ಪಾಲಿಶ್ ಅಕ್ಕಿ ಮಕ್ಕಳ ಹೃದಯಕ್ಕೆ ಕುತ್ತು: ತಜ್ಞರು ಬಹಿರಂಗಪಡಿಸಿದ್ರು ಆಘಾತಕಾರಿ ಅಂಶ

ದಿನನಿತ್ಯದ ನಮ್ಮ ಆಹಾರ ಪದ್ಧತಿಯಲ್ಲಿ ಆರೋಗ್ಯ ಕುತ್ತು ತರುವ ಅನೇಕ ತಿನಿಸು,‌ ಪದಾರ್ಥಗಳನ್ನು ಸೇವನೆ ಮಾಡುತ್ತಿದ್ದೇವೆ. ಅದರಲ್ಲೂ ಅನ್ನ ಎಲ್ಲ ಮನೆಗಳಲ್ಲಿ ಸಾಮಾನ್ಯವಾಗಿ ದಿನನಿತ್ಯ ಸೇವಿಸುವ ಒಂದು ಆಹಾರವಾಗಿದೆ. ಬಿಳಿ ಅಕ್ಕಿಯಲ್ಲೇ ಬಗೆ ಬಗೆಯ ಅಡುಗೆ ಮಾಡಿ ಸೇವಿಸಲಾಗುತ್ತದೆ. ಈ ಬೆನ್ನಲ್ಲೇ ಇದೀಗ ಈ ಬಿಳಿ ಪಾಲಿಶ್ ಅಕ್ಕಿ ಸೇವಿಸುವವರು ಎಚ್ಚರದಿಂದ ಇರಬೇಕಾದ ಪರಿಸ್ಥಿತಿ ಬಂದಿದೆ.

ಪಾಲಿಶ್ ಅಕ್ಕಿ ಮಕ್ಕಳ ಹೃದಯಕ್ಕೆ ಕುತ್ತು: ತಜ್ಞರು ಬಹಿರಂಗಪಡಿಸಿದ್ರು ಆಘಾತಕಾರಿ ಅಂಶ
ಸಾಂದರ್ಭಿಕ ಚಿತ್ರ
Updated By: ವಿವೇಕ ಬಿರಾದಾರ

Updated on: Apr 30, 2025 | 8:50 PM

ಬೆಂಗಳೂರು, ಏಪ್ರಿಲ್​ 30: ಇತ್ತಿಚೆಗೆ ಕಳಪೆ ಗುಣಮಟ್ಟದ ಆಹಾರ (Food) ಪದಾರ್ಥಗಳಿಂದ ಅನೇಕ ಆರೋಗ್ಯದ (Health) ಸಮಸ್ಯೆಗಳು ಕಾಡುತ್ತಿವೆ. ಈ ಬೆನ್ನಲ್ಲೇ ಇದೀಗ ದಿನನಿತ್ಯ ಸೇವಿಸುವ ಬಿಳಿ ಪಾಲಿಶ್ ಅಕ್ಕಿ (Polished Rice) ಕೂಡ ಜೀವಕ್ಕೆ ಕುತ್ತು ತರುತ್ತದೆ ಎಂಬ ಆತಂಕಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಇತ್ತೀಚಿಗೆ ಪುಟ್ಟ ಮಕ್ಕಳಿಗೂ ಕೂಡ ಹೃದಯ ಸಂಬಂಧಿ ಖಾಯಿಲೆಗಳು ಬರುತ್ತಿವೆ. ‌ಇದಕ್ಕೆ ಕಾರಣವೇನು ಎಂಬುವುದು ಜಯದೇವ ಹೃದ್ರೋಗ ಸಂಸ್ಥೆಯ ವೈದ್ಯರು ಬಹಿರಂಗಪಡಿಸಿರುವ ವರದಿಯಲ್ಲಿ ಅಡಕವಾಗಿದೆ. ಸುಮಾರು 400 ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿದಾಗ ಗೊತ್ತಾಗಿದ್ದು, ಗರ್ಭಿಣಿಯರು ಹಾಗೂ ಮಕ್ಕಳು ಪಾಲಿಶ್ ಮಾಡಿರುವ ಬಿಳಿ ಅಕ್ಕಿಯನ್ನು ಸೇವಿಸಿರುವುದರಿಂದ ಹೃದಯ ಸಂಬಂಧಿ ಸಮಸ್ಯೆಗೆ ಒಳಗಾಗುತ್ತಿದ್ದಾರೆ ಎಂಬ ಆತಂಕಕಾರಿ ವಿಚಾರ ಬಹಿರಂಗಗೊಂಡಿದೆ.

ಬಿಳಿ ಅಕ್ಕಿ ಸೇವನೆಯಿಂದ ಗರ್ಭಿಣಿಯರಲ್ಲಿ ಮಧುಮೇಹ, ಹಾಗೂ ಒಬೆಸಿಟಿ ಹೆಚ್ಚಾಗುತ್ತಿದ್ದು, ಗರ್ಭಪಾತದ ಸಮಯದಲ್ಲಿ ಸಮಸ್ಯೆ ಉಂಟು ಮಾಡುವುದರ ಜೊತೆಗೆ, ಮಕ್ಕಳ ಮೇಲೂ ಹೆಚ್ಚು ಪರಿಣಾಮ ಬೀರುತ್ತಿದೆ. ಅಕ್ಕಿ ಬಳಕೆ ಕಡಿಮೆ ಮಾಡಿ ಅಂತ ಪ್ರಸೂತಿ ತಜ್ಞರು ಹೇಳುತ್ತಿದ್ದು, ಪಾಲಿಶ್ ಮಾಡುವ ಅಕ್ಕಿಯಲ್ಲಿ ಪೋಷಕಾಂಶ ಇರುವುದಿಲ್ಲ. ಇದರಿಂದ ಕೊಬ್ಬು ಹೆಚ್ಚಳವಾಗುತ್ತದೆ. ಬಿಳಿ ಅಕ್ಕಿಯ ಬದಲು ಕೆಂಪು ಅಕ್ಕಿ ಬಳಸಿದರೆ ಉತ್ತಮ ಎಂದು ಆಹಾರ ತಜ್ಞ ಕೀರ್ತಿ ಹಿರಿಸಾವೆ ಹೇಳಿದ್ದಾರೆ.

