AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Steamed Food: ಉಗಿಯಲ್ಲಿ ಬೇಯಿಸಿದ ಆಹಾರ ತಿಂದ್ರೆ ಏನೇನೆಲ್ಲಾ ಪ್ರಯೋಜನಗಳಿವೆ ಗೊತ್ತೇ?

ಆವಿಯಲ್ಲಿ ಬೇಯಿಸಿದ ಆಹಾರವು ಎಲ್ಲೆಡೆ ಜನಪ್ರಿಯವಾಗಿದೆ, ಏಕೆಂದರೆ ರುಚಿಯು ಉತ್ತಮವಾಗಿರಲಿದ್ದು, ವೇಗವಾಗಿ ಕೂಡ ತಯಾರಿಸಬಹುದಾಗಿದೆ.

Steamed Food: ಉಗಿಯಲ್ಲಿ ಬೇಯಿಸಿದ ಆಹಾರ ತಿಂದ್ರೆ ಏನೇನೆಲ್ಲಾ ಪ್ರಯೋಜನಗಳಿವೆ ಗೊತ್ತೇ?
Steamed FoodImage Credit source: Timesnow
TV9 Web
| Updated By: ನಯನಾ ರಾಜೀವ್|

Updated on: Aug 21, 2022 | 7:00 AM

Share

ಆವಿಯಲ್ಲಿ ಬೇಯಿಸಿದ ಆಹಾರವು ಎಲ್ಲೆಡೆ ಜನಪ್ರಿಯವಾಗಿದೆ, ಏಕೆಂದರೆ ರುಚಿಯು ಉತ್ತಮವಾಗಿರಲಿದ್ದು, ವೇಗವಾಗಿ ಕೂಡ ತಯಾರಿಸಬಹುದಾಗಿದೆ. ಹಾಗೆಯೇ ಆರೋಗ್ಯಕರ ಮತ್ತು ಪೌಷ್ಟಿಕಾಂಶದಿಂದ ತುಂಬಿರುತ್ತದೆ. ಸ್ಟೀಮಿಂಗ್ ಒಂದು ಸರಳವಾದ ಅಡುಗೆ ತಂತ್ರವಾಗಿದ್ದು, ಬಿಸಿ ಹಬೆಯಿಂದಲೇ ಆಹಾರವನ್ನು ಬೇಯಿಸಲಾಗುತ್ತದೆ.

ನೀರು ಆಹಾರದೊಂದಿಗೆ ಸಂಪರ್ಕಕ್ಕೆ ಬರುವುದಿಲ್ಲ ಮತ್ತು ಅದು ಹೊಂದಿರುವ ಎಲ್ಲಾ ಪೋಷಣೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಆವಿಯಲ್ಲಿ ಬೇಯಿಸಿದ ಮಾಂಸ, ತರಕಾರಿಗಳು ಮತ್ತು ಇತರ ಭಕ್ಷ್ಯಗಳು ತಯಾರಿಸಲು ಯಾವುದೇ ತೈಲಗಳು ಅಥವಾ ಕೊಬ್ಬಿನ ಅಗತ್ಯವಿಲ್ಲ.

ಆವಿಯಲ್ಲಿ ಬೇಯಿಸಿದ ಆಹಾರವನ್ನು ಸೇವಿಸುವ ಕೆಲವು ಪ್ರಯೋಜನಗಳೆಂದರೆ: ಸ್ಟೀಮಿಂಗ್ ಪೌಷ್ಟಿಕಾಂಶವನ್ನು ಉಳಿಸಿಕೊಳ್ಳುತ್ತದೆ: ಆಹಾರವನ್ನು ಆವಿಯಲ್ಲಿ ಬೇಯಿಸಿದಾಗ, ಅದು ತನ್ನ ಪೌಷ್ಟಿಕಾಂಶವನ್ನು ಉಳಿಸಿಕೊಳ್ಳುತ್ತದೆ. ಮೂಲ ಬಣ್ಣ ಮತ್ತು ಆಕಾರವನ್ನು ಉಳಿಸಿಕೊಂಡು ಆರೋಗ್ಯಕರ ಪೋಷಕಾಂಶಗಳು ಮತ್ತು ಖನಿಜಗಳನ್ನು ಹಾಗೆಯೇ ಇಡುತ್ತದೆ.

