ಪತಂಜಲಿ ದಂತಕಾಂತಿ ಇತರ ಟೂತ್​​ಪೇಸ್ಟ್​​ಗಳಿಗಿಂತ ಹೇಗೆ ವಿಭಿನ್ನ? ಇದರ ಜನಪ್ರಿಯತೆಗೆ ಇಲ್ಲಿವೆ ಕಾರಣಗಳು…

Patanjali Dant Kanti tooth paste popularity: ಪತಂಜಲಿಯ ದಂತ ಕಾಂತಿ ಟೂತ್‌ಪೇಸ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿದೆ. ಇದರ ಜನಪ್ರಿಯತೆಗೆ ಕಾರಣ ಆಯುರ್ವೇದ ಗುಣಗಳು ಮತ್ತು ಅಡ್ಡಪರಿಣಾಮಗಳ ಅನುಪಸ್ಥಿತಿ. ಅಧ್ಯಯನಗಳು ದಂತ ಕಾಂತಿಯ ಪರಿಣಾಮಕಾರಿತ್ವವನ್ನು ಸಾಬೀತುಪಡಿಸಿವೆ. ಹಾಗೂ ಗ್ರಾಹಕರ ಅಭಿಪ್ರಾಯಗಳು ಅದರ ಉತ್ತಮ ಗುಣಮಟ್ಟವನ್ನು ಎತ್ತಿ ತೋರಿಸುತ್ತವೆ. ಇದರ ಮಾರುಕಟ್ಟೆ ಪಾಲು ನಿರಂತರವಾಗಿ ಹೆಚ್ಚುತ್ತಿದ್ದು, ಇದು ಗ್ರಾಹಕರ ನಂಬಿಕೆ ಮತ್ತು ಬ್ರ್ಯಾಂಡ್ ನಿಷ್ಠೆಯನ್ನು ಸೂಚಿಸುತ್ತದೆ.

ಪತಂಜಲಿ ದಂತಕಾಂತಿ ಇತರ ಟೂತ್​​ಪೇಸ್ಟ್​​ಗಳಿಗಿಂತ ಹೇಗೆ ವಿಭಿನ್ನ? ಇದರ ಜನಪ್ರಿಯತೆಗೆ ಇಲ್ಲಿವೆ ಕಾರಣಗಳು...
ದಂತ ಕಾಂತಿ

Updated on: May 22, 2025 | 1:03 PM

ಹಲ್ಲುಗಳನ್ನು ಸ್ವಚ್ಛಗೊಳಿಸುವುದಷ್ಟೇ ಅಲ್ಲ, ಇನ್ನೂ ಹಲವು ಸಣ್ಣಪುಟ್ಟ ಹಲ್ಲು ಸಮಸ್ಯೆಗಳಿಗೂ ನಾವು ಟೂತ್‌ಪೇಸ್ಟ್ ಬಳಸುತ್ತೇವೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವು ಕಂಪನಿಗಳ ಟೂತ್‌ಪೇಸ್ಟ್‌ಗಳು ಲಭ್ಯವಿವೆ. ಕೆಲ ಕಂಪನಿಗಳು ತಮ್ಮ ಟೂತ್​​ಪೇಸ್ಟ್ ಹಲ್ಲಿನ ಆರೋಗ್ಯಕ್ಕೆ ಉತ್ತಮ ಎಂದು ಹೇಳಿಕೊಳ್ಳುವುದುಂಟು. ಆದರೆ, ಕಳೆದ ಕೆಲ ವರ್ಷಗಳಿಂದ ಪತಂಜಲಿಯ ದಂತ ಕಾಂತಿ ಟೂತ್‌ಪೇಸ್ಟ್ ಜನರ ಆಯ್ಕೆಯಾಗಿ ಉಳಿದಿದೆ. ಯಾವುದೇ ಅಡ್ಡಪರಿಣಾಮ ಇಲ್ಲದೇ ಇರುವುದು ಹಾಗೂ ಇದರ ಆಯುರ್ವೇದದ ಗುಣಗಳಿಂದಾಗಿ ಜನರಿಗೆ ಇದು ಫೇವರಿಟ್ ಎನಿಸಿದೆ. ಈ ನಿಟ್ಟಿನಲ್ಲಿ ಇಂಟರ್ನ್ಯಾಷನಲ್ ಜರ್ನಲ್ ಆಫ್ ಮಲ್ಟಿ-ಡಿಸ್ಪ್ಲೇ ಎಜುಕೇಶನ್ ರಿಸರ್ಚ್‌ನಲ್ಲಿ ಒಂದು ಅಧ್ಯಯನ ಪ್ರಕಟವಾಗಿದ್ದು, ದಂತ ಕಾಂತಿ (Patanjali Dant Kanti) ಇತರ ಟೂತ್‌ಪೇಸ್ಟ್‌ಗಳಿಗಿಂತ ಉತ್ತಮವಾಗಿದೆ. ಜನರ ಮೆಚ್ಚುಗೆಗೂ ಪಾತ್ರವಾಗಿದೆ ಎಂದು ಹೇಳುತ್ತದೆ.