ಇದನ್ನೂ ಓದಿ
ಗಜಗದ ಬಳ್ಳಿ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಗೊತ್ತಾ?
ರಾಗಿ ಮಾಲ್ಟ್ ಸೇವನೆ ಮಾಡುವ ಅಭ್ಯಾಸವಿದ್ದರೆ ಈ ವಿಷಯ ತಿಳಿದುಕೊಳ್ಳಿ
ಕುಡಿಯುವ ನೀರಿಗೂ ಇದೆ ಎಕ್ಸ್‌ಪೈರ್ಡ್ ಡೇಟ್! ಎಲ್ಲಿಯವರೆಗೆ ಒಳ್ಳೆಯದು?
ಮಲದಲ್ಲಿ ಈ ಆಹಾರ ಕಣಗಳು ಕಾಣಿಸಿಕೊಂಡರೆ ಏನರ್ಥ?

ಇದನ್ನೂ ಓದಿ: ಕಾಂತಿಯುತ ಮೈ ಬಣ್ಣ ನಿಮ್ಮದಾಗಬೇಕಾ? ಈ ಆಯುರ್ವೇದದ ಲೇಪನ ಬಳಸಿ

ಮಕ್ಕಳ ಹೃದಯಘಾತದ ವರದಿಗಳು

  • ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ಗ್ರಾಮದ ವಿದ್ಯಾರ್ಥಿ ದೀಪಿಕಾ (15) ಇದೇ ವರ್ಷ ಜನವರಿ 27 ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
  • ಚಾಮರಾಜನಗರ ಜಿಲ್ಲೆಯಲ್ಲಿ ಮೂರನೇ ತರಗತಿ ವಿದ್ಯಾರ್ಥಿನಿ ತೇಜಸ್ವಿನಿ (8) ಇದೇ ಫೆಬ್ರವರಿ 2 ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
  • ಶಿವಮೊಗ್ಗ ಜಿಲ್ಲೆಯ ಸೊರಬದ 10 ನೇ ತರಗತಿ ವಿದ್ಯಾರ್ಥಿ ಜಯಂತ್ ಹೃದಯಘಾತದಿಂದ ಮೃತಪಟ್ಟಿದ್ದಾರೆ.
  • ಸುರತ್ಕಲ್​ನ ಮೊಹಮದ್ ಹಸೀಮ್ (16 ವರ್ಷ) ಹೃದಯಘಾತದಿಂದ ಮೃತಪಟ್ಟಿದ್ದಾರೆ.
  • ಮಡಕೇರಿಯ ಕುಶಾಲನಗರದ ಕೀರ್ತನಾ (12 ವರ್ಷ) ಹೃದಯಘಾತದಿಂದ ಮೃತಪಟ್ಟಿದ್ದಾರೆ.
  • ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ 6 ನೇ ತರಗತಿಯ ವಿದ್ಯಾರ್ಥಿ ರಾಜೇಂದ್ರ ಹೃದಯಘಾತದಿಂದ ಮೃತಪಟ್ಟಿದ್ದಾರೆ.
  • ಗುಜರಾತ್ ಮೂಲದ 8 ವರ್ಷದ ಬಾಲಕಿ ಜೆಬಾರ್ ಶಾಲೆಯ 3 ನೇ ತರಗತಿಯ ವಿದ್ಯಾರ್ಥಿನಿ ರಣಪರಾ ಹೃದಯಘಾತದಿಂದ ಮೃತಪಟ್ಟಿದ್ದಾರೆ.
  • ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ 2024ರ ಫೆಬ್ರವರಿ 20 ರಂದು 10 ನೇ ತರಗತಿಯ ವಿದ್ಯಾರ್ಥಿನಿ ಶ್ರೀನಿಧಿ ಹೃದಯಘಾತದಿಂದ ಮೃತಪಟ್ಟಿದ್ದಾರೆ.

ಒಟ್ಟಿನಲ್ಲಿ ಪಾಲಿಶ್ ಬಿಳಿ ಅಕ್ಕಿಯು ಈಗ ಆರೋಗ್ಯಕ್ಕೆ ಯೋಗ್ಯವಲ್ಲ ಎಂಬ ಅಂಶ ತಿಳಿದು ಬಂದಿದೆ. ಈ ಅಕ್ಕಿ ಮಕ್ಕಳ ಹೃದಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಪೋಷಕರು ಕೊಂಚ ಪಾಲಿಶ್ ಬಿಳಿ ಅಕ್ಕಿಯನ್ನು ಕಡಿಮೆ ಮಾಡಿ, ಕೆಂಪು ಅಕ್ಕಿ ಬಳಸಿದರೆ ಉತ್ತಮ‌ ಎಂಬುವುದು ವೈದ್ಯರ ಸಲಹೆಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:48 pm, Wed, 30 April 25