ವಿಟಮಿನ್ ಇ, ಎ, ಡಿ, ರೈಬೋಫ್ಲಾವಿನ್, ಪೊಟ್ಯಾಸಿಯಮ್, ಮೆಗ್ನೀಸಿಯಮ್, ನಿಯಾಸಿನ್ ಮತ್ತು ಥಯಾಮಿನ್ ನಂತಹ ಪೋಷಕಾಂಶಗಳನ್ನು ಹಬೆಯಲ್ಲಿ ಚೆನ್ನಾಗಿ ಉಳಿಸಿಕೊಳ್ಳಲಾಗುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ: ಯಾವುದೇ ಮಾಂಸವನ್ನು ಹಬೆಯಲ್ಲಿ ಬೇಯಿಸಿದಾಗ ಅದರಲ್ಲಿರುವ ಕೊಬ್ಬು ಕಡಿಮೆಯಾಗಿಸುವ ಶಕ್ತಿ ಹಬೆಗಿರುತ್ತದೆ.

ಹಬೆಯಲ್ಲಿ ಬೇಯಿಸುವುದು ಸುಲಭ ಮಾರ್ಗ: ಹಬೆಯು ಆಹಾರವನ್ನು ಬೇಯಿಸಲು ಒಂದು ಸುಲಭ ಮಾರ್ಗವಾಗಿದ್ದು, ಆಹಾರ ಬೇಯಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುವುದಿಲ್ಲ.

ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ: ಹಬೆಯಲ್ಲಿ ಬೇಯಿಸಿದ ಆಹಾರವನ್ನು ಜೀರ್ಣಿಸಿಕೊಳ್ಳುವುದು ಸುಲಭ. ಗಿಡಮೂಲಿಕೆಗಳು ಮತ್ತು ಮಸಾಲೆ (Spice)ಗಳಂತಹ ಕೆಲವು ಮಸಾಲೆಗಳನ್ನು ಸೇರಿಸುವುದರಿಂದ ಭಕ್ಷ್ಯದ ಪರಿಮಳವನ್ನು ಹೆಚ್ಚಿಸಬಹುದು. ನಾವು ತರಕಾರಿಗಳನ್ನು ಫ್ರೈ ಮಾಡಿದಾಗ, ನಾವು ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು ಸುತ್ತಮುತ್ತಲಿನ ತೈಲ ಅಣುಗಳ ಕಡೆಗೆ ಸೋರಿಕೆಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ.

ಕಡಿಮೆ ಉಪ್ಪು ಆವಿಯಲ್ಲಿ ಬೇಯಿಸಿದ ಆಹಾರಕ್ಕೆ ಕಡಿಮೆ ಉಪ್ಪು ಮತ್ತು ಮಸಾಲೆ ಅಗತ್ಯವಿರುತ್ತದೆ ಆದ್ದರಿಂದ ಹೃದ್ರೋಗ, ಪಾರ್ಶ್ವವಾಯು, ರಕ್ತದೊತ್ತಡ ಅಪಾಯವನ್ನು ಕಡಿಮೆ ಮಾಡುತ್ತದೆ.

ಕ್ಯಾನ್ಸರ್ ಅಪಾಯ ಕಡಿಮೆ ಆವಿಯಲ್ಲಿ ಬೇಯಿಸಿದ ಆಹಾರವು ದೇಹವನ್ನು ಸದೃಢವಾಗಿ, ಆರೋಗ್ಯಕರವಾಗಿ ಮತ್ತು ರೋಗಗಳಿಂದ ಮುಕ್ತವಾಗಿಸಲು ಅಹಕಾರಿ. ಇದರಿಂದ ಕ್ಯಾನ್ಸರ್ ಅಪಾಯವೂ ಕಡಿಮೆ.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಅರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