Sign In

By signing in or creating an account, you agree with Associated Broadcasting Company's Terms & Conditions and Privacy Policy.

Cracked Heels: ಹಿಮ್ಮಡಿ ಬಿರುಕು ನಿವಾರಣೆಗೆ ಇಲ್ಲಿದೆ ಮನೆಮದ್ದು

ಕಾಲು ಬಿರುಕು ಕಂಡು ಬಂದರೆ ಕಾಲುಗಳು ಸುಂದರವಾಗಿ ಕಾಣಿಸುವುದಿಲ್ಲ. ಕಾಲಿನ ಪಾದದ ನೋವು ಕಾಡುತ್ತದೆ. ಅದರಲ್ಲಿಯೂ ಮಣ್ಣಿನ ಕೆಸರು ಒಡಕುಗಳಲ್ಲಿ ಸಿಲುಕಿಕೊಂಡು ಹೆಚ್ಚು ಸಮಸ್ಯೆಯನ್ನು ತಂದೊಡ್ಡುತ್ತದೆ.

Cracked Heels: ಹಿಮ್ಮಡಿ ಬಿರುಕು ನಿವಾರಣೆಗೆ ಇಲ್ಲಿದೆ ಮನೆಮದ್ದು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Skanda

Updated on: Jun 26, 2021 | 7:10 AM

ದೈಹಿಕ ಸೌಂದರ್ಯ ವ್ಯಕ್ತಿಯನ್ನು ಅಳೆಯುವ ಮಾಪನವಲ್ಲ. ಆದರೂ, ನಾವು ಇದ್ದಿದ್ದರಲ್ಲೇ ಚೆನ್ನಾಗಿ ಕಾಣಬೇಕೆಂಬ ಹಂಬಲ ಎಲ್ಲರಿಗೂ ಇರುತ್ತದೆ. ಹೀಗಾಗಿಯೇ ಹೆಚ್ಚಿನವರು ತಮ್ಮ ದೇಹದ ಬಗ್ಗೆ ತುಸು ಹೆಚ್ಚೇ ಗಮನ ನೀಡುತ್ತಾರೆ. ಹಾಗಂತ ಮುಖವೊಂದೇ ಚೆನ್ನಾಗಿ ಕಂಡರೆ ಸಾಕಾಗುವುದಿಲ್ಲ. ಅಡಿಯಿಂದ ಮುಡಿಯ ತನಕವೂ ಚೆನ್ನಾಗಿರಬೇಕೆಂಬ ಆಸೆ ಇದ್ದೇ ಇರುತ್ತದೆ. ನಮ್ಮ ದೇಹದ ಭಾರವನ್ನೆಲ್ಲಾ ಹೊತ್ತು ನಿಲ್ಲುವ ಪಾದಗಳೂ ಸುಂದರವಾಗಿ ಹೊಳೆಯಬೇಕು ಎಂಬ ಆಸೆ ಇರುತ್ತದೆ. ಆದರೆ ಮಳೆಗಾಲದ ಸಮಯದಲ್ಲಿ ಕಾಲಿನ ಪಾದಗಳಲ್ಲಿ ಒಡಕು ಅಥವಾ ಬಿರುಕು ಬೀಳಲು ಪ್ರಾರಂಭವಾಗುದರೆ ಅದನ್ನು ಅಂದವಾಗಿ ಕಾಪಾಡಿಕೊಳ್ಳುವುದೇ ಕಷ್ಟ. ಕೆಲವರಿಗೆ ಇದು ಯಾವ ಮಟ್ಟಿಗೆ ಕಾಡುತ್ತದೆ ಎಂದರೆ ಪಾದಗಳನ್ನು ತೋರಿಸಲು ನಾಚಿಕೆ ಅನಿಸಬಹುದು. ಇನ್ನು ಕೆಲವರಿಗೆ ನೋವು ಕಾಡಬಹುದು. ಹೀಗಿರುವಾಗ ಕಾಲು ಬಿರುಕಿಗೆ ಮನೆಯಲ್ಲಿಯೇ ಮದ್ದು ತಯಾರಿಸಿ ಸಮಸ್ಯೆಗಳಿಂದ ಹೊರ ಬರಲು ದಾರಿ ಕಂಡುಕೊಳ್ಳುವುದು ಸರಳ ಉಪಾಯ.

ಬಿರುಕು ಕಂಡು ಬಂದರೆ ಕಾಲುಗಳು ಸುಂದರವಾಗಿ ಕಾಣಿಸುವುದಿಲ್ಲ. ಕಾಲಿನ ಪಾದದ ನೋವು ಕಾಡುತ್ತದೆ. ಅದರಲ್ಲಿಯೂ ಮಣ್ಣಿನ ಕೆಸರು ಒಡಕುಗಳಲ್ಲಿ ಸಿಲುಕಿಕೊಂಡು ಹೆಚ್ಚು ಸಮಸ್ಯೆಯನ್ನು ತಂದೊಡ್ಡುತ್ತದೆ. ಇದಕ್ಕೆ ಪರಿಹಾರವಾಗಿ ಕಲ್ಲು ಉಪ್ಪನ್ನು ಪುದೀನ ಅಥವಾ ನೀಲಗಿರಿ ಎಣ್ಣೆಯಲ್ಲಿ ಸೇರಿಸಿ. ಆ ಮಿಶ್ರಣವನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕಾಲುಗಳನ್ನು 20 ನಿಮಿಷಗಳ ಕಾಲ ನೆನೆಸಿಡಿ. ಇದರಿಂದ ಪಾದಗಳ ಒಡಕು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ನಿಂಬೆ ರಸ ಮತ್ತು ಸಕ್ಕರೆಯನ್ನು ಮಿಶ್ರಣ ಮಾಡಿ ಪಾದಗಳ ಒಡಕಿರುವ ಜಾಗಕ್ಕೆ ಹಚ್ಚಿಕೊಳ್ಳಿ. ನಂತರ ಕಾಲುಗಳನ್ನು ಸ್ವಚ್ಛಗೊಳಿಸಿಕೊಳ್ಳಿ. ಪ್ರತಿನಿತ್ಯ 5 ನಿಮಿಷಗಳ ಕಾಲ ಹೀಗೆ ಮಾಡುವುದರ ಮೂಲಕ ಬಹುಬೇಗ ಪಾದದ ಒಡಕು ಸಮಸ್ಯೆ ನಿವಾರಣೆಯಾಗುತ್ತದೆ.

