AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Electric Cooker: ಕರೆಂಟ್ ಕುಕ್ಕರ್​ನಲ್ಲಿ ಅಕ್ಕಿ ಬೇಯಿಸುತ್ತಿದ್ದೀರಾ? ನಿಮ್ಮೆಲ್ಲರನ್ನು ಎಚ್ಚರಿಸುವ ಆಘಾತಕಾರಿ ವಿಷಯವೊಂದು ಬಯಲಾಗಿದೆ

ಎಲೆಕ್ಟ್ರಿಕ್ ವಸ್ತುಗಳನ್ನು ಅಡುಗೆ ತಯಾರಿಯಲ್ಲಿಯೂ ಬಳಸುತ್ತಿರುವುದಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

Electric Cooker: ಕರೆಂಟ್ ಕುಕ್ಕರ್​ನಲ್ಲಿ ಅಕ್ಕಿ ಬೇಯಿಸುತ್ತಿದ್ದೀರಾ? ನಿಮ್ಮೆಲ್ಲರನ್ನು ಎಚ್ಚರಿಸುವ ಆಘಾತಕಾರಿ ವಿಷಯವೊಂದು ಬಯಲಾಗಿದೆ
ಕರೆಂಟ್​​ ಕುಕ್ಕರ್​
TV9 Web
| Edited By: |

Updated on:Aug 03, 2021 | 2:58 PM

Share

ಇತ್ತೀಚೆಗೆ ಎಲ್ಲವೂ ವಿದ್ಯುತ್ ಬಳಕೆಯಿಂದಲೇ ಆಗುತ್ತಿದೆ. ಅಂದರೆ, ಬೆಳಿಗ್ಗೆ ಎದ್ದಾಕ್ಷಣ ಸ್ನಾನಕ್ಕೆ ವಿದ್ಯುತ್ ಬಳಸಿ ಬಿಸಿ ನೀರು, ಕುಡಿಯುವ ಬಿಸಿ ನೀರು ತಯಾರಿಸಲೂ ವಿದ್ಯುತ್, ಅಡುಗೆ ಮಾಡಲು ವಿದ್ಯುತ್ ಹೀಗೆ ಎಲ್ಲಾ ಚಟುವಟಿಕೆಯೂ ವಿದ್ಯುತ್ ಸಂಪರ್ಕದಿಂದ ನಡೆಯುತ್ತಿದೆ. ಈಗಿನ ದಿನಮಾನದ ಜನರಿಗೆ ಸಮಯವೇ ಇರುವುದಿಲ್ಲ. ಆದಷ್ಟು ಬೇಗ ಕೆಲಸವಾಗಬೇಕಷ್ಟೇ! ವಿದ್ಯುತ್ (Current) ಉಪಯೋಗದಿಂದ ಬಹುಬೇಗ ಅಡುಗೆ ತಯಾರಿಸಬಹುದು ಆದರೆ ಅದು ಆರೋಗ್ಯ ಸಮಸ್ಯೆಗಳನ್ನು (Health Problems) ತಂದೊಡ್ಡುತ್ತದೆ ಎಂಬ ಆಘಾತಕಾರಿ ವಿಷಯವೊಂದು ಬಯಲಾಗಿದೆ.

ಮೊದಲೆಲ್ಲಾ ಕಟ್ಟಿಗೆಯಿಂದ ಬೆಂಕಿ ಒಟ್ಟಿ ಬೆಳಿಗ್ಗೆಯ ದೋಸೆ ತಯಾರಾಗುತ್ತಿತ್ತು. ತಿನ್ನಲು ಎಷ್ಟು ರುಚಿ ಅಂತೀರಾ? ಈಗಲೂ ಕೆಲವು ಹಳ್ಳಿಗಳಲ್ಲಿ ಈ ಪದ್ಧತಿ ರೂಢಿಯಲ್ಲಿದೆ. ಆದರೆ ಇತ್ತೀಚೆಗೆ ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಬಳಸುತ್ತಿರುವ ಎಲೆಕ್ಟ್ರಿಕ್ ವಸ್ತುಗಳನ್ನು ಅಡುಗೆ ತಯಾರಿಯಲ್ಲಿಯೂ ಬಳಸುತ್ತಿರುವುದಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಸಾಮಾನ್ಯವಾಗಿ ಬೇಗ ಅನ್ನ ತಯಾರಾಗಬೇಕು ಎಂದು ಎಲೆಕ್ಟ್ರಿಕ್ ಕುಕ್ಕರ್ ಅಥವಾ ಕರೆಂಟ್​ ಕುಕ್ಕರ್​ ಮೂಲಕ ಅಕ್ಕಿ ಬೇಯಿಸಿ ಬಿಡುತ್ತೇವೆ. ಆದರೆ ಇದರ ಮೂಲಕ ಅಕ್ಕಿ ಬೇಯಿಸುವುದು ವಿಷಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ. ಅಲ್ಯೂಮಿನಿಯಂ ಪಾತ್ರೆಯ ಮೂಲಕ ವಿದ್ಯುತ್ ಬಳಸಿ ಅಡುಗೆ ತಯಾರಿಸುವುದು ಸೂಕ್ತವಲ್ಲ. ಆಹಾರ ತಯಾರಿಕೆಯಲ್ಲಿ ಗಾಳಿ ಮತ್ತು ಬೆಳಕು ಇರಬೇಕು. ಇಲ್ಲದಿದ್ದರೆ ಆಹಾರ ಹಾನಿಕರವಾಗಿರುತ್ತದೆ. ತಿಂದಾಕ್ಷಣ ಪರಿಣಾಮ ಗೊತ್ತಾಗದಿದ್ದರೂ ದಿನ ಕಳೆಯುತ್ತಿದ್ದಂತೆಯೇ ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಆರೋಗ್ಯ ಅಪಾಯಗಳು ಹೊಟ್ಟೆಯ ಸಮಸ್ಯೆಗಳು ಹೃದಯ ಸಂಬಂಧಿತ ಸಮಸ್ಯೆಗಳು ಸಂಧಿವಾತ ಮಧುಮೇಹ ವಾಯು ಸಮಸ್ಯೆ ಅಧಿಕ ತೂಕ ಎಲುಬುಗಳು ದುರ್ಬಲಗೊಳ್ಳುವುದು

ಈ ರೀತಿಯ ಸಮಸ್ಯೆಗಳು ಕಂಡು ಬರುತ್ತವೆ. ಆದ್ದರಿಂದ ಕರೆಂಟ್ ಕುಕ್ಕರ್ನಲ್ಲಿ ಅಡುಗೆ ತಯಾರಿಸುವುದು ಅಥವಾ ಪ್ರೆಶರ್ ಕುಕ್ಕರ್​ನಲ್ಲಿ ಅಡುಗೆ ತಯಾರಿಸುವುದನ್ನು ಆದಷ್ಟು ತಪ್ಪಿಸಿ. ನಿಮ್ಮ ಆರೋಗ್ಯದ ಕುರಿತಾಗಿ ಹೆಚ್ಚು ಕಾಳಜಿ ಇರಲಿ.

ಇದನ್ನೂ ಓದಿ:

Viral Video: ಕುಕ್ಕರ್​ ಬಳಸಿ ಸ್ಟೀಮ್​ ತೆಗೆದುಕೊಳ್ಳುತ್ತಿರುವ ವ್ಯಕ್ತಿ ನೋಡಿ ಆದ್ರೇ ನೀವೂ ಹೀಗೆಲ್ಲ ಮಾಡಬೇಡಿ!

Published On - 2:48 pm, Tue, 3 August 21

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್