AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Diabetes: ಮಧುಮೇಹಿಗಳು ಯಾವ ಹಿಟ್ಟಿನಿಂದ ತಯಾರಿಸಿದ ರೊಟ್ಟಿಯನ್ನು ಸೇವಿಸಬೇಕು?

ಒಮ್ಮೆ ಮಧುಮೇಹ ನಿಮ್ಮನ್ನು ಆವರಿಸಿಕೊಂಡರೆ ಆಹಾರದ ಮೂಲಕವೇ ನಿಯಂತ್ರಣದಲ್ಲಿಡಬೇಕೇ ಹೊರತು ಸಂಪೂರ್ಣವಾಗಿ ಕಡಿಮೆ ಮಾಡಲು ಸಾಧ್ಯವಿಲ್ಲ.

Diabetes: ಮಧುಮೇಹಿಗಳು ಯಾವ ಹಿಟ್ಟಿನಿಂದ ತಯಾರಿಸಿದ ರೊಟ್ಟಿಯನ್ನು ಸೇವಿಸಬೇಕು?
Oats
TV9 Web
| Updated By: ನಯನಾ ರಾಜೀವ್|

Updated on: Aug 29, 2022 | 3:24 PM

Share

ಒಮ್ಮೆ ಮಧುಮೇಹ ನಿಮ್ಮನ್ನು ಆವರಿಸಿಕೊಂಡರೆ ಆಹಾರದ ಮೂಲಕವೇ ನಿಯಂತ್ರಣದಲ್ಲಿಡಬೇಕೇ ಹೊರತು ಸಂಪೂರ್ಣವಾಗಿ ಕಡಿಮೆ ಮಾಡಲು ಸಾಧ್ಯವಿಲ್ಲ. ರೊಟ್ಟಿಯನ್ನು ಬಹುತೇಕ ಮಂದಿ ನಿತ್ಯವೂ ಸೇವಿಸುತ್ತಾರೆ, ಗೋಧಿ ಹಿಟ್ಟಿನ ರೊಟ್ಟಿಯನ್ನು ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಮಾಡಲಾಗುತ್ತದೆ.

ಗೋಧಿ ರೊಟ್ಟಿಯು ಮಧುಮೇಹಿಗಳಲ್ಲಿ ಹಾನಿಯನ್ನುಂಟುಮಾಡುತ್ತದೆ. ನಾವು ಮಧುಮೇಹದಲ್ಲಿ ಸರಿಯಾದ ಆಹಾರ ಮತ್ತು ಪಾನೀಯದ ಬಗ್ಗೆ ಮಾತನಾಡುವಾಗ, ನಮ್ಮ ಗಮನವು ರೊಟ್ಟಿಯ ಕಡೆಗೆ ಹೋಗುವುದಿಲ್ಲ. ನಾವು ಹಣ್ಣುಗಳು ಮತ್ತು ತರಕಾರಿಗಳ ಬಗ್ಗೆ ಮಾತ್ರ ಮಾತನಾಡುತ್ತೇವೆ.

ಆದರೆ ನೀವು ಮಧುಮೇಹಿಗಳಾಗಿದ್ದರೆ, ಸರಿಯಾದ ಹಿಟ್ಟಿನ ರೊಟ್ಟಿಯನ್ನು ತಿನ್ನುವುದು ಸಹ ಬಹಳ ಮುಖ್ಯ. ಮಧುಮೇಹಿಗಳು ಯಾವ ಹಿಟ್ಟಿನಿಂದ ಮಾಡಿದ ರೊಟ್ಟಿಯನ್ನು ತಿನ್ನಬೇಕು.

ಓಟ್ಸ್ ರೊಟ್ಟಿ ಪ್ರಯೋಜನಕಾರಿಯಾಗಿದೆ ಗೋಧಿ ರೊಟ್ಟಿಯಲ್ಲಿ ಕಾರ್ಬೋಹೈಡ್ರೇಟ್​ಗಳ ಪ್ರಮಾಣವು ಹೆಚ್ಚು. ಹೆಚ್ಚು ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸುವುದರಿಂದ ಮಧುಮೇಹ ರೋಗಿಗಳಿಗೆ ಯಾವುದೇ ಪ್ರಯೋಜನವಿಲ್ಲ. ನೀವು ಮಧುಮೇಹಿಗಳಾಗಿದ್ದರೆ, ನೀವು ಗೋಧಿ ಹಿಟ್ಟಿನ ಬದಲಿಗೆ ಓಟ್ಸ್ ರೊಟ್ಟಿಗಳನ್ನು ತಿನ್ನಬೇಕು.

ಓಟ್ಸ್ ಏಕೆ ಅತ್ಯುತ್ತಮವಾಗಿದೆ

ಓಟ್ಸ್‌ನಲ್ಲಿನ ಕ್ಯಾಲೋರಿಗಳ ಪ್ರಮಾಣವು ತುಂಬಾ ಕಡಿಮೆಯಾಗಿದೆ. ಓಟ್ಸ್‌ನಲ್ಲಿ ಪೋಷಕಾಂಶಗಳು ಮತ್ತು ಫೈಬರ್ ಸಮೃದ್ಧವಾಗಿದೆ, ಇದು ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ. ಓಟ್ಸ್ ಜೀರ್ಣಕ್ರಿಯೆಯ ನಂತರ ಗ್ಲೂಕೋಸ್ ಅನ್ನು ಆರಾಮವಾಗಿ ಬಿಡುಗಡೆ ಮಾಡುತ್ತದೆ, ಇದರಿಂದಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಇದ್ದಕ್ಕಿದ್ದಂತೆ ಹೆಚ್ಚಾಗುವುದಿಲ್ಲ.

ಓಟ್ಸ್ ಗೋಧಿಗಿಂತ ಕಡಿಮೆ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ, ಇದು ಮಧುಮೇಹ ಸೇರಿದಂತೆ ಅನೇಕ ಕಾಯಿಲೆಗಳಲ್ಲಿ ಪ್ರಯೋಜನಕಾರಿಯಾಗಿದೆ.

ಓಟ್ಸ್ ಬಳಕೆ ಹೇಗೆ? ಕೆಲವರಿಗೆ ಆರಂಭದಲ್ಲಿ ಓಟ್ಸ್ ತಿನ್ನಲು ತೊಂದರೆಯಾಗುತ್ತದೆ. ಆದರೆ ಓಟ್ಸ್ ಅನ್ನು ಒಂದಲ್ಲ ಹಲವು ರೀತಿಯಲ್ಲಿ ತಿನ್ನಬಹುದು. ಓಟ್ಸ್‌ ರೊಟ್ಟಿಯ ಹೊರತಾಗಿ, ಮಸಾಲೆಯುಕ್ತ ಕಿಚಡಿಯನ್ನು ಸಹ ಮಾಡಬಹುದು. ಓಟ್ಸ್ ಅನ್ನು ಹಾಲಿಗೆ ಸೇರಿಸಿ ಕೂಡ ತಿನ್ನಬಹುದು. ಓಟ್ಸ್ ರೊಟ್ಟಿಯನ್ನು ರುಚಿಕರವಾಗಿಸಲು, ರುಬ್ಬಿದ ಓಟ್ಸ್‌ಗೆ ಉಪ್ಪು, ಜೀರಿಗೆ ಮತ್ತು ಈರುಳ್ಳಿ ಸೇರಿಸಿ ರೊಟ್ಟಿ ಮಾಡಬಹುದು.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?