ಬಾದಾಮಿ ಎಣ್ಣೆ, ಸಮುದ್ರದ ಉಪ್ಪು, ಜೇನುತುಪ್ಪ, ಅಕ್ಕಿ ಪುಡಿ, ಪುದೀನಾ ಎಣ್ಣೆಯನ್ನು ಬೆರೆಸಿ. ಇದರ ಮೂಲಕ ಪಾದಗಳನ್ನು ಸ್ಕ್ರಬ್​ ಮಾಡಿ. ಪಾದಗಳಲ್ಲಿ ಅಂಟಿಕೊಂಡಿರುವ ಕೆಸರನ್ನು ತೆಗದು ಹಾಕಲು ಇದು ಸಹಾಯ ಮಾಡುತ್ತದೆ. ಒಣಗಿದ ಚರ್ಮವನ್ನು ಕಿತ್ತುಹಾಕಿ, ಹೊಸ ಚರ್ಮ ಹುಟ್ಟಿಕೊಳ್ಳಲು ಸಹಾಯಕವಾಗಿದೆ. ಜತೆಗೆ ಚರ್ಮವನ್ನು ಮೃದುಗೊಳಿಸುತ್ತದೆ.

ಅಲೋವೆರಾ ಜೆಲ್​ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಅನೇಕರು ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಬಳಸುತ್ತಾರೆ. ಕಾಲಿನ ಪಾದಗಳಲ್ಲಿ ಬಿರುಕು ಬಿಟ್ಟ ಜಾಗದಲ್ಲಿ ಸರಿಯಾಗಿ ನೈಸರ್ಗಿಕ ಅಲೋವೆರಾವನ್ನು ಹಚ್ಚಿದರೆ ಪಾದಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ಪಾದಗಳು ಮೃದುವಾಗಿರುತ್ತವೆ ಮತ್ತು ಬಿರುಕು ಸಮಸ್ಯೆ ನಿವಾರಣೆಯಾಗುತ್ತದೆ.

ಇದನ್ನೂ ಓದಿ:

ತಜ್ಞರ ಬರಹ: ಸಂತಾನದ ಕನಸಿಗೆ ಧಕ್ಕೆಯಾಗುವ ಪುರುಷರ ಬಂಜೆತನಕ್ಕೆ ಇದೆ ಪರಿಹಾರ

ಹುಣಸೆ ಬೀಜ: ನೀವು ಮೊಣಕಾಲು ನೋವು ಮತ್ತು ಕೀಲು ನೋವಿನಿಂದ ಬಳಲುತ್ತಿದ್ದೀರಾ?

ಬಸನಗೌಡ ಯತ್ನಾಳ್ ಒಬ್ಬ ನಕಲಿ ಹಿಂದೂತ್ವವಾದಿ: ರೇಣುಕಾಚಾರ್ಯ
ಬಸನಗೌಡ ಯತ್ನಾಳ್ ಒಬ್ಬ ನಕಲಿ ಹಿಂದೂತ್ವವಾದಿ: ರೇಣುಕಾಚಾರ್ಯ
ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧ ಆರೋಪ ಸರಿಯಲ್ಲ: ಶಾಸಕ
ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧ ಆರೋಪ ಸರಿಯಲ್ಲ: ಶಾಸಕ
ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್
ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್
ಚೀಟಿಯಲ್ಲಿ ಏನು ಬರೆದಿತ್ತು ಅಂತ ಮುಂದಿನ ದಿನಗಳಲ್ಲಿ ಹೇಳ್ತೇನೆ: ಯತ್ನಾಳ್
ಚೀಟಿಯಲ್ಲಿ ಏನು ಬರೆದಿತ್ತು ಅಂತ ಮುಂದಿನ ದಿನಗಳಲ್ಲಿ ಹೇಳ್ತೇನೆ: ಯತ್ನಾಳ್
VIDEO: CSK ಮತ್ತೆ ಮೋಸದಾಟ? ಅನುಮಾನ ಹುಟ್ಟಿಸಿದ ವಿಡಿಯೋ
VIDEO: CSK ಮತ್ತೆ ಮೋಸದಾಟ? ಅನುಮಾನ ಹುಟ್ಟಿಸಿದ ವಿಡಿಯೋ
ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ
ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ
ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್
ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್
ರಾಜಣ್ಣರೊಂದಿಗೆ ಮೊದ್ಲಿಂದ್ಲೂ ಸಲುಗೆಯಿಂದ ಇದ್ದೇನೆ: ಡಾ ರಂಗನಾಥ್
ರಾಜಣ್ಣರೊಂದಿಗೆ ಮೊದ್ಲಿಂದ್ಲೂ ಸಲುಗೆಯಿಂದ ಇದ್ದೇನೆ: ಡಾ ರಂಗನಾಥ್
ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