AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women’s Health: ಮಹಿಳೆಯರ ಸೀಕ್ರೆಟ್​ ವಿಚಾರ: ಸತ್ಯಾಸತ್ಯತೆ ತಿಳಿದುಕೊಳ್ಳಿ

ಪುರಾಣ ಕಾಲದಿಂದಲೂ ಕೆಲವು ವಿಚಾರಗಳು ಮಹಿಳೆಯರನ್ನು ಕಾಡುತ್ತಿದೆ ಆದರೆ ಅದು ಎಷ್ಟು ಸತ್ಯ ಎನ್ನುವುದು ತಿಳಿದುಕೊಳ್ಳುವುದು ಅಗತ್ಯವಾಗಿದೆ.

Women's Health: ಮಹಿಳೆಯರ ಸೀಕ್ರೆಟ್​ ವಿಚಾರ: ಸತ್ಯಾಸತ್ಯತೆ ತಿಳಿದುಕೊಳ್ಳಿ
ಸಾಂಕೇತಿಕ ಚಿತ್ರ
TV9 Web
| Updated By: Pavitra Bhat Jigalemane|

Updated on:Feb 20, 2022 | 12:54 PM

Share

ಸಮಾಜ, ತಂತ್ರಜ್ಞಾನ (Technology) ಎಷ್ಟೇ ಮುಂದುವರೆದರೂ ಮಹಿಳೆಯರ(Woman) ಕುರಿತಾದ ಕೆಲವು ವಿಚಾರಗಳು ಮಾತ್ರ ಗೌಣವಾಗಿಯೇ ಇರುತ್ತದೆ. ಕೆಲವೊಂದಿಷ್ಟು ಮಿಥ್ಯೆಗಳಲ್ಲಿಯೇ ಬದುಕು ಸಾಗುತ್ತಿರುತ್ತದೆ. ಅದೆಷ್ಟೇ ಹೊಸ ತಂತ್ರಜ್ಞಾನಗಳು ಆವಿಷ್ಕಾರವಾದರೂ ಮಹಿಳೆಯ ದೇಹದ ಪ್ರಕೃತಿಯನ್ನು ಸಂಪೂರ್ಣ ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಪುರಾಣ ಕಾಲದಿಂದಲೂ ಕೆಲವು ವಿಚಾರಗಳು ಮಹಿಳೆಯರನ್ನು ಕಾಡುತ್ತಿದೆ ಆದರೆ ಅದು ಎಷ್ಟು ಸತ್ಯ ಎನ್ನುವುದು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಈ ಕುರಿತು ಟೈಮ್ಸ್​ ನೌ ಮಾಹಿತಿಯನ್ನು ಹಂಚಿಕೊಂಡಿದೆ. ಇಲ್ಲಿ ಮಹಿಳೆಯರ ಬಗ್ಗೆ ಇರುವ ಕೆಲವು ಮಿಥ್ಯ ವಿಚಾರಗಳು ಯಾವವು ಹಾಗೂ ಅದರ ಸತ್ಯಾಸತ್ಯತೆಗಳೇನು ಎನ್ನುವುದನ್ನು ವಿವರಿಸಲಾಗಿದೆ. ಇಲ್ಲಿದೆ ನೋಡಿ ಮಾಹಿತಿ.

ಲೈಂಗಿಕತೆ ವೇಳೆ ನೋವು ಸಹಜ: ಲೈಂಗಿಕ ಸಂಭೋಗದ ಸಮಯದಲ್ಲಿ ಅತಿಯಾದ ನೋವು ಕಾಣಿಸಿಕೊಳ್ಳುತ್ತದೆ ಎನ್ನುವ ನಂಬಿಕೆಯಿದೆ. ಆದರೆ ಆರೋಗ್ಯಕರ ಲೈಂಗಿಕತೆಯು ನೋವಿನಿಂದ ಕೂಡಿರುವುದಿಲ್ಲ. ಒಂದು ವೇಳೆ ಆ ರೀತಿ ನೋವು ಕಾಣಿಸಿಕೊಂಡರೆ ಅದು ಯೋನಿಸ್ಮಸ್ ನ ಲಕ್ಷಣವಾಗಿರಬಹದು.