ಉತ್ತಮ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಲು ಪತಂಜಲಿ ದಂತ ಕಾಂತಿ ಅತ್ಯುತ್ತಮವಾಗಿದೆ. ಇದು ಅನೇಕ ಸಣ್ಣ ದಂತ ಸಮಸ್ಯೆಗಳನ್ನು ಸಹ ಸುಲಭವಾಗಿ ಗುಣಪಡಿಸುತ್ತದೆ. ದುರ್ವಾಸನೆ, ಹಲ್ಲುಗಳಲ್ಲಿ ಪಯೋರಿಯಾ, ಹಲ್ಲುಗಳ ದುರ್ಬಲತೆ ಮತ್ತು ಹಲ್ಲು ಹಳದಿ ಬಣ್ಣಕ್ಕೆ ತಿರುಗುವುದು ಇತ್ಯಾದಿ ಸಮಸ್ಯೆಗಳಿಗೆ ಪತಂಜಲಿ ದಂತಕಾಂತಿಯಿಂದ ಪರಿಹಾರ ಸಿಗುತ್ತದೆ ಎನ್ನಲಾಗುತ್ತದೆ. ದಂತ ಕಾಂತಿ ಟೂತ್‌ಪೇಸ್ಟ್ ಅನ್ನು ಆಯುರ್ವೇದದ ತತ್ವಗಳ ಆಧಾರದ ಮೇಲೆ ತಯಾರಿಸಲಾಗಿದೆ. ಇದರಲ್ಲಿ ಆಯುರ್ವೇದ ಗಿಡಮೂಲಿಕೆಗಳನ್ನು ಬಳಸಲಾಗಿದೆ. ದಂತ ಕಾಂತಿಯೊಂದಿಗೆ ಪೈಪೋಟಿ ಮಾಡಲು ಬಹುರಾಷ್ಟ್ರೀಯ ಕಂಪನಿಗಳು ಕೂಡ ಆಯುರ್ವೇದ ಟೂತ್‌ಪೇಸ್ಟ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬೇಕಾಗಿದೆ.

ಇದನ್ನೂ ಓದಿ: ನದಿ ತಟದಲ್ಲಿ ಉಚಿತವಾಗಿ ಹಂಚಲಾಗುತ್ತಿದ್ದ ಹಲ್ಲಿನ ಪೌಡರ್ ಇವತ್ತು ಭಾರೀ ಮೌಲ್ಯದ ಟೂತ್​​ಪೇಸ್ಟ್ ಬ್ರ್ಯಾಂಡ್ ಆದ ಕಥೆ

ಇದನ್ನೂ ಓದಿ
ಪತಂಜಲಿ ದಂತ ಕಾಂತಿ ಹಿಂದಿನ ಕುತೂಹಲಕಾರಿ ಕಥೆ
ಪಿತ್ತದೋಷ ನಿವಾರಣೆಗೆ ಆಯುರ್ವೇದ ಪರಿಹಾರ: ಪತಂಜಲಿ
ಫ್ಯಾಟಿ ಲಿವರ್ ಸಮಸ್ಯೆ ತಡೆಯಲು ಪತಂಜಲಿಯ ಈ ಔಷಧಿ ತೆಗೆದುಕೊಳ್ಳಿ
ರಕ್ತದೊತ್ತಡಕ್ಕೆ ಪತಂಜಲಿ BPGrit Vati ಔಷಧಿ

ಪತಂಜಲಿಯ ಸಂಶೋಧನೆಯಲ್ಲಿ ಬಹಿರಂಗವಾದ ಸತ್ಯ…

ದಂತ ಕಾಂತಿ ಟೂತ್‌ಪೇಸ್ಟ್ ಇತರ ಟೂತ್‌ಪೇಸ್ಟ್‌ಗಳಿಗಿಂತ ಹೆಚ್ಚು ಮಾರಾಟವಾಗುತ್ತಿದೆ ಎಂದು ಸಂಶೋಧನೆ ಹೇಳುತ್ತದೆ. ದೂರದ ಕುಗ್ರಾಮಗಳಲ್ಲೂ ಜನರಿಗೆ ದಂತಕಾಂತಿ ಲಭ್ಯವಿದೆ. ಪತಂಜಲಿ ದಂತಕಾಂತಿಯನ್ನು ಜನರು ಇಷ್ಟಪಡಲು ಮುಖ್ಯ ಕಾರಣವೇ ಅದು ಸಂಪೂರ್ಣ ಆಯುರ್ವೇದ ಹಾಗೂ ದೇಶೀಯ ಉತ್ಪನ್ನ ಎಂಬುದು. ದಂತ ಕಾಂತಿ ಟೂತ್‌ಪೇಸ್ಟ್‌ನಲ್ಲಿ ಬೇವು, ಲವಂಗ, ಅಕೇಶಿಯಾ, ಪುದೀನ ಮುಂತಾದ ನೈಸರ್ಗಿಕ ಪದಾರ್ಥಗಳನ್ನು ಸೇರಿಸಲಾಗಿದೆ. ಇದು ಹಲ್ಲುಗಳ ರಕ್ಷಣೆ ಮತ್ತು ಸೌಂದರ್ಯ ಎರಡಕ್ಕೂ ಪರಿಣಾಮಕಾರಿಯಾಗಿದೆ.

