದರಿಂದ ಜನರು ಗೊತ್ತಿಲ್ಲದೆ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರ ಎಷ್ಟು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆಯೋ ಅದೇ ವೇಗದಲ್ಲಿ ಹೊಸ ರೋಗಗಳು ಹರಡುತ್ತಿವೆ. ಇದಕ್ಕೆ ತಾಮ್ರದ ಬಾಟಲಿಗಳು ಉತ್ತಮ ಪರಿಹಾರವಾಗಿದೆ. ತಾಮ್ರದ ಬಾಟಲಿಯಲ್ಲಿ ನೀರು ಕುಡಿದರೆ ಆರೋಗ್ಯದ ಜೊತೆಗೆ ಹೊಟ್ಟೆಗೂ ಒಳ್ಳೆಯದು ಎಂದು ಮನೆಗಳಲ್ಲಿ ಹಿರಿಯರ ಬಾಯಿಂದ ಆಗಾಗ ಕೇಳಿಬರುತ್ತಿರುತ್ತದೆ. ಆಯುರ್ವೇದದ ಪ್ರಕಾರ ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಪ್ರತಿದಿನ ಇದರಿಂದ ನೀರು ಕುಡಿಯುವುದರಿಂದ ದೇಹವು ತುಂಬಾ ಶಕ್ತಿಯುತವಾಗಿರುತ್ತದೆ. ಇದರೊಂದಿಗೆ, ಇದು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ.

ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರು ನೈಸರ್ಗಿಕ ಡಿಟಾಕ್ಸ್ ಪಾನೀಯವಾಗಿದೆ. ತಾಮ್ರದ ಪಾತ್ರೆಯಲ್ಲಿ ನೀರನ್ನು ರಾತ್ರಿಯಿಡೀ ಇಟ್ಟರೆ ಅದರಲ್ಲಿರುವ ಬ್ಯಾಕ್ಟೀರಿಯಾ ನಾಶವಾಗಿ ನೀರು ಶುದ್ಧವಾಗುತ್ತದೆ. ನಂತರ ನೀವು ಈ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಊಟದ ನಂತರ ಕುಡಿಯಬಹುದು. ಆದರೆ ತಾಮ್ರದ ಪಾತ್ರೆಯಲ್ಲಿ ಇಟ್ಟಿರುವ ನೀರನ್ನು ಕುಡಿಯುವ ಮೊದಲು ಒಂದು ವಿಷಯವನ್ನು ನೆನಪಿಡಿ. ದಿನಕ್ಕೆ 2-3 ಗ್ಲಾಸ್ ಮಾತ್ರ ಕುಡಿಯಿರಿ. ಇಲ್ಲವಾದರೆ ತಾಮ್ರದ ನೀರನ್ನು ಅತಿಯಾಗಿ ಸೇವಿಸುವುದರಿಂದ ದೇಹಕ್ಕೆ ಹಾನಿಯಾಗಬಹುದು! ಎಂದು ತಜ್ಞರು ಎಚ್ಚರಿಸಿದ್ದಾರೆ.

ಈಗ ಬೇಸಿಗೆ ಬಂದಿರುವುದರಿಂದ ತಾಮ್ರದ ಬಾಟಲಿಯಲ್ಲಿ ನೀರು ಹಾಕಿ ಫ್ರಿಡ್ಜ್ ನಲ್ಲಿಡುವುದು ಸರಿಯೇ ಎಂದು ಯೋಚಿಸುವುದಾದರೆ ತಾಮ್ರದ ಪಾತ್ರೆಯಲ್ಲಿ ಇಟ್ಟ ನೀರು ಬಿಸಿಯಾಗಿರುತ್ತದೆ. ಇದು ಅನೇಕ ನಂಜುನಿರೋಧಕ ಗುಣಗಳನ್ನು ಹೊಂದಿದೆ. ಅದಕ್ಕಾಗಿಯೇ ತಾಮ್ರದ ನೀರನ್ನು ತಂಪಾಗಿ ಕುಡಿಯಬೇಕು ಮತ್ತು ಬಿಸಿಯಾಗಿ ಕುಡಿಯಬಾರದು. ತಾಮ್ರದ ಬಾಟಲಿಯನ್ನು ಫ್ರಿಜ್ ನಲ್ಲಿಟ್ಟರೆ ತಣ್ಣನೆಯ ಬದಲು ಬಿಸಿಯಾಗುತ್ತದೆ. ಇದು ನಿಮ್ಮ ಹೊಟ್ಟೆಗೆ ತುಂಬಾ ಹಾನಿಕಾರಕವಾಗಿದೆ.

ಹೆಚ್ಚು ತಾಮ್ರದ ನೀರನ್ನು ಕುಡಿಯಬೇಡಿ.

ತಾಮ್ರದ ಬಾಟಲಿಗಳಲ್ಲಿ ನೀರನ್ನು ಫ್ರಿಡ್ಜ್‌ನಲ್ಲಿ ಎಂದಿಗೂ ಸಂಗ್ರಹಿಸಬೇಡಿ. ಏಕೆಂದರೆ ತಾಮ್ರದ ಬಾಟಲಿಗಳು ಸಾಮಾನ್ಯ ಕೋಣೆಯ ಉಷ್ಣಾಂಶದಲ್ಲಿ ನೀರನ್ನು ಸಂಗ್ರಹಿಸಲು ಉತ್ತಮವಾಗಿದೆ. ದಿನಕ್ಕೆ ಎರಡರಿಂದ ಮೂರು ಗ್ಲಾಸ್‌ಗಳಿಗಿಂತ ಹೆಚ್ಚು ನೀರು ಕುಡಿಯಬೇಡಿ ಎಂದು ಯಾವಾಗಲೂ ನೆನಪಿಡಿ. ಏಕೆಂದರೆ ಇದು ತುಂಬಾ ಬಿಸಿಯಾಗಿರುತ್ತದೆ. ಇದನ್ನು ಅತಿಯಾಗಿ ಕುಡಿಯುವುದರಿಂದ ಚರ್ಮದ ಸಮಸ್ಯೆ ಉಂಟಾಗುತ್ತದೆ.

