AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ದಾಸವಾಳದ ಗಿಡಮೂಲಿಕೆ ಚಹಾ ಎಂದಾದರೂ ಸೇವಿಸಿದ್ದೀರಾ? ಒಂದು ಸಿಪ್​ ಸವಿದರೂ ಆರೋಗ್ಯಕ್ಕೆ ಪ್ರಯೋಜನಗಳಿವೆ

ದಾಸವಾಳ ಚಹಾ ನಮ್ಮ ದೇಹದಲ್ಲಿ ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಜತೆಗೆ ದೇಹದ ತೂಕ ನಿಯಂತ್ರಿಸಲು ಇದು ಸಹಾಯಕವಾಗಿದೆ.

Health Tips: ದಾಸವಾಳದ ಗಿಡಮೂಲಿಕೆ ಚಹಾ ಎಂದಾದರೂ ಸೇವಿಸಿದ್ದೀರಾ? ಒಂದು ಸಿಪ್​ ಸವಿದರೂ ಆರೋಗ್ಯಕ್ಕೆ ಪ್ರಯೋಜನಗಳಿವೆ
ದಾಸವಾಳ ಚಹಾ
TV9 Web
| Edited By: |

Updated on: Jun 29, 2021 | 8:15 AM

Share

ಚಹಾದಲ್ಲಿ ಅನೇಕ ವಿಧಗಳಿವೆ. ಹೆಚ್ಚು ರುಚಿ ಮತ್ತು ಸುವಾಸನೆಯೊಂದಿಗೆ ಒಂದೊಂದು ಚಹಾ ಒಬ್ಬೊಬ್ಬರಿಗೆ ಇಷ್ಟವಾಗುತ್ತದೆ. ಮಳೆಗಾಲದ ಈ ದಿನಗಳಲ್ಲಿ ಬಿಸಿ-ಬಿಸಿ ಚಹಾವನ್ನು ಸುರ್​.. ಎಂದು ಸವಿಯುತ್ತಿದ್ದರೆ ಅದರ ಸ್ವಾದವೇ ಬೇರೆ! ಅದರಲ್ಲಿಯೂ ಚಹಾ ಪ್ರಿಯರಂತೂ ಮಳೆಗಾಲದಲ್ಲಿ ಚಹಾ ಕುಡಿಯದೇ ಇರಲು ಸಾಧ್ಯವೇ. ಹಾಗಿದ್ದರೆ ವಿಶೇಷ ಚಹಾ ಎನಿಸಿಕೊಂಡ ದಾಸವಾಳ ಚಹಾದಿಂದ ಆರೋಗ್ಯಕ್ಕಾಗುವ ಪ್ರಯೋಜನಗಳ ಕುರಿತಾಗಿ ತಿಳಿಯೋಣ.

ದಾಸವಾಳದಿಂದಲೂ ಸಹ ಚಹಾ ತಯಾರಿಸುತ್ತಾರೆ. ಕೆಂಪು ಬಣ್ಣದ ದಾಸವಾಳದಿಂದ ಚಹಾ ತಯಾರಿಸುವುದು ಕೊಂಚ ಹುಳಿ ಅಂಶವನ್ನು ನೀಡಿದರೂ ಸಹ ಆರೋಗ್ಯಕ್ಕೆ ಅಷ್ಟೇ ಪ್ರಯೋಜನಗಳಿವೆ. ಜೀವನ ಶೈಲಿಯಲ್ಲಿ ಬದಲಾವಣೆ, ಆಹಾರದಲ್ಲಿನ ಕೆಲವು ಬದಲಾವಣೆಯ ಮೂಲಕ ಉಂಟಾಗುವ ರಕ್ತದೊತ್ತಡ, ಹೃದ್ರೋಗ ಸಮಸ್ಯೆಗಳಿಂದ ದೂರವಿರಬಹುದು. ಗಿಡಮೂಲಿಕೆಯ ದಾಸವಾಳ ಚಹಾ ರಕ್ತದೊತ್ತಡವನ್ನು ನಿವಾರಿಸುತ್ತದೆ. ಜತೆಗೆ ಮೂತ್ರಪಿಂಡ ಸಮಸ್ಯೆ, ಪಾರ್ಶ್ವವಾಯು ಸಮಸ್ಯೆಗಳಿಂದ ದೂರವಿರಬಹುದು.

