AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀರ್ಘಕಾಲಿಕ ಕೊವಿಡ್​ ಬಳಿಕ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದೀರಾ?

Post Covid Hair Fall: ಸೋಂಕಿಗೆ ಒಳಗಾದವರಲ್ಲಿ ಸರಿಸುಮಾರು 70 ರಿಂದ 80 ರಷ್ಟು ಜನರಿಗೆ ನಕಾರಾತ್ಮಕ ವರದಿಯ ಬಳಿಕವೂ ಕೂದಲುದುರುವ ಸಮಸ್ಯೆ ಕಾಡುತ್ತಿದೆ. ಇದರಿಂದ ಹೊರ ಬರಲು ಸುಮಾರು 2-4 ತಿಂಗಳುಗಳ ಕಾಲ ಸಮಯ ಬೇಕು

ದೀರ್ಘಕಾಲಿಕ ಕೊವಿಡ್​ ಬಳಿಕ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದೀರಾ?
ಸಂಗ್ರಹ ಚಿತ್ರ
TV9 Web
| Edited By: |

Updated on: Jun 24, 2021 | 2:04 PM

Share

ಮಾನಸಿಕ ಒತ್ತಡ ಉಂಟಾದಾಗ ಕೂದಲು ಉದುರುವ ಸಮಸ್ಯೆ ಕಾಡುವುದು ಮಾಮೂಲಿ. ಅನಗತ್ಯ ಚಿಂತೆಯಿಂದ ಮಾನಸಿಕ ಸ್ಥಿತಿ ಹದಗೆಡುತ್ತದೆ. ವಿಪರೀತ ಟೆನ್ಷನ್​ನಿಂದ ದೇಹದ ಸ್ಥಿತಿ ದುರ್ಬಗೊಳ್ಳುತ್ತದೆ. ಅದರಲ್ಲಿಯೂ ಕೊವಿಡ್​-19 ಸಾಂಕ್ರಾಮಿಕ ರೋಗ ಜನರಿಗೆ ಹೆಚ್ಚು ಮಾನಸಿಕ ಒತ್ತಡವನ್ನು ತಂದು ಬಿಟ್ಟಿತು. ಇದರಿಂದ ಜನರು ಹೆಚ್ಚು ಗೊಂದಲಕ್ಕೀಡಾದರು ಹಾಗೂ ದೀರ್ಘಕಾಲಿಕ ಕೊವಿಡ್​ ಬಳಿಕವೂ ಸಹ ಕೂದಲುದುರುವ ಸಮಸ್ಯೆ ಕಾಡತೊಡಗಿತು. ಈ ಸಮಸ್ಯೆಯಿಂದ ಹೊರ ಬರಲು ಕೆಲವೊಂದಿಷ್ಟು ಸಲಹೆಗಳು ಇಲ್ಲಿವೆ. 

ಸೋಂಕಿಗೆ ಒಳಗಾದವರಲ್ಲಿ ಸರಿಸುಮಾರು 70 ರಿಂದ 80 ರಷ್ಟು ಜನರಿಗೆ ನಕಾರಾತ್ಮಕ ವರದಿಯ ಬಳಿಕವೂ ಕೂದಲುದುರುವ ಸಮಸ್ಯೆ ಕಾಡುತ್ತಿದೆ. ಇದರಿಂದ ಹೊರ ಬರಲು ಸುಮಾರು 2-4 ತಿಂಗಳುಗಳ ಕಾಲ ಸಮಯ ಬೇಕು.

