AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Monsoon: ಮಳೆಗಾಲದ ರಾತ್ರಿ ಸಮಯದಲ್ಲಿ ಈ ಆಹಾರಗಳನ್ನು ತಿನ್ನಲೇಬೇಡಿ

ಮಳೆಗಾಲವನ್ನು ಇಷ್ಟಪಡದವರೇ ಇಲ್ಲ, ಹಾಗೆಯೇ ಮಳೆಗಾಲದವು ಆಹಾರ ಪ್ರಿಯರ ಪಾಲಿಗೆ ಸ್ವರ್ಗವೆಂದೇ ಹೇಳಬಹುದು.

Monsoon: ಮಳೆಗಾಲದ ರಾತ್ರಿ ಸಮಯದಲ್ಲಿ ಈ ಆಹಾರಗಳನ್ನು ತಿನ್ನಲೇಬೇಡಿ
Monsoon Foods
TV9 Web
| Updated By: ನಯನಾ ರಾಜೀವ್|

Updated on: Jul 10, 2022 | 7:26 PM

Share

ಮಳೆಗಾಲವನ್ನು ಇಷ್ಟಪಡದವರೇ ಇಲ್ಲ, ಹಾಗೆಯೇ ಮಳೆಗಾಲದವು ಆಹಾರ ಪ್ರಿಯರ ಪಾಲಿಗೆ ಸ್ವರ್ಗವೆಂದೇ ಹೇಳಬಹುದು. ಮಳೆಗಾಲದಲ್ಲಿ ಜನರು ಆಹಾರವನ್ನು ಸ್ವಲ್ಪ ಹೆಚ್ಚಾಗಿಯೇ ತಿನ್ನುತ್ತಾರೆ, ಅದರ ಜತೆಗೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಕೂಡ ಹೆಚ್ಚಿನ ಗಮನಹರಿಸುವುದು ಒಳಿತು.

ಸಂಜೆ ಹಾಗೂ ರಾತ್ರಿ ವಾತಾವರಣ ತುಂಬಾ ಹಿತಕರವಾಗಿರುವಾಗ ಕರಿದ ಪದಾರ್ಥಗಳನ್ನು ತಿನ್ನಲು ಜನರು ಇಷ್ಟಪಡುತ್ತಾರೆ. ಆದರೆ ನಿಮ್ಮ ಒಂದು ಸಣ್ಣ ತಪ್ಪು ನಿಮ್ಮ ಅನಾರೋಗ್ಯಕ್ಕೆ ಕಾರಣವಾಗಬಹುದು.

ಮಳೆಗಾಲದಲ್ಲಿ ರಾತ್ರಿ ಯಾವ ಆಹಾರಗಳನ್ನು ತಿನ್ನಬಾರದು ಇಲ್ಲಿದೆ ಮಾಹಿತಿ ಎಣ್ಣೆಯ ಪದಾರ್ಥಗಳು ಮಳೆಗಾಲದಲ್ಲಿ ಸಾಮಾನ್ಯವಾಗಿ ಜನರು ಸಂಜೆ ಮತ್ತು ರಾತ್ರಿಯಲ್ಲಿ ಹೊರಗೆ ಹೋಗಿ ರಸ್ತೆ ಬದಿಯ ಅಂಗಡಿಗಳಿಗೆ ಭೇಟಿ ನೀಡುವ ಮೂಲಕ ಪಕೋಡಾ, ಸಮೋಸಾ ಮತ್ತು ಟಿಕ್ಕಾಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಇಂತಹ ಆಹಾರಗಳನ್ನು ನೀವು ಸೇವಿಸುವುದರಿಂದ ಅನಾರೋಗ್ಯಕ್ಕೆ ತುತ್ತಾಗುತ್ತೀರಿ. ಒಂದೊಮ್ಮೆ ನಿಮಗೆ ಈ ಆಹಾರಗಳನ್ನು ತಿನ್ನಬೇಕೆನಿಸಿದರೆ ಮನೆಯಲ್ಲೇ ತಯಾರಿಸಿ ತಿನ್ನಿ. ಆದರೆ ರಾತ್ರಿ ಹೊತ್ತು ಮಾತ್ರ ತಿನ್ನಬೇಡಿ

ಹಸಿರು ತರಕಾರಿಗಳ ಸೇವನೆ ಬೇಡ ಹಸಿರು ತರಕಾರಿಗಳ ಸೇವನೆಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲ್ಪಟ್ಟಿದ್ದರೂ, ಮಳೆಗಾಲದ ವಿಷಯಕ್ಕೆ ಬಂದಾಗ, ಅದನ್ನು ತಪ್ಪಿಸುವುದು ಒಳ್ಳೆಯದು. ವಿಶೇಷವಾಗಿ, ರಾತ್ರಿಯ ಸಮಯದಲ್ಲಿ ಅವುಗಳನ್ನು ಬೇಯಿಸಬಾರದು. ಏಕೆಂದರೆ ಈ ಋತುವಿನಲ್ಲಿ ಈ ಹಸಿರು ತರಕಾರಿಗಳ ಎಲೆಗಳು ನಮಗೆ ಹಾನಿ ಮಾಡುವ ಕೀಟಗಳಿರಬಹುದು ಇವುಗಳನ್ನು ತಿಂದರೆ ಅನಾರೋಗ್ಯ ಕಾಡಬಹುದು.

ಮೊಸರು: ಮೊಸರು ಪ್ರೋಬಯಾಟಿಕ್ ಆಗಿದೆ ಮತ್ತು ಆದ್ದರಿಂದ ಪ್ರತಿಯೊಬ್ಬರೂ ಇದನ್ನು ತಮ್ಮ ಆಹಾರದಲ್ಲಿ ಸೇರಿಸಲು ಶಿಫಾರಸು ಮಾಡುತ್ತಾರೆ. ಆದರೆ ನೀವು ಮೊಸರನ್ನು ಯಾವ ಸಮಯಕ್ಕೆ ತಿನ್ನುತ್ತೀರಿ ಎಂಬುದು ಕೂಡ ಮುಖ್ಯ. ಮಳೆಗಾಲದಲ್ಲಿ ರಾತ್ರಿ ಹೊತ್ತು ಮೊಸರನ್ನು ತಿನ್ನಬೇಡಿ.

ಸೀಫುಡ್​ಗಳಿಗೆ ಗುಡ್​ಬೈ ಹೇಳಿ: ಮಳೆಗಾಲದಲ್ಲಿ ಸೀ ಫುಡ್‌ಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ನೀವು ಸಮುದ್ರಾಹಾರ ಪ್ರಿಯರಾಗಿದ್ದರೂ ಸಹ, ನೀವು ಇನ್ನೂ ಹೆಚ್ಚಿನ ಜಾಗರೂಕರಾಗಿರಬೇಕು. ವಾಸ್ತವವಾಗಿ, ಮಳೆಗಾಲದಲ್ಲಿ ನೀರು ಕಲುಷಿತಗೊಳ್ಳುತ್ತದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ನೀವು ಸೇವಿಸುವ ಮೀನು ಅಥವಾ ಸಿಗಡಿ ನಿಮಗೆ ಅನಾರೋಗ್ಯ ಮತ್ತು ಅತಿಸಾರ ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.

ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