AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಶೋಧನೆ: ಸ್ಲೀಪಿಂಗ್ ಮಾತ್ರೆ ಆಲ್‌ಝೈಮರ್‌‌ ಪ್ರೋಟೀನ್ ಮಟ್ಟವನ್ನು ಕಡಿಮೆ ಮಾಡಬಲ್ಲುದು!

ಆರಂಭಿಕ ಹಂತದಲ್ಲಿ ನಿದ್ರೆಯ ಸಮಸ್ಯೆಗಳ ಮೂಲಕ ಆಲ್‌ಝೈಮರ್‌‌ ಕಾಯಿಲೆಯನ್ನು ಕಂಡುಹಿಡಿಯಬಹುದು. ಅದರಲ್ಲಿಯೂ ಸ್ಲೀಪಿಂಗ್ ಮಾತ್ರೆ ಸಹಾಯದಿಂದ ಆಲ್‌ಝೈಮರ್‌‌ ಪ್ರೋಟೀನ್​​ನ ಮಟ್ಟವನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನಗಳಿಂದ ಸಾಬೀತಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಸಂಶೋಧನೆ: ಸ್ಲೀಪಿಂಗ್ ಮಾತ್ರೆ ಆಲ್‌ಝೈಮರ್‌‌ ಪ್ರೋಟೀನ್ ಮಟ್ಟವನ್ನು ಕಡಿಮೆ ಮಾಡಬಲ್ಲುದು!
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Apr 22, 2023 | 6:41 PM

Share

ಆಲ್‌ಝೈಮರ್‌‌ ಎನ್ನುವುದು ಒಂದು ಮರೆವಿನ ಖಾಯಿಲೆ ವಯಸ್ಸಾದಂತೆ ಅದರಲ್ಲಿಯೂ 60 ವರ್ಷ ದಾಟಿದ ಬಳಿಕ ಇದರ ಲಕ್ಷಣ ಕಾಣಿಸಿಕೊಳ್ಳುತ್ತವೆ. ಆದರೆ ಇತ್ತೀಚಿಗೆ ಇದು ವಯಸ್ಕರಲ್ಲೂ ಆರಂಭವಾಗಿರುವುದು ಆಘಾತಕಾರಿ ವಿಷಯವಾಗಿದೆ. ವೈದ್ಯರ ಪ್ರಕಾರ ನಿದ್ರೆಯ ಸಮಸ್ಯೆ ಆಲ್‌ಝೈಮರ್‌‌ ಖಾಯಿಲೆಯ ಆರಂಭಿಕ ಸೂಚಕವಾಗಿರಬಹುದು. ರೋಗ ನಿರ್ಣಯದ ಬಳಿಕ ರೋಗಿಗಳು ನೆನಪಿನ ಶಕ್ತಿ ನಷ್ಟವಾಗುವುದು ಅಥವಾ ಗೊಂದಲ ಅನುಭವಿಸುತ್ತಾರೆ. ಈ ರೋಗಿಗಳಿಗೆ ರಾತ್ರಿ ಸಮಯದಲ್ಲಿ ನಿದ್ರೆ ಬರುವುದಿಲ್ಲ ಬದಲಾಗಿ ಮಧ್ಯಾಹ್ನದ ಸಮಯದಲ್ಲಿ ಮಂಪರು ಬರುತ್ತಿದ್ದರೆ ಮತ್ತು ಊಟ ಮಾಡದೆಯೂ ಕಣ್ಣುಗಳಿಗೆ ನಿದ್ರೆ ಗಾಢವಾಗಿ ಆವರಿಸಿದರೆ ಅದು ಆಲ್‌ಝೈಮರ್‌‌ ಕಾಯಿಲೆಯ ಲಕ್ಷಣಗಳಿರಬಹುದು ಎಂಬುದು ವೈದ್ಯರ ಅಭಿಪ್ರಾಯ. ಇಂತಹ ಚಕ್ರ ಮನುಷ್ಯನ ದೇಹಕ್ಕೆ ಒಳ್ಳೆಯದಲ್ಲ ಹಾಗಾಗಿ ಈ ರೀತಿಯ ಚಕ್ರವನ್ನು ಅಂತ್ಯಗೊಳಿಸಲು ಸೇಂಟ್ ಲೂಯಿಸ್ನ ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ನ ಸಂಶೋಧಕರು ಸಂಭಾವ್ಯ ಮಾರ್ಗವನ್ನು ಕಂಡುಕೊಂಡಿದ್ದಾರೆ. ಮಲಗುವ ಮೊದಲು ನಿದ್ರೆ ಮಾತ್ರೆ ತೆಗೆದುಕೊಂಡ ಜನರು ಆಲ್‌ಝೈಮರ್‌‌ ಪ್ರೋಟೀನ್​​ಗಳ ಮಟ್ಟದಲ್ಲಿ ಕುಸಿತವಾಗುತ್ತದೆ ಎಂದು ಎರಡು ರಾತ್ರಿಗಳ ಕಾಲ ನಡೆಸಿದ ಸಣ್ಣ ಅಧ್ಯಯನವು ತೋರಿಸಿದೆ. ಇದು ಉತ್ತಮ ಬೆಳವಣಿಗೆಯಾಗಿದೆ. ಏಕೆಂದರೆ ಅಂತಹ ಪ್ರೋಟೀನ್​​ಗಳ ಹೆಚ್ಚಿನ ಮಟ್ಟವು ಹದಗೆಡುತ್ತಿರುವ ರೋಗವನ್ನು ಸೂಚಿಸುತ್ತದೆ. ನಿದ್ರಾಹೀನತೆಗಾಗಿ ಈಗಾಗಲೇ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ಡಿಎ) ಅನುಮೋದಿಸಿದ ಸುವೊರೆಕ್ಸೆಂಟ್ ಎಂದು ಕರೆಯಲ್ಪಡುವ ಅಧ್ಯಯನವು, ಆಲ್‌ಝೈಮರ್‌‌ ಕಾಯಿಲೆಯ ಪ್ರಗತಿಯನ್ನು ನಿಧಾನಗೊಳಿಸಲು ಅಥವಾ ನಿಲ್ಲಿಸಲು ನಿದ್ರೆಗೆ ಸಂಬಂಧ ಪಟ್ಟ ಔಷಧಿಗಳ ಸಾಮರ್ಥ್ಯವನ್ನು ಸೂಚಿಸುತ್ತದೆ. ಆದಾಗ್ಯೂ ಅಂತಹ ವಿಧಾನದ ಕಾರ್ಯಸಾಧ್ಯತೆಯನ್ನು ದೃಢೀಕರಿಸಲು ಹೆಚ್ಚಿನ ಕೆಲಸದ ಅಗತ್ಯವಿದೆ.