ದಾಸವಾಳ ಚಹಾ ತಯಾರಿಸುವ ವಿಧಾನ *ದಾಸವಾಳದ ಒಣಗಿದ ದಳಗಳು *ನೀರು *ಲಿಂಬು *ದಾಲ್ಚಿನ್ನಿ *ಪುದೀನ ಎಲೆಗಳು

ತಣ್ಣನೆಯ ನೀರಿನಲ್ಲಿ ದಾಸವಾಳದ ಎಲೆಯ ಪುಡಿಗಳನ್ನು 2 ಗಂಟೆಗಳ ಕಾಲ ನೆನೆಸಿಡಿ. ಅದನ್ನು ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ. ಸಕ್ಕರೆ ಅಥವಾ ಜೇನುತುಪ್ಪ ಮತ್ತು ಲಿಂಬು ರಸವನ್ನು ಸೇರಿಸಿ. ಜತೆಗೆ ದಾಲ್ಚಿನ್ನಿ ಮತ್ತು ಪುದೀನ ಎಲೆಗಳನ್ನು ಬೆರೆಸಿ ಚೆನ್ನಾಗಿ ಕುದಿಸಿ. ಇದೀಗ ಚಹಾ ರೆಡಿಯಾಗಿದೆ. ಈ ಮೂಲಕ ನೀವು ಚಹಾದ ಸ್ವಾದವನ್ನು ಸವಿಯಬಹುದು.

ದಾಸವಾಳ ಚಹಾದ ಪ್ರಯೋಜನಗಳು *ರಕ್ತನಾಳಗಳನ್ನು ಬಲಪಡಿಸುತ್ತದೆ *ಕೆಟ್ಟ ಕೊಲೆಸ್ಟ್ರಾಲ್​ಗಳನ್ನು ಕರಗಿಸುತ್ತದೆ *ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ *ದೀರ್ಘಕಾಲದ ಆಯಾಸವನ್ನು ನಿವಾರಿಸುತ್ತದೆ *ಮೆದುಳಿನ ಕಾರ್ಯವನ್ನು ಚುರುಕುಗೊಳಿಸುತ್ತದೆ

ದಾಸವಾಳ ಚಹಾ ನಮ್ಮ ದೇಹದಲ್ಲಿ ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಜತೆಗೆ ದೇಹದ ತೂಕ ನಿಯಂತ್ರಿಸಲು ಇದು ಸಹಾಯಕವಾಗಿದೆ. ಚರ್ಮದ ಕಾಂತಿಯನ್ನೂ ಸಹ ಹೆಚ್ಚಿಸಿಕೊಳ್ಳಬಹುದು. ಇದರಲ್ಲಿನ ಆಂಟಿ ಆಕ್ಸಿಡೆಂಟ್​ ಅಂಶಗಳಿಂದ ಹೃದಯ ಖಾಯಿಲೆ, ಮಧುಮೇಹದಂತಹ ಖಾಯಿಲೆಗಳಿಂದ ದೂರವಿರಬಹುದು. ಹಾಗಾಗಿ ದಾಸವಾಳ ಚಹಾ ಅರೋಗ್ಯಕ್ಕೆ ಒಳ್ಳೆಯದು.

ಇದನ್ನೂ ಓದಿ:

Health Tips: ನೇರಳೆ ಹಣ್ಣಿನ ಬೀಜದಿಂದಲೂ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಹುಣಸೆ ಬೀಜ: ನೀವು ಮೊಣಕಾಲು ನೋವು ಮತ್ತು ಕೀಲು ನೋವಿನಿಂದ ಬಳಲುತ್ತಿದ್ದೀರಾ?

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