ದಂತ ಕಾಂತಿಯ ಉತ್ತಮ ಪ್ರಯೋಜನಗಳಿಂದಾಗಿ, ಅದರ ಮಾರುಕಟ್ಟೆ ಪಾಲು ಕೂಡ ಹೆಚ್ಚುತ್ತಿದೆ. ಇಂದು ಟೂತ್​ಪೇಸ್ ಮಾರುಕಟ್ಟೆಯಲ್ಲಿ ದಂತಕಾಂತಿ ಪಾಲು 11% ಇದೆ. ಅದರ ನೈಜ ಆಯುರ್ವೇದ ಗುಣಗಳಿಂದಾಗಿ ಇತರ ದೊಡ್ಡ ಬ್ರ್ಯಾಂಡ್‌ಗಳಿಗಿಂತ ಹೆಚ್ಚು ಬೇಡಿಕೆ ಪಡೆದಿದೆ.

ಇದನ್ನೂ ಓದಿ: ದೇಹದಲ್ಲಿ ಪಿತ್ತದೋಷ ಹೆಚ್ಚಲು ಏನು ಕಾರಣ? ಕಡಿಮೆ ಮಾಡಲು ಪತಂಜಲಿ ವಿಧಾನ

ದಂತ ಕಾಂತಿ ಬೇಡಿಕೆ ಹೆಚ್ಚಲು ಕಾರಣಗಳು

ಪತಂಜಲಿಯ ದಂತಕಾಂತಿ ಬಳಸುವವರ ಸಮೀಕ್ಷೆ ಮಾಡಿದಾಗ, ಅವರು ಯಾಕಾಗಿ ಬಳಸುತ್ತಾರೆ ಎಂಬ ಕೆಲ ಕಾರಣಗಳು ಬಹಿರಂಗಗೊಂಡಿವೆ. ಶೇ. 41ರಷ್ಟು ಜನರು ದಂತ ಕಾಂತಿಯಲ್ಲಿ ಆಯುರ್ವೇದಿಯ ಅಂಶಗಳಿರುವುದರಿಂದ ಅದನ್ನು ಬಳಸುತ್ತಿದ್ದಾರೆ. 89% ಗ್ರಾಹಕರು ಪತಂಜಲಿ ಬಗ್ಗೆ ಬ್ರ್ಯಾಂಡ್ ನಿಷ್ಠೆ ಹೊಂದಿದ್ದಾರೆ. ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಮತ್ತು ಬಲವಾದ ಹಲ್ಲುಗಳನ್ನು ಪಡೆಯಲು ದಂತ ಕಾಂತಿ ಇತರ ಕಂಪನಿಗಳ ಟೂತ್‌ಪೇಸ್ಟ್‌ಗಿಂತ ಉತ್ತಮವಾಗಿದೆ. ಅದಕ್ಕಾಗಿಯೇ ಬಹಳ ಜನರು ಇದನ್ನು ಬಳಸುತ್ತಿದ್ದಾರೆ. ಶೇ. 32 ರಷ್ಟು ಗ್ರಾಹಕರು ಸ್ವಂತ ವಿವೇಚನೆಯಿಂದ ಖರೀದಿಸುತ್ತಾರೆ. ಶೇ. 26 ರಷ್ಟು ಖರೀದಿ ನಿರ್ಧಾರವು ಪೋಷಕರಿಂದ ಪ್ರಭಾವಿತವಾಗಿರುತ್ತದೆ.

ದಂತ ಕಾಂತಿ ಟೂತ್​​ಪೇಸ್ಟ್​ನಿಂದ ಹಲ್ಲುಗಳ ಮೇಲೆ ಯಾವುದೇ ರೀತಿಯ ಅಡ್ಡಪರಿಣಾಮ ಉಂಟಾಗುವುದಿಲ್ಲ. ಈ ಕಾರಣದಿಂದಾಗಿ, ಜನರಲ್ಲಿ ಅದರ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