ಈ ಅಧ್ಯಯನವನ್ನು ಅನ್ನಲ್ಸ್ ಆಫ್ ನ್ಯೂರಾಲಜಿಯಲ್ಲಿ ಪ್ರಕಟವಾಗಿದ್ದು, ಇದು ಒಂದು ಸಣ್ಣ, ಪ್ರೂಫ್-ಆಫ್-ಕಾನ್ಸೆಪ್ಟ್ ಅಧ್ಯಯನವಾಗಿದೆ. ಆಲ್‌ಝೈಮರ್‌‌ ಬೆಳವಣಿಗೆಯ ಬಗ್ಗೆ ಚಿಂತಿತರಾಗಿರುವ ಜನರು ಪ್ರತಿದಿನ ರಾತ್ರಿ ಸುವೊರೆಕ್ಸೆಂಟ್ ತೆಗೆದುಕೊಳ್ಳಲು ಪ್ರಾರಂಭಿಸಿದ್ದರು ಎಂದು ಹಿರಿಯ ಲೇಖಕ, ನರವಿಜ್ಞಾನದ ಸಹಾಯಕ ಪ್ರಾಧ್ಯಾಪಕ ಮತ್ತು ವಾಷಿಂಗ್ಟನ್ ವಿಶ್ವವಿದ್ಯಾಲಯದ ಸ್ಲೀಪ್ ಮೆಡಿಸಿನ್ ಸೆಂಟರ್ನ ನಿರ್ದೇಶಕ ಬ್ರೆಂಡನ್ ಲೂಸಿ ಹೇಳಿದರು. “ಮರೆವಿನ ಕುಸಿತವನ್ನು ತಡೆಗಟ್ಟುವಲ್ಲಿ ದೀರ್ಘಕಾಲೀನ ಬಳಕೆಯು ಪರಿಣಾಮಕಾರಿಯಾಗಿದೆಯೇ ಮತ್ತು ಅದು ಇದ್ದರೆ, ಯಾವ ಪ್ರಮಾಣದಲ್ಲಿ ಮತ್ತು ಯಾರಿಗೆ ಎಂದು ನಮಗೆ ಇನ್ನೂ ತಿಳಿದಿಲ್ಲ. ಆದರೂ, ಈ ಫಲಿತಾಂಶಗಳು ತುಂಬಾ ಪ್ರೋತ್ಸಾಹದಾಯಕವಾಗಿವೆ. ಈ ಔಷಧವು ಈಗಾಗಲೇ ಲಭ್ಯವಿದೆ ಮತ್ತು ಸುರಕ್ಷಿತವೆಂದು ಸಾಬೀತಾಗಿದೆ, ಮತ್ತು ಈಗ ಆಲ್‌ಝೈಮರ್‌‌ ಕಾಯಿಲೆಗೆ ನಿರ್ಣಾಯಕವಾದ ಪ್ರೋಟೀನ್​​ಗಳ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಪುರಾವೆಗಳಿವೆ ಎಂದಿದ್ದಾರೆ.

