AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Steamed Food: ಉಗಿಯಲ್ಲಿ ಬೇಯಿಸಿದ ಆಹಾರ ತಿಂದ್ರೆ ಏನೇನೆಲ್ಲಾ ಪ್ರಯೋಜನಗಳಿವೆ ಗೊತ್ತೇ?

ಆವಿಯಲ್ಲಿ ಬೇಯಿಸಿದ ಆಹಾರವು ಎಲ್ಲೆಡೆ ಜನಪ್ರಿಯವಾಗಿದೆ, ಏಕೆಂದರೆ ರುಚಿಯು ಉತ್ತಮವಾಗಿರಲಿದ್ದು, ವೇಗವಾಗಿ ಕೂಡ ತಯಾರಿಸಬಹುದಾಗಿದೆ.

Steamed Food: ಉಗಿಯಲ್ಲಿ ಬೇಯಿಸಿದ ಆಹಾರ ತಿಂದ್ರೆ ಏನೇನೆಲ್ಲಾ ಪ್ರಯೋಜನಗಳಿವೆ ಗೊತ್ತೇ?
Steamed FoodImage Credit source: Timesnow
Follow us
TV9 Web
| Updated By: ನಯನಾ ರಾಜೀವ್

Updated on: Aug 21, 2022 | 7:00 AM

ಆವಿಯಲ್ಲಿ ಬೇಯಿಸಿದ ಆಹಾರವು ಎಲ್ಲೆಡೆ ಜನಪ್ರಿಯವಾಗಿದೆ, ಏಕೆಂದರೆ ರುಚಿಯು ಉತ್ತಮವಾಗಿರಲಿದ್ದು, ವೇಗವಾಗಿ ಕೂಡ ತಯಾರಿಸಬಹುದಾಗಿದೆ. ಹಾಗೆಯೇ ಆರೋಗ್ಯಕರ ಮತ್ತು ಪೌಷ್ಟಿಕಾಂಶದಿಂದ ತುಂಬಿರುತ್ತದೆ. ಸ್ಟೀಮಿಂಗ್ ಒಂದು ಸರಳವಾದ ಅಡುಗೆ ತಂತ್ರವಾಗಿದ್ದು, ಬಿಸಿ ಹಬೆಯಿಂದಲೇ ಆಹಾರವನ್ನು ಬೇಯಿಸಲಾಗುತ್ತದೆ.

ನೀರು ಆಹಾರದೊಂದಿಗೆ ಸಂಪರ್ಕಕ್ಕೆ ಬರುವುದಿಲ್ಲ ಮತ್ತು ಅದು ಹೊಂದಿರುವ ಎಲ್ಲಾ ಪೋಷಣೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಆವಿಯಲ್ಲಿ ಬೇಯಿಸಿದ ಮಾಂಸ, ತರಕಾರಿಗಳು ಮತ್ತು ಇತರ ಭಕ್ಷ್ಯಗಳು ತಯಾರಿಸಲು ಯಾವುದೇ ತೈಲಗಳು ಅಥವಾ ಕೊಬ್ಬಿನ ಅಗತ್ಯವಿಲ್ಲ.

ಆವಿಯಲ್ಲಿ ಬೇಯಿಸಿದ ಆಹಾರವನ್ನು ಸೇವಿಸುವ ಕೆಲವು ಪ್ರಯೋಜನಗಳೆಂದರೆ: ಸ್ಟೀಮಿಂಗ್ ಪೌಷ್ಟಿಕಾಂಶವನ್ನು ಉಳಿಸಿಕೊಳ್ಳುತ್ತದೆ: ಆಹಾರವನ್ನು ಆವಿಯಲ್ಲಿ ಬೇಯಿಸಿದಾಗ, ಅದು ತನ್ನ ಪೌಷ್ಟಿಕಾಂಶವನ್ನು ಉಳಿಸಿಕೊಳ್ಳುತ್ತದೆ. ಮೂಲ ಬಣ್ಣ ಮತ್ತು ಆಕಾರವನ್ನು ಉಳಿಸಿಕೊಂಡು ಆರೋಗ್ಯಕರ ಪೋಷಕಾಂಶಗಳು ಮತ್ತು ಖನಿಜಗಳನ್ನು ಹಾಗೆಯೇ ಇಡುತ್ತದೆ.