ತಾಮ್ರದ ಬಾಟಲಿಯನ್ನು ಫ್ರಿಜ್ ನಲ್ಲಿ ಏಕೆ ಇಡಬಾರದು.

ತಾಮ್ರದ ಪಾತ್ರೆಗಳು ಅಥವಾ ಬಾಟಲಿಗಳನ್ನು ನಾಲ್ಕು ದಿನ ರೆಫ್ರಿಜರೇಟರ್‌ನಲ್ಲಿ ಇರಿಸಿದಾಗಲೂ ಹೆಚ್ಚುವರಿ ತಾಮ್ರವೇನೂ ನೀರಿನಲ್ಲಿ ಸೇರುವುದಿಲ್ಲ ಎಂದು ಹೆಚ್ಚಿನ ಸಂಶೋಧನೆಗಳು ತೋರಿಸುತ್ತವೆ. ಆದರೆ ಉಕ್ಕು, ತಾಮ್ರ, ಮಣ್ಣು, ಪ್ಲಾಸ್ಟಿಕ್ ಯಾವುದೇ ವಸ್ತುವಿನಲ್ಲಿ ಏನೇ ಪದಾರ್ಥ ಹಾಕಿಟ್ಟರೂ ಅದರಲ್ಲಿ ಆ ಪದಾರ್ಥ ಹಾಗೆಯೇ ಉಳಿಯುತ್ತದೆ. ಹಾಗಾಗಿ ಹೆಚ್ಚು ಸಮಯ ಹಿಡಿದುಕೊಳ್ಳುವುದು ಯಾವಾಗಲೂ ಹಾನಿಕಾರಕವೇ ಸರಿ. ಮಣ್ಣಿನ ಪಾತ್ರೆಯಲ್ಲಿ ನೀರನ್ನು ದೀರ್ಘಕಾಲ ಶೇಖರಿಸಿಟ್ಟರೆ ರೋಗಾಣುಗಳು ಮತ್ತು ಬ್ಯಾಕ್ಟೀರಿಯಾಗಳು ಸ್ವಯಂಚಾಲಿತವಾಗಿ ಅಭಿವೃದ್ಧಿ ಹೊಂದುತ್ತವೆ. ಆಯುರ್ವೇದದ ಪ್ರಕಾರ, ನೀರನ್ನು ಯಾವಾಗಲೂ ಸಾಮಾನ್ಯ ಕೋಣೆಯ ಉಷ್ಣಾಂಶದಲ್ಲಿ ಸಂಗ್ರಹಿಸಬೇಕು. ಇದನ್ನು ಸ್ಟೀಲ್, ತಾಮ್ರ ಅಥವಾ ಪ್ಲಾಸ್ಟಿಕ್ ಬಾಟಲಿಯಲ್ಲಿ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿಟ್ಟ ತಣ್ಣೀರು ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ.

Published On - 1:49 am, Sun, 30 April 23

ಉಗ್ರರು ಎಲ್ಲೇ ಅಡಗಿ ಕೂತರೂ ಅವರಿಗೆ ಉಳಿಗಾಲವಿಲ್ಲ
ಉಗ್ರರು ಎಲ್ಲೇ ಅಡಗಿ ಕೂತರೂ ಅವರಿಗೆ ಉಳಿಗಾಲವಿಲ್ಲ
ಥೂ...ಛೀ..ಬೆಂಗಳೂರಿನಲ್ಲಿ ಬೆತ್ತಲೆಯಾಗಿ ಓಡಾಡಿದ ಯುವತಿ, ವಿಡಿಯೋ ವೈರಲ್
ಥೂ...ಛೀ..ಬೆಂಗಳೂರಿನಲ್ಲಿ ಬೆತ್ತಲೆಯಾಗಿ ಓಡಾಡಿದ ಯುವತಿ, ವಿಡಿಯೋ ವೈರಲ್
ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್
ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್
ಪಿಒಕೆಯಲ್ಲಿ ಸ್ಥಳೀಯರಿಗೆ ಪಾಕ್ ಸೇನೆಯಿಂದ ಶಸ್ತ್ರಾಸ್ತ್ರ ತರಬೇತಿ
ಪಿಒಕೆಯಲ್ಲಿ ಸ್ಥಳೀಯರಿಗೆ ಪಾಕ್ ಸೇನೆಯಿಂದ ಶಸ್ತ್ರಾಸ್ತ್ರ ತರಬೇತಿ
ನನ್ನ ಪತಿ ಮತ್ತು ಯತ್ನಾಳ್ ನಡುವಿನ ಜಗಳ ಅವರವರ ವೈಯಕ್ತಿಕ ವಿಚಾರ: ವೀಣಾ
ನನ್ನ ಪತಿ ಮತ್ತು ಯತ್ನಾಳ್ ನಡುವಿನ ಜಗಳ ಅವರವರ ವೈಯಕ್ತಿಕ ವಿಚಾರ: ವೀಣಾ
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್