ಇದನ್ನೂ ಓದಿ:ಕಲ್ಲಂಗಡಿ ಆರೋಗ್ಯಕ್ಕೆ ಪ್ರಯೋಜನ ಎಂದು ಗೊತ್ತಿದೆ, ದುಷ್ಪರಿಣಾಮಗಳ ಬಗ್ಗೆ ತಿಳಿದಿದೆಯೇ? ಇಲ್ಲಿದೆ ಮಾಹಿತಿ

ಮೆದುಳಿನಲ್ಲಿ ಅಮಿಲಾಯ್ಡ್ ಬೀಟಾ ಎಂಬ ಪ್ರೋಟೀನ್ ಬೆಳೆಯಲು ಪ್ರಾರಂಭಿಸಿದಾಗ ಆಲ್‌ಝೈಮರ್‌‌ ಕಾಯಿಲೆ ಪ್ರಾರಂಭವಾಗುತ್ತದೆ. ಅಮಿಲಾಯ್ಡ್ ಶೇಖರಣೆಯ ವರ್ಷಗಳ ನಂತರ, ಎರಡನೇ ಮೆದುಳಿನ ಪ್ರೋಟೀನ್, ಟೌ, ನರಕೋಶಗಳಿಗೆ ವಿಷಕಾರಿಯಾದ ತೊಡಕುಗಳನ್ನು ರೂಪಿಸಲು ಪ್ರಾರಂಭಿಸುತ್ತದೆ. ಆಲ್‌ಝೈಮರ್‌‌ ಕಾಯಿಲೆಯಿಂದ ಬಳಲುತ್ತಿರುವ ಜನರು ಮೆಮೊರಿ ನಷ್ಟದಂತಹ ರೋಗಲಕ್ಷಣಗಳನ್ನು ಅನುಭವಿಸಲು ಪ್ರಾರಂಭಿಸುತ್ತಾರೆ.

ಈ ಬಗ್ಗೆ ಅಧ್ಯಯನ ನಡೆಸಿದ್ದು, ಜನರು ಈ ಔಷಧಿಗಳನ್ನು ಕನಿಷ್ಠ ತಿಂಗಳುಗಳವರೆಗೆ ತೆಗೆದುಕೊಳ್ಳಬೇಕು ಮತ್ತು ಕಾಲಾನಂತರದಲ್ಲಿ ಅಮಿಲಾಯ್ಡ್ ಮತ್ತು ಟೌ ಮೇಲಿನ ಪರಿಣಾಮವನ್ನು ಅಳೆಯಬೇಕು ಎಂದು ಲೂಸಿ ಹೇಳಿದ್ದು, ಈಗಾಗಲೇ ತಮ್ಮ ಮೆದುಳಿನಲ್ಲಿ ಕೆಲವು ಅಮಿಲಾಯ್ಡ್ ಪ್ಲೇಕ್ಗಳನ್ನು ಹೊಂದಿರುವವರನ್ನು ನಾವು ಅಧ್ಯಯನ ಮಾಡಲಿದ್ದೇವೆ. ಈ ಅಧ್ಯಯನವು ಆರೋಗ್ಯವಂತ ಮಧ್ಯವಯಸ್ಕ ಭಾಗವಹಿಸುವವರನ್ನು ಒಳಗೊಂಡಿರಲಿದ್ದು, ವಯಸ್ಸಾದ ಜನಸಂಖ್ಯೆಯಲ್ಲಿ ಫಲಿತಾಂಶಗಳು ವಿಭಿನ್ನವಾಗಿರಬಹುದು. ಆಲ್‌ಝೈಮರ್‌‌ ರೋಗಕ್ಕೆ ಔಷಧಿಗಳನ್ನು ನಾವು ಅಂತಿಮವಾಗಿ ಅಭಿವೃದ್ಧಿಪಡಿಸುತ್ತೇವೆ. ನಾವು ಇನ್ನೂ ಅಲ್ಲಿಗೆ ಬಂದಿಲ್ಲ. ಈ ಸಮಯದಲ್ಲಿ, ನಾನು ನೀಡಬಹುದಾದ ಅತ್ಯುತ್ತಮ ಸಲಹೆಯೆಂದರೆ, ನಿಮಗೆ ಸಾಧ್ಯವಾದರೆ ರಾತ್ರಿ ಚೆನ್ನಾಗಿ ನಿದ್ರೆ ಮಾಡಲು ಪ್ರಯತ್ನಿಸಿ. ಸಾಧ್ಯವಾಗದಿದ್ದರೆ, ಈ ಬಗ್ಗೆ ತಜ್ಞರನ್ನು ಭೇಟಿ ಮಾಡುವುದು ಮತ್ತು ನಿಮ್ಮ ನಿದ್ರೆಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುವುದು ಉತ್ತಮ” ಎಂಬುದು ಲೂಸಿ ಅವರ ಸಲಹೆಯಾಗಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:41 pm, Sat, 22 April 23

Follow Us
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