ವಿಟಮಿನ್ ಇ, ಎ, ಡಿ, ರೈಬೋಫ್ಲಾವಿನ್, ಪೊಟ್ಯಾಸಿಯಮ್, ಮೆಗ್ನೀಸಿಯಮ್, ನಿಯಾಸಿನ್ ಮತ್ತು ಥಯಾಮಿನ್ ನಂತಹ ಪೋಷಕಾಂಶಗಳನ್ನು ಹಬೆಯಲ್ಲಿ ಚೆನ್ನಾಗಿ ಉಳಿಸಿಕೊಳ್ಳಲಾಗುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ: ಯಾವುದೇ ಮಾಂಸವನ್ನು ಹಬೆಯಲ್ಲಿ ಬೇಯಿಸಿದಾಗ ಅದರಲ್ಲಿರುವ ಕೊಬ್ಬು ಕಡಿಮೆಯಾಗಿಸುವ ಶಕ್ತಿ ಹಬೆಗಿರುತ್ತದೆ.

ಹಬೆಯಲ್ಲಿ ಬೇಯಿಸುವುದು ಸುಲಭ ಮಾರ್ಗ: ಹಬೆಯು ಆಹಾರವನ್ನು ಬೇಯಿಸಲು ಒಂದು ಸುಲಭ ಮಾರ್ಗವಾಗಿದ್ದು, ಆಹಾರ ಬೇಯಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುವುದಿಲ್ಲ.

ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ: ಹಬೆಯಲ್ಲಿ ಬೇಯಿಸಿದ ಆಹಾರವನ್ನು ಜೀರ್ಣಿಸಿಕೊಳ್ಳುವುದು ಸುಲಭ. ಗಿಡಮೂಲಿಕೆಗಳು ಮತ್ತು ಮಸಾಲೆ (Spice)ಗಳಂತಹ ಕೆಲವು ಮಸಾಲೆಗಳನ್ನು ಸೇರಿಸುವುದರಿಂದ ಭಕ್ಷ್ಯದ ಪರಿಮಳವನ್ನು ಹೆಚ್ಚಿಸಬಹುದು. ನಾವು ತರಕಾರಿಗಳನ್ನು ಫ್ರೈ ಮಾಡಿದಾಗ, ನಾವು ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು ಸುತ್ತಮುತ್ತಲಿನ ತೈಲ ಅಣುಗಳ ಕಡೆಗೆ ಸೋರಿಕೆಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ.

ಕಡಿಮೆ ಉಪ್ಪು ಆವಿಯಲ್ಲಿ ಬೇಯಿಸಿದ ಆಹಾರಕ್ಕೆ ಕಡಿಮೆ ಉಪ್ಪು ಮತ್ತು ಮಸಾಲೆ ಅಗತ್ಯವಿರುತ್ತದೆ ಆದ್ದರಿಂದ ಹೃದ್ರೋಗ, ಪಾರ್ಶ್ವವಾಯು, ರಕ್ತದೊತ್ತಡ ಅಪಾಯವನ್ನು ಕಡಿಮೆ ಮಾಡುತ್ತದೆ.

ಕ್ಯಾನ್ಸರ್ ಅಪಾಯ ಕಡಿಮೆ ಆವಿಯಲ್ಲಿ ಬೇಯಿಸಿದ ಆಹಾರವು ದೇಹವನ್ನು ಸದೃಢವಾಗಿ, ಆರೋಗ್ಯಕರವಾಗಿ ಮತ್ತು ರೋಗಗಳಿಂದ ಮುಕ್ತವಾಗಿಸಲು ಅಹಕಾರಿ. ಇದರಿಂದ ಕ್ಯಾನ್ಸರ್ ಅಪಾಯವೂ ಕಡಿಮೆ.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಅರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ
ಸೋನು ನಿಗಮ್​ ವಿವಾದಾತ್ಮಕ ಹೇಳಿಕೆ; ವಿಡಿಯೋ ಇಲ್ಲಿದೆ
ಸೋನು ನಿಗಮ್​ ವಿವಾದಾತ್ಮಕ ಹೇಳಿಕೆ; ವಿಡಿಯೋ ಇಲ್ಲಿದೆ
ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ವಿದ್ಯಾರ್ಥಿನಿ
ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ವಿದ್ಯಾರ್ಥಿನಿ