ಸೋಂಪು-ಕಲ್ಲುಸಕ್ಕರೆ ಕಾಂಬಿನೇಷನ್: ಬೇಸಿಗೆಯಲ್ಲಿ ನಿಮ್ಮ ಆರೋಗ್ಯಕ್ಕೆ ಹೇಗೆ ಸಹಾಯ ಮಾಡುತ್ತೆ ತಿಳಿಯಿರಿ

ಸೋಂಪು ಕೇವಲ ಬಾಯಿಯ ದುರ್ವಾಸನೆ ದೂರ ಮಾಡುವುದಷ್ಟೇ ಅಲ್ಲದೆ, ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿರಿಸುವ ಕೆಲಸವನ್ನು ಕೂಡ ಮಾಡುತ್ತದೆ. ಇ

ಸೋಂಪು-ಕಲ್ಲುಸಕ್ಕರೆ ಕಾಂಬಿನೇಷನ್: ಬೇಸಿಗೆಯಲ್ಲಿ ನಿಮ್ಮ ಆರೋಗ್ಯಕ್ಕೆ ಹೇಗೆ ಸಹಾಯ ಮಾಡುತ್ತೆ ತಿಳಿಯಿರಿ
ಸೋಂಪು

Updated on: Apr 26, 2023 | 9:00 AM

ಸೋಂಪು ಕೇವಲ ಬಾಯಿಯ ದುರ್ವಾಸನೆ ದೂರ ಮಾಡುವುದಷ್ಟೇ ಅಲ್ಲದೆ, ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿರಿಸುವ ಕೆಲಸವನ್ನು ಕೂಡ ಮಾಡುತ್ತದೆ. ಇದು ಬೇಸಿಗೆ ಕಾಲ, ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಆಹಾರಗಳ ಬಗ್ಗೆ ಹೆಚ್ಚು ಗಮನಹರಿಸುತ್ತೇವೆ.
ಕಾಲೋಚಿತ ಹಣ್ಣುಗಳು ಮತ್ತು ತರಕಾರಿಗಳು ಮಾತ್ರವಲ್ಲ, ಕೆಲವು ಗಿಡಮೂಲಿಕೆಗಳು ಮತ್ತು ಮಸಾಲೆಗಳು ಸಹ ಈ ದಿನಗಳಲ್ಲಿ ಆರೋಗ್ಯವನ್ನು ಉತ್ತಮವಾಗಿರುಸುತ್ತದೆ.

ಜನರು ದೇಹವನ್ನು ಒಳಗಿನಿಂದ ತಂಪಾಗಿರಿಸಲು ಕಲ್ಲಂಗಡಿ, ಸೌತೆಕಾಯಿಯಂತಹ ತಂಪಿನ ಆಹಾರವನ್ನು ತಿನ್ನಲು ಬಯಸುತ್ತಾರೆ. ಸೋಂಪು ಹಾಗೂ ಕಲ್ಲು ಸಕ್ಕರೆಯನ್ನು ತಿನ್ನುವುದರಿಂದ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಟ್ಟುಕೊಳ್ಳಬಹುದು.

ಕಲ್ಲು ಸಕ್ಕರೆ ಒಣಕೆಮ್ಮಿನ ಸಮಸ್ಯೆಯನ್ನು ಬಹುಬೇಗ ನಿವಾರಿಸುತ್ತದೆ. ಕಲ್ಲುಸಕ್ಕರೆ ಹೆಪ್ಪುಗಟ್ಟಿದ ಕಫವನ್ನು ಹೊರತೆಗೆಯಲು ಬಹಳ ಪರಿಣಾಮಕಾರಿ. ಇದು ನೈಸರ್ಗಿಕ ತಂಪನ್ನೂ ನೀಡುತ್ತದೆ. ಇದು ಸುಡುವ ಸಂವೇದನೆಯಂತಹ ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗುತ್ತದೆ.

ಮತ್ತಷ್ಟು ಓದಿ: ಒಣಕೊಬ್ಬರಿ ಮಹತ್ವ ಏನು? ಉಪ್ಪಿನ ದೋಷ ನಿವಾರಣೆ ಹೇಗೆ?

1. ಸೋಂಪು-ಕಲ್ಲುಸಕ್ಕರೆ ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇವೆರಡನ್ನು ಒಟ್ಟಿಗೆ ಸೇವಿಸುವುದರಿಂದ ದೇಹದಲ್ಲಿ ರಕ್ತಹೀನತೆ ಉಂಟಾಗುವುದಿಲ್ಲ. ಹಿಮೋಗ್ಲೋಬಿನ್ ಮಟ್ಟವು ಅತ್ಯುತ್ತಮವಾಗಿ ಉಳಿಯುತ್ತದೆ. ಸಕ್ಕರೆ-ಸೋಂಪು ರಕ್ತ ಪರಿಚಲನೆಯನ್ನು ಸಹ ನಿರ್ವಹಿಸುತ್ತದೆ.

2. ಆಯಾಸ, ದೌರ್ಬಲ್ಯ, ಆಗಾಗ ತಲೆತಿರುಗುವಿಕೆಯ ಸಮಸ್ಯೆ ಇದ್ದರೆ, ನೀವು ಸೋಂಪು ಮತ್ತು ಕಲ್ಲು ಸಕ್ಕರೆ ಬೆರೆಸಿ ತಿನ್ನಬೇಕು. ಇದನ್ನು ಪ್ರತಿದಿನ ಸೇವಿಸುವುದರಿಂದ ಇಂತಹ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.

3. ದೃಷ್ಟಿ ದುರ್ಬಲವಾಗುತ್ತಿದ್ದರೆ ಕಲ್ಲುಸಕ್ಕರೆ ಮತ್ತು ಶುಂಠಿ ಔಷಧಿಯಂತೆ ಕೆಲಸ ಮಾಡುತ್ತದೆ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಕಣ್ಣುಗಳು ಆರೋಗ್ಯವಾಗಿರುವುದರ ಜೊತೆಗೆ ಬೆಳಕು ವೇಗವಾಗಿ ಹೆಚ್ಚುತ್ತದೆ. ಸೋಂಪು-ಕಲ್ಲುಸಕ್ಕರೆ ಕಣ್ಣುಗಳಿಗೆ ರಾಮಬಾಣವೆಂದು ಪರಿಗಣಿಸಲಾಗುತ್ತದೆ.

4. ಬಾಯಿಯನ್ನು ಸ್ವಚ್ಛವಾಗಿಡಲು ಸೋಂಪು-ಕಲ್ಲುಸಕ್ಕರೆ ತಿನ್ನುವುದು ಪ್ರಯೋಜನಕಾರಿ. ದುರ್ವಾಸನೆಯ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಅವು ತುಂಬಾ ಪರಿಣಾಮಕಾರಿ. ಸೋಂಪು ಅನ್ನು ಸೇವಿಸುವುದರಿಂದ, ಬಾಯಿಯ ಪಿಹೆಚ್ ಮಟ್ಟವು ಸರಿಯಾಗಿ ಉಳಿಯುತ್ತದೆ ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳು ಹೆಚ್ಚುವುದಿಲ್ಲ.

 

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us