ಕೊವಿಡ್​ ಸಾಕಷ್ಟು ತೀವ್ರವಾದ ಒತ್ತಡವನ್ನು ಉಂಟುಮಾಡುತ್ತವೆ. ಇದು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ನಮ್ಮ ದೇಹವು ಅಥವಾ ಮನಸ್ಥಿತಿ ಒತ್ತಡಕ್ಕೆ ಒಳಗಾದಾಗ ಸುಮಾರು 2ರಿಂದ 3 ತಿಂಗಳ ನಂತರ ಕೂದಲುದುರುವ ಸಮಸ್ಯೆ ಕಾಡತೊಡಗುತ್ತದೆ. ಜತೆಗೆ ಕೊವಿಡ್​ನಿಂದ ಚಿಕಿತ್ಸೆಗೆ ಒಳಗಾದವರು ಅಥವಾ ಹೆಚ್ಚು ಚಿಂತೆಯಲ್ಲಿ ಮುಳುಗಿದವರಿಗೆ ಈ ಸಮಸ್ಯೆ ಕಾಡತೊಡಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಸಾಮಾನ್ಯವಾಗಿ ಕೊವಿಡ್​ ಸಮಯದಲ್ಲಿ ಉದುರಿ ಹೋದ ಕೂದಲುಗಳು ಸುಮಾರು ನಾಲ್ಕರಿಂದ ಆರು ತಿಂಗಳ ಒಳಗೆ ಮತ್ತೆ ಹುಟ್ಟಿಕೊಳ್ಳುತ್ತವೆ. ಅದರ ನಂತರವೂ ಸಹ ಅತಿಯಾಗಿ ಕೂದಲುದುರುವ ಸಮಸ್ಯೆ ಕಾಡುತ್ತಿದ್ದರೆ ಹತ್ತಿರದಲ್ಲಿನ ಚರ್ಮ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ಕೊವಿಡ್​ ಬಳಿಕ ಕೂದಲುದುರುವ ಸಮಸ್ಯೆ ತಡೆಗಟ್ಟುವ ಕೆಲವು ಸಲಹೆಗಳು * ನಿಮ್ಮ ಆಹಾರ ವ್ಯವಸ್ಥೆ ಬದಲಾಗಬೇಕಿದೆ. ಹೆಚ್ಚು ಪ್ರೊಟೀನ್​ಯುಕ್ತ ಆಹಾರವನ್ನು ಸೇವಿಸುವುದು ಉತ್ತಮ.

* ನೀವು ಮಾಂಸಹಾರಿ ಸೇವನೆ ಮಾಡುವವರಾಗಿದ್ದರೆ ಕೋಳಿ, ಮೊಟ್ಟೆ ಮತ್ತು ಮೀನುಗಳಂತಹ ಪೌಷ್ಟಿಕ ಆಹಾರ ನಿಮ್ಮದಾಗಿರಲಿ

*ಸಸ್ಯಹಾರಿಗಳಾದ ನೀವು ಹಸಿರು ಸೊಪ್ಪು, ತರಕಾರಿ, ಹಣ್ಣು-ಹಂಪಲನ್ನು ಹೆಚ್ಚು ಸೇವಿಸಿ

*ಪ್ರತಿನಿತ್ಯ ವ್ಯಾಯಾಮ ಮಾಡುವ ಅಭ್ಯಾಸ ರೂಢಿಯಲ್ಲಿರಲಿ. ವ್ಯಾಯಾಮ ಮಾಡುವುದರಿಂದ ರಕ್ತ ಪರಿಚಲನೆಗೆ ಸಹಾಯವಾಗುತ್ತದೆ.

*ಅನಗತ್ಯ ಚಿಂತೆಗಳನ್ನು ಬಿಟ್ಟು ಹೆಚ್ಚು ಸಮಯ ಮನೆಯವರೊಂದಿಗೆ  ಕಾಲ ಕಳೆಯುವ ಅಭ್ಯಾಸ ಮಾಡಿಕೊಳ್ಳಿ

*ಕೊವಿಡ್​ ಬಳಿಕ ನಿಮ್ಮ ದಿನಚರಿ ನಿಧಾನವಾಗಿರಲಿ. ಒಂದೇ ಬಾರಿ ದೇಹಕ್ಕೆ ಆಯಾಸವನ್ನುಂಟು ಮಾಡುವ ಚಟುವಟಿಕೆಯಿಂದ ಆದಷ್ಟು ದೂರವಿರಿ

ಇದನ್ನೂ ಓದಿ:

Beauty Tips: ಕೂದಲು-ಮುಖದ ಸೌಂದರ್ಯ ಹೆಚ್ಚಿಸುವ ಬೀಟ್​ರೂಟ್​; ಬಳಸುವ ವಿಧಾನ ಇಲ್ಲಿದೆ

ಈರುಳ್ಳಿ ಸಿಪ್ಪೆ ಬಳಸಿ ಕೂದಲು ಉದುರುವ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು ಗೊತ್ತಾ?

ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