ಯೋನಿಯಿಂದಾಗುವ ಡಿಸ್ಚಾರ್ಜ್​ ಒಳಿತಲ್ಲ: ಯೋನಿಯಿಂದಾಗು ಡಿಸ್ಚಾರ್ಜ್​​ ಸಾಮಾನ್ಯ. ಹೀಗಾಗಿ ಅದನ್ನು ಒಳಿತಲ್ಲ ಎನ್ನುವುದು ತಪ್ಪು. ಆದರೆ ನೆನಪಿಡಿ. ಸ್ರವಿಸುವಿಕೆಯಲ್ಲಿ ವಾಸನೆ ಅಥವಾ ಬಣ್ಣ ಬದಲಾವಣೆ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಅದರ ಹೊರತಾಗಿ ಯಾವುದೇ ಅಪಾಯಗಳಿಲ್ಲ ಎನ್ನಲಾಗುತ್ತದೆ.

ಋತುಚಕ್ರ ಜನನ ನಿಯಂತ್ರಣವಾಗಿದೆ: ಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಜನನ ನಿಯಂತ್ರಣವಾಗುವುದಿಲ್ಲ. ಋತುಚಕ್ರದ ಮೇಲೆಯೂ ಯಾವುದೇ ಪರಿಣಾಮ ಬೀರುವುದಿಲ್ಲ. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಋತುಚಕ್ರ ಏರುಪೇರಾಗಿ ಜನನ ನಿಯಂತ್ರಣ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಋತುಚಕ್ರ ಜನನ ನಿಯಂತ್ರಣಕ್ಕೆ ಕಾರಣವಾಗಿಲ್ಲ ಎಂದು ಹೇಳಲಾಗಿದೆ.

ಸ್ತನಗಳ ಬಗೆಗಿನ ಅಭದ್ರತೆ: ಸ್ತನಗಳು ಹೆಣ್ಣಿನ ದೇಹದ ಬಹುಮುಖ್ಯ ಅಂಗವಾಗಿದೆ. ಆದರೆ ಒಂದು ಧೋರಣೆಯ ಪ್ರಕಾರ ಸ್ತನಗಳು ಸಮ್ಮಿತೀಯವಾಗಿರಬೇಕು ಎನ್ನಲಾಗಿದೆ. ಆದರೆ ವೈಜ್ಞಾನಿಕವಾಗಿ ಸ್ತನಗಳು ಬೇರೆ ಬೇರೆ ಅಳತೆ ಹೊಂದಿರುತ್ತದೆ. ಹೀಗಾಗಿ ಆ ಬಗ್ಗೆ ಅಭದ್ರತೆ ಬೇಡ ಎಂದು ಹೇಳಲಾಗುತ್ತದೆ.

(ಇಲ್ಲಿರುವ ಮಾಹಿತಿಗಳು ಟವಿ9ಡಿಜಿಟಲ್​ನ ಅಭಿಪ್ರಾಯವಾಗಿರುವುದಿಲ್ಲ. ಟೈಮ್ಸ್​ ನೌ ವರದಿಯನ್ನು ಆಧರಿಸಿ ಸಲಹೆಗಳನ್ನು ನೀಡಲಾಗಿದೆ.)

ಇದನ್ನೂ ಓದಿ:

Child Care: ನಿಮ್ಮ ಮಗು ಆಗಾಗ್ಗೆ ಹೊಟ್ಟೆ ನೋವಿನಿಂದ ಬಳಲುತ್ತಿದೆಯೇ? ಇಲ್ಲಿದೆ ತಜ್ಞರಿಂದ ಸೂಕ್ತ ಸಲಹೆ

Published On - 12:50 pm, Sun, 20 February 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?